AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ರಾಮ ಬೇರೆಯೇ ಇದ್ದಾನೆ: ಮಧು ಬಂಗಾರಪ್ಪ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ವಿಚಾರವಾಗಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶ್ರೀರಾಮನಿಗೆ ಇಲ್ಲಿಂದಲೇ ದೊಡ್ಡ ನಮಸ್ಕಾರ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯರನ್ನೇ ಕರೆದಿಲ್ಲ ಅಂದರೆ ನಮ್ಮನ್ನೆಲ್ಲಿ ಕರೆಯುತ್ತಾರೆ. ನಮ್ಮನ್ನು ಇವರು ಲೆಕ್ಕಕ್ಕೆ ಇಡುತ್ತಾರಾ? ರಾಮ‌ ನಮ್ಮನ್ನು ಲೆಕ್ಕಕ್ಕೆ ಇಡುತ್ತಾರೆ. ನಮ್ಮ ರಾಮ ಬೇರೆಯೇ ಇದ್ದಾನೆ, ಅವನು ಜೋಪಾನವಾಗಿ ಕಾಪಾಡುತ್ತಾನೆ ಎಂದರು.

ನಮ್ಮ ರಾಮ ಬೇರೆಯೇ ಇದ್ದಾನೆ: ಮಧು ಬಂಗಾರಪ್ಪ
ಮಧು ಬಂಗಾರಪ್ಪ
Follow us
Basavaraj Yaraganavi
| Updated By: Rakesh Nayak Manchi

Updated on: Jan 14, 2024 | 8:23 PM

ಶಿವಮೊಗ್ಗ, ಜ.14: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನೇ ಆಹ್ವಾನಿಸಿಲ್ಲ. ಇನ್ನು ನಮ್ಮನ್ನು ಲೆಕ್ಕಕ್ಕೆ ಇಡುತ್ತಾರಾ? ರಾಮ‌ ನಮ್ಮನ್ನು ಲೆಕ್ಕಕ್ಕೆ ಇಡುತ್ತಾನೆ. ಜನವರಿ 22 ರಂದು ಶ್ರೀರಾಮನಿಗೆ ಇಲ್ಲಿಂದಲೇ ದೊಡ್ಡ ಸಮಸ್ಕಾರ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದರು. ಅಲ್ಲದೆ, ನಮ್ಮ ರಾಮ ಬೇರೆಯೇ ಇದ್ದಾನೆ, ಜೋಪಾನವಾಗಿ ಕಾಪಾಡುತ್ತಾನೆ ಎಂದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯಲ್ಲಿ ಮಾತನಾಡಿದ ಅವರು, ನಮ್ಮೂರಲ್ಲಿ ರಾಮನ ದೇವಸ್ಥಾನ ಇದೆ, ಇದಕ್ಕೆ ಬಹಳ ಕನೆಕ್ಟ್ ಇದೆ. ಅನುಮತಿ ಪಡೆದು ಹೋಗಬೇಕು ಅಂತಾ ತೀರ್ಮಾನ ಮಾಡಿದ್ದೇವೆ. ಕನೆಕ್ಟ್ ಆದ ಮೇಲೆ ಅನುಮತಿ ಪಡೆದು ಹೋಗಬೇಕೆಂದು ತೀರ್ಮಾನಿಸಿದ್ದೇವೆ. ಅದು ಯಾವಾಗ ಕರೆಸಿಕೊಳುತ್ತಾನೋ ನೋಡೋಣ, ಒಟ್ಟಾರೆ ಕರೆಸಿಕೊಳ್ಳುತ್ತಾನೆ ಎಂದರು.

ಇದನ್ನೂ ಓದಿ: ಮೋದಿ ಹೆಸರು ಹೇಳೋದು ಬಿಟ್ಟು ನಳಿನ್ ಕುಮಾರ್ ಕಟೀಲ್ ಏನು ಅಭಿವೃದ್ಧಿ ಮಾಡಿದ್ದಾರೆ: ಮಧು ಬಂಗಾರಪ್ಪ ವಾಗ್ದಾಳಿ

ಸಂಸದ ಅನಂತ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವರು, ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಬಿಜೆಪಿಯವರು ಹಂತ ಹಂತವಾಗಿ ನಿರ್ನಾಮವಾಗಿ ಹೋಗುತ್ತಿದ್ದಾರೆ. ಇಂತಹ ಹೇಳಿಕೆಗಳಿಂದಲೇ 67 ಸ್ಥಾನಗಳಿಗೆ ಇಳಿದಿದ್ದಾರೆ. ದೇವರು ಹಸರಿನಲ್ಲಿ ನಮಗೆ ಶಾಪ ಕೊಡುತ್ತಾರೆ. ದೇವರು ಕೆಲವೊಮ್ಮೆ ನಮಗೆ ರಿವರ್ಸ್ ಹೊಡೆದು ಬಿಡುತ್ತಾನೆ. ಒಳ್ಳೆಯವರು ಯಾರು, ನಮ್ಮನ್ನು ಯಾರು ದುರುಪಯೋಗ ‌ಪಡಿಸಿಕೊಳ್ಳುತ್ತಾರೆ ಎಂದು ದೇವರಿಗೆ ಚನ್ನಾಗಿ ಗೊತ್ತು‌ ಎಂದರು.

ಯರಿಯೂರಪ್ಪಗೆ ಟಾಂಗ್ ಕೊಟ್ಟ ಮಧು ಬಂಗಾರಪ್ಪ

ವಚನಕಾರ ಅಲ್ಲಮಪ್ರಭು ಜನ್ಮಸ್ಥಳವನ್ನು ಅಭಿವೃದ್ಧಿಪಡಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ ಮಧು ಬಂಗಾರಪ್ಪ, ಇದೇ ಕ್ಷೇತ್ರದವರು ಮುಖ್ಯಮಂತ್ರಿ ಆಗಿದ್ದರು. ಬಳ್ಳಿಗಾವಿ ಅಭಿವೃದ್ಧಿ ಆಗಿಲ್ಲ. ಯಾಕೆ ಬಳ್ಳಿಗಾವಿಯನ್ನ ಅಭಿವೃದ್ಧಿ ಮಾಡಿಲ್ಲ ಎಂಬುದನ್ನು ನೀವೇ ಕೇಳಿ ಎಂದು ಹೇಳುವ ಮೂಲಕ ಬಿಎಸ್ ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟರು.

ಪುರಾತತ್ವ ಇಲಾಖೆ ಅಧೀನದಲ್ಲಿ ಇದ್ದಿದ್ದಕ್ಕೆ ಕಸಗುಡಿಸಬೇಡಿ ಎಂದಿದ್ದಾರಾ ಎಂದು ಕೇಳಿದ ಮಧು ಬಂಗಾರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿವೃದ್ಧಿಯ ಬಗ್ಗೆ ಆಸಕ್ತಿ ಇದೆ. ಅಲ್ಲಮಪ್ರಭು ಅವರ ಸ್ಥಾನದಿಂದ ಹೊಸ ಯುಗ ಆರಂಭವಾಗುತ್ತದೆ. ರಾಜಕೀಯ ಸ್ವರೂಪ ಪಡೆದುಕೊಳ್ಳೋದು ಒಳ್ಳೆಯದೇ. ಆದರೆ ಎಲ್ಲದಕ್ಕೂ ದೇವರ ಹೆಸರು‌ ಇಟ್ಟುಕೊಂಡು ಓಡಾಡಲು ಆಗಲ್ಲ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!
ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!
ಸಾಲ್ಟ್ ಬ್ಯಾಟಿಂಗ್ ನೋಡಿದ ಯುವತಿಯರು ಉಪ್ಪಿಗಿಂತ ರುಚಿಯಿಲ್ಲ ಅಂದರು!
ಸಾಲ್ಟ್ ಬ್ಯಾಟಿಂಗ್ ನೋಡಿದ ಯುವತಿಯರು ಉಪ್ಪಿಗಿಂತ ರುಚಿಯಿಲ್ಲ ಅಂದರು!
ಉಳ್ಳಾಲದಲ್ಲಿ ಮನೆಗಳಿಗೆ ನುಗ್ಗಿದ ನೀರು: ಬೈಕ್, ಕಾರು ಮುಳುಗಡೆ
ಉಳ್ಳಾಲದಲ್ಲಿ ಮನೆಗಳಿಗೆ ನುಗ್ಗಿದ ನೀರು: ಬೈಕ್, ಕಾರು ಮುಳುಗಡೆ
ಏರ್​​ಪೋರ್ಟ್​ನಲ್ಲಿ ಯುವತಿಯ ಮೇಕಪ್​ ತೆಗೆಸಿದ ಏರ್​ಪೋರ್ಟ್​ ಸಿಬ್ಬಂದಿ
ಏರ್​​ಪೋರ್ಟ್​ನಲ್ಲಿ ಯುವತಿಯ ಮೇಕಪ್​ ತೆಗೆಸಿದ ಏರ್​ಪೋರ್ಟ್​ ಸಿಬ್ಬಂದಿ
VIDEO: ಇದೆಂಥ ಕೀಳುಮಟ್ಟದ ವರ್ತನೆ... ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ
VIDEO: ಇದೆಂಥ ಕೀಳುಮಟ್ಟದ ವರ್ತನೆ... ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ