AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day: ಲೈನ್ ಹೊಡೆದ್ರೆ ಬೀಳ್ತಾಳ, ಅವಳಿಗೆ ಬೇರೆ ಲವ್ವರ್ ಇದಾನಾ? ಎಂದು ಕೇಳಿಕೊಂಡೇ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿದ್ದೆ

My Love Story: ಮಾತಿನಲ್ಲಿ ಗಟ್ಟಿಗಿತ್ತಿಯಾಗಿ, ನಿಲುವುಗಳಲ್ಲಿ ಶಕ್ತಳಾಗಿ, ಒಂದರ್ಥದಲ್ಲಿ ನನ್ನ ಕನಸ ಶಿಲ್ಪಿಯಾಗಿ, ಒಮ್ಮೊಮ್ಮೆ ಜಗಳಗಂಟಿಯಾಗಿ, ಮಿತಿ ಮೀರಿದಾಗ ಚಂಡಿಯಾಗಿ, ಈಗೀಗ ಮೌನಿಯಾಗಿ ನನ್ನೊಡನೆ ಸಾಗುತ್ತಾ ಬಂದ ಅವಳಿಗೆ ನಾನು ಪ್ರೇಮಿಗಳ ದಿನದಂದು ಏನೆಂದು ಹೇಳಲಿ?

Valentine's Day: ಲೈನ್ ಹೊಡೆದ್ರೆ ಬೀಳ್ತಾಳ, ಅವಳಿಗೆ ಬೇರೆ ಲವ್ವರ್ ಇದಾನಾ? ಎಂದು ಕೇಳಿಕೊಂಡೇ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿದ್ದೆ
ಏಕಾಏಕಿ ನನ್ನ ಮನದರಸಿಯಾದವಳು.
Skanda
|

Updated on: Feb 13, 2021 | 7:10 PM

Share

ಆ ದಿನ ನನಗಿನ್ನೂ ನೆನಪಿದೆ ಸೋಮಾರಿಯಂತೆ ಮಂಚದ ಮೇಲೆ ಬೋರಲು ಬಿದ್ದುಕೊಂಡು ಮೊಬೈಲ್ ತಿಕ್ಕುತ್ತಿದ್ದ ನನ್ನನ್ನು, ಅವಳ ಕನ್ನಡಕಗಳ ಸಂದಿಯ ಚೆಲುವಾದ ಕಂಗಳಿಂದ, ಫೋಟೋಗೆ ಪೋಸು ನೀಡುವಷ್ಟು ಮಾತ್ರ ನಗೆ ಬೀರುತ್ತಿದ್ದ ಕೆಂದುಟಿಗಳ ಕೆಂಪಿನಿಂದ, ಹೊಳಪು ಮುಖದ ಮುದ್ದಿನಿಂದ ಎಚ್ಚರಿಸಿ, ಎದೆಯ ಬಾಗಿಲು ಬಡಿದು ಒಳ ನುಗ್ಗಿ ಮನೆ ಮಾಡಿದ ದಿನ. ಅಂದು ಅವಳೇಕೆ ಅಷ್ಟು ಮುದ್ದಾಗಿ ಕಂಡಳೋ ನನಗೂ ಗೊತ್ತಿಲ್ಲ. ನಾನು ಹಿಂದೆ ನೋಡಿದ್ದ ಬೇರೆ ಹುಡುಗಿಯರಿಗಿಂತ ಬಲು ಸುಂದರಿಯೇನೂ ಅವಳಾಗಿರಲಿಲ್ಲ. ಮತ್ತೆ ಮತ್ತೆ ಅವಳನ್ನು ಭೇಟಿಯಾಗಿ, ಪದೇ ಪದೇ ನೋಡಿ ಇವಳು ಚಂದ ಎನಿಸಿಕೊಂಡವಳೂ ಅಲ್ಲ. ಗೆಳತಿಯೊಬ್ಬಳ ವಾಟ್ಸಾಪ್ ಸ್ಟೇಟಸ್ಸಿನಲ್ಲಿ ಕಾಣಿಸಿಕೊಂಡು ಪಟ್ಟನೆ ಮನ ಕದ್ದ ಕಿನ್ನರಿಯವಳು. ಗೆದ್ದರೆ ಅವಳ ಮನಸ್ಸನ್ನೇ ಗೆಲ್ಲಬೇಕು ಎಂದು ಸವಾಲೊಡ್ಡಿದವಳು. ಚಿತ್ರ ನೋಡಿಯೇ ಜಾರಿ ಬಿದ್ದೆಯಲ್ಲೋ ಎಂದು ನಕ್ಕು ಕಾಡಿದವಳು. ಏಕಾಏಕಿ ನನ್ನ ಮನದರಸಿಯಾದವಳು.

ಪ್ರೀತಿಯೆಂದರೆ ಹಾಗೆ, ಯಾರಿಗೆ, ಯಾವಾಗ, ಹೇಗೆ ಆಗುತ್ತೆ ಅಂತ ಊಹೆ ಮಾಡೋಕಾಗಲ್ಲ ಅಂತ ಹಿಂದೆ ಗೆಳೆಯನೊಬ್ಬ ಹೇಳಿದ್ದ. ಅವನಾಡಿದ್ದ ಮಾತು ಕೇಳಿ ಬಿದ್ದು ಬಿದ್ದು ನಕ್ಕು ಅವನ ಕಾಲೆಳೆದಿದ್ದೆ. ‘‘ನೀನು ರೋಮಿಯೋ, ಅವಳು ಜೂಲಿಯೆಟ್ ನಿಮ್ಮಿಬ್ರದ್ದೂ Love at first sight’’ ಎನ್ನುತ್ತಾ ಹಂಗಿಸಿದ್ದೆ. ಆದರೆ ಇಂದು ಅವನಾಡಿದ್ದ ಮಾತು ನಿಜವಾಗಿತ್ತು. ಹಿಂದೆಂದೂ ಕಂಡಿರದ ಹುಡುಗಿಯೊಬ್ಬಳು ಮನದ ಮನೆಯೊಳಗೆ ಒಲವಿನ ಅಡುಗೆ ಮಾಡಿ ಬಡಿಸಲು ತಯಾರಾಗಿದ್ದಳು. ಒಲವು ನನಗೆ ಮಾತ್ರ ಆಗಿದ್ದರಿಂದಲೋ ಏನೋ ಕಹಿ ಉಣಿಸುವಳೋ ಸಿಹಿ ಕೊಟ್ಟು ಸಂತೈಸುವಳೋ ಎಂಬ ಭಯ ನನ್ನ ಬೆನ್ನು ಹತ್ತಿತ್ತು. ನಂತರ ಇನ್ನೇನು, ಅವಳನ್ನು ನನ್ನವಳನ್ನಾಗಿಸಿಕೊಳ್ಳುವುದೇ ಮುಂದಿನ ಕಾರ್ಯಕ್ರಮ ಎಂದು ಫೋಟೋ ಹಾಕಿದ್ದ ಗೆಳತಿಗೆ ದುಂಬಾಲು ಬಿದ್ದು ಅವಳ ಬಗೆಗಿನ ವಿಚಾರಗಳನ್ನು ಕಲೆ ಹಾಕಿ, ‘‘ಲೈನ್ ಹೊಡೆದ್ರೆ ಬೀಳ್ತಾಳ, ಅವಳಿಗೆ ಬೇರೆ ಲವ್ವರ್ ಇದಾನಾ?’’ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿ, ಅವಳಿಗೆ ಫೇಸ್​ಬುಕ್‌ನಲ್ಲಿ ಒಂದು ಗೆಳೆತನದ ಕೋರಿಕೆ ಬಿಟ್ಟೆ. ಯಾರಿವನು ನನ್ನ ಬಗ್ಗೆ ಇಷ್ಟೊಂದು ವಿಚಾರಿಸಿದವನು ಎಂಬ ಕುತೂಹಲದಲ್ಲೇ ಕಾಯುತ್ತಿದ್ದಳೇನೋ ತಕ್ಷಣವೇ ಗೆಳೆತನಕ್ಕೆ ಸಮ್ಮತಿಯೂ ಸಿಕ್ಕಿತ್ತು. ಅಲ್ಲಿಂದ ಮುಂದೆ ಆರಂಭವಾಗಿದ್ದು ನಿಜವಾದ ಪೇಚಾಟ.

ಅಲ್ಲಿಯವರೆಗೂ ಸಿಕ್ಕ ಸಿಕ್ಕವರ ಬಳಿ ಬಾಯಿ ನೋವು ಬರುವಷ್ಟು ಮಾತನಾಡುತ್ತಿದ್ದ ನಾನು, ಇವಳ ಬಳಿ ಮಾತಾಡಲು ಹೆದರುತ್ತಿದ್ದೆ. ನಾನು ಹೀಗೆ ಹೇಳಿದರೆ, ಅವಳು ಹಾಗೆ ಅರ್ಥ ಮಾಡಿಕೊಂಡರೆ ಎಂಬೆಲ್ಲಾ ಚಿಂತೆಗಳು. ಹಾಗೂ ಹೀಗೂ ಮಾತನಾಡಿ ನಾನು ಪ್ರೀತಿಸಲು, ಜೊತೆಯಾಗಿ ನಿಲ್ಲಲು ಯೋಗ್ಯ ಎಂದು ಅವಳಿಗೆ ಮನವರಿಕೆ ಮಾಡಿಸಿ ಕೊನೆಗೊಂದು ದಿನ ನನ್ನ ಮನದ ಪ್ರೀತಿಯನೆಲ್ಲಾ ಹೇಳಿಬಿಟ್ಟೆ. ಸಮಯ ಬೇಕು ಎಂದವಳು ಮಾರನೆಯ ದಿನ ಬೆಳಗ್ಗೆಯೇ ಅಸ್ತು ಎಂದಳು. ಅಂದಿನಿಂದ ಎದ್ದರೆ, ಬಿದ್ದರೆ, ಸೋತರೆ, ಕಂಗೆಟ್ಟರೆ ಧೈರ್ಯ ತುಂಬಿ ಪ್ರೋತ್ಸಾಹ ನೀಡಿ. ತಪ್ಪಾದಾಗ ತಾಯಿಯಂತೆ ಗದರಿ, ಗೆದ್ದಾಗ ಮುದ್ದಿಸಿ, ಪೆಟ್ಟಾದಾಗ ನನಗಿಂತ ನೋವು ತಿಂದು ದುಃಖಿಸಿ, ಪ್ರೀತಿಯೆಂದರೆ ಬರೀ ಕೊಳ್ಳು ಕೊಡುವಿಕೆಯಲ್ಲ ಹಂಚಿಕೊಳ್ಳುವಿಕೆ ಎಂಬುದನ್ನು ಮನದಟ್ಟು ಮಾಡಿಸಿ ಜೊತೆ ಸಾಗುತ್ತಾ ಬಂದಳು.

ಇದನ್ನೂ ಓದಿ: ನಾವಿಬ್ರೂ ಒಂದೇ ಆಸ್ಪತ್ರೆಯಲ್ಲಿ ಹುಟ್ಟಿದ್ದು.. ನಮ್ಮ ಲವ್​ ಸ್ಟೋರಿಯನ್ನ ಎಲ್ಲಿಂದ ಶುರುಮಾಡ್ಲಿ?

ಮಾತಿನಲ್ಲಿ ಗಟ್ಟಿಗಿತ್ತಿಯಾಗಿ, ನಿಲುವುಗಳಲ್ಲಿ ಶಕ್ತಳಾಗಿ, ನನಗಾಗಿ ಹಲವು ವಿಚಾರಗಳಲ್ಲಿ ತ್ಯಾಗಿಯಾಗಿ, ಒಂದರ್ಥದಲ್ಲಿ ನನ್ನ ಕನಸ ಶಿಲ್ಪಿಯಾಗಿ, ಒಮ್ಮೊಮ್ಮೆ ಜಗಳಗಂಟಿಯಾಗಿ, ಮಿತಿ ಮೀರಿದಾಗ ಚಂಡಿಯಾಗಿ, ಈಗೀಗ ಮೌನಿಯಾಗಿ ನನ್ನೊಡನೆ ಸಾಗುತ್ತಾ ಬಂದ ಅವಳಿಗೆ ನಾನು ಪ್ರೇಮಿಗಳ ದಿನದಂದು ಏನೆಂದು ಹೇಳಲಿ? ಧನ್ಯವಾದ ಹೇಳಲು ಅವಳು ಹೊರಗಿನವಳಲ್ಲ. ನನ್ನವಳು, ನನ್ನಲ್ಲೇ ಬೆರೆತವಳು, ಬೆರೆತು ಒಂದಾದವಳು. ಪ್ರೇಮ ನಿವೇದನೆ ಮಾಡಿಕೊಳ್ಳಲು ನನಗೆ ಈಗಾಗಲೇ ದಕ್ಕಿದವಳು. ಕೇಳಬಹುದಾಗಿದ್ದು ಇಷ್ಟೇ, ಒಮ್ಮೆ ತಾಯಿಯಾಗಿ, ಮತ್ತೊಮ್ಮೆ ಸಂಗಾತಿಯಾಗಿ, ಇನ್ನೊಮ್ಮೆ ಸತಿಯಾಗಿ, ಕೆಲವೊಮ್ಮೆ ಸುತೆಯಾಗಿ, ಒಂದು ಹೆಣ್ಣು ಒಬ್ಬ ಹುಡುಗನ ಜೀವನದಲ್ಲಿ ಯಾವೆಲ್ಲಾ ಪಾತ್ರ ವಹಿಸಬಹುದೋ ಆ ಎಲ್ಲಾ ಪಾತ್ರಗಳಾಗಿ, ನನ್ನವಳಾಗಿ, ನನ್ನ ಮನದ ಸಾಮ್ರಾಜ್ಯದ ಪಟ್ಟದರಸಿಯಾಗಿ ಜೀವನದ ಉದ್ದಕ್ಕೂ ನನ್ನೊಡನೆ ಕೈ ಹಿಡಿದು ನಡೆ. ನಡೆಯಲು ಇನ್ನೂ ಸಾವಿರಾರು ಮೈಲಿಗಳಿವೆ, ನೂರಾರು ನೆನಪುಗಳ ಬುತ್ತಿ ಕಟ್ಟುವುದು ಬಾಕಿ ಇದೆ. ಹತ್ತಾರು ಕನಸುಗಳ ನನಸಾಗಿಸಿಕೊಳ್ಳುವ ಕಾರ್ಯಕ್ರಮ ಹಾಗೇ ಉಳಿದಿದೆ. ನಗು ನಗುತಾ, ಹುಸಿ ಕೋಪವನ್ನು ನನ್ನ ಮೇಲೆ ತೋರುತ್ತಾ, ಆಗಾಗ ಮುದ್ದಿಸುತ್ತಾ ಎದುರು ನೋಡುತ್ತಿರು. ಗೆದ್ದು ಬರುವೆ, ನಿನ್ನವನ ಮೇಲೆ ನಿನಗಿರುವ ನಂಬಿಕೆಯನ್ನು ನಿಜವಾಗಿಸುತ್ತಾ.

ಅಭಿರಾಮ ಶರ್ಮ

Follow Us
20ಕ್ಕೂ ಹೆಚ್ಚು ‘ಕೈ’ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಜಯಚಂದ್ರ
20ಕ್ಕೂ ಹೆಚ್ಚು ‘ಕೈ’ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಜಯಚಂದ್ರ
'ಅವನ ದೋಸ್ತನೇ ಮನೆಗೆ ನುಗ್ಗಿ ಕೊಂದಿದ್ದು!': ಫೈರೋಜ್ ತಾಯಿ
'ಅವನ ದೋಸ್ತನೇ ಮನೆಗೆ ನುಗ್ಗಿ ಕೊಂದಿದ್ದು!': ಫೈರೋಜ್ ತಾಯಿ
PSL 2026: ಪಿಎಸ್​ಎಲ್​ನಲ್ಲಿ ಹಿಂದೆಂದೂ ಕಂಡರಿಯದ ಗೆಲುವು
PSL 2026: ಪಿಎಸ್​ಎಲ್​ನಲ್ಲಿ ಹಿಂದೆಂದೂ ಕಂಡರಿಯದ ಗೆಲುವು
ಯೂತ್ ಕಾಂಗ್ರೆಸ್​ನ ಫೈರೋಜ್ ಪಠಾಣ್​ ಕೊಲೆ ಬಗ್ಗೆ ಸ್ಫೋಟಕ ಮಾಹಿತಿ ಬಯಲು!
ಯೂತ್ ಕಾಂಗ್ರೆಸ್​ನ ಫೈರೋಜ್ ಪಠಾಣ್​ ಕೊಲೆ ಬಗ್ಗೆ ಸ್ಫೋಟಕ ಮಾಹಿತಿ ಬಯಲು!
ಅನನ್ಯಾಗಾಗಿ ಅದ್ಭುತವಾಗಿ ಹಾಡು ಹೇಳಿದ ಅಂಕಿತಾ ಅಮರ್
ಅನನ್ಯಾಗಾಗಿ ಅದ್ಭುತವಾಗಿ ಹಾಡು ಹೇಳಿದ ಅಂಕಿತಾ ಅಮರ್
ಇಂಜಿನಿಯರ್ ಮನೇಲಿತ್ತು 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 14 ಕೋಟಿ ಆಸ್ತಿ!
ಇಂಜಿನಿಯರ್ ಮನೇಲಿತ್ತು 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 14 ಕೋಟಿ ಆಸ್ತಿ!
2nd PUCಯಲ್ಲಿ 6ನೇ ರ‍್ಯಾಂಕ್ ಗಳಿಸಿದ ವಿಕಾಸ್ ಹೇಳಿದ್ದೇನು ನೋಡಿ!
2nd PUCಯಲ್ಲಿ 6ನೇ ರ‍್ಯಾಂಕ್ ಗಳಿಸಿದ ವಿಕಾಸ್ ಹೇಳಿದ್ದೇನು ನೋಡಿ!
25 ವರ್ಷಗಳ ಬಳಿಕ ರೀ-ರಿಲೀಸ್ ಆದ ಕೋಟಿಗೊಬ್ಬ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್
25 ವರ್ಷಗಳ ಬಳಿಕ ರೀ-ರಿಲೀಸ್ ಆದ ಕೋಟಿಗೊಬ್ಬ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್
ಚಂದ್ರನ ಅಂಗಳ ಸುತ್ತಿ ಭೂಮಿಗೆ ಸುರಕ್ಷಿತವಾಗಿ ವಾಪಸಾದ ನಾಸಾ ತಂಡ
ಚಂದ್ರನ ಅಂಗಳ ಸುತ್ತಿ ಭೂಮಿಗೆ ಸುರಕ್ಷಿತವಾಗಿ ವಾಪಸಾದ ನಾಸಾ ತಂಡ
ಪಾಕಿಸ್ತಾನದಲ್ಲಿಂದು ಶಾಂತಿ ಮಾತುಕತೆ: ಇಸ್ಲಾಮಾಬಾದ್ ಕಂಪ್ಲೀಟ್ ಲಾಕ್​ಡೌನ್!
ಪಾಕಿಸ್ತಾನದಲ್ಲಿಂದು ಶಾಂತಿ ಮಾತುಕತೆ: ಇಸ್ಲಾಮಾಬಾದ್ ಕಂಪ್ಲೀಟ್ ಲಾಕ್​ಡೌನ್!