AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಬಲ್ ಮ್ಯಾಜಿಕ್: ಸೋಪ್ ಬಬಲ್ ಒಳಗೆ ಬರೋಬ್ಬರಿ 783 ಸಣ್ಣ ಗುಳ್ಳೆಗಳನ್ನು ಸೃಷ್ಟಿಸಿ ದಾಖಲೆ!

ಗುಳ್ಳೆಯೊಳಗೆ ಗುಳ್ಳೆಯಂತೆ ಬರೋಬ್ಬರಿ 783 ಬಬಲ್​ಗಳನ್ನು ಸೃಷ್ಟಿಸಿ ಗಿನ್ನಿಸ್ ದಾಖಲೆ ಬರೆದ ಚಾಂಗ್.

ಬಬಲ್ ಮ್ಯಾಜಿಕ್:  ಸೋಪ್ ಬಬಲ್ ಒಳಗೆ ಬರೋಬ್ಬರಿ 783 ಸಣ್ಣ ಗುಳ್ಳೆಗಳನ್ನು ಸೃಷ್ಟಿಸಿ ದಾಖಲೆ!
ಬಬಲ್ ಒಳಗೆ ಬಬಲ್!
TV9 Web
| Edited By: |

Updated on:Apr 06, 2022 | 8:52 PM

Share

ಮಕ್ಕಳೆಲ್ಲಾ ಒಂದೊಂದು ಗುಳ್ಳೆಗಳನ್ನು ಊದಿ, ಹಾರಿಸಿ ಸಂತಸಪಡುತ್ತಾರೆ. ಅದನ್ನು ಹಿಡಿಯಲು, ಅಂಗೈಯಲ್ಲಿ ಇಟ್ಟು ನೋಡಲು ಕಾಯುತ್ತಾರೆ. ಆದರೆ, ಆ ಗುಳ್ಳೆಗಳು ಅಷ್ಟು ಹೊತ್ತು ಇರುವುದಿಲ್ಲ. ಸಣ್ಣ ಗಾಳಿಗೋ ಬಬಲ್ ಚಲನೆಗೋ ಒಡೆದು ಹೋಗುತ್ತದೆ. ಒಂದು ಬಬಲ್ ಸೃಷ್ಟಿಸೋದೆ ಕಷ್ಟ ಅನಿಸಿಬಿಡುತ್ತದೆ. ಆದರೆ, ಈ ವ್ಯಕ್ತಿ ಗುಳ್ಳೆಯೊಳಗೆ ಗುಳ್ಳೆಯಂತೆ ಬರೋಬ್ಬರಿ 783 ಬಬಲ್​ಗಳನ್ನು ಸೃಷ್ಟಿಸಿ ಸಾಧನೆ ಮಾಡಿದ್ದಾರೆ.

ಬಬಲ್ ಒಳಗೆ ಬಬಲ್​ನಂತೆ 783 ಗುಳ್ಳೆಗಳನ್ನು ಸೃಷ್ಟಿಸಿದ್ದಾರೆ. ಆ ಮೂಲಕ, ಗಿನ್ನಿಸ್ ವಿಶ್ವ ದಾಖಲೆ ಕೂಡ ಮಾಡಿದ್ದಾರೆ. ಗಿನ್ನಿಸ್ ವಿಶ್ವ ದಾಖಲೆ ತಂಡ ಸದ್ಯ ತನ್ನ ಅಧಿಕೃತ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿರುವ ಈ ಬಬಲ್ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಗಿನ್ನಿಸ್ ರೆಕಾರ್ಡ್ ಬುಕ್​ನಲ್ಲಿ ದಾಖಲೆ ಬರೆದ ಪ್ರತಿಭಾವಂತನ ಸಾಧನೆಯ ಕಥೆ ಇದು. ನಮಗೆಲ್ಲ ಅಸಾಧ್ಯ ಎಂದೆನಿಸುವ ವಿಷಯ ಇಲ್ಲೊಬ್ಬ ಪ್ರತಿಭಾವಂತ ವ್ಯಕ್ತಿಗೆ ಸಾಧ್ಯವಾಗಿದೆ.  ಈ ದಾಖಲೆ ಬರೆದ ವ್ಯಕ್ತಿಯ ಹೆಸರು ಚಾಂಗ್.

ಅಂದಹಾಗೆ, ಗಿನ್ನಿಸ್ ದಾಖಲೆಯ ವಿಡಿಯೊ ನೋಡುವುದೇ ಖುಷಿ. ದಾಖಲೆ ಬರೆಯಲೇಬೇಕೆಂದು ಉತ್ಸಾಹದಲ್ಲಿ ಹೆಜ್ಜೆ ಇಟ್ಟವರು, ಇಲ್ಲಿ ತಮ್ಮ ವಿಭಿನ್ನ ಪ್ರಯತ್ನದ ಮೂಲಕವೇ ಎಲ್ಲರನ್ನು ಚಕಿತಗೊಳಿಸುತ್ತಾರೆ. ಅದೇ ರೀತಿ ಈಗ ಈ ವಿಡಿಯೊ ಸಹ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇವರು ದಾಖಲೆ ಮಾಡುವ ವಿಡಿಯೊವನ್ನು ಈಗ ಎಲ್ಲರೂ ಬಹು ಕುತೂಹಲದಿಂದ ನೋಡುತ್ತಿದ್ದಾರೆ.

ಬಬಲ್ ಒಳಗೆ ಬಬಲ್!

ಸ್ಕೇಟಿಂಗ್​ನಲ್ಲಿ ಗಿನ್ನಿಸ್​ ದಾಖಲೆ ನಿರ್ಮಿಸಿದ ಕುಂದಾನಗರಿ ಕುವರ ಅಭಿಷೇಕ್ ನವಲೆ; ದರ್ಶನ್​ ನೀಡಿದ್ದರು ನೆರವು

Published On - 8:51 pm, Sun, 17 January 21

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?