AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬಕಾರಿ ಇಲಾಖೆ ಭ್ರಷ್ಟಾಚಾರದಲ್ಲಿ ಸಿಲುಕಿಕೊಳುತ್ತಿದೆ, ಶೀಘ್ರ ಸೂಕ್ತ ಕ್ರಮ ಕೈಗೊಳ್ಳಲಾಗುವುದು: ಸಚಿವ RB ತಿಮ್ಮಾಪುರ

ಅಬಕಾರಿ ಇಲಾಖೆ ಭ್ರಷ್ಟಾಚಾರ ಆರೋಪ ಕುರಿತು ಮಾಧ್ಯಮದ ಮೂಲಕ ನನ್ನ ಗಮನಕ್ಕೆ ಬಂದಿದೆ. ಅಬಕಾರಿ ಇಲಾಖೆ ಹಿರಿಯ ಅಧಿಕಾರಿ ಎಂ.ಎನ್.ಮೋಹನ್​ ಅವರು ಸಿಎಂಗೆ ಪತ್ರ ಬರೆದಿದ್ದಾರೆ. ಶೀಘ್ರವಾಗಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಸಚಿವ R.B.ತಿಮ್ಮಾಪುರ ಹೇಳಿದರು.

ಅಬಕಾರಿ ಇಲಾಖೆ ಭ್ರಷ್ಟಾಚಾರದಲ್ಲಿ ಸಿಲುಕಿಕೊಳುತ್ತಿದೆ, ಶೀಘ್ರ ಸೂಕ್ತ ಕ್ರಮ ಕೈಗೊಳ್ಳಲಾಗುವುದು: ಸಚಿವ RB ತಿಮ್ಮಾಪುರ
ಅಬಕಾರಿ ಸಚಿವ ತಿಮ್ಮಾಪುರ
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Jun 30, 2023 | 9:18 PM

Share

ಬಾಗಲಕೋಟೆ: ಅಬಕಾರಿ ಇಲಾಖೆ (Excise department) ಭ್ರಷ್ಟಾಚಾರದಲ್ಲಿ ಸಿಲುಕಿಕೊಳುತ್ತಿದೆ. ಶೀಘ್ರವಾಗಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಸಚಿವ R.B.ತಿಮ್ಮಾಪುರ (RB Thimmapura) ಹೇಳಿದರು. ಜಿಲ್ಲೆಯ ಮುಧೋಳ‌ದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಬಕಾರಿ ಇಲಾಖೆ ಭ್ರಷ್ಟಾಚಾರ ಆರೋಪ ಕುರಿತು ಮಾಧ್ಯಮದ ಮೂಲಕ ನನ್ನ ಗಮನಕ್ಕೆ ಬಂದಿದೆ. ಅಬಕಾರಿ ಇಲಾಖೆ ಹಿರಿಯ ಅಧಿಕಾರಿ ಎಂ.ಎನ್.ಮೋಹನ್​ ಅವರು ಸಿಎಂಗೆ ಪತ್ರ ಬರೆದಿದ್ದಾರೆ. ಆ ಮೂಲಕ ಇಲಾಖೆ ಕುರಿತಂತೆ ಹಲವು ವಿಚಾರಗಳನ್ನ, ವಿಷಯಗಳನ್ನ ಉಲ್ಲೇಖಿಸಿದ್ದಾರೆ ಎಂದರು.

ಅಬಕಾರಿ ಇಲಾಖೆ ಭ್ರಷ್ಟಾಚಾರ ವಿಚಾರದಲ್ಲಿ ಸಿಲುಕಿಕೊಳ್ಳುತ್ತಿದೆ. ಈ ಕುರಿತಂತೆ ಕ್ರಮವನ್ನು ಕೈಗೊಳ್ಳುತ್ತೇವೆ. ಅಬಕಾರಿ ಇಲಾಖೆಯಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಕುರಿತಂತೆ ಚರ್ಚೆ ನಡೆಸಲಾಗುತ್ತಿದೆ. ಸದ್ಯದಲ್ಲೇ ಹಲವು ಕ್ರಮಗಳನ್ನ ಕೈಗೊಳ್ಳುವ ಮೂಲಕ ಸುಧಾರಣೆ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಕೆಲವರಿಗೆ ಮಾತನಾಡುವ ಚಟ; ಕೆಎಸ್ ಈಶ್ವರಪ್ಪ ವಿರುದ್ಧ ಶಾಸಕ ಶಿವರಾಮ್ ಹೆಬ್ಬಾರ್​ ಆಕ್ರೋಶ

ದುಡ್ಡು ತಿನ್ನಲು ಬರಲ್ಲ ಸಿದ್ಧರಾಮಯ್ಯ ವಿರುದ್ಧ ಪಿಸಿ ಗದ್ದಿಗೌಡರ ಕಿಡಿ 

ಜಿಲ್ಲೆಯಲ್ಲಿ ಸಂಸದ ಪಿ. ಸಿ. ಗದ್ದಿಗೌಡರ ಪ್ರತಿಕ್ರಿಯೆ ನಿಡಿದ್ದು, ಹೇಳಿದ ಪ್ರಕಾರ 10 ಕೆಜಿ ಅಕ್ಕಿ ಕೊಡಬೇಕು. 5 ಕೆಜಿ ನಾವು ಕೇಂದ್ರ ಸರ್ಕಾರದಿಂದ ಕೊಡುತ್ತಿದ್ದೇವೆ. ಅವರು ಹೇಳಿದಂತೆ 10 ಕೆಜಿ ಅಕ್ಕಿನೇ ಕೊಡಬೇಕು. ಸಿದ್ದರಾಮಯ್ಯ ಅನ್ನ ತಿನ್ನಲು ಬರುತ್ತೆ. ದುಡ್ಡು ತಿನ್ನಲು ಬರಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದರು. ಅವರು ಹೇಳಿದ ಮಾತು ಉಳಿಸಿಕೊಳ್ಳಬೇಕು. ಭತ್ತ ಬೆಳೆಯುವ ಮಿಲ್​ನಿಂದ ಅಥವಾ ಬೇರೆ ರಾಜ್ಯದಿಂದ ತರಸಿಕೊಳ್ಳಬೇಕು. ಹಣಕಾಸಿನ ವ್ಯವಸ್ಥೆ ಸಲುವಾಗಿ ಮಾಡುತ್ತಾರೆ ಎಂದರು.

ಇದನ್ನೂ ಓದಿ: ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಭಾನುವಾರ ಸಭೆ; ಯಾರಾಗಲಿದ್ದಾರೆ ಪ್ರತಿಪಕ್ಷ ನಾಯಕ?

ಡಿಕೆ ಶಿವಕುಮಾರ್​ ಸಿದ್ದರಾಮಯ್ಯ ಮಧ್ಯೆ ಇದ್ದೇ ಇದೆ

ಶ್ರಮ ಒಬ್ಬರದ್ದು, ಅನುಭವಿಸುವವರು ಮತ್ತೊಬ್ಬರೆಂದು ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರ ವಿಚಾರ ಎಲ್ಲ ಗೊತ್ತಿದೆ, ಡಿಕೆ ಶಿವಕುಮಾರ್​, ಸಿಎಂ ಸಿದ್ದರಾಮಯ್ಯ ಮಧ್ಯೆ ಇದ್ದೇ ಇದೆ. ಇದು ಒಂದಿನ ಸ್ಫೋಟ ಆಗುತ್ತೆ, ಯಾವಾಗ ಆಗುತ್ತೆಂದು ಗೊತ್ತಿಲ್ಲ. ಆದರೆ ಹಂಡ್ರೆಡ್‌ ಪರ್ಸೆಂಟ್‌ ಸ್ಫೋಟ ಆಗುತ್ತದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:16 pm, Fri, 30 June 23