AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಯಾವ ಹುಲಿಯೂ ಮಾಡಿರದ ಸಾಧನೆಯನ್ನು ಈ ಹುಲಿರಾಯ ಮಾಡವ್ನೆ! ಏನದು?

ಕೂತಲ್ಲಿ ಕೂರಲ್ಲ, ನಿಂತಲ್ಲಿ ನಿಲ್ಲಲ್ಲ… ತ್ರಿಲೋಕ ಸಂಚಾರಿ ಹಂಗೆ ಓಡಾಡ್ತಾನೆ ಅನ್ನೋ ಮಾತು ಈ ಹುಲಿರಾಯನಿಗೆ ಸರಿ ಹೊಂದಬಹುದೇನೋ! ಏಕೆಂದರೆ ಇದುವರೆಗೂ ಭಾರತದ ಯಾವ ಹುಲಿಯೂ ಮಾಡಿರದ ಸಾಧನೆಯೊಂದನ್ನು ಈ ಹುಲಿ ಮಾಡಿದೆ. ಅಂದಹಾಗೆ ಈ ಸಾಧನೆಯನ್ನು ನೋಡಿ ಅರಣ್ಯಾಧಿಕಾರಿಗಳು ಹುಲಿಗೆ ಇಟ್ಟ ಹೆಸರು ವಾಕರ್. 9 ತಿಂಗಳಲ್ಲಿ 3 ಸಾವಿರ ಕಿ.ಮೀ. ಅಡ್ಡಾಡಿದ ಹುಲಿರಾಯ! ಜೂನ್ 2019ರಂದು ಮಹಾರಾಷ್ಟ್ರದ ಅಭಯಾರಣ್ಯವೊಂದರಿಂದ ಹೊರಟ ಮೂರೂವರೆ ವರ್ಷದ ವಾಕರ್ ಒಂಭತ್ತು ತಿಂಗಳ ನಂತರ ಅಂದರೆ ಮಾರ್ಚ್ 2020ಕ್ಕೆ ಮಹಾರಾಷ್ಟ್ರಕ್ಕೆ […]

ಭಾರತದ ಯಾವ ಹುಲಿಯೂ ಮಾಡಿರದ ಸಾಧನೆಯನ್ನು ಈ ಹುಲಿರಾಯ ಮಾಡವ್ನೆ! ಏನದು?
ಬಾಲಕನನ್ನು ಬಲಿ ತೆಗೆದುಕೊಂಡ ಚಿರತೆ
ಸಾಧು ಶ್ರೀನಾಥ್​
|

Updated on: Nov 18, 2020 | 4:18 PM

Share

ಕೂತಲ್ಲಿ ಕೂರಲ್ಲ, ನಿಂತಲ್ಲಿ ನಿಲ್ಲಲ್ಲ… ತ್ರಿಲೋಕ ಸಂಚಾರಿ ಹಂಗೆ ಓಡಾಡ್ತಾನೆ ಅನ್ನೋ ಮಾತು ಈ ಹುಲಿರಾಯನಿಗೆ ಸರಿ ಹೊಂದಬಹುದೇನೋ! ಏಕೆಂದರೆ ಇದುವರೆಗೂ ಭಾರತದ ಯಾವ ಹುಲಿಯೂ ಮಾಡಿರದ ಸಾಧನೆಯೊಂದನ್ನು ಈ ಹುಲಿ ಮಾಡಿದೆ. ಅಂದಹಾಗೆ ಈ ಸಾಧನೆಯನ್ನು ನೋಡಿ ಅರಣ್ಯಾಧಿಕಾರಿಗಳು ಹುಲಿಗೆ ಇಟ್ಟ ಹೆಸರು ವಾಕರ್.

9 ತಿಂಗಳಲ್ಲಿ 3 ಸಾವಿರ ಕಿ.ಮೀ. ಅಡ್ಡಾಡಿದ ಹುಲಿರಾಯ! ಜೂನ್ 2019ರಂದು ಮಹಾರಾಷ್ಟ್ರದ ಅಭಯಾರಣ್ಯವೊಂದರಿಂದ ಹೊರಟ ಮೂರೂವರೆ ವರ್ಷದ ವಾಕರ್ ಒಂಭತ್ತು ತಿಂಗಳ ನಂತರ ಅಂದರೆ ಮಾರ್ಚ್ 2020ಕ್ಕೆ ಮಹಾರಾಷ್ಟ್ರಕ್ಕೆ ಮರಳಿ ಬಂದಿದೆ. ಈ ಒಂಬತ್ತು ತಿಂಗಳ ಅವಧಿಯಲ್ಲಿ ಮಹಾರಾಷ್ಟ್ರದ ಏಳು ಜಿಲ್ಲೆಗಳನ್ನು ದಾಟಿ ಪಕ್ಕದ ತೆಲಂಗಾಣದಲ್ಲಿ ಓಡಾಡಿ ಬಂದಿರುವ ಹುಲಿ ಕ್ರಮಿಸಿರುವ ಒಟ್ಟು ದೂರ ಬರೋಬ್ಬರಿ ಮೂರು ಸಾವಿರ ಕಿ.ಮೀ!

ಕಾಲರ್ ಐಡಿ ಮೂಲಕ ವಾಕರ್​ನ ಚಲನವಲನಗಳನ್ನು ಪತ್ತೆ ಹಚ್ಚಿದ ಅರಣ್ಯಾಧಿಕಾರಿಗಳು ಈ ಹುಲಿ ಸುತ್ತಾಡಿದ ಪರಿಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಆಹಾರ, ಸಂಗಾತಿ ಹಾಗೂ ಸೂಕ್ತ ನೆಲೆಯನ್ನು ಅರಸಿ ಇಷ್ಟು ಓಡಾಡಿರುವ ಸಾಧ್ಯತೆ ಇದೆಯೆಂದು ಊಹಿಸಲಾಗಿದೆ.

ಇನ್ನೂ ಎಷ್ಟು ದೂರ ಕ್ರಮಿಸಲಿದೆಯೋ!? ಸದ್ಯ 205 ಚ.ಕಿ.ಮೀ ವ್ಯಾಪ್ತಿಯ ಜ್ಞಾನಗಂಗಾ ಅಭಯಾರಣ್ಯದಲ್ಲಿ ನೆಲೆಸಿರುವ ವಾಕರ್ ಈ ಭಾಗದಲ್ಲಿ ನೆಲೆಸಿರುವ ಏಕೈಕ ಹುಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾಲರ್ ಐಡಿ ಜೋಡಿಸಿದ ಕಾರಣ ಹುಲಿಯ ಓಡಾಟದ ಕುರಿತು ಮಾಹಿತಿ ಲಭಿಸಿದೆ. ಇದಕ್ಕೂ ಮುನ್ನ ಬೇರೆ ಹುಲಿಗಳು ಇಷ್ಟು ದೂರ ಚಲಿಸಿರಬಹುದು ಎಂಬ ಅಭಿಪ್ರಾಯ ಇದೆಯಾದರೂ ಅದರ ಸಾಧ್ಯತೆ ಬಹಳ ಕಡಿಮೆ ಎಂಬ ಮಾತು ಸಹ ಕೇಳಿಬರುತ್ತಿದೆ. -ಸ್ಕಂದ ಕೆ.ಎನ್.

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ