ಬಿಜೆಪಿಯಿಂದ ಮತ್ತೆ ಸಿದ್ದರಾಮಯ್ಯ ಟಾರ್ಗೆಟ್: ಜ.09 ರಂದು ಬೆಂಗಳೂರಿನಲ್ಲಿ ‘ಸಿದ್ದು ನಿಜ ಕನಸು’ ಪುಸ್ತಕ ಬಿಡುಗಡೆ

ಬಿಜೆಪಿ ಮತ್ತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಿದ್ದು, ಅವರ ವಿರುದ್ಧ ‘ಸಿದ್ದು ನಿಜ ಕನಸು’ ಎನ್ನುವ ಪುಸ್ತಕ ಬಿಡುಗಡೆಗೆ ಮುಂದಾಗಿದೆ.

ಬಿಜೆಪಿಯಿಂದ ಮತ್ತೆ ಸಿದ್ದರಾಮಯ್ಯ ಟಾರ್ಗೆಟ್:  ಜ.09 ರಂದು ಬೆಂಗಳೂರಿನಲ್ಲಿ ‘ಸಿದ್ದು ನಿಜ ಕನಸು’ ಪುಸ್ತಕ ಬಿಡುಗಡೆ
‘ಸಿದ್ದು ನಿಜ ಕನಸು’ ಪುಸ್ತಕ
Edited By:

Updated on: Jan 08, 2023 | 6:42 PM

ಬೆಂಗಳೂರು: ಕೆಲ‌ ದಿನಗಳ ಹಿಂದೆಯಷ್ಟೇ ಟಿಪ್ಪು ನಿಜ ಕನಸು ಎಂಬ ಪುಸ್ತಕ (Tipu Nija kanasugalu book) ಹಾಗೂ ನಾಟಕ ಬಿಡುಗಡೆಯಾಗಿತ್ತು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದರ ಮಧ್ಯೆ ಇದೀಗ ಸಿದ್ದರಾಮಯ್ಯರನ್ನೇ ಗುರಿಯಾಗಿಸಿ ‘ಸಿದ್ದು ನಿಜ ಕನಸು’ ಎನ್ನುವ ಪುಸ್ತಕ (Siddu Nija Kanasugalu Book) ಬಿಡುಗಡೆ ಬಿಜೆಪಿ ಮುಂದಾಗಿದೆ.  ನಾಳೆ (ಜನವರಿ 09) ಬೆಂಗಳೂರಿನ ಪುರಭವನದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: ಮುನಿಸು ತಣಿಸುವಲ್ಲಿ ಸಿದ್ದು ಸಕ್ಸಸ್‌, ಕೊನೆಗೂ ಫೈನಲ್ ಆಯ್ತು ಸಿದ್ದರಾಮಯ್ಯ ಕ್ಷೇತ್ರ? ಜ.9ರತ್ತ ಎಲ್ಲರ ಚಿತ್ತ

ಕೆಲ‌ ದಿನಗಳ ಹಿಂದೆಯಷ್ಟೇ ಟಿಪ್ಪು ನಿಜ ಕನಸು ಎಂಬ ಪುಸ್ತಕ ಹಾಗೂ ನಾಟಕ ಬಿಡುಗಡೆಯಾಗಿತ್ತು. ಟಿಪ್ಪುವಿನ ಹಿಂದೂ ದ್ವೇಷವೇ ಪುಸ್ತಕದ ಕಥಾ ವಸ್ತುವಾಗಿತ್ತು. ಇದೀಗ ಅದೇ ತರ ಸಿದ್ದರಾಮಯ್ಯನವರನ್ನು ಗುರಿಯಾಗಿಸಿ ಸಿದ್ದು ನಿಜ ಕನಸು ಹೆಸರಿನಲ್ಲಿ ಪುಸ್ತಕ ಸಿದ್ಧಪಡಿಸಲಾಗಿದ್ದು. ನಾಳೆ ಬೆಂಗಳೂರಿನ ಪುರಭವನದಲ್ಲಿ ಸಿದ್ದು ನಿಜ ಕನಸು ಪುಸ್ತಕವನ್ನು ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್ ನಾರಾಯಣ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.


ಇನ್ನು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದಾರೆ.  ರೋಹಿತ್ ಚಕ್ರತೀರ್ಥ, ಸಂತೋಷ್ ತಮ್ಮಯ್ಯ ಸೇರಿದಂತೆ ಹಲವು ಬಲಪಂಥಿಯ ಬರಹಗಾರರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಹಿಂದೂ ಸಮಾಜವನ್ನ ನಡೆಸಿಕೊಂಡ ರೀತಿಯನ್ನೇ ಹೈಲೈಟ್ ಮಾಡಿ ಪುಸ್ತಕ ಬರೆದಿರುವ ನಿರೀಕ್ಷೆ ಇದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಗಲಾಟೆ ಸೃಷ್ಠಿ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ