Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭ್ಯಂಗ ಸ್ನಾನ ಮಾಡುವುದು ಹೇಗೆ? ಇದರ ಫಲಗಳೇನು?

ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ಅಭ್ಯಂಗಕ್ಕೆ ವಿಶೇಷ ಮಹತ್ವವಿದೆ. ಶರೀರಕ್ಕೆ ತೈಲವನ್ನು ಹಚ್ಚಿ ಮೃದುವಾಗಿ ತೀಡಿ, ಸ್ವಲ್ಪ ಹೊತ್ತು ಕಳೆದ ನಂತರ ಸ್ನಾನ ಮಾಡೋದನ್ನು ಅಭ್ಯಂಗ ಸ್ನಾನವೆಂದು ಹೇಳಲಾಗುತ್ತೆ.

ಅಭ್ಯಂಗ ಸ್ನಾನ ಮಾಡುವುದು ಹೇಗೆ? ಇದರ ಫಲಗಳೇನು?
ಸಂಗ್ರಹ ಚಿತ್ರ
Follow us
ಆಯೇಷಾ ಬಾನು
| Updated By: Skanda

Updated on: Apr 24, 2021 | 6:59 AM

ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ, ಹಬ್ಬ-ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಸ್ನಾನ ಮಾಡುವ ಸಂಪ್ರದಾಯವಿದೆ. ಅದರಲ್ಲೂ ಅಭ್ಯಂಗ ಸ್ನಾನಕ್ಕೆ ಬಹಳ ಪ್ರಮುಖ ಸ್ಥಾನವಿದೆ. ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ಅಭ್ಯಂಗಕ್ಕೆ ವಿಶೇಷ ಮಹತ್ವವಿದೆ. ಶರೀರಕ್ಕೆ ತೈಲವನ್ನು ಹಚ್ಚಿ ಮೃದುವಾಗಿ ತೀಡಿ, ಸ್ವಲ್ಪ ಹೊತ್ತು ಕಳೆದ ನಂತರ ಸ್ನಾನ ಮಾಡೋದನ್ನು ಅಭ್ಯಂಗ ಸ್ನಾನವೆಂದು ಹೇಳಲಾಗುತ್ತೆ. ಆರೋಗ್ಯದ ದೃಷ್ಟಿಯಿಂದ ಜನಿಸಿದ ಶಿಶುವಿನಿಂದ ವೃದ್ಧರವರೆಗೆ ಎಲ್ಲರಿಗೂ ಅಭ್ಯಂಗ ಸ್ನಾನ ಒಳ್ಳೆಯದು ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಹಾಗಾದ್ರೆ ಅಭ್ಯಂಗ ಸ್ನಾನವನ್ನು ಯಾವ ದಿನಗಳಲ್ಲಿ ಮಾಡಬೇಕು? ಯಾವ ದಿನಗಳಲ್ಲಿ ಮಾಡಬಾರದು? ಈ ಬಗ್ಗೆ ಇಲ್ಲಿ ತಿಳಿಯಿರಿ.

ಅಭ್ಯಂಗ ಸ್ನಾನದ ನಿಯಮಗಳು -ಸೋಮವಾರ, ಬುಧವಾರ, ಶನಿವಾರಗಳು ಅಭ್ಯಂಗ ಸ್ನಾನಕ್ಕೆ ಒಳ್ಳೆಯ ದಿನಗಳು. -ಭಾನುವಾರ, ಮಂಗಳವಾರ, ಗುರುವಾರ, ಶುಕ್ರವಾರಗಳು ಒಳ್ಳೆಯದಲ್ಲ. -ವಿವಾಹ ಮುಂತಾದ ಶುಭಕಾರ್ಯಗಳಲ್ಲಿ, ಹಬ್ಬಗಳಲ್ಲಿ, ಜಾತ ಶೌಚ, ಮೃತ ಶೌಚ, ಅಂತಿಮ ದಿನಗಳಲ್ಲಿ ನಿಷಿದ್ಧ ವಾರಗಳು ಬಂದರೂ ಸಹ ಅಭ್ಯಂಗ ಸ್ನಾನ ಮಾಡಬಹುದು. -ಸುಬ್ರಹ್ಮಣ್ಯ ಷಷ್ಠಿ, ನಾಗಚೌತಿ, ಕೃಷ್ಣಾಷ್ಟಮಿ, ಶ್ರೀರಾಮನವಮಿ, ಶಿವರಾತ್ರಿ, ಏಕಾದಶಿ, ದ್ವಾದಶಿ, ಅಮಾವಾಸ್ಯೆ ಒಳ್ಳೆಯ ವಾರದಲ್ಲಿ ಬಂದರೂ ಆ ದಿನಗಳಲ್ಲಿ ಅಭ್ಯಂಗ ಸ್ನಾನ ಮಾಡಬಾರದು. -ಜ್ವರ, ಅಜೀರ್ಣ, ಕಫ ಸಂಬಂಧಿ ವ್ಯಾಧಿಗಳಿಂದ ಬಳಲುತ್ತಿರುವವರು ಹಾಗೂ ಪಂಚಕರ್ಮ ಚಿಕಿತ್ಸೆಗೊಳಪಟ್ಟವರು ನಿರ್ದಿಷ್ಟ ಸಮಯದವರೆಗೆ ಅಭ್ಯಂಗ ಸ್ನಾನ ಮಾಡಬಾರದು. -ನಿತ್ಯವೂ ಅಭ್ಯಂಗ ಸ್ನಾನ ಮಾಡುವುದರಿಂದ ದೇಹಾಯಾಸ, ಮುಪ್ಪು, ಶ್ರಮ, ವಾತ, ಕೋಪ ದೂರವಾಗುತ್ತೆ. ಬದಲಾಗಿ ದೇಹಪುಷ್ಟಿ, ಆಯುಷ್ಯವೃದ್ಧಿ, ಸುಖನಿದ್ರೆ ಹಾಗೂ ಚರ್ಮದ ಮೃದುತ್ವ ಲಭ್ಯವಾಗುತ್ತೆ. ಇದಕ್ಕೆ ಪೂರಕವೆಂಬಂತೆ ಇತ್ತೀಚಿನ ಆಧುನಿಕ ಸಂಶೋಧನೆಗಳು ಇದನ್ನು ಪುಷ್ಟೀಕರಿಸಿವೆ.

ಹಾಗಾದ್ರೆ ಅಭ್ಯಂಗ ಸ್ನಾನಕ್ಕೆ ಯಾವ ಯಾವ ದ್ರವ್ಯಗಳನ್ನು ಉಪಯೋಗಿಸಬಹುದು ಗೊತ್ತಾ? ಆರೋಗ್ಯವಂತರು ಕೇವಲ ತೆಂಗಿನ ಎಣ್ಣೆ, ತುಪ್ಪ ಅಥವಾ ಎಳ್ಳ್ಳೆಣ್ಣೆಯನ್ನು ಬಳಸಬಹುದು. ರೋಗಿಗಳು ಆಯಾ ರೋಗಕ್ಕನುಸಾರವಾಗಿ ಗಿಡಮೂಲಿಕೆಗಳಿಂದ ಸಂಸ್ಕರಿಸಿದ ತೈಲಗಳನ್ನು ಉಪಯೋಗಿಸಬಹುದು. ಶಿಶುಗಳಿಗೆ ಚಂದನ ತೈಲ, ಎಳ್ಳೆಣ್ಣೆ, ಬಾದಾಮಿ ಎಣ್ಣೆ, ತುಪ್ಪವನ್ನು ಬಳಸಬಹುದು.

ಇದನ್ನೂ ಓದಿ: ಧರ್ಮಶಾಸ್ತ್ರದಲ್ಲಿ ಸಚೇಲ ಸ್ನಾನಕ್ಕೆ ಇದೆ ಮಹತ್ವದ ಸ್ಥಾನ; ಅದನ್ನು ಯಾವಾಗ ಮಾಡಬೇಕು?

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ