ರಾಮನ ಭಕ್ತನಿಗೆ ಮೊದಲು ನಮಿಸುವ ಪ್ರಧಾನಿ ಮೋದಿ!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬುಧವಾರದಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೊದಲು, ಇದೇ ನಗರದ ಹನುಮಾನ್ ಗರ್ಹಿಯಲ್ಲಿರುವ ಭಗವಾನ್ ಹನುಮಾನ್ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಅವರು ಹಾಗೆ ಮಾಡಲು ಕಾರಣವಿದೆಯೆಂದು ಸುಮಾರು 1,700 ವರ್ಷಗಳಷ್ಟು ಪ್ರಾಚೀನ ಹನುಮಾನ್ ದೇವಸ್ಥಾನದ ಆರ್ಚಕ ಮಧುವನ್ ದಾಸ್ ಹೇಳುತ್ತಾರೆ. ಪ್ರಧಾನಿ ಮೋದಿಯವರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಬುಧುವಾರ ಬೆಳಗ್ಗೆ 9:00 ಗಂಟೆಗೆ ಹನುಮಾನ್ ಮಂದಿರಕ್ಕೆ ಭೇಟಿ ನೀಡಲಿದ್ದು, ಅರ್ಚಕರು ಪೂಜಾ ಕೈಂಕರ್ಯಗಳನ್ನು ಪೂರೈಸಲು […]

ರಾಮನ ಭಕ್ತನಿಗೆ ಮೊದಲು ನಮಿಸುವ ಪ್ರಧಾನಿ ಮೋದಿ!
ಅರುಣ್​ ಕುಮಾರ್​ ಬೆಳ್ಳಿ

Updated on: Aug 04, 2020 | 6:20 PM

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬುಧವಾರದಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೊದಲು, ಇದೇ ನಗರದ ಹನುಮಾನ್ ಗರ್ಹಿಯಲ್ಲಿರುವ ಭಗವಾನ್ ಹನುಮಾನ್ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಅವರು ಹಾಗೆ ಮಾಡಲು ಕಾರಣವಿದೆಯೆಂದು ಸುಮಾರು 1,700 ವರ್ಷಗಳಷ್ಟು ಪ್ರಾಚೀನ ಹನುಮಾನ್ ದೇವಸ್ಥಾನದ ಆರ್ಚಕ ಮಧುವನ್ ದಾಸ್ ಹೇಳುತ್ತಾರೆ.

ಪ್ರಧಾನಿ ಮೋದಿಯವರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಬುಧುವಾರ ಬೆಳಗ್ಗೆ 9:00 ಗಂಟೆಗೆ ಹನುಮಾನ್ ಮಂದಿರಕ್ಕೆ ಭೇಟಿ ನೀಡಲಿದ್ದು, ಅರ್ಚಕರು ಪೂಜಾ ಕೈಂಕರ್ಯಗಳನ್ನು ಪೂರೈಸಲು ಏಳು ನಿಮಿಷಗಳ ಕಾಲಾವಕಾಶ ಒದಗಿಸಲಾಗಿದೆ. ಅವರ ಭೇಟಿಯ ಹಿಂದಿರುವ ಕಾರಣದ ಬಗ್ಗೆ ದಾಸ್ ಹೀಗೆ ಹೇಳುತ್ತಾರೆ.

“ಭಗವಾನ್ ರಾಮನ ಪರಮ ಭಕ್ತನಾದ ಭಗವಾನ್ ಹನುಮಾನನಿಲ್ಲದೆ ರಾಮನ ಯಾವ ಕಾರ್ಯವೂ ಆರಂಭವಾಗುವುದಿಲ್ಲ. ಹಾಗಾಗೇ, ಮೋದಿ ಜೀ ಮತ್ತು ಯೋಗೀ ಜೀ ಅವರು ಹನುಮಾನ್ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸುತ್ತಾರೆ. ಅದಾದ ನಂತರವೇ ಅವರು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ರಾಮಮಂದಿರ ನಿರ್ಮಾಣ ಕೆಲಸ ವಿಘ್ನಗಳಿಲ್ಲದೆ, ನಿರಾತಂಕವಾಗಿ ಪೂರ್ಣಗೊಳ್ಳಬೇಕಾದರೆ, ಭಗವಾನ್ ಹನುಮಾನನ ಆಶೀರ್ವಾದಗಳನ್ನು ಪಡೆಯುವುದು ಅತ್ಯಂತ ಅವಶ್ಯಕವಾಗಿದೆ”.

ಗಣ್ಯರ ದೇವಸ್ಥಾನದ ಭೇಟಿ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಪ್ರಧಾನ ಮಂತ್ರಿಗಳ ಕಾರ್ಯಾಲಯದಿಂದ ಸೂಚನೆ ಬಂದಿದೆಯೆಂದು ಹೇಳುವ ಅರ್ಚಕ ದಾಸ್, “ನಾವು ಆದೇಶವನ್ನು ಅಕ್ಷರಶಃ ಪಾಲಿಸುತ್ತೇವೆ. ಪ್ರಧಾನಿಯವರು, ಮಂದಿರದ ಆವರಣದಲ್ಲಿರುವಾಗ ಯಾರನ್ನೂ ಅವರ ಹತ್ತಿರಕ್ಕೆ ಬಿಡುವುದಿಲ್ಲ. ಹಾಗೆಯೇ, ಪ್ರಧಾನಿಗಳಿಗೆ ಪ್ರಸಾದ ನೀಡಬಾರದೆಂದು ಅರ್ಚಕರಿಗೆ ಸೂಚಿಸಲಾಗಿದೆ,” ಎಂದರು.

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us