AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾತನೂರಿನಲ್ಲಿ ಟೆಂಟ್ ಹಾಕಿ ಬ್ಲೂ ಫಿಲ್ಮ್‌ ನಡೆಸುತ್ತಿದ್ರಲ್ಲಾ: ಮತ್ತೆ ಡಿಕೆ ಶಿವಕುಮಾರ್ ಗುಮ್ಮಿದ ಹೆಚ್​ಡಿ ಕುಮಾರಸ್ವಾಮಿ

ಘನತೆಗೆ ತಕ್ಕಂತೆ ಮಾತನಾಡಿ ಎಂದ ಡಿಕೆ ಶಿವಕುಮಾರ್ ವಿರುದ್ಧ ಗರಂ ಆದ ಹೆಚ್​ಡಿ ಕುಮಾರಸ್ವಾಮಿ, ಅವರ ಘನತೆಯನ್ನೇ ಪ್ರಶ್ನಿಸಿದರು. ಅಲ್ಲದೆ, ಸಾತನೂರಿನಲ್ಲಿ ಎರಡು ಟೆಂಟ್ ಇಟ್ಟುಕೊಂಡು ಕರೆಂಟ್ ಕೆನೆಕ್ಷನ್ ತಗೊಂಡು ಬ್ಲೂ ಫಿಲ್ಮ್ ನಡೆಸುತ್ತಿದ್ದರಲ್ಲ. ಆ ಸಂಸ್ಕೃತಿಯಿಂದ ಬಂದಿರುವುದರಿಂದ ಈ ಪೋಸ್ಟರ್ ಅಂಟಿಕೊಂಡು ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಂಜುನಾಥ ಕೆಬಿ
| Updated By: Rakesh Nayak Manchi|

Updated on:Nov 20, 2023 | 6:42 PM

Share

ಹಾಸನ, ನ.20: ಘನತೆಗೆ ತಕ್ಕಂತೆ ಮಾತನಾಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಹೆಚ್.​ಡಿ. ಕುಮಾರಸ್ವಾಮಿಗೆ (H.D. Kumaraswamy) ಹೇಳಿದ್ದರು. ಇದನ್ನು ಮಾಧ್ಯಮದವರು ಪ್ರಶ್ನಿಸಿದಾಗ ಗರಂ ಆದ ಕುಮಾರಸ್ವಾಮಿ, ಅವರಿಗೆ ಯಾವ ಘನತೆ ಇದೆ ಎಂದು ಪ್ರಶ್ನಿಸಿದರು. ಅಲ್ಲದೆ, ಸಾತನೂರಿನಲ್ಲಿ ಟೆಂಟ್ ಹಾಕಿ ಬ್ಲೂ ಫಿಲ್ಮ್ ಪ್ರಸಾರ ಮಾಡುತ್ತಿದ್ದ ಹಿಂದಿನ ವಿಚಾರವನ್ನು ಕೆದಕಿದರು.

ಘನತೆಗೆ ತಕ್ಕಂತೆ ಮಾತನಾಡಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾಗಿ ಹಾಸನದಲ್ಲಿ ಮಾಧ್ಯಮದವರು ಕೇಳಿದಾಗ ಆಕ್ರೋಶಗೊಂಡ ಕುಮಾರಸ್ವಾಮಿ, ಅವರಿಗೆ ಯಾವ ಘನತೆ ಇದೆ? ಕರೆಂಟ್ ಕಳ್ಳ ಅಂತ ಪೋಸ್ಟರ್ ಅಂಟಿಸೋದಾ? ಇದಲ್ಲವೇ ನಿಮ್ಮ ಘನತೆ? ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನ ಘನತೆ ಇದಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ: ನಾವು ಹಿಂದೂ ಸಂಸ್ಕೃತಿಯಲ್ಲಿ ಹುಟ್ಟಿದ್ದೇವೆ, ನಮ್ಮ ಧರ್ಮ ಕಾಪಾಡಬೇಕಲ್ವಾ: ಜಮೀರ್ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು

ಕನಕಪುರದ ದೊಡ್ಡ ಆಲಹಳ್ಳಿಯ ಸಾತನೂರು ಬಳಿ ಎರಡು ಟೆಂಟ್ ಇಟ್ಟುಕೊಂಡು ಕನೆಕ್ಷನ್ ತಗೊಂಡು ಜನರಿಗೆ ಬ್ಲೂ ಫ್ಲಿಲ್ಮ್ ನಡೆಸುತ್ತಿದ್ದರಲ್ಲ. ಆ ಸಂಸ್ಕೃತಿಯಲ್ಲಿ ಬಂದಿರುವುದರಿಂದ ಈ ರೀತಿಯಾಗಿ ಕಳ್ಳ ಅಂತ ಹೇಳಿ ಪೋಸ್ಟರ್ ಅಂಟಿಸಿಕೊಂಡು ಕುಳಿತಿದ್ದೀರಿ. ದರೋಡೆ ಮಾಡಿಕೊಂಡು ಕುಳಿತಿದ್ದೀರಿ. ಎಲ್ಲೆಲ್ಲಿ ಏನೇನು ಮಾಡಿದ್ದೀರಿ? ಕದ್ದು ಗ್ರಾನೈಟ್ ಹೊಡ್ಕೊಂಡು ಕುಳಿತಿದ್ದಿರಿ. ಈಗಲೂ ನಡೆಸಿಕೊಂಡು ಕುಳಿತಿದ್ದೀರಿ ಅಲ್ವ, ಮತ್ತಿಕೆರೆ ರೈಲ್ವೇ ನಿಲ್ದಾಣದಲ್ಲಿ ಅರ್ಧ ರಾತ್ರಿಯಲ್ಲಿ ಬರುತ್ತಿದೆ. ನಾನು ಕಾಣದ್ದಲ್ಲ, ನಿಮ್ಮಿಂದ ನಾನು ಬದುಕನ್ನು ಕಲಿಬೇಕಾ ಎಂದು ಖಾರವಾಗಿ ಪ್ರಶ್ನಿಸಿದರು.

ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಮಾಧ್ಯಮದವರು ಕೇಳಿದಾಗ, ಚಾನೆಲ್​ಗಳಲ್ಲಿ, ಕೆಲವು ಪತ್ರಿಕೆಗಳ ಸಂಪಾದಕೀಯಗಳಲ್ಲಿ, ಆರ್ಟಿಕಲ್​ಗಳಲ್ಲಿ ವಿಪಕ್ಷ ನಾಯಕ ಹೇಗಿರಬೇಕು ಎಂದು ಬರೆಯಲಾಗಿದೆ. ಇವುಗಳನ್ನು ನಾನು ಓದಿದ್ದೇನೆ. ನನ್ನದೇ ಆದ ಇತಿ ಮಿತಿಯಲ್ಲಿ ಜನರಿಗೆ ಏನು ಉಪಯೋಗ ಆಗುತ್ತದೆ, ಸರ್ಕಾರದ ವೈಫಲ್ಯಗಳನ್ನು ತೋರಿಸುವಂತಹ ವಿಚಾರಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತೇನೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:36 pm, Mon, 20 November 23

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು