PFI ಸಂಘಟನೆ ಸಿದ್ದರಾಮಯ್ಯರ ಕೂಸು: ನಳಿನ್​ ಕುಮಾರ್​ ಕಟೀಲ ಆರೋಪ

ಯಾರೋ ಹುಟ್ಟಿಸಿದ ಮಗುವಿಗೆ ಇವರು ಹೇಗೆ ಅಪ್ಪ ಆಗುತ್ತಾರೆ. ಪಿಎಫ್​ಐ ಸಂಘಟನೆ ವಿಪಕ್ಷ ನಾಯಕ ಸಿದ್ದರಾಮಯ್ಯರ ಕೂಸು ಎಂದು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳೀನ್​ ಕುಮಾರ್​ ಕಟೀಲ ಗದಗನಲ್ಲಿ ಆರೋಪ ಮಾಡಿದ್ದಾರೆ.

PFI ಸಂಘಟನೆ ಸಿದ್ದರಾಮಯ್ಯರ ಕೂಸು: ನಳಿನ್​ ಕುಮಾರ್​ ಕಟೀಲ ಆರೋಪ
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ ಕಟೀಲ್
Updated By: ವಿವೇಕ ಬಿರಾದಾರ

Updated on: Oct 12, 2022 | 4:39 PM

ಗದಗ: ಯಾರೋ ಹುಟ್ಟಿಸಿದ ಮಗುವಿಗೆ ಇವರು ಹೇಗೆ ಅಪ್ಪ ಆಗುತ್ತಾರೆ. ಪಿಎಫ್​ಐ (PFI) ಸಂಘಟನೆ ವಿಪಕ್ಷ ನಾಯಕ ಸಿದ್ದರಾಮಯ್ಯರ (Siddaramaiah) ಕೂಸು ಎಂದು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳೀನ್​ ಕುಮಾರ್​ ಕಟೀಲ (Nalin Kumar Kateel)ಗದಗನಲ್ಲಿ ಆರೋಪ ಮಾಡಿದ್ದಾರೆ. ಎಸ್​ಸಿ, ಎಸ್​ಟಿ ಮೀಸಲಾತಿ ಕೂಸು ನಮ್ಮದು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಈ ಹಿಂದೆ ಸಿದ್ದರಾಮಯ್ಯ ಅಹಿಂದ ಚಳವಳಿ ಮಾಡಿದರು. ಅಧಿಕಾರದಲ್ಲಿದ್ದಾಗ SC, ST, ಒಬಿಸಿಗೆ ನ್ಯಾಯ ಕೊಡಿಸಲಿಲ್ಲ. ಇಂದು ಸಿಎಂ ಬೊಮ್ಮಾಯಿ SC, STಗಳ ಬೇಡಿಕೆ ಈಡೇರಿಸಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಮೇಲೆ ಹಿಂದುಳಿದ ವರ್ಗಗಳಿಗೆ ಹಾಗೂ ಅಲ್ಪಸಂಖ್ಯಾತರಿಗೆ ವಿಶ್ವಾಸ ಬಂದಿತ್ತು. ಐದು ವರ್ಷ ಯಾವುದೇ ಸಮಸ್ಯೆ ಇಲ್ದೇ ಸಿಎಂ ಆದರು. ಆದರೆ ಹಿಂದುಳಿದ ವರ್ಗಗಳಿಗೆ, ಎಸ್ಸಿ ಎಸ್ಟಿ ಜನರಿಗೆ ನ್ಯಾಯ‌ ಕೊಡಲು ವಿಫಲರಾದರು. ಎಲ್ಲ ಬೇಡಿಕೆಗಳಿಗೆ ಕಮಿಟಿ ಮಾಡಿ ಮುಚ್ಚಿ ಹಾಕುವ ಕೆಲಸ ಮಾಡಿದರು ಎಂದು ವಾಗ್ದಾಳಿ ಮಾಡಿದ್ದಾರೆ.

ಇವತ್ತು ಎಸ್ಸಿ, ಎಸ್ಟಿ ಬೇಡಿಕೆಗೆ ಗೌರವ ಕೊಟ್ಟಿದ್ದರೇ ಅದು ಬೊಮ್ಮಾಯಿ ಅವರ ಸರ್ಕಾರ. ಐದು ವರ್ಷ ಸಿಎಂ ಆಗಿದ್ದರು, ಶಕ್ತಿ ಇತ್ತು ಆಗ ಮಾಡದೇ ಕಾಲಹರಣ ಮಾಡಿದರು. ಯಾರೋ ಹುಟ್ಟಿಸಿದ ಮಗುವಿಗೆ ಇವ್ರು ಹೇಗೆ ಅಪ್ಪ ಆಗುತ್ತಾರೆ ಅಂತ ಕಿಡಿಕಾರಿದರು.

ಸಿದ್ದರಾಮಯ್ಯರದ್ದು ಅನೈತಿಕ ಸಂಬಂಧದ ರಾಜಕಾರಣ ಮಾಡಿದ್ದಾರೆ. H.D.ದೇವೇಗೌಡರಿಗೆ ಸಿದ್ದರಾಮಯ್ಯ ಅನ್ಯಾಯ ಮಾಡಿದರು. ಗುರುಗಳನ್ನೇ ಮೆಟ್ಟಿ ಸಿದ್ದರಾಮಯ್ಯ ಕಾಂಗ್ರೆಸ್​ಗೆ ಹೋದರು. ಕಾಂಗ್ರೆಸ್​ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್​, ಡಾ.ಪರಮೇಶ್ವರ್ ಅವರನ್ನು ಮುಗಿಸಿದರು. ಕಾಂಗ್ರೆಸ್ ನಾಯಕರನ್ನು ಮುಗಿಸಿ ಸಿದ್ದರಾಮಣ್ಣ ಅಧಿಕಾರ ಹಿಡಿದರು ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:39 pm, Wed, 12 October 22