AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಸತ್ಯವನ್ನೇ ಹೇಳಿದ್ದೇನೆ, ಬಂಡಾಯ ಶಾಸಕರನನ್ನು ‘ಜೀವಂತ ಶವ’ ಎಂದ ಹೇಳಿಕೆ ಸಮರ್ಥಿಸಿಕೊಂಡ ರಾವುತ್

ಉದಯ್ ಸಾಮಂತ್ ಆಪ್ತರು, ಏಕನಾಥ್ ಶಿಂಧೆ ನಮ್ಮ ಆತ್ಮೀಯರು, ನಮ್ಮ ಮನೆಯಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತಿದ್ದೆವು, ಸುಖ-ದುಃಖ ಹಂಚಿಕೊಂಡಿದ್ದೆವು. ಇದು ಈಗ ಬೀದಿ ಜಗಳ ಹಾಗೂ ಕಾನೂನು ಹೋರಾಟ. ಅಸ್ಸಾಂನಲ್ಲಿ ಏಕೆ ಕುಳಿತಿದ್ದೀರಿ?

ನಾನು ಸತ್ಯವನ್ನೇ ಹೇಳಿದ್ದೇನೆ, ಬಂಡಾಯ ಶಾಸಕರನನ್ನು 'ಜೀವಂತ ಶವ' ಎಂದ ಹೇಳಿಕೆ ಸಮರ್ಥಿಸಿಕೊಂಡ ರಾವುತ್
ಸಂಜಯ್ ರಾವುತ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Jun 27, 2022 | 4:09 PM

Share

ಮುಂಬೈ: ಬಂಡಾಯ ಶಾಸಕರನ್ನು ‘ಜೀವಂತ ಶವ’ (living corpses) ಎಂದು ಹೇಳಿರುವ ಹೇಳಿಕೆ ಸಮರ್ಥಿಸಿಕೊಂಡಿರುವ ಶಿವಸೇನೆ ನಾಯಕ ಸಂಜಯ್ ರಾವುತ್ (Sanjay Raut), ಇದು ಮಹಾರಾಷ್ಟ್ರದಲ್ಲಿ ಮಾತಿನ ರೀತಿಯಾಗಿದೆ. ಯಾರ ಭಾವನೆಗೂ ಧಕ್ಕೆ ತರಲು ನಾನು ಬಯಸಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ರಾವುತ್, ಅವರ ದೇಹ ಜೀವಂತವಾಗಿದೆ, ಆದರೆ ಅವರ ಆತ್ಮ ಸತ್ತಿದೆ. ಇದು ಮಹಾರಾಷ್ಟ್ರದಲ್ಲಿ (Maharashtra) ಮಾತನಾಡುವ ವಿಧಾನ. ನಾನು ಏನು ತಪ್ಪು ಹೇಳಿದೆ? 40 ವರ್ಷಗಳ ಕಾಲ ಪಕ್ಷದಲ್ಲಿದ್ದು ನಂತರ ಓಡಿಹೋದವರು , ಅವರ ಆತ್ಮಗಳು ಸತ್ತಿವೆ, ಅವರಲ್ಲಿ ಏನೂ ಉಳಿದಿಲ್ಲ”, ಇದು ಡಾ ರಾಮ್ ಮನೋಹರ್ ಲೋಹಿಯಾ ಹೇಳಿದ ಸಾಲುಗಳು. ನಾನು ಯಾರ ಭಾವನೆಗೂ ಧಕ್ಕೆ ತರಲು ಬಯಸಲಿಲ್ಲ, ಸತ್ಯವನ್ನೇ ಹೇಳಿದ್ದೇನೆ ಎಂದಿದ್ದಾರೆ. “ತಂದೆಯನ್ನು ಬದಲಾಯಿಸುವವರ ಬಗ್ಗೆ ಮಾತನಾಡುವ ಗುಲಾಬರಾವ್ ಪಾಟೀಲ್ ಅವರ ಭಾಷಣದ ವಿಡಿಯೊವನ್ನು ನಾನು ಟ್ವೀಟ್ ಮಾಡಿದ್ದೇನೆ. ಅವರು ಹೇಳಿದ್ದು ಗುವಾಹಟಿಯಲ್ಲಿ ಕುಳಿತವರಿಗೆ ಸರಿ ಹೊಂದುತ್ತದೆ. ನನ್ನ ಟ್ವೀಟ್ ಗುವಾಹಟಿಯಲ್ಲಿ ಕುಳಿತಿರುವವರಿಗೆ ಇರುವುದು. ಪಾಟೀಲ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಜನರು ತಿನ್ನುತ್ತಾರೆ, ಕುಡಿಯುತ್ತಾರೆ ಮತ್ತು ಪಾರ್ಟಿಯೊಂದಿಗೆ ಆನಂದಿಸುತ್ತಾರೆ ಮತ್ತು ನಂತರ ಅವರ ತಂದೆಯನ್ನು ಬದಲಾಯಿಸುತ್ತಾರೆ, ನಾವು ಅವರಂತೆ ಅಲ್ಲ ಎಂದಿದ್ದಾರೆ ರಾವುತ್.

ಏಕನಾಥ್ ಶಿಂಧೆ ನನಗೆ ನಿಕಟವಾಗಿರುವವರಲ್ಲಿ ಒಬ್ಬರು ಎಂದು ಶಿವಸೇನಾ ನಾಯಕ ಹೇಳಿದ್ದು ಮಹಾರಾಷ್ಟ್ರಕ್ಕೆ ಹಿಂತಿರುಗುವಂತೆ ವಿನಂತಿಸಿದರು.

“ಉದಯ್ ಸಾಮಂತ್ ಆಪ್ತರು, ಏಕನಾಥ್ ಶಿಂಧೆ ನಮ್ಮ ಆತ್ಮೀಯರು, ನಮ್ಮ ಮನೆಯಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತಿದ್ದೆವು, ಸುಖ-ದುಃಖ ಹಂಚಿಕೊಂಡಿದ್ದೆವು. ಇದು ಈಗ ಬೀದಿ ಜಗಳ ಹಾಗೂ ಕಾನೂನು ಹೋರಾಟ. ಅಸ್ಸಾಂನಲ್ಲಿ ಏಕೆ ಕುಳಿತಿದ್ದೀರಿ? ಅಲ್ಲಿ ಪ್ರವಾಹ ಉಂಟಾಗಿ ನೂರಾರು ಜನ ಸತ್ತಿದ್ದಾರೆ.ಅಲ್ಲಿ ಯಾಕೆ ಕುಳಿತಿದ್ದೀರಿ, ಹಿಂತಿರುಗಿ ಬರಬೇಕು, ಅವರು ಸೂರತ್ ನಂತರ ಗುವಾಹಟಿಗೆ ಹೋಗುತ್ತಾರೆ, ಅಲ್ಲಿ ಅವರಿಗೆ ಕೇಂದ್ರೀಯ ಸಂಸ್ಥೆಗಳು ರಕ್ಷಣೆ ನೀಡಿವೆ, ಮಹಾರಾಷ್ಟ್ರ ಪೊಲೀಸರು ಭದ್ರತೆಗೆ ಸಮರ್ಥರಾಗಿದ್ದಾರೆ ದಯವಿಟ್ಟು ಇಲ್ಲಿಗೆ ಬನ್ನಿ. ಮೆಹಬೂಬಾ ಮುಫ್ತಿ ಜೊತೆ ನೀವು ಹೇಗೆ ಕೈ ಜೋಡಿಸುತ್ತಿರೀ? ಆರ್ ಡಿಎಕ್ಸ್ ಹಾಕಿದವರ ಜೊತೆ ಹೇಗೆ ಕೈ ಜೋಡಿಸುತ್ತೀರಿ? ಇಡಿ ಮತ್ತು ಸಿಬಿಐ ನಿಮಗೆ ಮತ ನೀಡುವುದಿಲ್ಲ, ಜನರು ನಿಮಗೆ ಮತ ನೀಡಿದ್ದಾರೆ ಎಂದು ರಾವುತ್ ಹೇಳಿದ್ದಾರೆ.

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ