Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರಿಂದಲೂ 1 ರೂ. ಪಡೆದಿಲ್ಲ ಅಂತ ಕುಮಾರಸ್ವಾಮಿ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ; ಕಾಂಗ್ರೆಸ್ ಶಾಸಕ ಸವಾಲು

ಹೆಚ್​ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಡಿಕೆ ಶಿವಕುಮಾರ್​ ಅವರ ಆಸ್ತಿಯನ್ನು ಯಾಕೆ ಮುಟ್ಟುಗೋಲು ಹಾಕಿಕೊಂಡಿಲ್ಲ? ಹೆಚ್​ಡಿ ಕುಮಾರಸ್ವಾಮಿ ಸತ್ಯ ಹರಿಶ್ಚಂದ್ರನ ವಂಶಸ್ಥರು ಅಂತ ಪ್ರಮಾಣ ಮಾಡ್ತಾರಾ? ಯಾವ ವ್ಯವಹಾರದಲ್ಲೂ ಹಣ ಪಡೆದಿಲ್ಲ ಅಂತಾ ಪ್ರಮಾಣಮಾಡಲಿ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್​.ಸಿ.ಬಾಲಕೃಷ್ಣ ಸವಾಲು ಹಾಕಿದರು.

ಯಾರಿಂದಲೂ 1 ರೂ. ಪಡೆದಿಲ್ಲ ಅಂತ ಕುಮಾರಸ್ವಾಮಿ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ; ಕಾಂಗ್ರೆಸ್ ಶಾಸಕ ಸವಾಲು
ಶಾಸಕ ಹೆಚ್​ಸಿ ಬಾಲಕೃಷ್ಣ
Follow us
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ

Updated on:Oct 25, 2023 | 1:07 PM

ಬೆಂಗಳೂರು ಅ.24: ಯಾರಿಂದಲೂ 1 ರೂ. ಪಡೆದುಕೊಂಡಿಲ್ಲ ಅಂತ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರು ಧರ್ಮಸ್ಥಳಕ್ಕೆ (Dharmastala) ಬಂದು ಪ್ರಮಾಣ ಮಾಡಲಿ ನೋಡೋಣ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್​.ಸಿ.ಬಾಲಕೃಷ್ಣ (HC Balakrishna) ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಮನಗರ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಬೇಕಿದ್ದರೇ ಚರ್ಚೆಗೆ ಬರಲಿ, ನಾವು ನಮ್ಮ ಎಂಪಿ ಜೊತೆ ಬರುತ್ತೇವೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚರ್ಚೆಗೆ ಬರ್ತಾರಾ? ಎಂದು ಪ್ರಶ್ನಿಸಿದರು.

ಹೆಚ್.ಡಿ.ಕುಮಾರಸ್ವಾಮಿ ಹತಾಶೆಗೊಂಡಿದ್ದಾರೆ. ಕನಕಪುರ ತಾಲೂಕು ಬೆಂಗಳೂರು ನಗರ ಜಿಲ್ಲೆಗೆ ಸೇರಿಸುವುದಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಕೇವಲ ಚರ್ಚೆಗೋಸ್ಕರ ಮಾತಾಡಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುವ ಪ್ರಸ್ತಾಪ ಇದೆ ಅಷ್ಟೇ ಎಂದರು.

ಇದನ್ನೂ ಓದಿ: ಆಸ್ತಿ ಮೌಲ್ಯ ಹೆಚ್ಚಿಸಿ ಖಜಾನೆ ವೃದ್ಧಿಸುವ ಹುನ್ನಾರ: ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಡಿಕೆಶಿ ಹೇಳಿಕೆಗೆ ಕುಮಾರಸ್ವಾಮಿ ಕಿಡಿ

ಹೆಚ್​ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಡಿಕೆ ಶಿವಕುಮಾರ್​ ಅವರ ಆಸ್ತಿಯನ್ನು ಯಾಕೆ ಮುಟ್ಟುಗೋಲು ಹಾಕಿಕೊಂಡಿಲ್ಲ? ಹೆಚ್​ಡಿ ಕುಮಾರಸ್ವಾಮಿ ಸತ್ಯ ಹರಿಶ್ಚಂದ್ರನ ವಂಶಸ್ಥರು ಅಂತ ಪ್ರಮಾಣ ಮಾಡ್ತಾರಾ? ಯಾವ ವ್ಯವಹಾರದಲ್ಲೂ ಹಣ ಪಡೆದಿಲ್ಲ ಅಂತಾ ಪ್ರಮಾಣಮಾಡಲಿ. ಹೆಚ್​. ಡಿ.ಕುಮಾರಸ್ವಾಮಿ ಹತಾಶರಾಗಿ ಮಾತಾಡುವುದನ್ನು ಬಿಟ್ಟುಬಿಡಲಿ. ರಾಮನಗರ ಜಿಲ್ಲೆಯ ಆಸ್ತಿಯೆಲ್ಲ ಡಿ.ಕೆ.ಶಿವಕುಮಾರ್ ಕುಟುಂಬದ್ದಾ? ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಏನೇನೋ ಮಾತನಾಡ್ತಾರೆ. ಅಮಿತ್ ಶಾ ಬಳಿ ಸುಪಾರಿ ಪಡೆದಿರುವ ರೀತಿ ಮಾತನಾಡುತ್ತಾರೆ ಎಂದು ವಾಗ್ದಾಳಿ ಮಾಡಿದರು.

ಡಿ.ಕೆ.ಶಿಕುಮಾರ್ ಅವ​ರನ್ನು​ ಮಣಿಸುತ್ತೇನೆ ಅಂತ ಏನೇನೋ ಮಾತನಾಡುತ್ತಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕುರ್ಚಿ ಉಳಿಸಿಕೊಳ್ಳಲು ಆಗಲಿಲ್ಲ. ಬೇರೆಯವರು ಮುಖ್ಯಮಂತ್ರಿಗಳಾದರೇ ಸಹಿಕೊಳ್ಳಲು ಆಗಲ್ಲ. ಹೆಚ್​ಡಿ ಕುಮಾರಸ್ವಾಮಿ ಪ್ರಧಾನ ಮಂತ್ರಿಗೆ ಪತ್ರ ಬರಿತಾರಾ, ನಿಮ್ಮ ಸಹೋದರನ ಮೇಲೆ ತನಿಖೆ ಮಾಡಿ ಅಂತ ಬರೆಯೇರಿ. ಅವರು ಬಂದಾಗ ಅವರ ವಿರುದ್ಧ, ಇವರು ಬಂದಾಗ ಇವರ ವಿರುದ್ದ ಮಾತನಾಡ್ತಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:02 pm, Wed, 25 October 23