AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನೆ-ಮೊನ್ನೆ ತಾಮ್ರದ ಬೆನಿಫಿಟ್​ ಬಗ್ಗೆ ಹೇಳ್ತಾ ಇದ್ದವರು ಈಗ ಉಲ್ಟಾ!

ಕಾಲಾಯ ತಸ್ಮೈ ನಮಃ. ಕಾಲ ಅದೆಷ್ಟು ಬೇಗ ಬದಲಾಗುತ್ತೆ ಅಲ್ವಾ..? ಕಾಲದ ಜೊತೆ ನಮ್ಮ ನಿಮ್ಮ ನಿಲುವು ಕೂಡಾ ಬದಲಾಗುತ್ತೆ. ನಿನ್ನೆ ಮೊನ್ನೆ ತಾಮ್ರದ ಬೆನಿಫಿಟ್ ಬಗ್ಗೆ ಹೇಳ್ತಾ ಇದ್ವಿ? ತಾಮ್ರ ಆರೋಗ್ಯಕ್ಕೆ ಉತ್ತಮ, ತಾಮ್ರ ಸೌಂದರ್ಯ ಹೆಚ್ಚಿಸುತ್ತೆ, ತಾಮ್ರ ಮುಖದ ಕಾಂತಿ ಹೆಚ್ಚಿಸುತ್ತೆ ಹೀಗೆಲ್ಲಾ ಕಥೆಗಳನ್ನು ಕೇಳಿದ್ದೇವೆ.. ಆದ್ರೆ, ಈಗ ಹೊಸ ಸುದ್ದಿ ಬಂದಿದೆ. ತಾಮ್ರ ಕೂಡಾ ವಿಷವಾಗುತ್ತಂತೆ..? ಅಡುಗೆ ಮಾಡೋ ಪಾತ್ರೆಗಳಲ್ಲಿ ತಾಮ್ರದ ಪಾತ್ರವೇ ಶ್ರೇಷ್ಠ ಅಂತ ನಾವೆಲ್ಲಾ ನಂಬಿಕೊಂಡಿದ್ದೇವೆ. ಸಾಮಾನ್ಯವಾಗಿ ನಮ್ಮಲ್ಲಿ ಹೆಚ್ಚಿನವರು […]

ನಿನ್ನೆ-ಮೊನ್ನೆ ತಾಮ್ರದ ಬೆನಿಫಿಟ್​ ಬಗ್ಗೆ ಹೇಳ್ತಾ ಇದ್ದವರು ಈಗ ಉಲ್ಟಾ!
ಸಾಧು ಶ್ರೀನಾಥ್​
|

Updated on:Oct 28, 2019 | 2:03 PM

Share

ಕಾಲಾಯ ತಸ್ಮೈ ನಮಃ. ಕಾಲ ಅದೆಷ್ಟು ಬೇಗ ಬದಲಾಗುತ್ತೆ ಅಲ್ವಾ..? ಕಾಲದ ಜೊತೆ ನಮ್ಮ ನಿಮ್ಮ ನಿಲುವು ಕೂಡಾ ಬದಲಾಗುತ್ತೆ. ನಿನ್ನೆ ಮೊನ್ನೆ ತಾಮ್ರದ ಬೆನಿಫಿಟ್ ಬಗ್ಗೆ ಹೇಳ್ತಾ ಇದ್ವಿ? ತಾಮ್ರ ಆರೋಗ್ಯಕ್ಕೆ ಉತ್ತಮ, ತಾಮ್ರ ಸೌಂದರ್ಯ ಹೆಚ್ಚಿಸುತ್ತೆ, ತಾಮ್ರ ಮುಖದ ಕಾಂತಿ ಹೆಚ್ಚಿಸುತ್ತೆ ಹೀಗೆಲ್ಲಾ ಕಥೆಗಳನ್ನು ಕೇಳಿದ್ದೇವೆ.. ಆದ್ರೆ, ಈಗ ಹೊಸ ಸುದ್ದಿ ಬಂದಿದೆ. ತಾಮ್ರ ಕೂಡಾ ವಿಷವಾಗುತ್ತಂತೆ..?

ಅಡುಗೆ ಮಾಡೋ ಪಾತ್ರೆಗಳಲ್ಲಿ ತಾಮ್ರದ ಪಾತ್ರವೇ ಶ್ರೇಷ್ಠ ಅಂತ ನಾವೆಲ್ಲಾ ನಂಬಿಕೊಂಡಿದ್ದೇವೆ. ಸಾಮಾನ್ಯವಾಗಿ ನಮ್ಮಲ್ಲಿ ಹೆಚ್ಚಿನವರು ರಾತ್ರಿ ತಾಮ್ರದ ಚೊಂಬಿನಲ್ಲಿ ನೀರು ಹಾಕಿಟ್ಟು ಮುಂಜಾನೆ ಎದ್ದು ಅದನ್ನು ಕುಡೀತೀವಿ. ಮುಖ ಕಾಂತಿಯುತವಾಗುತ್ತೆ ಅಂತ ಬೀಗ್ತೀವಿ. ಅಷ್ಟೇ ಅಲ್ಲಾ ಅನೀಮಿಯಾ ಅಂದ್ರೆ ರಕ್ತಹೀನತೆಯಿಂದ ಬಳಲ್ತಾ ಇರೋ ಜನರಿಗೆ ಔಷಧಿಯ ರೀತಿ ತಾಮ್ರ ಕೊಡೋದ್ರಿಂದ ಅವರು ಆರೋಗ್ಯವಾಗಿರ್ತಾರೆ ಎನ್ನಲಾಗಿದೆ. ಇದು ಮೊಡವೆಯನ್ನು ಕಡಿಮೆ ಮಾಡುತ್ತೆ, ಹಲ್ಲಿನ ಸವೆತವನ್ನು ನಿಲ್ಲಿಸುತ್ತಂತೆ, ಮಹಿಳೆಯರಲ್ಲಿ ಕಂಡು ಬರುವ ಮೂಳೆ ಸವೆತವನ್ನು ತಡೆಗಟ್ಟುತ್ತಂತೆ. ಅದ್ರ ಜೊತೆ ಜೊತೆಗೆ ಅರ್ಥ್ರೈಟಿಸ್ ಗೂ ಪರಿಹಾರವಾಗುತ್ತಂತೆ. ಇದಲ್ಲದೇ ಇದರಿಂದ ಗಾಯ ಬೇಗ ವಾಸಿಯಾಗುತ್ತಂತೆ.

ಇದನ್ನು ಸಪರೇಟಾಗಿ ತಿನ್ನಬೇಕಿಲ್ಲ. ಯಾಕೆಂದ್ರೆ ನೀವು ನಿತ್ಯ ತಿನ್ನುವ ಕೆಲವು ಆಹಾರಗಳಲ್ಲೂ ತಾಮ್ರದ ಅಂಶವಿದೆ ಅನ್ನೋದನ್ನು ನಾವು ಗಮನಿಸಬೇಕು. ಸಾಮಾನ್ಯವಾಗಿ ಸೀಫುಡ್, ಮಾಂಸ ಮತ್ತು ಧಾನ್ಯಗಳಲ್ಲಿ ತಾಮ್ರದ ಅಂಶವಿದೆ. ಇದೆಲ್ಲಾ ಇದ್ದೂ ತಾಮ್ರದಿಂದ ಅಪಾಯವಿದೆಯಂತೆ. ಕೆಲವೊಂದು ಅಧ್ಯಯನಗಳನ್ನು ಆಧರಿಸಿ ನೋಡಿದಾಗ ಕೆಲವೊಂದು ಅಂಶಗಳು ಬೆಳಕಿಗೆ ಬರ್ತಿವೆ. ಅದ್ರಂತೆ ತಾಮ್ರ ಸೇವನೆ ಅಲ್ಝೈಮರ್ ಕಡಿಮೆ ಮಾಡುತ್ತೆ ಅಂತ ಎಲ್ರೂ ನಂಬಿದ್ದಾರೆ ಆದ್ರೆ, ತಾಮ್ರವನ್ನು ಸೇವಿಸೋದ್ರಿಂದ ಅನುಕೂಲವಾಗುತ್ತೆ ಅನ್ನೋದು ಪೊಳ್ಳು ಅನ್ನೋದು ಗೊತ್ತಾಗುತ್ತೆ. ಇದಲ್ಲದೇ ಡಯಾರಿಯಾದಿಂದ ಆಗುವ ಇನ್ಫ್ಯಾಕ್ಷನಿಗೆ ತಾಮ್ರದ ಅಂಶವನ್ನು ಸೇವನೆಗೆ ನೀಡಿದ್ರೆ ಏನೇನೂ ಉಪಯೋಗವಿಲ್ಲ ಎನ್ನಲಾಗುತ್ತೆ.

ಇಷ್ಟೆಲ್ಲಾ ಉಪಯೋಗಕಾರಿಯಾಗಿರುವ ತಾಮ್ರ ಯಾವಾಗ ಮತ್ತು ಹೇಗೆ ಅಪಾಯಕಾರಿಯಾಗಿರುತ್ತೆ ಅನ್ನೋದನ್ನು ಗಮನಿಸಿದ್ರೆ, ನೀವು ತಾಮ್ರದ ಅಂಶವನ್ನು ಡೈರೆಕ್ಟಾಗಿ ಬಾಯಿಯ ಮೂಲಕ ಸ್ವೀಕರಿಸೋದಿದ್ರೆ ಒಂದು ಅಂಶ ನೆನಪಿರಬೇಕು. ಅದ್ರಂತೆ ನೀವು ದಿನಕ್ಕೆ 10 ಮಿಲಿ ಗ್ರಾಮ್ಸ್ ಗಿಂತ ಜಾಸ್ತಿ ತಾಮ್ರ ಡೈರೆಕ್ಟಾಗಿ ಸೇವಿಸಿದ್ರೆ ಅಪಾಯ. ಹೀಗೆ ಹೆಚ್ಚಾಗಿ ಸೇವಿಸಿದ್ರೆ ಖಂಡಿತಾ ಕಿಡ್ನಿ ಸಮಸ್ಯೆ ಬಂದೇ ಬರುತ್ತೆ. ತಾಮ್ರದ ಪ್ರಮಾಣ ಹೆಚ್ಚಾಗಿ ಸೇವಿಸಿದ್ರೆ ನಿಮಗೆ ತಲೆಸುತ್ತು, ವಾಂತಿ, ರಕ್ತ ಮಿಶ್ರಿತ ಬೇಧಿ, ಜ್ವರ, ಹೊಟ್ಟೆ ನೋವು, ಕಡಿಮೆ ರಕ್ತದೊತ್ತಡ, ರಕ್ತಹೀನತೆ ಮತ್ತು ಹಾರ್ಟ್ ಪ್ರಾಬ್ಲಂ ಬರಬಹುದು ಎನ್ನಲಾಗಿದೆ. ಆದ್ದರಿಂದ ಪ್ರಮಾಣದ ಬಗ್ಗೆ ಎಚ್ಚರವಿರಲಿ.

ಗರ್ಭಿಣಿ ಮತ್ತು ಮಗುವಿಗೆ ಹಾಲುಣಿಸುವ ಮಹಿಳೆ ತಾಮ್ರದ ಪ್ರಮಾಣ ಸೇವನೆಯಲ್ಲಿ ತುಂಬಾ ಎಚ್ಚರದಿಂದಿರಬೇಕು. ಅವರು 14 ರಿಂದ 18 ವರ್ಷ ವಯಸ್ಸಿನವರಾಗಿದ್ದರೆ 8 ಮಿಲಿ ಗ್ರಾಂಗಿಂತ ಹೆಚ್ಚು ತಾಮ್ರದ ಪ್ರಮಾಣ ಸೇವಿಸಿದ್ರೆ ಜೋಕೆ. ವಯಸು 19ರ ನಂತರ 10 ಮಿಲಿ ಗ್ರಾಮ್ ನಷ್ಟು ತಾಮ್ರ ತೆಗೆದುಕೊಳ್ಳುವ ಅವಕಾಶವಿದ್ದರೂ ಅದು ಅಪಾಯದಿಂದ ಹೊರತೇನಲ್ಲಾ. ಮಕ್ಕಳ ಬಗ್ಗೆ ಹೇಳೋದಿದ್ರೆ ಒಂದು ಪಟ್ಟಿಯೇ ಇದೆ. ಆ ಪ್ರಕಾರ 1 ರಿಂದ 3 ವರ್ಷದ ಮಕ್ಕಳಿಗೆ ಒಂದು ಮಿಲಿ ಗ್ರಾಮ್, 4 ರಿಂದ 8 ವರ್ಷದ ಮಕ್ಕಳಿಗೆ 3 ಮಿಲಿ ಗ್ರಾಂ, 9 ರಿಂದ 13 ವರ್ಷದ ಮಕ್ಕಳಿಗೆ 5 ಮಿಲಿಗ್ರಾಮ್ ಅಗತ್ಯಕ್ಕೆ ಬೇಕೆಂದರೆ ಸೇವಿಸಬಹುದು. ಅದಕ್ಕಿಂತ ಹೆಚ್ಚಿನ ಪ್ರಮಾಣ ತಪ್ಪಿಯೂ ಸೇವಿಸಬಾರದು ನೆನಪಿರಲಿ.

ತಾಮ್ರದ ಚಂಬಲ್ಲಿ ನೀರು ಇಟ್ಟು ಕುಡಿದ್ರೆ ಆರೋಗ್ಯ ವೃದ್ಧಿ, ಸೌಂದರ್ಯ ಅಂತ ಹೇಳ್ತಾ ಇದ್ದವರು ಈಗ ಉಲ್ಟಾ ಹೊಡೆದಿದ್ದಾರೆ. ಯಾಕೆಂದರೆ, ತಾಮ್ರದ ಚಂಬಲ್ಲಿ ರಾತ್ರಿ ನೀರಿಟ್ಟು ಬೆಳಿಗ್ಗೆ ಕುಡಿಯುವ ಪರಿಪಾಠ ಮೋಸದ್ದು ಎನನ್ಲಾಗಿದೆ. ಇದರಿಂದ ಆಪಾಯ ಎದುರಾಗಬಹುದು. ಹೀಗೆ ಕುಡಿಯೋದ್ರಿಂದ ನೀರಿನಲ್ಲಿ ಶೇಕಡಾ 4 ಸಾವಿರದಷ್ಟು ತಾಮ್ರದ ಅಂಶ ಹೆಚ್ಚಾಗುತ್ತಂತೆ. ಆಗ ನೀರಿನಲ್ಲಿ ಕಾಪರ್ ಲಿಚ್ಚಿಂಗ್ ಆದಾಗ ಮೆಟಲ್ ಪ್ರಮಾಣ ಹೆಚ್ಚಾಕಿ ಲಿವರ್ ಗೆ ಪ್ರಾಬ್ಲಂ ಆಗುತ್ತೆ ಎನ್ನಲಾಗಿದೆ. ಇದರಿಂದ ಮೆಟಲ್ ದೇಹದಲ್ಲಿ ಸಂಗ್ರಹವಾಗಿ ತೊಂದರೆ ಆಗೋದೇ ಹೆಚ್ಚು. ಆದ್ದರಿಂದ ಅತಿಯಾದ್ರೆ ಅಮೃತವೂ ವಿಷ ಅನ್ನೋದು ಎಲ್ಲರಿಗೂ ನೆನಪಿರಲಿ.

Published On - 7:49 pm, Sun, 27 October 19

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ