AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮನ್ಯುವಿನ ಮಗನಿಗೂ ಆಗಿತ್ತೇ ವಿಶ್ವರೂಪದರ್ಶನ? ಶ್ರೀಕೃಷ್ಣನ ಈ ರೂಪ ದರ್ಶನದ ಕಥೆ ಇಲ್ಲಿದೆ

ಸನಾತನ ಸಂಸ್ಕೃತಿಯ ಮೇಲೆ ಶ್ರದ್ಧೆಯಿರುವ ಆಸ್ತಿಕರಿಗೆ ಭಗವಾನ್ ಶ್ರೀಕೃಷ್ಣನ ವಿಶ್ವರೂಪ ದರ್ಶನದ ಬಗ್ಗೆ ತಿಳಿದೇ ಇದೆ. ವಿಶ್ವರೂಪ ದರ್ಶನವೆಂದಾಗ ಕಣ್ಣಮುಂದೆ ಬರುವುದು ಮೊದಲು ತಾಯಿ ಯಶೋದೆಗೆ ಬಾಯಿಯಲ್ಲಿ ಜಗವ ತೋರಿದ ಕ್ಷಣ ಮತ್ತು ಗೀತೋಪದೇಶದ ಸಮಯ.

ಅಭಿಮನ್ಯುವಿನ ಮಗನಿಗೂ ಆಗಿತ್ತೇ ವಿಶ್ವರೂಪದರ್ಶನ? ಶ್ರೀಕೃಷ್ಣನ ಈ ರೂಪ ದರ್ಶನದ ಕಥೆ ಇಲ್ಲಿದೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Mar 03, 2023 | 9:55 AM

Share

ಸನಾತನ ಸಂಸ್ಕೃತಿಯ ಮೇಲೆ ಶ್ರದ್ಧೆಯಿರುವ ಆಸ್ತಿಕರಿಗೆ ಭಗವಾನ್ ಶ್ರೀಕೃಷ್ಣನ ವಿಶ್ವರೂಪ ದರ್ಶನದ ಬಗ್ಗೆ ತಿಳಿದೇ ಇದೆ. ವಿಶ್ವರೂಪ ದರ್ಶನವೆಂದಾಗ ಕಣ್ಣಮುಂದೆ ಬರುವುದು ಮೊದಲು ತಾಯಿ ಯಶೋದೆಗೆ ಬಾಯಿಯಲ್ಲಿ ಜಗವ ತೋರಿದ ಕ್ಷಣ ಮತ್ತು ಗೀತೋಪದೇಶದ ಸಮಯ. ಇದಲ್ಲದೆ ಭಗವಂತನು ಮತ್ತು ಒಂದು ಸಲ ತನ್ನ ಸ್ವರೂಪದರ್ಶನ ಮಾಡಿಸಿರುತ್ತಾನೆ. ಅದು ಅಭಿಮನ್ಯು ಪುತ್ರನಾದ ಭಾಗವತೋತ್ತಮ ರಾಜಾ ಪರೀಕ್ಷಿತನಿಗೆ. ಹೌದು ಅಶ್ವತ್ಥಾಮ ಪಾಂಡವರ ಮೇಲೆ ಎರಡು ಬಾರಿ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಾನೆ. ಮೊದಲನೇಯದ್ದು ದ್ರೌಪದಿಯ ಐವರು ಮಕ್ಕಳನ್ನು ಅಶ್ವತ್ಥಾಮ ಹತ್ಯೆ ಮಾಡಿದಾಗ ಅವನ ಮೇಲೆ ಅರ್ಜುನ ಯುದ್ಧ ಸಾರಿ ದಾಳಿ ನಡೆಸುವ ಸಂದರ್ಭದಲ್ಲಿ ಭಯಭೀತನಾದ ಅಶ್ವತ್ಥಾಮ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾನೆ. ಎರಡನೇಯ ಸಲ ಸಾಕಷ್ಟು ಅವಮಾನಿತನಾಗಿದ್ದರೂ ಪಾಠ ಕಲಿಯದ ಅಶ್ವತ್ಥಾಮ ಪುನಃ ಅಭಿಮನ್ಯುವಿನ ಸಂತಾನ ಉತ್ತರೆಯ ಗರ್ಭದಲ್ಲಿ ಬೆಳೆಯುತ್ತಿರುವುದನ್ನು ತಿಳಿದ ಅಶ್ವತ್ಥಾಮ ಪಾಂಡವರ ವಂಶದ ನಿರ್ವಂಶಕ್ಕಾಗಿ ಅವಳ ಗರ್ಭದ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಾನೆ.

ಭಯಭೀತಳಾದ ಉತ್ತರೆ ಕೃಷ್ಣನನ್ನು ಪಾರ್ಥಿಸುತ್ತಾಳೆ. ಬ್ರಹ್ಮಾಸ್ತ್ರದ ತೇಜಸ್ಸು ಉತ್ತರೆಯ ಗರ್ಭದಲ್ಲಿರುವ ಶಿಶುವನ್ನು ಸುಡುಲು ಧಾವಿಸಿ ಬರುತ್ತಿರುವಾಗ ಗರ್ಭದಲ್ಲಿರುವ ವೀರ ಶಿಶುವಿನ ಮುಂದೆ ಪೀತಾಂಬರ ಧಾರಿಯಾದ ಅದ್ಭುತವಾದ ತೇಜಸ್ಸು ಗರ್ಭವನ್ನು ಆವರಿಸಿತಂತೆ. ಅದನ್ನು ವ್ಯಾಸರು ಈ ರೀತಿ ವರ್ಣಿಸುತ್ತಾರೆ ಆ ಚೈತನ್ಯ ಅಣುವಿನಲ್ಲಿ ಅಣುವಾಗಿಯೂ ಮಹತ್ತಾದ್ದರಲ್ಲಿ ಅತ್ಯಂತ ಮಹತ್ತಾಗಿಯೂ ಇತ್ತು. ಅಲ್ಲದೇ ಗಾತ್ರ ಸಣ್ಣಕ್ಕಿದ್ದರೂ ಅದರ ತೇಜಸ್ಸಿನ ಮುಂದೆ ಬ್ರಹ್ಮಾಸ್ತ್ರವೂ ಕಾಣದಾಯಿತು ಎಂದು. ಸೂರ್ಯನ ಕಿರಣ ಲೀಲಾಜಾಲವಾಗಿ ಮಂಜನ್ನು ಹೊಡೆದೋಡಿಸುವಂತೆ ಅಭಿಮನ್ಯುವಿನ ಪತ್ನಿ ಉತ್ತರೆಯ ಗರ್ಭದಲ್ಲಿರುವ ಶಿಶುವಿನ ಕಡೆ ಬಂದಂತಹ ಬ್ರಹ್ಮಾಸ್ತ್ರವನ್ನು ನಿಸ್ತೇಜಗೊಳಿಸಿತು. ತಂದೆಯಾದ ಅಭಿಮನ್ಯು ಗರ್ಭದಲ್ಲಿರುವಾಗ ಯುದ್ಧಕಲೆ ಕಲಿತಂತೆ. ಅವನ ಮಗನು ಗರ್ಭದಲ್ಲಿರುವಾಗಲೇ ಭಗವಂತನ ಪೂರ್ಣ ರೂಪವನ್ನು ನೋಡಿ ನೀನಾರು ಎಂದು ಪ್ರಶ್ನಿಸಿದನಂತೆ.

ಇದನ್ನೂ ಓದಿ: Spiritual: ದುಷ್ಟನಾದರೂ ರಾವಣನಲ್ಲಿ ಕಂಡ ಒಂದು ಒಳ್ಳೆಯ ಗುಣ, ರಾವಣನಿಗೆ ಯಾರ ಶಾಪ?

ಭಗವಂತನ ಸ್ವರೂಪದರ್ಶನ ಫಲದಿಂದಲೇ ಅರ್ಜುನನ ದುಃಖನಾಶವಾಗಿ ಧರ್ಮ ಸಂರಕ್ಷೆಣೆ ಮಾಡುವಲ್ಲಿ ಯಶಸ್ವಿಯಾದ. ಅದೇ ರೀತಿ ಅವನ ಮೊಮ್ಮಗ ಅರ್ಥಾತ್ ಅಭಿಮನ್ಯುವಿನ ಪುತ್ರ ಪರೀಕ್ಷಿತ ಗರ್ಭದಲ್ಲೇ ಭಗವಂತನೆ ವಿಶ್ವರೂಪ ದರ್ಶನ ಪಡೆದು ಸುಲಗ್ನದಲ್ಲಿ ಎಲ್ಲಾ ಗ್ರಹರೂ ಅನುಕೂಲವಾಗಿರುವ ಘಳಿಗೆಯಲ್ಲಿ ಜನ್ಮ ಪಡೆಯುತ್ತಾನೆ.

ಅಲ್ಲದೇ ಪರಮ ಶ್ರೇಷ್ಠವಾದ ಭಾಗವತ ಮಹಾಪುರಾಣದ ಜನನಕ್ಕೆ (ರಚನೆಗೆ) ಕಾರಣೀಭೂತನಾಗುತ್ತಾನೆ. ಅರ್ಜುನ ಗೀತೆಗೆ ನಿಮಿತ್ತನಾದ ಭಗವತ್ಸ್ ರೂಪ ದರ್ಶನದಿಂದ. ಪರೀಕ್ಷಿತ ಭಾಗವತದ ರಚನೆಗೆ ಕಾರಣೀಭೂತನಾದ ಗರ್ಭದಲ್ಲೇ ಭಗವತ್ಸ್ ರೂಪ ಕಂಡು. ಭಗವದ್ಗೀತೆ ಮತ್ತು ಭಾಗವತವೆಂಬುದು ಭಗವಂತನ ವಿಶ್ವರೂಪ ದರ್ಶನದ ಕಾರಣದಿಂದಾಗಿದೆ ಮತ್ತು ಪಾಂಡು ವಂಶ ಇದಕ್ಕೆ ಮೂಲ ಹೇತುವಾಗಿದೆ. ಈ ಕಾರಣದಿಂದ ಅಭಿಮನ್ಯು ಪುತ್ರನಾದ ಪರೀಕ್ಷಿತನಿಗೂ ವಿಶ್ವರೂಪದರ್ಶನವಾಗಿದೆ ಎಂಬುದು ಸ್ಪಷ್ಟ.

ಡಾ.ಕೇಶವ ಕಿರಣ. ಬಿ

ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು

Published On - 9:54 am, Fri, 3 March 23

Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು