AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯರಿಗೆ ಅತಿಪ್ರಿಯವಾಗಿರುವ ತಿನಿಸ್ಯಾವುದು ಗೊತ್ತಾ?

ಕೊರೊನಾ ವೈರಸ್ ತನ್ನ ಕಬಂಧ ಬಾಹುಗಳನ್ನು ದೇಶಾದ್ಯಂತ ಚಾಚಿ ಜನರನ್ನು ಬಲಿ ಪಡೆಯುವುದು ಶುರುವಾದ ನಂತರ ಅದನ್ನು ನಿಯಂತ್ರಿಸಲು ಇತರ ದೇಶಗಳಂತೆ ಭಾರತಯದಲ್ಲೂ ಲಾಕ್​ಡೌನ್ ಹೇರಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಅವಧಿಯಲ್ಲಿ ಹೋಟೆಲ್​ಗಳು ಮುಚ್ಚಿದ್ದವಾದರೂ ಆನಲೈನ್ ಸರ್ವಿಸ್, ಹೋಮ್ ಡೆಲಿವರಿ ಜಾರಿಯಲ್ಲಿತ್ತು. ಲಕ್ಷಾಂತರ ಜನ ಮನೆಗಳಲ್ಲೇ ಕೂತು ತಿಂಡಿ, ಲಂಚ್ ಮತ್ತು ಡಿನ್ನರ್​ಗಳನ್ನು ಆರ್ಡರ್ ಮಾಡಿ ರುಚಿಕರವಾದ ಭಕ್ಷ್ಯಗಳನ್ನು ಭುಜಿಸಿದರು.. ಅಂದಹಾಗೆ, ಈ ಲಾಕ್​ಡೌನ್ ಅವಧಿಯಲ್ಲಿ ಜನರು ಅತಿಹೆಚ್ಚು ಆರ್ಡರ್ ಮಾಡಿದ ತಿಂಡಿ ಅಥವಾ ಭಕ್ಷ್ಯ […]

ಭಾರತೀಯರಿಗೆ ಅತಿಪ್ರಿಯವಾಗಿರುವ ತಿನಿಸ್ಯಾವುದು ಗೊತ್ತಾ?
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ಆಯೇಷಾ ಬಾನು

Updated on:Nov 23, 2020 | 12:07 PM

ಕೊರೊನಾ ವೈರಸ್ ತನ್ನ ಕಬಂಧ ಬಾಹುಗಳನ್ನು ದೇಶಾದ್ಯಂತ ಚಾಚಿ ಜನರನ್ನು ಬಲಿ ಪಡೆಯುವುದು ಶುರುವಾದ ನಂತರ ಅದನ್ನು ನಿಯಂತ್ರಿಸಲು ಇತರ ದೇಶಗಳಂತೆ ಭಾರತಯದಲ್ಲೂ ಲಾಕ್​ಡೌನ್ ಹೇರಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಅವಧಿಯಲ್ಲಿ ಹೋಟೆಲ್​ಗಳು ಮುಚ್ಚಿದ್ದವಾದರೂ ಆನಲೈನ್ ಸರ್ವಿಸ್, ಹೋಮ್ ಡೆಲಿವರಿ ಜಾರಿಯಲ್ಲಿತ್ತು. ಲಕ್ಷಾಂತರ ಜನ ಮನೆಗಳಲ್ಲೇ ಕೂತು ತಿಂಡಿ, ಲಂಚ್ ಮತ್ತು ಡಿನ್ನರ್​ಗಳನ್ನು ಆರ್ಡರ್ ಮಾಡಿ ರುಚಿಕರವಾದ ಭಕ್ಷ್ಯಗಳನ್ನು ಭುಜಿಸಿದರು..

ಅಂದಹಾಗೆ, ಈ ಲಾಕ್​ಡೌನ್ ಅವಧಿಯಲ್ಲಿ ಜನರು ಅತಿಹೆಚ್ಚು ಆರ್ಡರ್ ಮಾಡಿದ ತಿಂಡಿ ಅಥವಾ ಭಕ್ಷ್ಯ (ಆಹಾರ ಪದಾರ್ಥ) ಯಾವುದು ಅಂತ ನಿಮಗೆ ಗೊತ್ತಾ?

ಅದು ಬಿರಿಯಾನಿ!

ನಿಸ್ಸಂದೇಹವಾಗಿಯೂ ಹೌದು. ಅತಿ ಹೆಚ್ಚು ಆರ್ಡರ್ ಪಡೆದ ಆಹಾರಗಳಲ್ಲಿ ಬಿರಿಯಾನಿಗೆ ನಂಬರ್ 1 ಸ್ಥಾನ. ಆನ್​ಲೈನ್ ಆಹಾರ ವಿತರಕ ಪ್ಲಾಟ್​ಫಾರ್ಮ್​ಗಳಲ್ಲಿ ಮುಂಚೂಣಿಯಲ್ಲಿರುವ ಸ್ವಿಗ್ಗಿ ಇತ್ತೀಚಿಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಈ ಸಂಸ್ಥೆಯು, ಲಾಕ್​ಡೌನ್ ಸಮಯದಲ್ಲಿ ಐದೂವರೆ ಲಕ್ಷ ಬಿರಿಯಾನಿ ಆರ್ಡರ್​ಗಳನ್ನು ಮನೆಮನೆಗಳಿಗೆ ತಲುಪಿಸಿದೆಯಂತೆ.

ಮತ್ತೊಂದು ಪ್ಲಾಟ್​ಫಾರ್ಮ್ ಜೊಮ್ಯಾಟೊ ಗೊತ್ತಲ್ಲ? ಈ ಸಂಸ್ಥೆ ನೀಡಿರುವ ಅಂಕಿಅಂಶಗಳನ್ನು ಗಮನಿಸಿದರೆ ಭಾರತೀಯರಲ್ಲಿ ಬಿರಿಯಾನಿ ಬಗ್ಗೆ ಎಷ್ಟು ಪ್ರೀತಿಯಿದೆಯೆನ್ನುವುದು ಸ್ಪಷ್ಟವಾಗುತ್ತದೆ. ಜೊಮ್ಯಾಟೊ, ಮಾರ್ಚ್​ನಿಂದ ಜೂನ್ ನಡುವಿನ ಅವಧಿಯಲ್ಲಿ 44,30,008 ಬಿರಿಯಾನಿ ಆರ್ಡರ್​ಗಳನ್ನು ಗ್ರಾಹಕರಿಗೆ ತಲುಪಿಸಿದೆಯಂತೆ.

ವ್ಹಾಹ್ ಬಿರಿಯಾನಿ ವ್ಹಾಹ್! ಏನು ನೀನು ಮಾಡಿರುವ ಮಾಯೆ!?

ಈ ಮೂರು ತಿಂಗಳ ಅವಧಿಯಲ್ಲಿ ಜೊಮ್ಯಾಟೊ ಸ್ವೀಕರಿಸಿದ್ದು ಹೆಚ್ಚುಕಡಿಮೆ 2.15 ಕೋಟಿ ಆರ್ಡರ್​ಗಳಂತೆ.

ಅಂದಹಾಗೆ, ಈ ಸಂಸ್ಥೆಗಳು ನೀಡಿರುವ ಮಾಹಿತಿ ಪ್ರಕಾರ ಚಿಕನ್ ಬಿರಿಯಾನಿ ಭಾರತೀಯರಿಗೆ ಅತಿಹೆಚ್ಚು ಇಷ್ದವಾಗುವ ಆಹಾರ ತಿನಿಸಂತೆ. ಸತತವಾಗಿ ನಾಲ್ಕನೇ ಬಾರಿ ಚಿಕನ್ ಬಿರಿಯಾನಿ ಗ್ರಾಹಕರು ಮನಸಾರೆ ಬಯಸುವ ಸ್ವಾದಿಷ್ಟ ಊಟಗಳಲ್ಲಿ ಮೊದಲ ಸ್ಥಾನ ಗಳಿಸಿದೆ.

Published On - 4:01 pm, Wed, 26 August 20

Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್