AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಡಿಲು ಬಡಿತ ಹೆಚ್ಚಾಗಿದೆ.. ಏನು ಮಾಡಬೇಕು, ಏನು ಮಾಡಬಾರದು?

ದೇಶಕ್ಕೆ ಮುಂಗಾರು ಕಾಲಿಟ್ಟಿದೆ. ಕೃಷಿ ಚಟುವಟಿಕೆಗಳು ಗರಿಗೆದರಿದೆ. ಇಷ್ಟು ದಿನ ಬೇಸಿಗೆಯ ಸುಡು ಬಿಸಿಲು ಮತ್ತು ಲಾಕ್​ಡೌನ್​ನಿಂದ ಮನೆಯಲ್ಲೇ ಕಾಲಕಳೆಯುತ್ತಿದ್ದ ಜನರಿಗೆ ಸುರಿಯುತ್ತಿರುವ ಜಿಟಿಜಿಟಿ ಮಳೆ ಮನಸ್ಸಿಗೆ ಮುದ ನೀಡಿದೆ. ಆದರೆ, ಮಳೆಯ ಸೊಬಗನ್ನು ಎಂಜಾಯ್​ ಮಾಡಲು ಮನೆಯಿಂದ ಹೊರ ಹೋಗುವ ಮುನ್ನ ಜೋಕೆ. ಹಾಗೆಯೇ, ನಮ್ಮ ರೈತಾಪಿ ವರ್ಗವೂ ಸಿಡಿಲಿನ ಹೊಡೆತಕ್ಕೆ ಸಿಕ್ಕಿ ನರಳಾಡುವುದು ಸಾಮಾನ್ಯ. ಸಿಡಿಲಿಗೆ ಹೆಚ್ಚು ಬಲಿಯಾಗುವವರು ತೋಟ-ಹೊಲಗಳಲ್ಲಿ ಬಟಾಬಯಲಿನಲ್ಲಿರುವ ರೈತರೇ! ಯಾಕಂದ್ರೆ, ದೇಶದೆಲ್ಲೆಡೆ ಗುಡುಗು ಮತ್ತು ಸಿಡಿಲು ಸಹಿತ ಭಾರಿ ಮಳೆ […]

ಸಿಡಿಲು ಬಡಿತ ಹೆಚ್ಚಾಗಿದೆ.. ಏನು ಮಾಡಬೇಕು, ಏನು ಮಾಡಬಾರದು?
Follow us
KUSHAL V
| Updated By:

Updated on:Jul 06, 2020 | 3:01 PM

ದೇಶಕ್ಕೆ ಮುಂಗಾರು ಕಾಲಿಟ್ಟಿದೆ. ಕೃಷಿ ಚಟುವಟಿಕೆಗಳು ಗರಿಗೆದರಿದೆ. ಇಷ್ಟು ದಿನ ಬೇಸಿಗೆಯ ಸುಡು ಬಿಸಿಲು ಮತ್ತು ಲಾಕ್​ಡೌನ್​ನಿಂದ ಮನೆಯಲ್ಲೇ ಕಾಲಕಳೆಯುತ್ತಿದ್ದ ಜನರಿಗೆ ಸುರಿಯುತ್ತಿರುವ ಜಿಟಿಜಿಟಿ ಮಳೆ ಮನಸ್ಸಿಗೆ ಮುದ ನೀಡಿದೆ. ಆದರೆ, ಮಳೆಯ ಸೊಬಗನ್ನು ಎಂಜಾಯ್​ ಮಾಡಲು ಮನೆಯಿಂದ ಹೊರ ಹೋಗುವ ಮುನ್ನ ಜೋಕೆ. ಹಾಗೆಯೇ, ನಮ್ಮ ರೈತಾಪಿ ವರ್ಗವೂ ಸಿಡಿಲಿನ ಹೊಡೆತಕ್ಕೆ ಸಿಕ್ಕಿ ನರಳಾಡುವುದು ಸಾಮಾನ್ಯ. ಸಿಡಿಲಿಗೆ ಹೆಚ್ಚು ಬಲಿಯಾಗುವವರು ತೋಟ-ಹೊಲಗಳಲ್ಲಿ ಬಟಾಬಯಲಿನಲ್ಲಿರುವ ರೈತರೇ!

ಯಾಕಂದ್ರೆ, ದೇಶದೆಲ್ಲೆಡೆ ಗುಡುಗು ಮತ್ತು ಸಿಡಿಲು ಸಹಿತ ಭಾರಿ ಮಳೆ ಸುರಿಯಲಿದೆ ಎಂಬ ಮಾಹಿತಿ ತಿಳಿದುಬಂದಿದೆ. ಹಾಗಾಗಿ, ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರವು (National Disaster Management Authority) ಸಾರ್ವಜನಿಕರ ಹಿತಾಸಕ್ತಿಯನ್ನ ಗಮನದಲ್ಲಿಟ್ಟುಕೊಂಡು ಸಿಡಿಲು ಮತ್ತು ಮಿಂಚಿನ ಆರ್ಭಟದ ವೇಳೆ ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಬಿಡುಗಡೆ ಮಾಡಿದೆ.

ಅಂತೆಯೇ ನಿಮ್ಮ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಗುಡುಗು ಮಳೆ ಸಂಭವಿಸುವಂತಿದ್ದರೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಹೀಗಿವೆ. 1. ಮನೆಯಲ್ಲಿರುವ ಎಲ್ಲಾ ವಿದ್ಯುತ್​ ಉಪಕರಣಗಳ ಬಂದ್​ ಮಾಡಿ ಅವುಗಳ ಪ್ಲಗ್​ಗಳನ್ನ ಸಾಕೆಟ್​ನಿಂದ ಬಿಚ್ಚಿಡಿ 2. ಗುಡುಗಿನ ವೇಳೆ ಲ್ಯಾಂಡ್​ಲೈನ್​ ಫೋನ್​ಗಳನ್ನ ಬಳಸಬೇಡಿ 3. ಯಾವುದೇ ಕಬ್ಬಿಣದ ಸಾಮಾನು ಮುಟ್ಟಬೇಡಿ 4. ಹರಿಯುವ ನೀರನ್ನು ಬಳಸದಿರಿ 5. ಸುರಿವ ಮಳೆಯಿಂದ ತಪ್ಪಿಸಿಕೊಳ್ಳಲು ಮರಗಳ ಕೆಳಗಡೆ ಆಶ್ರಯ ಪಡೆಯಬೇಡಿ 6. ಗುಂಪುಗುಂಪಾಗಿ ನಿಲ್ಲದೆ, ಏಕಾಂಗಿಯಾಗಿ ನಿಲ್ಲುವುದು ಸೂಕ್ತ 7. ಉಕ್ಕು ಅಥವಾ ತಗಡಿನ ಶೀಟುಗಳಿರುವ ಮೇಲ್ಛಾವಣಿಗಳಿಂದ ದೂರವಿರಿ 8. ಯಾವುದೇ ಲೋಹದ ವಸ್ತುಗಳನ್ನ ಮುಟ್ಟಬೇಡಿ 9. ವಿದ್ಯುತ್​ ಮತ್ತು ಟೆಲಿಫೋನ್​​ ತಂತಿಗಳಿಂದ ದೂರವಿರಿ 10. ಆದಷ್ಟು ಮನೆಯೊಳಗೆ ಅಥವಾ ಕಟ್ಟಡ ಒಳಗೆ ಇರುವುದು ಸೂಕ್ತ 11. ಒಂದು ವೇಳೆ ಆಚೆಯಿದ್ದರೆ ನೆಲದ ಮೇಲೆ ಕೂರಬೇಡಿ

ಈ ಮೇಲ್ಕಂಡ ಕ್ರಮಗಳನ್ನು ಕೈಗೊಂಡರೆ ಯಾವುದೇ ಪ್ರಾಣಾಪಾಯವು ಎದುರಾಗೋದಿಲ್ಲ ಎಂದು ಪ್ರಾಧಿಕಾರವು ಹೇಳಿದೆ.

Published On - 2:51 pm, Mon, 6 July 20

ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ
ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಓಕೆ ಅಂತಾಳೆ; ಪತ್ನಿ ಬಗ್ಗೆ ಮಾತಾಡಿದ ಹಂಸಲೇಖ
ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಓಕೆ ಅಂತಾಳೆ; ಪತ್ನಿ ಬಗ್ಗೆ ಮಾತಾಡಿದ ಹಂಸಲೇಖ
ರಾಷ್ಟ್ರಪತಿಯವರನ್ನು ಭೇಟಿಯಾಗಿ ಮಸೂದೆಗಳ ಅನುಮೋದನೆ ಜ್ಞಾಪಿಸಿದೆವು: ಸಿಎಂ
ರಾಷ್ಟ್ರಪತಿಯವರನ್ನು ಭೇಟಿಯಾಗಿ ಮಸೂದೆಗಳ ಅನುಮೋದನೆ ಜ್ಞಾಪಿಸಿದೆವು: ಸಿಎಂ
ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಚಿವ
ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಚಿವ
ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ