AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿಯಂದು ಏಕೆ ಮನೆ ಮುಂದೆ ಆಕಾಶ ದೀಪವನ್ನು ಕಟ್ಟಬೇಕು?

ಅಶ್ವಯುಜ ಅಮಾವಾಸ್ಯೆಯನ್ನು ದೀಪಾವಳಿ ಅಮಾವಾಸ್ಯೆಯಾಗಿ ಆಚರಿಸಲಾಗುತ್ತೆ. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ದೀಪಾವಳಿ ಅಮಾವಾಸ್ಯೆಯಂದು ಪಿತೃದೇವತೆಗಳಿಗೆ ತರ್ಪಣವನ್ನು ಬಿಡಬೇಕು. ಗೋಧೂಳಿ ಸಮಯದಲ್ಲಿ ಲಕ್ಷ್ಮೀಪೂಜೆಯನ್ನು ಮಾಡಬೇಕು ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ದೀಪಾವಳಿ ಅಮಾವಾಸ್ಯೆಯ ಮಾರನೆಯ ದಿನದಿಂದ ಕಾರ್ತಿಕಮಾಸ ಆರಂಭವಾಗುತ್ತೆ. ಪಿತೃಪಕ್ಷದ ಸಂದರ್ಭದಲ್ಲಿ ಭೂಲೋಕಕ್ಕೆ ಬಂದ ಪಿತೃಗಳು ಕಾರ್ತಿಕ ಶುದ್ಧ ಪಾಡ್ಯಮಿಯಂದು ಆಕಾಶಮಾರ್ಗದ ಮೂಲಕ ತಮ್ಮ ತಮ್ಮ ಲೋಕಗಳಿಗೆ ಪ್ರಯಾಣಿಸುತ್ತಿರುತ್ತಾರೆ. ಆ ಕಾಲದಲ್ಲಿ ಅವರಿಗೆ ದಾರಿ ತೋರಿಸುವುದಕ್ಕಾಗಿ ಒಂದು ದೀಪವನ್ನು ನಮ್ಮ ಕಡೆಯಿಂದ ವ್ಯವಸ್ಥೆ ಮಾಡಬೇಕು. ಇದನ್ನೇ […]

ದೀಪಾವಳಿಯಂದು ಏಕೆ ಮನೆ ಮುಂದೆ ಆಕಾಶ ದೀಪವನ್ನು ಕಟ್ಟಬೇಕು?
ಸಾಧು ಶ್ರೀನಾಥ್​
|

Updated on: Oct 27, 2019 | 9:27 AM

Share

ಅಶ್ವಯುಜ ಅಮಾವಾಸ್ಯೆಯನ್ನು ದೀಪಾವಳಿ ಅಮಾವಾಸ್ಯೆಯಾಗಿ ಆಚರಿಸಲಾಗುತ್ತೆ. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ದೀಪಾವಳಿ ಅಮಾವಾಸ್ಯೆಯಂದು ಪಿತೃದೇವತೆಗಳಿಗೆ ತರ್ಪಣವನ್ನು ಬಿಡಬೇಕು. ಗೋಧೂಳಿ ಸಮಯದಲ್ಲಿ ಲಕ್ಷ್ಮೀಪೂಜೆಯನ್ನು ಮಾಡಬೇಕು ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ದೀಪಾವಳಿ ಅಮಾವಾಸ್ಯೆಯ ಮಾರನೆಯ ದಿನದಿಂದ ಕಾರ್ತಿಕಮಾಸ ಆರಂಭವಾಗುತ್ತೆ. ಪಿತೃಪಕ್ಷದ ಸಂದರ್ಭದಲ್ಲಿ ಭೂಲೋಕಕ್ಕೆ ಬಂದ ಪಿತೃಗಳು ಕಾರ್ತಿಕ ಶುದ್ಧ ಪಾಡ್ಯಮಿಯಂದು ಆಕಾಶಮಾರ್ಗದ ಮೂಲಕ ತಮ್ಮ ತಮ್ಮ ಲೋಕಗಳಿಗೆ ಪ್ರಯಾಣಿಸುತ್ತಿರುತ್ತಾರೆ. ಆ ಕಾಲದಲ್ಲಿ ಅವರಿಗೆ ದಾರಿ ತೋರಿಸುವುದಕ್ಕಾಗಿ ಒಂದು ದೀಪವನ್ನು ನಮ್ಮ ಕಡೆಯಿಂದ ವ್ಯವಸ್ಥೆ ಮಾಡಬೇಕು. ಇದನ್ನೇ ಆಕಾಶ ದೀಪ ಎನ್ನಲಾಗುತ್ತೆ.

ಆಕಾಶ ದೀಪವು ಭೂಮಿಯ ಮೇಲಿರುವವರಿಗೆ ಬೆಳಕನ್ನು ನೀಡಲು ಉದ್ದೇಶಿಸಿದ್ದಲ್ಲ. ಬದಲಾಗಿ ಪಿತೃದೇವತೆಗಳು ತಮ್ಮ ಲೋಕಕ್ಕೆ ತೆರಳೋಕೆ ದಾರಿ ತೋರಿಸಲು ನೆರವಾಗಲೆಂದು ಆಕಾಶ ದೀಪಗಳನ್ನು ಬಿಡೋ ಪದ್ಧತಿ ಇದೆ. ಇನ್ನು ಈ ಆಕಾಶ ದೀಪದ ಹಿಂದೆ ಪುರಾಣ ಕಥೆಯೊಂದು ಬೆಸೆದುಕೊಂಡಿದೆ. ಅದೇನಂದ್ರೆ ತ್ರೇತಾಯುಗದಲ್ಲಿ ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ತೆರಳಿದ್ದ ಶ್ರೀರಾಮಚಂದ್ರ ಸೀತೆಯನ್ನು ಕಳೆದುಕೊಳ್ತಾನೆ. ರಾವಣನನ್ನು ವಧಿಸಿ, ಹದಿನಾಲ್ಕು ವರ್ಷಗಳ ನಂತರ ವಿಜಯಿಯಾಗಿ ಅಯೋಧ್ಯೆಗೆ ಮರಳುತ್ತಾನೆ. ಶ್ರೀರಾಮನ ಆಗಮನವನ್ನು ಸ್ವಾಗತಿಸುವ ಮುನ್ನಾ ದಿನ ರಾತ್ರಿ ಕೋಸಲ ದೇಶದ ಜನತೆ ರಾಮನಿಗಾಗಿ ಒಂದು ದೀಪವನ್ನು ಬೆಳಗಿ ಸಂಭ್ರಮಿಸಿದರಂತೆ. ಅದೇ ಆಕಾಶದೀಪಕ್ಕೆ ನಾಂದಿಯಾಯ್ತು ಎನ್ನಲಾಗುತ್ತೆ.

ಆಕಾಶ ಕಂದೀಲು, ಜ್ಯೋತಿ ಕಲಶ, ಆಕಾಶ ಬುಟ್ಟಿ ಎಂಬಿತ್ಯಾದಿ ಹೆಸರುಗಳಿಂದ ಈ ದೀಪಗಳನ್ನು ಕರೆಯಲಾಗುತ್ತೆ. ಶ್ರೀರಾಮನಿಗೆ ಭಕ್ತಿಪೂರ್ವಕವಾಗಿ ಅಂದು ಪ್ರಜೆಗಳು ಅರ್ಪಿಸಿದ ಆಕಾಶ ಕಂದೀಲು ನಂತರದ ದಿನಗಳಲ್ಲಿ ದೀಪಾವಳಿಯ ಸಮಯದಲ್ಲಿ, ಕಾರ್ತಿಕ ಮಾಸದಲ್ಲಿ ಹಚ್ಚಲ್ಪಡುವ ದೀಪವೇ ಆಕಾಶ ಬುಟ್ಟಿಯಾಯ್ತು ಎನ್ನಲಾಗುತ್ತೆ. ಆಕಾಶ ದೀಪವನ್ನು ದೇವರು, ಪೂರ್ವಜರು, ಪಿತೃಗಳ ನೆನಪಿನಲ್ಲಿ ಭಕ್ತಿಯಿಂದ ಹಚ್ಚಲಾಗುತ್ತೆ. ದೀಪ ಹಚ್ಚುವ ಮುನ್ನ ಕೆಲವು ಮಂತ್ರಗಳನ್ನು ಹೇಳಲಾಗುತ್ತೆ.

ಆದ್ರೆ, ಈಗ ಆಕಾಶ ದೀಪ ಆಧುನಿಕ ಸ್ವರೂಪವನ್ನು ಪಡೆದುಕೊಂಡಿದೆ. ಇನ್ನು ಸಾಂಪ್ರದಾಯಿಕವಾಗಿ ಆಕಾಶ ದೀಪವನ್ನು ಹಚ್ಚುವವರು ದೀಪದ ತಳದಲ್ಲಿ ಸ್ವಲ್ಪ ಅಕ್ಕಿಯನ್ನು ಹಾಕ್ತಾರೆ. ನಂತರ ಅದರ ಮೇಲೆ ದೇಸಿ ಹಸುವಿನ ತುಪ್ಪದ ದೀಪವನ್ನು ಇಡ್ತಾರೆ. ಹೂಜಿಯ ಬಾಯನ್ನು ಮಣ್ಣಿನ ಮುಚ್ಚಳದಿಂದಲೇ ಮುಚ್ಚಿ, ಪಾತ್ರೆಯ ಕಂಠದ ಸುತ್ತ ಹಗ್ಗವೊಂದನ್ನು ಕಟ್ಟಿ, ಮನೆಯ ಹೊರಭಾಗದಲ್ಲಿ, ಎತ್ತರದಲ್ಲಿ ಅದನ್ನು ನೇತುಹಾಕ್ತಾರೆ. ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರೋ ಈ ಸಂಪ್ರದಾಯ ಇಂದಿಗೂ ಮುಂದುವರಿಯುತ್ತಿದೆ.

ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್