ಈ ಬಾರಿ ಬೀದರ್​ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುಲು ಸ್ವಾಮೀಜಿ ಪ್ಲ್ಯಾನ್, ಟಿಕೆಟ್​ಗಾಗಿ ಯೋಗಿ ಆದಿತ್ಯನಾಥ್ ಮೊರೆ​

ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ಇದಕ್ಕಾಗಿ ಕಾಂಗ್ರೆಸ್-ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಈಗಾಗಲೇ ಸೂಕ್ತ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿವೆ. ಮೂರು ಪಕ್ಷದಲ್ಲಿ ಡಜನ್ ಗಟ್ಟಲೇ ಟಿಕೆಟ್​ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಇದರ ನಡುವೆ ಸ್ವಾಮೀಜಿಯೊಬ್ಬರು ಬಿಜೆಪಿಯಿಂದ ಎಂಪಿ ಟಿಕೇಟ್ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹಾಗಾದ್ರೆ, ಯಾರು ಆ ಸ್ವಾಮೀಜಿ?

ಈ ಬಾರಿ ಬೀದರ್​ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುಲು ಸ್ವಾಮೀಜಿ ಪ್ಲ್ಯಾನ್, ಟಿಕೆಟ್​ಗಾಗಿ ಯೋಗಿ ಆದಿತ್ಯನಾಥ್ ಮೊರೆ​
Follow us
| Updated By: ರಮೇಶ್ ಬಿ. ಜವಳಗೇರಾ

Updated on: Oct 01, 2023 | 6:49 PM

ಬೀದರ್, (ಅಕ್ಟೋಬರ್ 01): ಬೀದರ್, (Bidar) ಭಗವಂತ ಖೂಬಾ (bhagwanth khuba) ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವಾಗಿದೆ. ಈ ಬಾರಿಯೂ ಸಹ ಕಣಕ್ಕಿಳಿಯಲು ಭಗವಂತ ಖೂಬಾ ಉತ್ಸುಕರಾಗಿದ್ದಾರೆ. ಆದ್ರೆ, ಬೀದರ್​ ಜಿಲ್ಲಾ ಬಿಜೆಪಿಯಲ್ಲೇ ವಿರೋಧಗಳು ವ್ಯಕ್ತವಾಗಿವೆ. ಮಾಜಿ ಸಚಿವ ಪ್ರಭು ಚೌಹಾಣ್, ಶಾಸಕ ಶರಣು ಸಲಗರ್ ಸೇರಿದಂತೆ ಹಲವು ಬಿಜೆಪಿ(BJP) ನಾಯಕರು ಈ ಬಾರಿ ಯಾವುದೇ ಕಾರಣಕ್ಕೂ ಭಗವಂತ ಖೂಬಾ ಅವರಿಗೆ ಬೀದರ್ ಲೋಕಸಭಾ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಇದರ ಮಧ್ಯೆ ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ಗಾಗಿ ಸ್ವಾಮೀಜಿಯೊಬ್ಬರು ಬೇಡಿಕೆ ಇಟ್ಟಿದ್ದಾರೆ. ಹೌದು.. ಟಿಕೆಟ್​ ಕೊಡುವಂತೆ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ (shambhulinga shivacharya swamij) ಮನವಿ ಮಾಡಿದ್ದಾರೆ.

ಸಂಸದ ಭಗವಂತ್ ಖೂಬಾರಿಗೆ ಈ ಸಲ ಟಿಕೆಟ್ ಕೊಡಬಾರದು ಅನ್ನುವ ಕೂಗು ಎದ್ದಿರುವ ಬೆನ್ನಲ್ಲೇ ಕೆಲ ಮಾಠಾಧೀಶರು ಬಿಜೆಪಿ ಟಿಕೆಟ್​ಗಾಗಿ ಬೇಡಿಕೆಯಿಟ್ಟಿದ್ದಾರೆ. ಬೀದರ್​ ಟಿಕೆಟ್​ಗಾಗಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದ ನಿಯೋಗವು ಆರ್ ಎಸ್ ಎಸ್ ಮುಂಖಡರು ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದು, ಈ ಬಾರಿ ಬೀದರ್​ ಟಿಕೆಟ್​ ಶಿವಾಚಾರ್ಯ ಸ್ವಾಮೀಜಿಗೆ ನೀಡುವಂತೆ ಮನವಿ ಮಾಡಿದೆ.

ಇದನ್ನೂ ಓದಿ: ಜೆಡಿಎಸ್​ ಬಿಟ್ಟು ಹೋಗದಂತೆ ಶಾಸಕರು, ನಾಯಕರುಗಳಿಗೆ ಪ್ರತಿಜ್ಞಾವಿಧಿ ಬೋಧನೆ

ಔರಾದ್ ತಾಲೂಕಿನ ಢೋಣಗಾಂವ ಮಠದ ಪೂಜ್ಯ ಶಂಭುಲಿಂಗ ಶಿವಾಚಾರ್ಯರು ಈ ಸಲು ಬಿಜೆಪಿಯ ಟಿಕೆಟ್​ ನನಗೆ ಕೊಡಬೇಕು ಎಂದು ಜಿಲ್ಲಾ ಮಠಾಧೀಶರ ಒಕ್ಕೂಟದಿಂದ ಬಿಜೆಪಿಯ ಕೆಲಸ ನಾಯಕರು ಸಂಘ ಪರಿವಾರದ ಕೆಲವು ನಾಯಕರನ್ನ ಭೇಟಿಯಾಗಿದ್ದಾರೆ. ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶೀ ಜಿ.ವಿ. ರಾಜೇಶ್ ಅವರನ್ನೂ ಕೂಡಾ ಭೇಟಿಯಾಗಿ ಮನವಿ ಮಾಡಿದ್ದು, ಬೀದರ್ ಜಿಲ್ಲೆಯಲ್ಲಿ ಮಠಾಧೀಶರಿಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕೆ ಆಗುವ ಲಾಭದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಶರಣರ ನಾಡಿನ ಪ್ರತಿನಿಧಿಯಾಗಿ ಮಠಾಧಿಶರಿಬ್ಬರು ಲೋಕಸಭೆ ಪ್ರವೇಶ ಮಾಡುವುದನ್ನ ಎದುರುನೋಡುತ್ತಿದ್ದೆವೆಂದು ಸ್ವಾಮೀಜಿ ಹೇಳುತ್ತಿದ್ದಾರೆ. ಇನ್ನೂ ಬೀದರ್ ಎಂಪಿ ಭಗವಂತ್ ಖೂಬಾ ಜಿಲ್ಲೆಯ ಅಭಿವೃದ್ದಿಯನ್ನ ಮಾಡಿಲ್ಲ ಹೆಸರಿಗಷ್ಟೇ ಅವರು ಸಂಸದರಾಗಿದ್ದಾರೆ. ಹೀಗಾಗಿ ಅವರನ್ನ ಬದಲಾಯಿಸಿ ಸ್ವಾಮೀಜಿಗಳಿಗೆ ಟಿಕೆಟ್ ಕೊಡಬೇಕು ಎಂದು ಹುಡುಗಿ ಗ್ರಾಮದ ವಿರಕ್ತ ಮಠದ ಚನ್ನಮಲ್ಲ ಸ್ವಾಮೀಜಿ ಆಗ್ರಹಿಸಿದ್ದಾರೆ.

ಇನ್ನೂ ಬೀದರ್ ಸಂಸದ ಭಗವಂತ್ ಖೂಬಾಗೆ ಸ್ವಪಕ್ಷದ ಶಾಸಕರೇ ತಿರುಗಿ ಬಿದ್ದಿದ್ದು ಭಗವಂತ್ ಖೂಬಾ ಹಾಟಾವೋ ಬಿಜೆಪಿ ಬಚಾವೋ ಎಂದು ಭಹಿರಂಗವಾಗಿಯೇ ಔರಾದ್ ಶಾಸಕ ಪ್ರಭು ಚೌಹಾನ್ ಹೇಳುತ್ತಿದ್ದಾರೆ. ಇನ್ನು ಬಸವಕಲ್ಯಾಣ ಶಾಸಕ ಶರಣು ಸಲಗರ್ ಸಹ ಈ ಸಲ ಮರಾಠಾ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಹೀಗಾಗಿ ಎಂಪಿ ಟಿಕೇಕೆಟ್ ಗೆ ಮರಾಠಾ ಸಮುದಾಯವರ ಕಣ್ಣು ಮಠಾಧೀಶರ ಕಣ್ಣು ಬಿದ್ದಿದ್ದು ಹೈಕಮಾಂಡ್ ಗೆ ಹತ್ತಿರವಿರುವವರನ್ನ ಭೆಟಿಯಾಗಿ ಟಿಕೆಟ್ ಕೊಡಬೇಕು ಎಂದು ಮನವಿ ಮಾಡುತ್ತಿದ್ದಾರೆ.

ಬೀದರ್ ಜಿಲ್ಲೆಯೂ ಶರಣರ ಭೂಮಿ, ಜೊತೆಗೆ ಎಲ್ಲಾ ಪಕ್ಷಗಳಲ್ಲಿ ಮಠದ ಭಕ್ತರಿದ್ದಾರೆ. ಮಠಾಧಿಶರು ಕಣಕ್ಕಿಳಿದರೆ ಪಕ್ಷ ಸೇರಿದಂತೆ ಯಾವುದೇ ಭೇದಭಾವ ವಿಲ್ಲದೆ ಜನರು ಬೆಂಬಲ ಕೊಡುತ್ತಾರೆ. ಹೀಗಾಗಿ ಈ ಸಲ ಎಂಪಿ ಟಿಕೇಕೆಟ್ ಮಠಾಧಿಶರಿಗೆ ಕೊಡಬೇಕು ಎಂದು ದೆಹಲಿ ನಾಯಕರನ್ನ ಭೆಟಿಯಾಗಿ ಒತ್ತಡಹಾಕುತ್ತಿದ್ದಾರೆ. ಬಿಜೆಪಿಯಿಂದ ಮಠಾಧೀಶರಿಗೆ ಟಿಕೆಟ್ ಕೊಟ್ಟರೇ ಇತರೆ ಕ್ಷೇತ್ರಗಳ ಮೇಲೂ ಪ್ರಭಾವ ಬೀರಲಿದ್ದು, ಅತಿ ರಾಜ್ಯದಲ್ಲಿ ಅತಿಹೆಚ್ಚು ಸ್ಥಾನವನ್ನ ಗೆಲ್ಲಲ್ಲು ಸಾಧ್ಯವಾಗುತ್ತದೆ. ಹೀಗಾಗಿ ಮಠಾಧೀಶರಿಗೆ ಟಿಕೆಟ್ ಕೊಡಿ ಎಂದು ಕೇಳುತ್ತಿದ್ದಾರೆ.

ಮಠಾಧೀಶರ ಒಕ್ಕೂಟದ ಪ್ರಮುಖರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿಥ್ಯನಾಂಥ್ ಅವರನ್ನ ಭೇಟಿಯಾಗುವುದಕ್ಕಾಗಿಯೇ ಶಿಘ್ರದಲ್ಲಿ ಅಯೋಧ್ಯಗೆ ಸ್ವಾಮೀಜಿಗಳ ನಿಯೋಗ ತೆರಳಲಿದೆ. ಯೋಗಿ ಅವರ ಮೂಲಕ ಬಿಜೆಪಿ ನಾಯಕರ ಮೇಲೆ ಟಿಕೆಟ್ ಗಾಗಿ ಒತ್ತಡ ಹೇರುವುದು ಭೇಟಿಯ ಉದ್ದೇಶವಾಗಿದೆ. ಅಲ್ಲದೇ ಯೋಗಿ ಆದಿತ್ಯನಾಥ್ ಅವರಿಗೆ ಆಪ್ತರಾಗಿರುವ ಜಗದ್ಗುರುಗಳ ಸಹಾಯ ಮೂಲಕ ಟಿಕೆಟ್ ಪಡೆಯುವ ಎಲ್ಲಾ ಪ್ರಯತ್ನವನ್ನ ಸ್ವಾಮೀಜಿಗಳು ಮಾಡುತ್ತಿರುವುದು ಗುಟ್ಟಾಗಿ ಏನೂ ಉಳಿದಿಲ್ಲ.

ಒಟ್ಟಿನಲ್ಲಿ ಈ ಬಾರಿ ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರ ಪಾಲಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು