Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾತನೂರಿನಲ್ಲಿ ಟೆಂಟ್ ಹಾಕಿ ಬ್ಲೂ ಫಿಲ್ಮ್‌ ನಡೆಸುತ್ತಿದ್ರಲ್ಲಾ: ಮತ್ತೆ ಡಿಕೆ ಶಿವಕುಮಾರ್ ಗುಮ್ಮಿದ ಹೆಚ್​ಡಿ ಕುಮಾರಸ್ವಾಮಿ

ಘನತೆಗೆ ತಕ್ಕಂತೆ ಮಾತನಾಡಿ ಎಂದ ಡಿಕೆ ಶಿವಕುಮಾರ್ ವಿರುದ್ಧ ಗರಂ ಆದ ಹೆಚ್​ಡಿ ಕುಮಾರಸ್ವಾಮಿ, ಅವರ ಘನತೆಯನ್ನೇ ಪ್ರಶ್ನಿಸಿದರು. ಅಲ್ಲದೆ, ಸಾತನೂರಿನಲ್ಲಿ ಎರಡು ಟೆಂಟ್ ಇಟ್ಟುಕೊಂಡು ಕರೆಂಟ್ ಕೆನೆಕ್ಷನ್ ತಗೊಂಡು ಬ್ಲೂ ಫಿಲ್ಮ್ ನಡೆಸುತ್ತಿದ್ದರಲ್ಲ. ಆ ಸಂಸ್ಕೃತಿಯಿಂದ ಬಂದಿರುವುದರಿಂದ ಈ ಪೋಸ್ಟರ್ ಅಂಟಿಕೊಂಡು ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Follow us
ಮಂಜುನಾಥ ಕೆಬಿ
| Updated By: Rakesh Nayak Manchi

Updated on:Nov 20, 2023 | 6:42 PM

ಹಾಸನ, ನ.20: ಘನತೆಗೆ ತಕ್ಕಂತೆ ಮಾತನಾಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಹೆಚ್.​ಡಿ. ಕುಮಾರಸ್ವಾಮಿಗೆ (H.D. Kumaraswamy) ಹೇಳಿದ್ದರು. ಇದನ್ನು ಮಾಧ್ಯಮದವರು ಪ್ರಶ್ನಿಸಿದಾಗ ಗರಂ ಆದ ಕುಮಾರಸ್ವಾಮಿ, ಅವರಿಗೆ ಯಾವ ಘನತೆ ಇದೆ ಎಂದು ಪ್ರಶ್ನಿಸಿದರು. ಅಲ್ಲದೆ, ಸಾತನೂರಿನಲ್ಲಿ ಟೆಂಟ್ ಹಾಕಿ ಬ್ಲೂ ಫಿಲ್ಮ್ ಪ್ರಸಾರ ಮಾಡುತ್ತಿದ್ದ ಹಿಂದಿನ ವಿಚಾರವನ್ನು ಕೆದಕಿದರು.

ಘನತೆಗೆ ತಕ್ಕಂತೆ ಮಾತನಾಡಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾಗಿ ಹಾಸನದಲ್ಲಿ ಮಾಧ್ಯಮದವರು ಕೇಳಿದಾಗ ಆಕ್ರೋಶಗೊಂಡ ಕುಮಾರಸ್ವಾಮಿ, ಅವರಿಗೆ ಯಾವ ಘನತೆ ಇದೆ? ಕರೆಂಟ್ ಕಳ್ಳ ಅಂತ ಪೋಸ್ಟರ್ ಅಂಟಿಸೋದಾ? ಇದಲ್ಲವೇ ನಿಮ್ಮ ಘನತೆ? ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನ ಘನತೆ ಇದಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ: ನಾವು ಹಿಂದೂ ಸಂಸ್ಕೃತಿಯಲ್ಲಿ ಹುಟ್ಟಿದ್ದೇವೆ, ನಮ್ಮ ಧರ್ಮ ಕಾಪಾಡಬೇಕಲ್ವಾ: ಜಮೀರ್ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು

ಕನಕಪುರದ ದೊಡ್ಡ ಆಲಹಳ್ಳಿಯ ಸಾತನೂರು ಬಳಿ ಎರಡು ಟೆಂಟ್ ಇಟ್ಟುಕೊಂಡು ಕನೆಕ್ಷನ್ ತಗೊಂಡು ಜನರಿಗೆ ಬ್ಲೂ ಫ್ಲಿಲ್ಮ್ ನಡೆಸುತ್ತಿದ್ದರಲ್ಲ. ಆ ಸಂಸ್ಕೃತಿಯಲ್ಲಿ ಬಂದಿರುವುದರಿಂದ ಈ ರೀತಿಯಾಗಿ ಕಳ್ಳ ಅಂತ ಹೇಳಿ ಪೋಸ್ಟರ್ ಅಂಟಿಸಿಕೊಂಡು ಕುಳಿತಿದ್ದೀರಿ. ದರೋಡೆ ಮಾಡಿಕೊಂಡು ಕುಳಿತಿದ್ದೀರಿ. ಎಲ್ಲೆಲ್ಲಿ ಏನೇನು ಮಾಡಿದ್ದೀರಿ? ಕದ್ದು ಗ್ರಾನೈಟ್ ಹೊಡ್ಕೊಂಡು ಕುಳಿತಿದ್ದಿರಿ. ಈಗಲೂ ನಡೆಸಿಕೊಂಡು ಕುಳಿತಿದ್ದೀರಿ ಅಲ್ವ, ಮತ್ತಿಕೆರೆ ರೈಲ್ವೇ ನಿಲ್ದಾಣದಲ್ಲಿ ಅರ್ಧ ರಾತ್ರಿಯಲ್ಲಿ ಬರುತ್ತಿದೆ. ನಾನು ಕಾಣದ್ದಲ್ಲ, ನಿಮ್ಮಿಂದ ನಾನು ಬದುಕನ್ನು ಕಲಿಬೇಕಾ ಎಂದು ಖಾರವಾಗಿ ಪ್ರಶ್ನಿಸಿದರು.

ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಮಾಧ್ಯಮದವರು ಕೇಳಿದಾಗ, ಚಾನೆಲ್​ಗಳಲ್ಲಿ, ಕೆಲವು ಪತ್ರಿಕೆಗಳ ಸಂಪಾದಕೀಯಗಳಲ್ಲಿ, ಆರ್ಟಿಕಲ್​ಗಳಲ್ಲಿ ವಿಪಕ್ಷ ನಾಯಕ ಹೇಗಿರಬೇಕು ಎಂದು ಬರೆಯಲಾಗಿದೆ. ಇವುಗಳನ್ನು ನಾನು ಓದಿದ್ದೇನೆ. ನನ್ನದೇ ಆದ ಇತಿ ಮಿತಿಯಲ್ಲಿ ಜನರಿಗೆ ಏನು ಉಪಯೋಗ ಆಗುತ್ತದೆ, ಸರ್ಕಾರದ ವೈಫಲ್ಯಗಳನ್ನು ತೋರಿಸುವಂತಹ ವಿಚಾರಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತೇನೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:36 pm, Mon, 20 November 23

ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ