ಜನರಿಗೆ ಉಚಿತವಾಗಿ ಕೊಡುವುದು ನನ್ನ ಅನಿಸಿಕೆಯಲ್ಲಿ ಲಂಚ: ಲೋಕಾಯುಕ್ತ ನಿವೃತ್ತ ನ್ಯಾ ಸಂತೋಷ್ ಹೆಗ್ಡೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 02, 2023 | 3:52 PM

ಕಾಂಗ್ರೆಸ್ ಸರ್ಕಾರದಿಂದ ಉಚಿತ ಗ್ಯಾರಂಟಿ ಯೋಜನೆಯ ಪರಿಣಾಮ ಖಂಡಿತ ಮುಂದಿನ 6 ತಿಂಗಳಲ್ಲಿ ಕಾಣುತ್ತೇವೆ. ಜನರಿಗೆ ಉಚಿತವಾಗಿ ಕೊಡುವುದು ನನ್ನ ಅನಿಸಿಕೆಯಲ್ಲಿ ಲಂಚ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ಜನರಿಗೆ ಉಚಿತವಾಗಿ ಕೊಡುವುದು ನನ್ನ ಅನಿಸಿಕೆಯಲ್ಲಿ ಲಂಚ: ಲೋಕಾಯುಕ್ತ ನಿವೃತ್ತ ನ್ಯಾ ಸಂತೋಷ್ ಹೆಗ್ಡೆ
ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
Follow us on

ಮಂಡ್ಯ: ಕಾಂಗ್ರೆಸ್ ಸರ್ಕಾರದಿಂದ ಉಚಿತ ಗ್ಯಾರಂಟಿ ಯೋಜನೆಯ ಪರಿಣಾಮ ಖಂಡಿತ ಮುಂದಿನ 6 ತಿಂಗಳಲ್ಲಿ ಕಾಣುತ್ತೇವೆ. ಜನರಿಗೆ ಉಚಿತವಾಗಿ ಕೊಡುವುದು ನನ್ನ ಅನಿಸಿಕೆಯಲ್ಲಿ ಲಂಚ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ (Santosh Hegde) ಹೇಳಿದರು. ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಚಿತ ಗ್ಯಾರಂಟಿ ಯೋಜನೆಗಳಿಂದ ಕುಟುಂಬಗಳಲ್ಲಿ ಅತ್ತೆ ಸೊಸೆ‌ ನಡುವೆ ಜಗಳ ಆಗಬಹುದು. ರಾಜ್ಯದ ಆರ್ಥಿಕ ಪರಿಸ್ಥಿತಿ ಕೂಡ ಗಂಭೀರವಾಗುತ್ತೆ ಎಂದು ಅಭಿಪ್ರಾಯಪಟ್ಟರು.

ಜನಪ್ರತಿನಿಧಿಗಳು ಲಾಭಕ್ಕಿಂತ‌ ಜನರ ಸೇವೆಯನ್ನು ಮಾಡಬೇಕು. ಮತ ಹಾಕುವವರು ಕೂಡ ದೇಶಸೇವೆ ಮಾಡುವವರಿಗೆ ಹಾಕಬೇಕು ಎಂದು ಕಿವಿಮಾತು ಹೇಳಿದರು.

ಇದ್ನೂ ಓದಿ: ಕೇಂದ್ರ ಸರ್ಕಾರ ಧಾರವಾಡ ಜಿಲ್ಲೆಗೆ 1400 ರೂ. ಅನುದಾನ ನೀಡಿದೆ: ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ

ತನಿಖಾ ಸಂಸ್ಥೆಗಳು ಸರ್ಕಾರದ ಕಪಿಮುಷ್ಠಿಯಲ್ಲಿವೆ

ತಹಶೀಲ್ದಾರ್ ಅಜಿತ್​ ರೈ ಮನೆ ಮೇಲೆ ಲೋಕಾಯುಕ್ತ ದಾಳಿ ಕೇಸ್​ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರಗಳು ತನಿಖಾ ಸಂಸ್ಥೆಗಳನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುತ್ತವೆ. ದೊಡ್ಡ ದೊಡ್ಡ ಅಧಿಕಾರಿಗಳ ಮನೆಗಳ ಮೇಲೆ ರೇಡ್ ಮಾಡಬೇಕು ಎಂದರು.

ಮತದಾರರನ್ನ ಮಂಕುಗೊಳಿಸುವ ಒಂದು ಪ್ರಯತ್ನ

ಹಿಂದಿನ ಸರ್ಕಾರಗಳ ಹಗರಣಗಳ ತನಿಖೆ ವಿಳಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮತದಾರರನ್ನ ಮಂಕುಗೊಳಿಸುವ ಒಂದು ಪ್ರಯತ್ನ. ಆಡಿದ ಮಾತನ್ನ ಪೂರೈಸಬೇಕು. ಯಾರು ಮೋಸ ಮಾಡಿದ್ದಾರೆ ಅವರನ್ನ ಕೋರ್ಟ್ ಮೆಟ್ಟಿಲು ಹತ್ತಿಸಬೇಕು.

ಇದನ್ನೂ ಓದಿ: Gruha Lakshmi Scheme: ಜುಲೈ 14ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ: ಸಚಿವ ಲಕ್ಷ್ಮೀ ಹೆಬ್ಬಾಳ್ಕರ್

ಶಿಕ್ಷಣ, ಆರೋಗ್ಯ ಇದಕ್ಕೆ ಹಣ ಕೊಡಲಿ

ಪಡಿತರ ಬದಲು ಹಣ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಇದು ಸಂಪೂರ್ಣ ತಪ್ಪು. ಮನುಷ್ಯ ಸೇವೆಯಿಂದ ಹಣ ಪಡೆದುಕೊಳ್ಳಬೇಕು. ಇದು ಸರಿಯಲ್ಲ. ಶಿಕ್ಷಣ, ಆರೋಗ್ಯ ಇದಕ್ಕೆ ಹಣ ಕೊಡಲಿ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.