AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶಾಂತ್​ ಕಿಶೋರ್​ ಬೆಂಗಳೂರಿನಲ್ಲಿ, ಗುಪ್ತವಾಗಿ ನಡೀತು ರಾಜಕೀಯ ಚಟುವಟಿಕೆ

Prashant Kishor: ಚುನಾವಣಾ ತಂತ್ರಗಾರಿಕೆಗೆ ಹೆಸರುವಾಸಿಯಾದ ಪ್ರಶಾಂತ್​ ಕಿಶೋರ್​ ಇಂದು ಸದ್ದಿಲ್ಲದೇ ಬೆಂಗಳೂರಿಗೆ ಬಂದು ತಮ್ಮ ರಾಜಕೀಯ ಚಟುವಟಿಕೆ ನಡೆಸಿದರು. ಹಾಗಾದರೆ ಅವರು ಮಾಡಿದ್ದಾದರೂ ಏನು?

ಪ್ರಶಾಂತ್​ ಕಿಶೋರ್​ ಬೆಂಗಳೂರಿನಲ್ಲಿ, ಗುಪ್ತವಾಗಿ ನಡೀತು ರಾಜಕೀಯ ಚಟುವಟಿಕೆ
ಪ್ರಶಾಂತ್​ ಕಿಶೋರ್​
TV9 Web
| Edited By: |

Updated on:Nov 26, 2021 | 4:22 PM

Share

ಚುನಾವಣಾ ತಂತ್ರಗಾರಿಕೆಗೆ ಹೆಸರುವಾಸಿಯಾದ ಪ್ರಶಾಂತ್​ ಕಿಶೋರ್ (Prashant Kishor)​ ಅವರ ಬೆಂಗಳೂರು ಭೇಟಿ ಕುತೂಹಲ ಮೂಡಿಸಿದೆ. ಶುಕ್ರವಾರ ಬೆಳಗಿನ ಜಾವ ನಗರಕ್ಕೆ ಬಂದಿಳಿದ ಕಿಶೋರ್​ ಅಧಿಕೃತವಾಗಿ ಯಾವ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರ್ಯಕ್ರಮ ಇರಲಿಲ್ಲ. ಹಾಗಾದರೆ ಕಿಶೋರ್​ ಬೆಂಗಳೂರಿಗೆ ಬಂದು ಮಧ್ಯಾಹ್ನ 3 ಗಂಟೆಗೆ ನಗರ ಬಿಟ್ಟು ಹೊರಟಿದ್ದೇಕೆ? ಈ ಕುರಿತು ಹಲವಾರು ರೀತಿಯ ಸುದ್ದಿ ಹರಡಿತ್ತು. ಒಂದು ವೆಬ್​​ಸೈಟಂತೂ ಒಂದು ಸುದ್ದಿ ಹಬ್ಬಿಸಿತು. ಬಿಎಸ್​ವೈ ಮತ್ತು ಮಗ ವಿಜಯೇಂದ್ರ ಹೊಸ ಪಕ್ಷ ಕಟ್ಟುವವರಿದ್ದಾರೆ. ಆ ಕೆಲಸವನ್ನು ಕಿಶೋರ್​ ಅವರ ತಂಡಕ್ಕೆ ನೀಡಲು ನಿರ್ಧರಿಸಲಾಗಿದೆ. ಆ ಕಾರಣದಿಂದಾಗಿಯೇ ಕಿಶೋರ್​ ಇಲ್ಲಿಗೆ ಬಂದಿದ್ದಾರೆ ಎಂದು ಆ ವೆಬ್​ಸೈಟ್​ ಹೇಳಿತು.

ನಿಜವಾದ ಕಾರಣ ಏನು? ಮೊಟ್ಟ ಮೊದಲ ವರದಿ ಪ್ರಕಾರ, ಗೋವಾ ಚುನಾವಣೆ ಕುರಿತಾಗಿ ಚರ್ಚಿಸಲು ಕಿಶೋರ್​ ಬೆಂಗಳೂರಿಗೆ ಬಂದಿದ್ದರು. ಇಲ್ಲಿ ಕೆಲವು ಕಾಂಗ್ರೆಸ್​ ನಾಯಕರ ಭೇಟಿ ಮಾಡಿದ್ದಾರೆ. ಆದರೆ, ಮೂಲಗಳ ಪ್ರಕಾರ ಈ ಮಾಹಿತಿ ನಿಜವಲ್ಲ. ಇನ್ನೊಂದು ಸೂತ್ರದ ಪ್ರಕಾರ ಕಿಶೋರ್​, ಸಾಮಾಜಿಕ ಜಾಲತಾಣವೊಂದರ ಕೆಲವು ಹಿರಿಯ ಅಧಿಕಾರಿಗಳ ಭೇಟಿಗೆ ಬಂದಿದ್ದರು. ಇದರ ಜೊತೆಗೆ ಕಾಂಗ್ರೆಸ್​ನಿಮದ ಟಿಎಮ್​ಸಿ ಪಕ್ಷಕ್ಕೆ ನಾಯಕರನ್ನು ಸೆಳೆಯು ತಂತ್ರದ ಭಾಗವಾಗಿ ಅವರು ಕೆಲವು ಕಾಂಗ್ರೆಸ್​ ನಾಯಕರನ್ನು ಭೇಟಿ ಮಾಡಲು ಅವರು ಇಲ್ಲಿಗೆ ಬಂದಿದ್ದರು. ಆದರೆ, ಕಿಶೋರ್​ ಲೆಕ್ಕ ಹಾಕಿದಂತೆ, ಹಿರಿಯ ಕಾಂಗ್ರೆಸ್​ ನಾಯಕರು ಯಾರೂ ಅವರನ್ನು ಭೇಟಿ ಆದ ಬಗ್ಗೆ ಮಾಹಿತಿ ಇಲ್ಲ. ಆದರೆ, ಅವರ ಭೇಟಿಗೆ ಬೇರೆಯೇ ಕಾರಣ ಇತ್ತು. ಮಮತಾ ಬ್ಯಾನರ್ಜಿಯವರ ಪಕ್ಷದ ಪರವಾಗಿ ಕಿಶೋರ್​ ಇಲ್ಲಿಗೆ ಬಂದಿದ್ದರು. ಮತ್ತು ಟಿಎಮ್​ಸಿ ಮತ್ತು ಜನತಾ ದಳ (ಜಾತ್ಯಾತೀತ) ಒಂದಾಗಿ ಹೋಗಬೇಕು. ಚುನಾವಣೆಗೆ ಇನ್ನೂ ಎರಡುವರೆ ವರ್ಷ ಇದೆ. ಆದರೆ, ರಾಷ್ಟ್ರ ಮಟ್ಟದಲ್ಲಿ ಟಿಎಮ್​ಸಿ ಜೊತೆ ಜೆಡಿಎಸ್​ ನಿಲ್ಲಬೇಕು. ಈ ಕುರಿತು ಒಂದು ಸಂದೇಶ ತಲುಪಿಸುವ ಸಲುವಾಗಿ ಅವರು ಇಲ್ಲಿಗೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ. ಜೆಡಿಎಸ್​ ಪಕ್ಷದ ಪುನರುತ್ಥಾನದ ಕಂಕಣ ತೊಟ್ಟಿರುವ ಕಿಶೋರ್​ ಆ ವಿಚಾರಗಳನ್ನು ಜೆಡಿಎಸ್ ನಾಯಕರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Prashant Kishor: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್​ ಸೇರ್ಪಡೆಗೆ ಹಿನ್ನಡೆಯಾಗಲು ಇದೇ ಕಾರಣ

Prashant Kishor: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎದುರು ಟಿಎಂಸಿ ಗೆಲ್ಲಿಸಲು ಪ್ರಶಾಂತ್ ಕಿಶೋರ್ ಅನುಸರಿಸಿದ ಚುನಾವಣಾ ತಂತ್ರಗಳು ಒಂದೆರೆಡಲ್ಲ

(Election strategist Prashant Kishor secretly visits Bengaluru to do political activity with JDS)

Published On - 3:45 pm, Fri, 26 November 21

Follow Us
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ