AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ವರ ನಿವಾರಣೆಗೆ ಅನಾದಿ ಕಾಲದಿಂದಲೂ ಶೀತಲಾದೇವಿಯ ಪೂಜಿಸುತ್ತಾ ಬಂದಿದ್ದಾರೆ ಇಲ್ಲಿಯ ಜನ

Fever| ಶೀತ, ಜ್ವರಕ್ಕೆ ಉತ್ತರದ ಬಂಗಾಳ, ಒಡಿಸ್ಸಾ ರಾಜ್ಯಗಳಲ್ಲಿ ರೋಗಗಳನ್ನು ವಾಸಿ ಮಾಡುವ ದೇವತೆಯಾಗಿ ಶೀತಲಾದೇವಿಯನ್ನು ಆರಾಧಿಸ್ತಾರೆ.

ಜ್ವರ ನಿವಾರಣೆಗೆ ಅನಾದಿ ಕಾಲದಿಂದಲೂ ಶೀತಲಾದೇವಿಯ ಪೂಜಿಸುತ್ತಾ ಬಂದಿದ್ದಾರೆ ಇಲ್ಲಿಯ ಜನ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
|

Updated on: Apr 27, 2021 | 6:50 AM

Share

ಮಹಾಮಾರಿ ಕೊರೊನಾ ದೇಶಕ್ಕೆ ಒಕ್ಕರಿಸಿದೆ. ಸಾಮಾನ್ಯ ಶೀತವು ಕೂಡ ಹೆಮ್ಮಾರಿ ಕಾಯಿಲೆಯಾಗಿ ಕಾಡುವ ಕಾಲ ಬಂದಿದೆ. ಅದರಲ್ಲೂ ಮಕ್ಕಳನ್ನು ಎಷ್ಟು ಕಣ್ಣಲ್ಲಿ ಕಣ್ಣಿಟ್ಟು ಜೋಪಾನವಾಗಿ ನೋಡಿಕೊಂಡರೂ ಹಲವು ರೀತಿಯ ರೋಗಗಳು ಕಾಡೋದುಂಟು. ಆದ್ರೆ ಈಗಿನ ಕಾಲದಲ್ಲಿ ಸುಧಾರಿತ ವೈದ್ಯಕೀಯ ಸೌಲಭ್ಯಗಳಿಂದಾಗಿ ಕೆಮ್ಮು, ಜ್ವರ ಕಾಣಿಸಿಕೊಂಡರೂ ಪೋಷಕರು ತರಹೇವಾರಿ ವೈದ್ಯಕೀಯ ಚಿಕಿತ್ಸೆ ಕೊಡಿಸ್ತಾರೆ.

ಪರಿಣಾಮ ಮಕ್ಕಳಿಗೆ ರೋಗಗಳ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಕುಗ್ಗಿ ಹೋಗಿದೆ. ಆದ್ರೆ ಹಿಂದಿನ ಕಾಲದಲ್ಲಿ ಈಗಿನಂತೆ ಅಗತ್ಯವಾದ ವೈದ್ಯಕೀಯ ಸೌಲಭ್ಯಗಳಾಗಲೀ, ರೋಗಗಳಿಗೆ ತಕ್ಕ ಮೆಡಿಸಿನ್ಗಳಾಗಲೀ ಸಿಗುತ್ತಿರಲಿಲ್ಲ. ಹಾಗಂತಾ ಕಾಯಿಲೆ ಬಂದವರೆಲ್ಲಾ ಗುಣಮುಖರಾಗದೇ ಸಾವನ್ನಪ್ಪುತ್ತಿರಲಿಲ್ಲ. ಚಿಕ್ಕ ಪುಟ್ಟ ಕಾಯಿಲೆಗಳಿಗೆ ಆಯುರ್ವೇದ ಶಾಸ್ತ್ರದ ಸಹಾಯದಿಂದ ನಾನಾ ಬಗೆಯ ಸಿದ್ಧೌಷಧಗಳನ್ನು ನಮ್ಮ ಪೂರ್ವಜರು ಕಂಡುಕೊಂಡಿದ್ದರು. ಮನೆಯಲ್ಲೇ ಔಷಧಗಳನ್ನು ತಯಾರಿಸಿಕೊಂಡು ಸೇವಿಸಿ ಗುಣಮುಖರಾಗ್ತಾ ಇದ್ರು. ಒಂದು ವೇಳೆ ಕಾಯಿಲೆಗಳು ಉಲ್ಬಣಿಸಿದಾಗ ದೈವದ ಮೊರೆ ಹೋಗ್ತಿದ್ರು.

ದೈವಕ್ಕೆ ಹರಕೆ ಕಾಯಿಲೆಗಳು ವಾಸಿಯಾದ ನಂತರ ಆ ದೈವಗಳಿಗೆ ವಿವಿಧ ಬಗೆಯ ಹರಕೆಗಳನ್ನು ಸಲ್ಲಿಸುತ್ತಿದ್ರು. ಆದ್ರೆ ನಾವಿಂದು ಅವನ್ನೆಲ್ಲಾ ಮೂಢನಂಬಿಕೆ ಎಂದು ಮೂದಲಿಸುತ್ತೇವೆ. ಆದ್ರೆ ಇಂದಿಗೂ ಭಾರತದ ಕೆಲವೆಡೆ ಜ್ವರ, ಶೀತದಂತಹ ಸಮಸ್ಯೆಗಳು ಉಲ್ಬಣಿಸಿದಾಗ ದೇವರ ಆರಾಧನೆ ಮಾಡ್ತಾರೆ. ಹೀಗೆ ಶೀತ, ಜ್ವರಕ್ಕೆ ಉತ್ತರದ ಬಂಗಾಳ, ಒಡಿಸ್ಸಾ ರಾಜ್ಯಗಳಲ್ಲಿ ರೋಗಗಳನ್ನು ವಾಸಿ ಮಾಡುವ ದೇವತೆಯಾಗಿ ಶೀತಲಾದೇವಿಯನ್ನು ಆರಾಧಿಸ್ತಾರೆ.

ಶಕ್ತಿ ಸ್ವರೂಪಿಣಿಯಾದ ಜಗದಾಂಬೆಯು ತನ್ನ ಅನಂತ ಅನುಗ್ರಹವನ್ನು ವಿವಿಧ ರೀತಿಯಲ್ಲಿ ನೀಡಲು ಧರಿಸಿದ ರೂಪಗಳಲ್ಲಿ ಶೀತಲಾದೇವಿಯ ರೂಪವೂ ಒಂದು. ಕತ್ತೆಯ ವಾಹನದ ಮೇಲೆ ಕುಳಿತು ಮೊರ, ಪೊರಕೆ, ಕಲಶದೊಂದಿಗೆ ಇರುವ ಈ ದೇವಿಯು ರೋಗನಾಶಕ ಶಕ್ತಿಗಳ ಸಂಕೇತವಾಗಿದ್ದಾಳೆ. ಈ ದೇವಿಯ ಬಳಿ ಬಂದು ಹರಕೆ ಹೊತ್ತರೆ ರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇಲ್ಲಿಯ ಜನರದ್ದು. ಇದಕ್ಕೆ ಪೂರಕವೆಂಬಂತೆ ದಕ್ಷಿಣ ಭಾರತದಲ್ಲಿಯೂ ಸಹ ವಿವಿಧ ರೋಗಗಳಿಗೆ ಅಮ್ಮನವರನ್ನು, ಗ್ರಾಮ ದೇವತೆಯನ್ನು ಪೂಜಿಸುವ ಪದ್ಧತಿ ಅನಾದಿಕಾಲದಿಂದಲೂ ಇದೆ.

ಇದನ್ನೂ ಓದಿ: ಕೊರೊನಾ ಮುಕ್ತಿಗೆ ದೇವರ ಮೊರೆ ಹೋದ ಕೊಡಗು ಜನರು

ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್