AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರುಡ ಪುರಾಣ- ಕಲಿಯುಗದಲ್ಲಿ ಸಾಮಾನ್ಯವಾದ 17 ಪಾಪಗಳು ನೇರವಾಗಿ ನರಕ ದರ್ಶನ ಮಾಡಿಸುತ್ತವೆ!

ಮಹಿಳೆಯನ್ನು ಕೊಲೆ ಮಾಡುವುದು, ಹೆಣ್ಣಿನ ಗೌರವವನ್ನು ಕಳಚುವುದು ಮತ್ತು ಅಂತಹ ಕೃತ್ಯ ನಡೆಯುತ್ತಿದ್ದರೂ ಮೂಕಪ್ರೇಕ್ಷಕರಾದವರು, ಗರ್ಭವತಿ ಮಹಿಳೆಗೆ ಹಾನಿ ಮಾಡುವುದು ಅಥವಾ ಅಂತಹವಳನ್ನು ಕೊಲ್ಲುವುದು ಮಹಾಪಾಪ. ಯಾರದೇ ನಂಬಿಕೆಗೆ ದ್ರೋಹ ಬಗೆಯುವುದು, ವಿಷವನ್ನು ಅಸ್ತ್ರವನ್ನಾಗಿ ಬಳಸಿ ಹತ್ಯೆ ಮಾಡುವುದು.

ಗರುಡ ಪುರಾಣ- ಕಲಿಯುಗದಲ್ಲಿ ಸಾಮಾನ್ಯವಾದ 17 ಪಾಪಗಳು ನೇರವಾಗಿ ನರಕ ದರ್ಶನ ಮಾಡಿಸುತ್ತವೆ!
ಗರುಡ ಪುರಾಣ- ಕಲಿಯುಗದಲ್ಲಿ ಸಾಮಾನ್ಯವಾದ 17 ಪಾಪಗಳು
ಸಾಧು ಶ್ರೀನಾಥ್​
|

Updated on: Feb 27, 2024 | 10:04 AM

Share

ಹಿಂದೂ ಧರ್ಮವು ಅತ್ಯಂತ ಹಳೆಯ ಧರ್ಮಗಳಲ್ಲಿ ಒಂದಾಗಿದೆ. ಇದನ್ನು ಸಾಮಾನ್ಯವಾಗಿ ಸನಾತನ ಧರ್ಮ, ಶಾಶ್ವತ ಮಾರ್ಗ, ನಿರಂತರ ಮಾರ್ಗ ಎಂದು ಕರೆಯಲಾಗುತ್ತದೆ. ಬ್ರಹ್ಮ ದೇವರಿಗೆ ಜೀವನದ ಪರಿಕಲ್ಪನೆಯ ಬೋಧಿಸುವ ಕರ್ತವ್ಯವನ್ನು ನೀಡಲಾಗಿದೆ ಎಂದು ಹೇಳಲಾಗುತ್ತದೆ. ಭಗವಾನ್ ವಿಷ್ಣುವು (Lord Vishnu) ತನ್ನ ವಾಹನವಾದ ಗರುಡನಿಗೆ ಧರ್ಮ, ಕರ್ಮ ಮತ್ತು ಪಾಪದ (Dharma, Karma and Paap) ಎಲ್ಲಾ ಜ್ಞಾನವನ್ನು ಬೋಧಿಸಿದರು. ಈ ಜ್ಞಾನ ಮತ್ತು ಸಂಭಾಷಣೆಯ ವಿನಿಮಯವು ಗರುಡ ಪುರಾಣದ (Garuda Purana) ಆರಂಭಕ್ಕೆ ಕಾರಣವಾಯಿತು. ನರಕ ಮತ್ತು ಸ್ವರ್ಗವಾಸಿಗಳ ಬಗ್ಗೆ ಗರುಡನು ವಿಷ್ಣುವನ್ನು ವಿಚಾರಿಸಿದಾಗ, ವಿಷ್ಣು ಹೀಗೆ ಹೇಳುತ್ತಾರೆ: ಯಾರು ಯಾವಾಗಲೂ ತಪ್ಪು ಕಾರ್ಯ ಮಾಡುವುದನ್ನು ಸಂತೋಷಪಡುತ್ತಾರೆ, ಒಳ್ಳೆಯ ಕಾರ್ಯಗಳಿಂದ ದೂರವಿರುತ್ತಾರೋ ಅಂತಹವರು ನರಕಕ್ಕೆ, ದುಃಖಕ್ಕೆ ಮತ್ತು ಭಯಕ್ಕೆ ಒಳಗಾಗುತ್ತಾರೆ.

ಕಲಿಯುಗದಲ್ಲಿ ಯಾರು ಈ ಕೆಳಗಿನ 17 ಪಾಪಗಳನ್ನು ಮಾಡುತ್ತಾರೋ ಅಂತಹವರು ವೈತರಣಿ ನದಿಯ ಯಾತನೆಯನ್ನು ನೇರವಾಗಿ ದಾಟಿಕೊಂಡು ನರಕಕ್ಕೆ ಹೋಗಿ, ಅಲ್ಲಿ ತಿರುಗುತ್ತಿರುತ್ತಾರೆ!

ದೇವರ ಸೇವೆಯಲ್ಲಿರುವ ಪುರೋಹಿತ ಬ್ರಾಹ್ಮಣನನ್ನು ಕೊಲ್ಲುವುದು, ಅಮಲೇರಿದ ಸ್ಥಿತಿಯಲ್ಲಿ ಬದುಕುವುದು, ಪವಿತ್ರ ವ್ರತಗಳು ಮತ್ತು ಭರವಸೆಗಳನ್ನು ಉಲ್ಲಂಘಿಸುವುದು, ಭ್ರೂಣವನ್ನು ಕೊಲ್ಲುವುದು ಮತ್ತು ಭ್ರೂಣವನ್ನು ನಾಶಪಡಿಸುವುದು ಘೋರ ಪಾಪವೆಂದು ಪರಿಗಣಿಸಲಾಗಿದೆ. ಇದರಿಂದ ನರಕದಲ್ಲಿ ತೀವ್ರವಾದ ಶಿಕ್ಷೆಗೆ ಕಾರಣವಾಗುತ್ತದೆ.

ಮಹಿಳೆಯನ್ನು ಕೊಲೆ ಮಾಡುವುದು, ಹೆಣ್ಣಿನ ಗೌರವವನ್ನು ಕಳಚುವುದು ಮತ್ತು ಅಂತಹ ಕೃತ್ಯ ನಡೆಯುತ್ತಿದ್ದರೂ ಮೂಕಪ್ರೇಕ್ಷಕರಾದವರು, ಗರ್ಭವತಿ ಮಹಿಳೆಗೆ ಹಾನಿ ಮಾಡುವುದು ಅಥವಾ ಅಂತಹವಳನ್ನು ಕೊಲ್ಲುವುದು ಮಹಾಪಾಪ.

ಯಾರದೇ ನಂಬಿಕೆಗೆ ದ್ರೋಹ ಬಗೆಯುವುದು, ವಿಷವನ್ನು ಅಸ್ತ್ರವನ್ನಾಗಿ ಬಳಸಿ ಹತ್ಯೆ ಮಾಡುವುದು.

ಪವಿತ್ರ ತೀರ್ಥಯಾತ್ರೆಗಳ ಸ್ಥಳಗಳನ್ನು ಕೀಳಾಗಿ ನೋಡುವುದು, ಒಳ್ಳೆಯ ಜನರನ್ನು ವಂಚಿಸುವುದು, ಯಾರಾದರೂ ಸಹಾಯ ಮಾಡಿದಾಗ ಅವಮಾನ ಮತ್ತು ನಿಂದನೆಯೊಂದಿಗೆ ಹಿಂದಿರುಗಿಸುವುದು; ಧಾರ್ಮಿಕ ಗ್ರಂಥಗಳು, ಪುರಾಣಗಳು, ವೇದಗಳು, ಮೀಮಾಂಸಾ, ನ್ಯಾಯ ಮತ್ತು ವೇದಾಂತಗಳ ಅಸ್ತಿತ್ವವನ್ನು ಕಡಿಮೆಗೊಳಿಸುವುದು.

ಅಸಹಾಯಕರ ಬಗ್ಗೆ ಕರುಣೆ ತೋರದವರನ್ನು ಮತ್ತು ದುರ್ಬಲರ ಶಿಕ್ಷಿಸುವವರನ್ನು ನೇರವಾಗಿ ನರಕಕ್ಕೆ ಕರೆದೊಯ್ಯಲಾಗುತ್ತದೆ.

ಅಗತ್ಯವಿರುವವರಿಗೆ ಉದ್ದೇಶಪೂರ್ವಕವಾಗಿ ಆಹಾರ ಮತ್ತು ನೀರನ್ನು ನೀಡದಿರುವುದು ಮತ್ತು ಅತಿಥಿಗಳಿಗೆ ಆಹಾರವನ್ನು ನೀಡದೆ ಮನೆಯ ಬಾಗಿಲಿನಿಂದ ವಾಪಸ್​ ಕಳುಹಿಸುವುದು.

ಇತರರಿಗೆ ಸಹಾಯ ಮಾಡಲು ಕೊಟ್ಟಿರುವುದನ್ನು ಕಸಿದುಕೊಳ್ಳುವವರು, ದಾನ ಧರ್ಮಗ ಬಗ್ಗೆ ಪಶ್ಚಾತ್ತಾಪ ಪಡುವವರು, ಬೇರೊಬ್ಬರ ಜೀವನೋಪಾಯವನ್ನು ತಮ್ಮ ಒಳಿತಿಗಾಗಿ ಕಸಿದುಕೊಳ್ಳುವುದು ಮಹಾಪಾಪ.

Also Read: ಗರುಡ ಪುರಾಣ – ಸಾವಿನ ರಹಸ್ಯದ ಬಗ್ಗೆ ಕೃಷ್ಣ ಪರಮಾತ್ಮ ಹೇಳಿದ ವೇದಾಂತ ಹೀಗಿದೆ

ಯಾರು ದೇವರ ಸೇವೆಯನ್ನೂ ಮಾಡುತ್ತಾ, ಆದರೆ ಮದ್ಯ ಮತ್ತು ಮಾಂಸದ ಖರೀದಿ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿರುವುದು, ತಮ್ಮ ಸಂಗಾತಿಯ ಹೊರತಾಗಿ ಇತರರೊಂದಿಗೆ ಸಂಬಂಧ ಬೆಳೆಸುವವರು.

ಸ್ವ ತೃಪ್ತಿಗಾಗಿ ಪ್ರಾಣಿಗಳನ್ನು ಕೊಲ್ಲುವುದು.

ರಾಜನ ಹೆಂಡತಿ, ಉದಾತ್ತ ಪುರುಷನ ಹೆಂಡತಿಯನ್ನು ಅಪೇಕ್ಷಿಸುವುದು ಮತ್ತು ಒಂದೇ ಕುಟುಂಬದ ಮಹಿಳೆಯರ ಬಗ್ಗೆ ಕಾಮವುಳ್ಳವನಾಗಿರುವುದು. ಯುವತಿಯರನ್ನು ಅವರ ಜ್ಞಾನ ಮತ್ತು ಇಚ್ಛೆಗೆ ವಿರುದ್ಧವಾಗಿ ನಿಂದಿಸುವುದು; ಮುಗ್ಧತೆಯ ಸದ್ಗುಣವನ್ನು ನಿಂದಿಸುವುದು – ಇದು ಪುರುಷ ಮತ್ತು ಮಹಿಳೆಗೂ ಅನ್ವಯವಾಗುತ್ತದೆ.

ಸುಳ್ಳು ಸಾಕ್ಷ್ಯ ನೀಡುವುದು, ನಿರಪರಾಧಿಗಳಿಗೆ ತೊಂದರೆ ಕೊಡಲು ಕೆಟ್ಟ ಕೆಲಸಗಳನ್ನು ಮಾಡುವುದು; ದುಷ್ಟರ ಕೈಯಲ್ಲಿ ಸತ್ಯವನ್ನು ನಾಶಪಡಿಸುವುದು ಘೋರ ಪಾಪಗಳು.

ಮರಗಳನ್ನು ಕಡಿಯುವ ಮೂಲಕ, ಬೆಳೆಗಳು ಮತ್ತು ಕಾಡುಗಳನ್ನು ನಾಶಪಡಿಸುವ ಮೂಲಕ, ಪ್ರಕೃತಿಯ ಆಶ್ರಯಗಳ ನಾಶ ಮಾಡುವ ಮೂಲಕ ಪ್ರಕೃತಿ ಮಾತೆಗೆ ಹಾನಿ ಮತ್ತು ವಿನಾಶವನ್ನು ತರುವುದು.

ವಿಧವೆಯರ ಗೌರವವನ್ನು ನಾಶಪಡಿಸುವುದು; ಮತ್ತು ಮದುವೆಯ ಸಂಬಂಧವನ್ನು ಮುರಿಯಲು ಪುರುಷನನ್ನು ವಶವಾಗಿಸಿಕೊಳ್ಲುವುದು ದೇವರ ದೃಷ್ಟಿಯಲ್ಲಿ ಸಮಾನ ಪಾಪಗಳು.

ಸಂಗಾತಿಯ ಮತ್ತು ಮಕ್ಕಳ ಅಗತ್ಯಗಳನ್ನು ನಿರ್ಲಕ್ಷಿಸುವುದು ಮತ್ತು ಅವರ ಮೇಲೆ ಆಕ್ರಮಣ ಮಾಡುವುದು; ಪೂರ್ವಜರನ್ನು – ಮನೆಯ ಹಿರಿಯರನ್ನು ನಿರ್ಲಕ್ಷಿಸುವುದರಿಂದ ನರಕ ಪ್ರಾಪ್ತಿಯಾಗುವುದು ನಿಶ್ಚಿತ.

ಶಿವ, ವಿಷ್ಣು, ಸೂರ್ಯ, ಗಣೇಶ ಮತ್ತು ದುರ್ಗೆಯನ್ನು ಪೂಜಿಸುವುದಿಲ್ಲ ಮತ್ತು ದೇವರಿಗೆ ಅಗೌರವ ತೋರುವವರು.

ದುರುದ್ದೇಶದಿಂದ ಮಹಿಳೆಗೆ ಆಶ್ರಯ ನೀಡುವ ನೆಪದಲ್ಲಿ ಅಪರಾಧ ಮಾಡುವವನು ಪಾಪಿ. ಮುಟ್ಟಿನ ಅವಧಿಯಲ್ಲಿ ಮತ್ತು ಶ್ರಾದ್ಧದ ಅವಧಿಯಲ್ಲಿ ಬಲವಂತವಾಗಿ ಮಹಿಳೆಯನ್ನು ಸೇರುವುದು ಮಹಾಪಾಪ.

ಯಾರು ತಮ್ಮ ದೇಹದ ವಿಸರ್ಜನೆಯನ್ನು ಪವಿತ್ರ ಅಗ್ನಿಯಲ್ಲಿ, ಪವಿತ್ರ ನೀರಿನಲ್ಲಿ, ಉದ್ಯಾನ ಅಥವಾ ಗೋಶಾಲೆಯಲ್ಲಿ ಎಸೆಯುತ್ತಾರೋ ಅಂತಹವರು ನರಕದಲ್ಲಿ ಯಮನಿಂದ ಪೀಡಿಸಲ್ಪಡುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು