AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಲ್ಪ ಯಾಮಾರಿದ್ರೆ ಹೊಟ್ಟೆಗೆ ಬೀಳುತ್ತೆ ಮಾರಣಾಂತಿಕ ವಿಷ!

ಆಹಾರದ ಪ್ರಾಮುಖ್ಯತೆ ಅರಿತ ಜಾಗತಿಕ ಆಹಾರ ಸಂಸ್ಥೆಗಳು ಪ್ರತಿ ವರ್ಷ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸುತ್ತಿದೆ. ಪ್ರತಿ ವರ್ಷವೂ ಒಂದು ವಿಷಯವನ್ನಾಧರಿಸಿ ಆಚರಿಸಲಾಗುವ ಆಹಾರ ದಿನವನ್ನು ಈ ವರ್ಷ ‘ನಮ್ಮ ಕ್ರಿಯೆ ನಮ್ಮ ಭವಿಷ್ಯ. ಜಾಗತಿಕ ಹಸಿವು ನಿರ್ಮೂಲನೆಗೆ ಆರೋಗ್ಯಕರ ಆಹಾರ ಪದ್ಧತಿ’ ಎಂಬ ವಿಷಯದಡಿ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ವಿಶ್ವ ಆಹಾರ ದಿನದ ಹಿನ್ನೆಲೆ ಆಹಾರ ವಿಷವಾಗಲು ಕಾರಣಗಳೇನು, ಅದಕ್ಕೆ ಚಿಕಿತ್ಸೆ ಹಾಗೂ ಪರಹಾರವೇನು? ಆಹಾರಕ್ಕೆ ಸಂಬಂಧಿಸಿದ ಕೆಲವೊಂದು ಅನಾರೋಗ್ಯವನ್ನು ಆಹಾರ ವಿಷವಾಗುವುದು ಎಂದು […]

ಸ್ವಲ್ಪ ಯಾಮಾರಿದ್ರೆ ಹೊಟ್ಟೆಗೆ ಬೀಳುತ್ತೆ ಮಾರಣಾಂತಿಕ ವಿಷ!
ಸಾಧು ಶ್ರೀನಾಥ್​
|

Updated on:Oct 18, 2019 | 1:38 PM

Share

ಆಹಾರದ ಪ್ರಾಮುಖ್ಯತೆ ಅರಿತ ಜಾಗತಿಕ ಆಹಾರ ಸಂಸ್ಥೆಗಳು ಪ್ರತಿ ವರ್ಷ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸುತ್ತಿದೆ. ಪ್ರತಿ ವರ್ಷವೂ ಒಂದು ವಿಷಯವನ್ನಾಧರಿಸಿ ಆಚರಿಸಲಾಗುವ ಆಹಾರ ದಿನವನ್ನು ಈ ವರ್ಷ ‘ನಮ್ಮ ಕ್ರಿಯೆ ನಮ್ಮ ಭವಿಷ್ಯ. ಜಾಗತಿಕ ಹಸಿವು ನಿರ್ಮೂಲನೆಗೆ ಆರೋಗ್ಯಕರ ಆಹಾರ ಪದ್ಧತಿ’ ಎಂಬ ವಿಷಯದಡಿ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ವಿಶ್ವ ಆಹಾರ ದಿನದ ಹಿನ್ನೆಲೆ ಆಹಾರ ವಿಷವಾಗಲು ಕಾರಣಗಳೇನು, ಅದಕ್ಕೆ ಚಿಕಿತ್ಸೆ ಹಾಗೂ ಪರಹಾರವೇನು?

ಆಹಾರಕ್ಕೆ ಸಂಬಂಧಿಸಿದ ಕೆಲವೊಂದು ಅನಾರೋಗ್ಯವನ್ನು ಆಹಾರ ವಿಷವಾಗುವುದು ಎಂದು ಕರೆಯಲಾಗುತ್ತದೆ. ಕಲುಷಿತ ಆಹಾರ, ಕೆಟ್ಟ ಆಹಾರ ಅಥವಾ ವಿಷವಾಗಿರುವಂತಹ ಆಹಾರ ಸೇವನೆಯೇ ಆಹಾರ ವಿಷವಾಗಲು ಕಾರಣವಾಗಿದೆ. ಆಹಾರ ವಿಷವಾಗುವ ಪ್ರಮುಖ ಲಕ್ಷಣಗಳೆಂದರೆ ವಾಕರಿಕೆ, ವಾಂತಿ ಮತ್ತು ಅತಿಸಾರ. ಆಹಾರ ವಿಷವಾಗುವುದು ಅಸಾಮಾನ್ಯವಲ್ಲದ ಕಾರಣದಿಂದಾಗಿ ಇದು ತುಂಬಾ ಅಹಿತರ ಭಾವನೆ ಉಂಟು ಮಾಡುವುದು. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆಂಟೇಷನ್(ಸಿಡಿಸಿ) ಹೇಳುವ ಪ್ರಕಾರ ಅಮೆರಿಕಾದಲ್ಲಿ 6 ಮಂದಿಯಲ್ಲಿ ಒಬ್ಬರು ಪ್ರತೀ ವರ್ಷ ಆಹಾರ ವಿಷವಾಗುವ ಸಮಸ್ಯೆಗೆ ಒಳಗಾಗುವರು.

ಆಹಾರ ವಿಷವಾಗಿದೆ ಎಂದು ನಿಮ್ಮ ದೇಹದಲ್ಲಿ ಲಕ್ಷಣ ತೋರಿಸಲು ಒಂದು ಗಂಟೆಯಿಂದ 28 ದಿನಗಳು ಬೇಕಾಗಬಹುದು. ಹೊಟ್ಟೆಯಲ್ಲಿ ಸೆಳೆತ, ಅತಿಸಾರ, ವಾಂತಿ, ಹಸಿವಾಗದೆ ಇರುವುದು, ಜ್ವರ, ವಾಕರಿಕೆ, ತಲೆನೋವು ಆಹಾರ ವಿಷವಾಗುವುದರಿಂದ ಕಾಣಿಸಿಕೊಳ್ಳುವ ಇಂಥ ಕೆಲವೊಂದು ಲಕ್ಷಣಗಳು ಪ್ರಾಣಹಾನಿಗೆ ಕಾರಣವಾಗಬಹುದು. ಅದಕ್ಕೆ ಎಚ್ಚರವಾಗಿರಬೇಕು. ಮೂರು ದಿನಗಳಿಗೂ ಹೆಚ್ಚು ಸಮಯ ಅತಿಸಾರ ಇದ್ದರೆ, 101.5ಎಫ್ ಗಿಂತಲೂ ತೀವ್ರವಾದ ಜ್ವರವಿದ್ದರೆ ಇದು ಅಪಾಯಕಾರಿ. ವಿಷಾಹಾರವಾದಾಗ ನೋಡಲು ಮತ್ತು ಮಾತನಾಡಲು ಕಷ್ಟವಾಗುವುದು ಮತ್ತು ತೀವ್ರ ನಿರ್ಜಲೀಕರಣವಾಗುವ ಲಕ್ಷಣಗಳು ಕಾಣಿಸಬಹುದು. ಇದರಲ್ಲಿ ಮುಖ್ಯವಾಗಿ ಬಾಯಿ ಒಣಗುವುದು, ಮೂತ್ರ ಬರದೆ ಇರುವುದು. ಮೂತ್ರದಲ್ಲಿ ರಕ್ತದ ಅಂಶವಿರುವುದು ಈ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡರೆ ಆಗ ನೀವು ತಕ್ಷಣವೇ ವೈದ್ಯರ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.

ವೈರಸ್ ನಿಂದಾಗಿಯೂ ಆಹಾರವು ವಿಷವಾಗಬಹುದು. ನೊರೊವೈರಸ್ ಅಥವಾ ನೊರವಾಕ್ ವೈರಸ್ ಪ್ರತೀ ವರ್ಷ ಸುಮಾರು 19 ಮಿಲಿಯನ್ ಪ್ರಕರಣಗಳಲ್ಲಿ ಆಹಾರವನ್ನು ವಿಷವಾಗಿಸುವುದು ಎಂದು ಮೂಲಗಳು ಹೇಳಿವೆ. ಅಪರೂಪದ ಸಂದರ್ಭದಲ್ಲಿ ಇದು ಪ್ರಾಣಹಾನಿಗೆ ಕಾರಣವಾಗಬಹುದು. ಸಪೋವೈರಸ್, ರೋಟವೈರಸ್ ಮತ್ತು ಆಸ್ಟ್ರೋವೈರಸ್ ಒಂದೇ ರೀತಿಯ ಲಕ್ಷಣಗಳನ್ನು ತೋರಿಸಬಹುದು. ಆದರೆ ಇದು ಸಾಮಾನ್ಯವಾಗಿ ಇರುವುದಿಲ್ಲ. ಹೆಪಟಿಟಿಸ್ ಎ ವೈರಸ್ ಆಹಾರದ ಮೂಲಕವೇ ದೇಹದೊಳಗೆ ಪ್ರವೇಶಿಸಿ, ಗಂಭೀರ ಪರಿಣಾಮ ಬೀರುವುದು.

ಇದನ್ನೂ ಓದಿ: ತಿನ್ನೋ ಆಹಾರ ವಿಷವಾಯಿತೇ? ತಕ್ಷಣ ಹೀಗೆ ಮಾಡಿ

ಮನುಷ್ಯ ತಿನ್ನುವಂತಹ ಹೆಚ್ಚಿನ ಆಹಾರಗಳಲ್ಲಿ ರೋಗಕಾರಕಗಳು ಕಂಡುಬರುವುದು. ಅದಾಗ್ಯೂ, ಆಹಾರವು ಬಿಸಿಯಾಗುವ ಕಾರಣದಿಂದಾಗಿ ಅದು ದೇಹ ಸೇರುವ ಮೊದಲು ರೋಗಕಾರಕಗಳು ನಾಶವಾಗುವುದು. ಹಸಿಯಾಗಿರುವಂತಹ ಯಾವುದೇ ಆಹಾರವು, ನಮ್ಮ ದೇಹದಲ್ಲಿ ಆಹಾರ ವಿಷವಾಗಿಸುವುದು. ಯಾಕೆಂದರೆ ಇದು ಬಿಸಿಯಾಗದೆ ಇರುವ ಪರಿಣಾಮ ರೋಗಕಾರಗಳು ಹಾಗೆ ಉಳಿಯುವುದು. ಕೆಲವೊಂದು ಸಲ ಸೂಕ್ಷ್ಮಾಣು ಜೀವಿಗಳು ಆಹಾರವನ್ನು ಸೇರಿಕೊಳ್ಳುವುದು. ಇದಕ್ಕೆ ಮುಖ್ಯ ಕಾರಣವೆಂದರೆ ಆಹಾರ ತಯಾರಿಸುವ ಮೊದಲು ಸರಿಯಾಗಿ ಕೈಗಳನ್ನು ತೊಳೆಯದೆ ಇರುವುದು. ಮಾಂಸ, ಮೊಟ್ಟೆ ಮತ್ತು ಹಾಲಿನ ಉತ್ಪನ್ನಗಳು ಬೇಗನೆ ಕಲುಷಿತವಾಗುವುದು. ನೀರು ಕೂಡ ಕೆಲವೊಂದು ಕಾಯಿಲೆಗಳಿಗೆ ಕಾರಣವಾಗುವಂತಹ ರೋಗಕಾರಕಗಳಿಂದ ಕಲುಷಿತವಾಗಬಹುದು.

Published On - 11:53 am, Fri, 18 October 19

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ