AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ToTo Award 2021; ಪತ್ರಕರ್ತೆ ಅಮೂಲ್ಯಾಳಿಗೆ ಒಂದು ಲಕ್ಷ ಮೊತ್ತದ ಟೊಟೊ ಪುರಸ್ಕಾರ

Creative writing: ಬೆಂಗಳೂರಿನ ಪತ್ರಕರ್ತೆ ಅಮೂಲ್ಯ ಬಿ. ಕನ್ನಡ ಮತ್ತು ಇಂಗ್ಲಿಷ್ ಎರಡೂ ವಿಭಾಗಗಳಲ್ಲಿ ಪುರಸ್ಕಾರ ಪಡೆದಿರುವ ಇವರು, ಹದಿನೇಳು ವರ್ಷಗಳ ಟೊಟೊ ಪುರಸ್ಕಾರದ ಪಯಣದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

ToTo Award 2021; ಪತ್ರಕರ್ತೆ ಅಮೂಲ್ಯಾಳಿಗೆ ಒಂದು ಲಕ್ಷ ಮೊತ್ತದ ಟೊಟೊ ಪುರಸ್ಕಾರ
ಟೊಟೊ ಪುರಸ್ಕಾರ: 2021 ಪಡೆದ ಬೆಂಗಳೂರಿನ ಅಮೂಲ್ಯ ಬಿ.
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Feb 10, 2021 | 10:33 AM

Share

ಬೆಂಗಳೂರು: ಪ್ರಸಕ್ತ ಸಾಲಿನ ಟೊಟೊ ಪುರಸ್ಕಾರಕ್ಕೆ ಪತ್ರಕರ್ತೆ ಅಮೂಲ್ಯ ಬಿ. ಭಾಜನರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ವಿಭಾಗಗಳಲ್ಲಿ ಪುರಸ್ಕಾರ ಪಡೆದಿರುವ ಇವರು, ಹದಿನೇಳು ವರ್ಷಗಳ ಟೊಟೊ ಪುರಸ್ಕಾರದ ಪಯಣದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

ಭಾನುವಾರ ನಡೆದ ಆನ್​ಲೈನ್​ ಸಮಾರಂಭದಲ್ಲಿ ವಿವಿಧ ಸೃಜನಶೀಲ ಕ್ಷೇತ್ರಗಳಲ್ಲಿ ಈ ಪುರಸ್ಕಾರಕ್ಕೆ ಆಯ್ಕೆಯಾದವರ ಹೆಸರುಗಳನ್ನು ಘೋಷಿಸಲಾಯಿತು; ಸಂಗೀತ ಕ್ಷೇತ್ರದಲ್ಲಿ ಜಮ್ಮುವಿನ ಸಾವಿ ಸಿಂಗ್; ರೂ 60,000, ಇಂಗ್ಲಿಷ್ ಸೃಜನಶೀಲ ಬರೆವಣಿಗೆಯಲ್ಲಿ ಬೆಂಗಳೂರಿನ ಅಮೂಲ್ಯ ಬಿ.; ರೂ 50,000 ಮತ್ತು ಮುಂಬೈನ ಕುಂಜನಾ ಪರಾಶರ; ರೂ 50,000, ಕನ್ನಡ ಸೃಜನಶೀಲ ಬರೆವಣಿಗೆಯಲ್ಲಿ ಮತ್ತೆ ಅಮೂಲ್ಯ ಬಿ; ರೂ. 50,000, ಫೋಟೋಗ್ರಫಿಯಲ್ಲಿ ಹೈದರಾಬಾದ್​ನ ಹರಿ ಸಾಯಿ ಶ್ರೀಕರ; ರೂ.50,000 ಮತ್ತು ಕೊಲ್ಕೊತ್ತಾದ ನೀಲಾರ್ಘ ಚಟರ್ಜೀ; ರೂ. 50,000, ಕಿರುಚಿತ್ರಕ್ಕಾಗಿ ಹರಿಯಾಣಾದ ಅಶ್ಮಿತಾ ಗುಹಾ ನಿಯೋಗಿ; ರೂ.50,000 ಮತ್ತು ನವದೆಹಲಿಯ ಮೇಘಾ ಆಚಾರ್ಯ.

ಬೆಂಗಳೂರಿನ ವೆಲ್ಲಾನಿ ದಂಪತಿಯು ತಮ್ಮ ಮಗನ ಸ್ಮರಣಾರ್ಥವಾಗಿ ಟೊಟೊ ಫಂಡ್ಸ್‌ ದಿ ಆರ್ಟ್ (TFA) ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. 19ನೇ ವಯಸ್ಸಿಗೆ ಮಗ ತೀರಿದ ಕಾರಣ ಯುವ ಪ್ರತಿಭೆಗಳಿಗೆಂದೇ ಈ ಪ್ರಶಸ್ತಿಯನ್ನು ಮೀಸಲಿರಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕನ್ನಡಕ್ಕೂ ಇದನ್ನು ವಿಸ್ತರಿಸಿದ್ದಾರೆ.

‘ಟೊಟೊ ಅವಾರ್ಡ್ 2021’ ರ ಅಂತಿಮ ಸುತ್ತಿನಲ್ಲಿ ಅಮೂಲ್ಯಾ ಬಿ, ಸಂದೀಪ ಈಶಾನ್ಯ, ಸ್ನೇಹಜಯಾ ಕಾರಂತ

Published On - 10:15 am, Wed, 10 February 21

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!