AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಕ್ತರ ಎಲ್ಲಾ ಕೋರಿಕೆ ಈಡೇರಿಸುವ ಶಿವನಿಗೆ ಯಾವ ಅಭಿಷೇಕ ಮಾಡಿದರೆ ಏನು ಫಲ?

ಶಿವ ಅಭಿಷೇಕ ಪ್ರಿಯ. ಭಕ್ತಪ್ರಿಯ ಭೋಲೇನಾಥನಿಗೆ ಇಂಥಂದ್ದೇ ಅಭಿಷೇಕ ಮಾಡಬೇಕು ಎಂಬ ನಿಯಮಗಳಿಲ್ಲ. ಭಕ್ತಿ-ಭಾವದಿಂದ, ಶುದ್ಧ ಮನಸ್ಸಿನಿಂದ ಯಾವುದಾದ್ರೂ ವಸ್ತು ಬಳಸಿ ಅಭಿಷೇಕದಿಂದ ಮಾಡಿದ್ರೂ ಭಗವಂತ ನಮ್ಮ ಭಕ್ತಿಗೆ ಒಲಿಯುತ್ತಾನೆ.

ಭಕ್ತರ ಎಲ್ಲಾ ಕೋರಿಕೆ ಈಡೇರಿಸುವ ಶಿವನಿಗೆ ಯಾವ ಅಭಿಷೇಕ ಮಾಡಿದರೆ ಏನು ಫಲ?
ಅಭಿಷೇಕ ಪ್ರಿಯ ಶಿವ
ಆಯೇಷಾ ಬಾನು
|

Updated on: Apr 22, 2021 | 6:36 AM

Share

ಸೃಷ್ಟಿಕರ್ತ ಮಹಾವಿಷ್ಣು ಅಲಂಕಾರಪ್ರಿಯ, ಲಯಕಾರಕ ಶಿವ ಅಭಿಷೇಕಪ್ರಿಯ. ಹೀಗಾಗಿಯೇ ಇಷ್ಟಾರ್ಥ ಸಿದ್ಧಿಗಾಗಿ ಶಿವನಿಗೆ ಅಭಿಷೇಕ ಮಾಡುವ ಪದ್ಧತಿ ಅನಾದಿಕಾಲದಿಂದಲೂ ಇದೆ. ಭಂ ಭಂ ಭೋಲೇನಾಥನಿಗೆ ಈ ವಸ್ತುಗಳಿಂದ ಅಭಿಷೇಕ ಮಾಡಿದರೆ ವಿಶೇಷ ಫಲಗಳನ್ನು ಪಡೆಯಬಹುದು. ಇಷ್ಟಕ್ಕೂ, ಶಿವನಿಗೆ ಯಾವ ಯಾವ ಅಭಿಷೇಕ ಮಾಡಿದ್ರೆ ಏನು ಫಲ? ಬನ್ನಿ ಆ ಬಗ್ಗೆ ಈಗ ಇಲ್ಲಿ ತಿಳಿಯಿರಿ..

ಯಾವ ಅಭಿಷೇಕದಿಂದ ಏನು ಫಲ? 1.ಪಂಚಗವ್ಯಗಳಾದ ಹಾಲು, ಮೊಸರು, ತುಪ್ಪ, ಗೋಮೂತ್ರ ಹಾಗೂ ಗೋಮಯದ ಮಿಶ್ರಣದಿಂದ ಅಭಿಷೇಕ ಮಾಡಿದರೆ ಎಲ್ಲಾ ರೀತಿಯ ಪಾಪಗಳು ಪರಿಹಾರ. 2.ಬಾಳೆಹಣ್ಣು, ಬೆಲ್ಲ, ಸಕ್ಕರೆ, ಖರ್ಜೂರ, ಜೇನು ಹಾಗೂ ಒಣಹಣ್ಣುಗಳ ಅಭಿಷೇಕದಿಂದ ಸಂಪತ್ತು ಪ್ರಾಪ್ತಿ. 3.ತುಪ್ಪದ ಅಭಿಷೇಕದಿಂದ ಮೋಕ್ಷ ಪ್ರಾಪ್ತಿ. 4.ಹಾಲಿನ ಅಭಿಷೇಕದಿಂದ ದೀರ್ಘಾಯುಷ್ಯ. 5.ಜೇನುತುಪ್ಪದಿಂದ ಅಭಿಷೇಕ ಮಾಡಿದ್ರೆ ಉತ್ತಮ ಧ್ವನಿ, ಸಂಗೀತ ಸಿದ್ಧಿ. 6.ಅಕ್ಕಿ ಹಿಟ್ಟಿನಿಂದ ಗಂಗಾಧರನಿಗೆ ಅಭಿಷೇಕ ಮಾಡಿದ್ರೆ ಋಣ ವಿಮೋಚನೆ. 7.ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿದ್ರೆ ಆರೋಗ್ಯ ಭಾಗ್ಯ ಹಾಗೂ ಶತ್ರುನಾಶ. 8.ನಿಂಬೆಹಣ್ಣಿನ ಪಾನಕದಿಂದ ಅಭಿಷೇಕ ಮಾಡಿದ್ರೆ ಜೀವ ಭಯ ನಿವಾರಣೆ, ಆರೋಗ್ಯದಲ್ಲಿ ಚೇತರಿಕೆ. 9.ಎಳನೀರಿನಿಂದ ಅಭಿಷೇಕ ಮಾಡಿದ್ರೆ ಸಂತೃಪ್ತಿ. 10.ಪವಿತ್ರ ಜಲದಿಂದ ಅಭಿಷೇಕ ಮಾಡಿದ್ರೆ ನೆಮ್ಮದಿ. 11.ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿದರೆ ಅಪಮೃತ್ಯು ಭಯ ನಿವಾರಣೆ. 12.ಅರಿಶಿನದಿಂದ ಅಭಿಷೇಕ ಮಾಡಿದ್ರೆ ವಿವಾಹ ಭಾಗ್ಯ. 13.ಹಸುವಿನ ಹಾಲಿನಿಂದ ಅಭಿಷೇಕ ಮಾಡಿದ್ರೆ ನಾಗ ಭಯ ನಿವಾರಣೆ. 14.ಮೊಸರನ್ನದಿಂದ ಅಭಿಷೇಕ ಮಾಡಿದ್ರೆ ಅಲ್ಸರ್ನಂತಹ ರೋಗ ನಿವಾರಣೆ. 15.ತುಪ್ಪದಿಂದ ಅಭಿಷೇಕ ಮಾಡಿದ್ರೆ ಆರ್ಥಿಕ ಸಮಸ್ಯೆ ನಿವಾರಣೆ. 16.ಭಸ್ಮದಿಂದ ಅಭಿಷೇಕ ಮಾಡಿದ್ರೆ ಪಾಪ ಪರಿಹಾರ. 17.ಗಂಧದ ನೀರಿನಿಂದ ಅಭಿಷೇಕ ಮಾಡಿದ್ರೆ ಮಕ್ಕಳ ಏಳಿಗೆ.

ಶಿವ ಅಭಿಷೇಕ ಪ್ರಿಯ. ಭಕ್ತಪ್ರಿಯ ಭೋಲೇನಾಥನಿಗೆ ಇಂಥಂದ್ದೇ ಅಭಿಷೇಕ ಮಾಡಬೇಕು ಎಂಬ ನಿಯಮಗಳಿಲ್ಲ. ಭಕ್ತಿ-ಭಾವದಿಂದ, ಶುದ್ಧ ಮನಸ್ಸಿನಿಂದ ಯಾವುದಾದ್ರೂ ವಸ್ತು ಬಳಸಿ ಅಭಿಷೇಕದಿಂದ ಮಾಡಿದ್ರೂ ಭಗವಂತ ನಮ್ಮ ಭಕ್ತಿಗೆ ಒಲಿಯುತ್ತಾನೆ. ಏನೂ ಇಲ್ಲವಾದ್ರೆ ಶುದ್ಧ ಜಲದಿಂದ ಅಭಿಷೇಕ ಮಾಡಿದ್ರೂ ಸಾಕು ತನ್ನ ಭಕ್ತರ ಎಲ್ಲಾ ಕೋರಿಕೆಗಳನ್ನು ಈಡೇರಿಸ್ತಾನೆ ಅಂತಾ ಶಿವಪುರಾಣದಲ್ಲಿ ಉಲ್ಲೇಖವಿದೆ.

ಇದನ್ನೂ ಓದಿ: Maha Shivaratri 2021: ಶಿವನನ್ನು ಲಿಂಗರೂಪದಲ್ಲಿ ಯಾಕೆ ಆರಾಧಿಸುತ್ತಾರೆ ಗೊತ್ತೇ?; ಇಲ್ಲಿದೆ ಪುರಾಣ ಕಥೆ

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ