AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರೀನ್ ಟೀ, ದಾಳಿಂಬೆ ಜ್ಯೂಸ್ ಕುಡಿದ್ರೆ ಕೊರೊನಾ ಬರೋದಿಲ್ವಂತೆ!

ಕೊರೊನಾ ವೈರಸ್​ನಿಂದ ಬಚಾವಾಗೋಕೆ ಔಷಧಿ ಸಿಗುತ್ತೋ? ಇಲ್ವೋ? ಅಂತ ಇಡೀ ವಿಶ್ವದ ಜನರು ತಲೆ ಕೆಡಿಸಿಕೊಂಡಿರುವ ಸಂದರ್ಭದಲ್ಲಿ ಹೊಸ ಸಂಶೋಧನೆಯೊಂದು ಅಚ್ಚರಿಯ ಮಾಹಿತಿ ನೀಡಿದೆ. ಕೋವಿಡ್-19 ವೈರಾಣುವಿನ ವಿರುದ್ಧ ಹೋರಾಡಲು ದೇಹಕ್ಕೆ ಬೇಕಾದ ಶಕ್ತಿ ನಾವು ದಿನನಿತ್ಯ ಸೇವಿಸುವ ಸಾಧಾರಣ ಆಹಾರದಲ್ಲೇ ಇದೆಯೆಂಬ ವಿಚಾರ ಬೆಳಕಿಗೆ ಬಂದಿದೆ. ವಿದೇಶಿ ವಿಜ್ಞಾನಿಗಳ ತಂಡ ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರಲ್ಲಿ ಕ್ರೇನ್ ಬೆರಿಽ, ಚೋಕ್ ಬೆರಿಽ, ದಾಳಿಂಬೆ ಜ್ಯೂಸ್ ಹಾಗೂ ಗ್ರೀನ್ ಟೀ ಮೊದಲಾದ ಪೇಯಗಳಲ್ಲಿ ಕೊರೊನಾ ವೈರಸ್ ಅನ್ನು ನಿಷ್ಕ್ರಿಯಗೊಳಿಸುವ […]

ಗ್ರೀನ್ ಟೀ, ದಾಳಿಂಬೆ ಜ್ಯೂಸ್ ಕುಡಿದ್ರೆ ಕೊರೊನಾ ಬರೋದಿಲ್ವಂತೆ!
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Nov 24, 2020 | 2:54 AM

Share

ಕೊರೊನಾ ವೈರಸ್​ನಿಂದ ಬಚಾವಾಗೋಕೆ ಔಷಧಿ ಸಿಗುತ್ತೋ? ಇಲ್ವೋ? ಅಂತ ಇಡೀ ವಿಶ್ವದ ಜನರು ತಲೆ ಕೆಡಿಸಿಕೊಂಡಿರುವ ಸಂದರ್ಭದಲ್ಲಿ ಹೊಸ ಸಂಶೋಧನೆಯೊಂದು ಅಚ್ಚರಿಯ ಮಾಹಿತಿ ನೀಡಿದೆ. ಕೋವಿಡ್-19 ವೈರಾಣುವಿನ ವಿರುದ್ಧ ಹೋರಾಡಲು ದೇಹಕ್ಕೆ ಬೇಕಾದ ಶಕ್ತಿ ನಾವು ದಿನನಿತ್ಯ ಸೇವಿಸುವ ಸಾಧಾರಣ ಆಹಾರದಲ್ಲೇ ಇದೆಯೆಂಬ ವಿಚಾರ ಬೆಳಕಿಗೆ ಬಂದಿದೆ.

ವಿದೇಶಿ ವಿಜ್ಞಾನಿಗಳ ತಂಡ ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರಲ್ಲಿ ಕ್ರೇನ್ ಬೆರಿಽ, ಚೋಕ್ ಬೆರಿಽ, ದಾಳಿಂಬೆ ಜ್ಯೂಸ್ ಹಾಗೂ ಗ್ರೀನ್ ಟೀ ಮೊದಲಾದ ಪೇಯಗಳಲ್ಲಿ ಕೊರೊನಾ ವೈರಸ್ ಅನ್ನು ನಿಷ್ಕ್ರಿಯಗೊಳಿಸುವ ಅಂಶಗಳು ಪತ್ತೆಯಾಗಿವೆ. ಸಂಶೋಧನಾ ಕೇಂದ್ರದಲ್ಲಿ ಕೊರೊನಾ ವೈರಾಣುವಿನ ಮೇಲೆ ಕ್ರೇನ್ ಬೆರಿಽ, ಚೋಕ್ ಬೆರಿಽ, ದಾಳಿಂಬೆ ಜ್ಯೂಸ್ ಹಾಗೂ ಗ್ರೀನ್ ಟೀ ಪಾನೀಯಗಳನ್ನು ಪ್ರಯೋಗಿಸಿದಾಗ ಅಚ್ಚರಿಯ ಫಲಿತಾಂಶ ಲಭ್ಯವಾಗಿದೆ.

ಪ್ರಯೋಗ ಮಾಡಿದ್ದು ಹೇಗೆ?

ಸಂಶೋಧನಾ ಕೇಂದ್ರದೊಳಗೆ ಸಾಧಾರಣ ಉಷ್ಣಾಂಶವನ್ನು ಕಾಯ್ದುಕೊಂಡು ಆಯ್ದ ಪಾನೀಯಗಳೊಂದಿಗೆ ಕೋವಿಡ್-19ವೈರಾಣುವನ್ನು ಸಂಪರ್ಕಕ್ಕೆ ತಂದಾಗ ಚೋಕ್ ಬೆರಿಽ ಜ್ಯೂಸ್ ಕೇವಲ ಐದೇ ಐದು ನಿಮಿಷಗಳಲ್ಲಿ ಶೇಕಡಾ 97ರಷ್ಟು ಕೊರೊನಾ ವೈರಾಣುಗಳನ್ನು ನಿಷ್ಕ್ರಿಯಗೊಳಿಸಿದೆ. ಅಂತೆಯೇ, ದಾಳಿಂಬೆ ಜ್ಯೂಸ್ ಹಾಗೂ ಗ್ರೀನ್ ಟೀ ಶೇಕಡಾ 80ರಷ್ಟು ವೈರಾಣುಗಳನ್ನು ನಿಷ್ಕ್ರಿಯಗೊಳಿಸಿವೆ. ಈ ಪ್ರಯೋಗದ ಫಲಿತಾಂಶವನ್ನು ನೋಡಿ ಅಚ್ಚರಿಗೊಂಡ ವಿಜ್ಞಾನಿಗಳು ಜ್ವರಕ್ಕೆ ಕಾರಣವಾಗುವ ಇತೆ ವೈರಸ್​ಗಳ ಮೇಲೆ ಪ್ರಯೋಗ ನಡೆಸಿದಾಗಲೂ ಆಶಾದಾಯಕ ಫಲಿತಾಂಶ ಸಿಕ್ಕಿದೆ. 

ಪರದಾಟಕ್ಕಿಂತ ಮುನ್ನೆಚ್ಚರಿಕೆ ವಾಸಿ!

ಕೋವಿಡ್19 ವಿರುದ್ಧ ಅಧಿಕೃತವಾಗಿ ಲಸಿಕೆ ಸಿಗುವ ತನಕ ಸಾಕಷ್ಟು ಜಾಗ್ರತೆ ಮಾಡುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ. ಹೊರಗಡೆ ಹೋದಾಗ ಬಾಯಿ ರುಚಿಗಾಗಿ ಸಿಕ್ಕ ಸಿಕ್ಕ ಜಂಕ್ ಫುಡ್ ತಿನ್ನುವ ಬದಲು ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ ನೀಡುವ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುವುದು ನಮಗಿರುವ ಒಂದೊಳ್ಳೆ ಆದ್ಯತ. Prevention is better than cure ಅನ್ನೋ ಮಾತು ಸಾರ್ವಕಾಲಿಕ ಸತ್ಯ ಅನ್ನೋದನ್ನ ಮರೆಯಬಾರದು.

Published On - 9:55 pm, Wed, 11 November 20

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More
ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ
ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ
ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ
ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ