AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

1978ರಲ್ಲಿ ಶರದ್ ಪವಾರ್​​ ಬಂಡಾಯ ಗುಂಪಿನ ನೇತೃತ್ವ ವಹಿಸಿ ಮಹಾರಾಷ್ಟ್ರ ಸರ್ಕಾರ ಉರುಳಿಸಿದ್ದರು: ಹಳೇ ಘಟನೆ ನೆನಪಿಸಿದ ಮಾಜಿ ಶಾಸಕ

ವಿಧಾನಸಭೆಯ ಮುಂಗಾರು ಅಧಿವೇಶನ ನಡೆಯುತ್ತಿರುವಾಗ, ಜುಲೈ 18, 1978 ರಂದು ಪವಾರ್ ಅವರು ರಾಜ್ಯಪಾಲರ ಬಳಿಗೆ ಹೋಗಿ ತಮ್ಮ 38 ಶಾಸಕರು ಹೊಸ ಗುಂಪು ರಚಿಸುವ ಬಗ್ಗೆ ಪತ್ರವನ್ನು ಸಲ್ಲಿಸಿದರು. ಅವರು ಇತರ ಪಕ್ಷಗಳ ಬೆಂಬಲದ ಪತ್ರವನ್ನು ಮತ್ತು ಶಾಸಕಾಂಗ ಪಕ್ಷದ...

1978ರಲ್ಲಿ ಶರದ್ ಪವಾರ್​​ ಬಂಡಾಯ ಗುಂಪಿನ ನೇತೃತ್ವ ವಹಿಸಿ ಮಹಾರಾಷ್ಟ್ರ ಸರ್ಕಾರ ಉರುಳಿಸಿದ್ದರು: ಹಳೇ ಘಟನೆ ನೆನಪಿಸಿದ ಮಾಜಿ ಶಾಸಕ
ಶರದ್ ಪವಾರ್
TV9 Web
| Edited By: |

Updated on:Jun 25, 2022 | 3:49 PM

Share

ಮುಂಬೈ: ಶಿವಸೇನಾ (Shiv Sena) ನಾಯಕ ಏಕನಾಥ್ ಶಿಂಧೆ (Eknath Shinde) ಅವರ ಇತ್ತೀಚಿನ ಬಂಡಾಯವು 1978 ರಲ್ಲಿ ಮಹಾರಾಷ್ಟ್ರದಲ್ಲಿ (maharashtra) ನಡೆದ ಇದೇ ರೀತಿಯ ದಂಗೆಯನ್ನು ನೆನಪಿಸುತ್ತದೆ. 1978ರಲ್ಲಿ ನಡೆದದ್ದು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮೊದಲನೆಯದು. ಆಗ ಬಂಡಾಯ ಗುಂಪನ್ನು ಶರದ್ ಪವಾರ್ (Sharad pawar) ನೇತೃತ್ವ ವಹಿಸಿದ್ದರು .ಅವರು ವಸಂತದಾದಾ ಪಾಟೀಲ್ ಸರ್ಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾದರು.ಕಾಂಗ್ರೆಸ್‌ನ ಎರಡು ಛಿದ್ರವಾದ ಗುಂಪುಗಳು ಕೈಜೋಡಿಸಿ ನಂತರ ಸರ್ಕಾರ ರಚಿಸಲಾಯಿತು. ಈ ಮೂಲಕ 38 ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ಮುಖ್ಯಮಂತ್ರಿಯಾದರು. ಈಗ ಈ ಘಟನೆಯನ್ನು ನೆನಪಿಸಿಕೊಂಡಿದ್ದು 87ರ ಹರೆಯದ ಕೃಷ್ಣರಾವ್ ಭೇಗ್ಡೆ. ಆಗ ಮಾವಲ ಶಾಸಕರಾಗಿದ್ದ ಕೃಷ್ಣರಾವ್ ಭೇಗ್ಡೆ ಬಂಡಾಯ ಗುಂಪಿನ ಭಾಗವಾಗಿದ್ದರು. 1978 ರ ದಂಗೆಯನ್ನು ನೆನಪಿಸಿಕೊಂಡ ಭೇಗ್ಡೆ, ಆಗ ಬಂಡಾಯದ ಮುಂಚೂಣಿಯಲ್ಲಿದ್ದವರು ಪವಾರ್, ಗೋವಿಂದರಾವ್ ಆದಿಕ್ ಮತ್ತು ಪ್ರತಾಪ್​​ರಾವ್ ಭೋಸಲೆಯಂತಹವರು. ಇಂದು  ಶಿವಸೇನೆಯಲ್ಲಿನ ಒಡಕು ಹಿಂದುತ್ವದ ವಿಚಾರದಲ್ಲಿ ಕಂಡುಬರುತ್ತಿದೆ. ಅಲ್ಲದೆ, ಬಂಡಾಯವೆದ್ದ ಶಿವಸೈನಿಕರು ಎನ್‌ಸಿಪಿಯಿಂದ ಅವಮಾನಕರ ವರ್ತನೆಯ ವಿಷಯವನ್ನು ಎತ್ತುತ್ತಿದ್ದಾರೆ ಎಂದು ಭೇಗ್ಡೆ ಹೇಳಿದ್ದಾರೆ.

1978ರಲ್ಲಿ ಬಂಡಾಯ ಶಾಸಕರು  ಸರ್ಕಾರದಿಂದ ಬೇರೆಯಾಗಲು ನಿರ್ಧರಿಸಿದ ಪ್ರಮುಖ ಕಾರಣವೆಂದರೆ ಅವರಿಗೆ ನೀಡಿದ “ಅವಮಾನಕರ” ನಡವಳಿಕೆ ಆಗಿತ್ತು. ಕಾಂಗ್ರೆಸ್ (ಐ)ಗೆ ಸೇರಿದ ಉಪಮುಖ್ಯಮಂತ್ರಿ ನಾಶಿಕರಾವ್ ತಿರ್ಪುಡೆ ಅವರು ಮುಖ್ಯಮಂತ್ರಿ ಪಾಟೀಲ್, ಪವಾರ್ ಮತ್ತು ಅವರ ಆಪ್ತ ಯಶವಂತರಾವ್ ಚವಾಣ್ ಅವರನ್ನು ಬಹಿರಂಗವಾಗಿ ಟೀಕಿಸಿದರು. ತಿರ್ಪುಡೆ ಅವರು ಪವಾರ್ ಮತ್ತು ಅವರ ಆಪ್ತರೊಂದಿಗೆ ಸರಿಹೋಗದ ವಿಷಯಗಳನ್ನು ಹೇಳುತ್ತಿದ್ದರು. ವಸಂತದಾದಾ ಪಾಟೀಲ್ ಗುಂಪಿನಲ್ಲಿ ಪವಾರ್ ಸಚಿವರಾಗಿದ್ದರು.

ಮೂರ್ನಾಲ್ಕು ತಿಂಗಳಿನಿಂದ ಸರ್ಕಾರದ ವಿರುದ್ಧ ಅಸಮಾಧಾನ ಮಡುಗಟ್ಟಿತ್ತು. ಮತ್ತೊಂದು ಗುಂಪು ರಚನೆ ಮತ್ತು ವಿರೋಧ ಪಕ್ಷಗಳಾದ ಜನತಾ ಪಕ್ಷ, ರೈತರು ಮತ್ತು ಕಾರ್ಮಿಕರ ಪಕ್ಷ, ಸಿಪಿಎಂ ಜೊತೆ ಕೈಜೋಡಿಸುವ ಬಗ್ಗೆ ಚರ್ಚೆ ಸುಮಾರು ಮೂರ್ನಾಲ್ಕು ತಿಂಗಳ ಕಾಲ ನಡೆಯಿತು ಎಂದು ಭೇಗ್ಡೆ ನೆನಪಿಸಿಕೊಂಡರು. ವಿಧಾನಸಭೆಯ ಮುಂಗಾರು ಅಧಿವೇಶನ ನಡೆಯುತ್ತಿರುವಾಗ, ಜುಲೈ 18, 1978 ರಂದು ಪವಾರ್ ಅವರು ರಾಜ್ಯಪಾಲರ ಬಳಿಗೆ ಹೋಗಿ ತಮ್ಮ 38 ಶಾಸಕರು ಹೊಸ ಗುಂಪು ರಚಿಸುವ ಬಗ್ಗೆ ಪತ್ರವನ್ನು ಸಲ್ಲಿಸಿದರು. ಅವರು ಇತರ ಪಕ್ಷಗಳ ಬೆಂಬಲದ ಪತ್ರವನ್ನು ಮತ್ತು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಗ್ಗೆ ಮತ್ತೊಂದು ಪತ್ರವನ್ನು ಸಲ್ಲಿಸಿದ್ದಾರೆ. ರಾಜ್ಯಪಾಲರು ಪವಾರ್ ಅವರನ್ನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಆಹ್ವಾನಿಸಿದರು. ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗಲೇ ಪವಾರ್ ಪ್ರಮಾಣ ವಚನ ಸ್ವೀಕರಿಸಿದರು.

ಈ ಹೊತ್ತಿನಲ್ಲಿ ಪವಾರ್ ನನ್ನನ್ನು ಸಂಪರ್ಕಿಸಲಿಲ್ಲ.  ಆದರೆ ಅವರ ನಿಕಟವರ್ತಿಗಳು ಪ್ರತ್ಯೇಕ ಗುಂಪನ್ನು ರಚಿಸುವ ಮತ್ತು “ನಮ್ಮದೇ” ಸರ್ಕಾರವನ್ನು ಹೊಂದುವ ಅಗತ್ಯತೆಯ ಬಗ್ಗೆ ಅವರಿಗೆ ಮನವರಿಕೆ ಮಾಡಿದರು. ಪವಾರ್ ನನ್ನನ್ನು ಅಥವಾ ಇತರ ಶಾಸಕರನ್ನು ಭೇಟಿ ಮಾಡಿದ ನೆನಪಿಲ್ಲ. ನಮ್ಮನ್ನು ಸಾಮಾನ್ಯವಾಗಿ ಸಂಬೋಧಿಸಲಾಗಿದೆ ಮತ್ತು ಒಬ್ಬರಿಂದ ಒಬ್ಬರಿಗೆ ಅಲ್ಲ. ಪವಾರ್ ಅವರ ಆಪ್ತರು ನಮ್ಮೊಂದಿಗೆ ಸಂಪರ್ಕದಲ್ಲಿದ್ದರು ಎಂದಿದ್ದಾರೆ ಭೇಗ್ಡೆ.

1977ರಲ್ಲಿ ತುರ್ತು ಪರಿಸ್ಥಿತಿ ಹಿಂಪಡೆದ ಬಳಿಕ ಕಾಂಗ್ರೆಸ್ ಎರಡು ಪಕ್ಷಗಳಾಗಿ ಒಡೆದಿತ್ತು. ಒಂದು ಪಕ್ಷವು ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ (ಐ) ಎಂದು ಕರೆಯಲ್ಪಟ್ಟಿತು. ಇನ್ನೊಂದು ಪಕ್ಷವು ಡಿ ದೇವರಾಜ್ ಅರಸ್ ನೇತೃತ್ವದಲ್ಲಿತ್ತು, ಇದನ್ನು ಕಾಂಗ್ರೆಸ್ (ಅರಸ್) ಎಂದು ಕರೆಯಲಾಗುತ್ತಿತ್ತು. ಇಬ್ಬರೂ ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಪವಾರ್ ಕಾಂಗ್ರೆಸ್ (ಅರಸ್) ಭಾಗವಾಗಿದ್ದರು. ಆದರೆ, 1978ರ ವಿಧಾನಸಭಾ ಚುನಾವಣೆಯ ನಂತರ ಜನತಾ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಇಬ್ಬರೂ ಕೈಜೋಡಿಸಲು ನಿರ್ಧರಿಸಿದರು. ಪವಾರ್ ನೇತೃತ್ವದ (ಪ್ರೊಗ್ರೆಸ್ಸಿವ್ ಡೆಮಾಕ್ರಟಿಕ್ ಫ್ರಂಟ್ ಅಥವಾ PuLod) ಸಮ್ಮಿಶ್ರ ಸರ್ಕಾರ ಹೆಚ್ಚು ಕಾಲ ಉಳಿಯಲಿಲ್ಲ.”1980 ರಲ್ಲಿ ಇಂದಿರಾ ಗಾಂಧಿಯವರು ಅಧಿಕಾರಕ್ಕೆ ಮರಳಿದ ನಂತರ ಅದನ್ನು ವಜಾಗೊಳಿಸಿದರು. ನನ್ನ ಮಾಹಿತಿಯಂತೆ ಇಂದಿರಾ  ಗಾಂಧಿ ಪವಾರ್‌ ಅವರಲ್ಲಿ ಕಾಂಗ್ರೆಸ್‌ ಸೇರುವಂತೆ ಹೇಳಿದ್ದರು. ಅವರು ನಿರಾಕರಿಸಿದರು. ಮರುದಿನ ಅವರ ಸರ್ಕಾರವನ್ನು ವಜಾಗೊಳಿಸಲಾಯಿತು ಎಂದು ಭೇಗ್ಡೆ ಹೇಳಿದ್ದಾರೆ. (Source)

Published On - 3:45 pm, Sat, 25 June 22

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ