Gita Supersite IITK: ಐಐಟಿ ಕಾನ್ಪುರ​​ ನಿರ್ಮಿಸಿದೆ ಭಗವದ್ಗೀತೆ ಕುರಿತಾದ ವೆಬ್​ಸೈಟ್! ಕನ್ನಡದಲ್ಲಿಯೂ ಇದೆ -ಇಲ್ಲಿದೆ ಸಂಪೂರ್ಣ ವಿವರ!

ಐಐಟಿ ಕಾನ್ಪುರ್​​ ನಿರ್ಮಿಸಿದೆ ಭಗವದ್ಗೀತೆ ಕುರಿತಾದ ವೆಬ್​ಸೈಟ್! ಕನ್ನಡ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಭಗವದ್ಗೀತೆಯನ್ನು ಪಠ್ಯಗಳಾಗಿ ಆಲಿಸಬಹುದು. ಆಡಿಯೊ ಜೊತೆಗೆ ಮೂಲ ಸಂಸ್ಕೃತ ಶ್ಲೋಕವನ್ನು ಸಹ ಒದಗಿಸುತ್ತದೆ. ಇದು ಭಗವದ್ಗೀತೆ ಮತ್ತು ಇತರ ಗ್ರಂಥಗಳ ಬಗ್ಗೆ ತಮ್ಮ ತಿಳಿವಳಿಕೆಯ ಆಳ ಅಗಲ ವಿಸ್ತರಿಸ ಬಯಸುವವರಿಗೆ ಅಮೂಲ್ಯವಾದ ಸಂಪನ್ಮೂಲವಾಗಿದೆ.

Gita Supersite IITK: ಐಐಟಿ ಕಾನ್ಪುರ​​ ನಿರ್ಮಿಸಿದೆ ಭಗವದ್ಗೀತೆ ಕುರಿತಾದ ವೆಬ್​ಸೈಟ್! ಕನ್ನಡದಲ್ಲಿಯೂ ಇದೆ -ಇಲ್ಲಿದೆ ಸಂಪೂರ್ಣ ವಿವರ!
ಐಐಟಿ ಕಾನ್ಪುರ್​​ನಲ್ಲಿದೆ ಭಗವದ್ಗೀತೆ ಕುರಿತಾದ ವೆಬ್​ಸೈಟ್
Follow us
|

Updated on:Feb 22, 2024 | 8:25 AM

ದೇಶದ ಸ್ವಾತಂತ್ರ್ಯಾನಂತರ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿರುವ ಪಶ್ಚಿಮ ಬಂಗಾಳದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ್ (Indian Institute of Technology Kanpur) ತನ್ನ ವೈಜ್ಞಾನಿಕ ಆವಿಷ್ಕಾರ ಮತ್ತು ಬಹುಮುಖಿ ತಾಂತ್ರಿಕ ಪ್ರಗತಿಯ ಹಾದಿಯಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಅದೊಂದು ರೀತಿಯ ಅಸಾಧಾರಣ ಖ್ಯಾತಿಯನ್ನು ನಿರ್ಮಿಸಿದೆ. ಈ ಮಧ್ಯೆ ಆಶ್ಚರ್ಯಕರವಾಗಿ ಸಂಸ್ಥೆಯ ವತಿಯಿಂದ ಹೆಗ್ಗುರುತಾದ ಬೆಳವಣಿಗೆ ಕಂಡುಬಂದಿದೆ. ಆದರೆ ಇದು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಇದ್ದರೂ ಇತ್ತೀಚೆಗೆ ಹೆಚ್ಚು ಪ್ರಚಾರಕ್ಕೆ ಬಂದಿದೆ. ಪ್ರೊ. ಟಿ.ವಿ ಪ್ರಭಾಕರ್ ಮತ್ತು ಅವರ ತಂಡ ಸಮರ್ಪಣಾ ಭಾವದಿಂದ ಶ್ರಮ ವಹಿಸಿ ಈ ಗೀತಾ ಸೂಪರ್‌ಸೈಟ್ Gita Supersite IITK ನಿರ್ಮಿಸಿದೆ. ಇಂದಿನ ಮಾಹಿತಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯೊಂದಿಗೆ ಗೀತಾ ಸೂಪರ್‌ಸೈಟ್ ಅಂದರೆ ಭಗವದ್ಗೀತೆ (Shrimad Bhagwat Gita) ಕುರಿತು ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡಿದೆ. ಭಾರತೀಯ ಗ್ರಂಥಗಳಲ್ಲಿರುವ ಪ್ರಾಚೀನ ಸನಾತನ ಜ್ಞಾನ ಸಂಪತ್ತು ಬಳಕೆದಾರ ಸ್ನೇಹಿ ಇಂಟರ್‌ಫೇಸ್ ಮೂಲಕ ಸಾಂದ್ರೀಕರಿಸಲ್ಪಟ್ಟಿದೆ.

“ಗೀತಾ ಸೂಪರ್‌ಸೈಟ್” ಐಐಟಿ ಕಾನ್ಪುರದ ಅಸಾಧಾರಣ ನಿಧಿಯಾಗಿದೆ. ಹೆಸರೇ ಸೂಚಿಸುವಂತೆ ಇದು ಶ್ರೀಮದ್ ಭಗವತ್ಗೀತೆಯನ್ನು ಕೇಂದ್ರೀಕರಿಸಿ ಭಾರತೀಯ ತತ್ವಶಾಸ್ತ್ರದ ಪಠ್ಯಗಳ ಸಮಗ್ರ ಆನ್‌ಲೈನ್ ಭಂಡಾರವಾಗಿದೆ. ತಾತ್ವಿಕ ಗ್ರಂಥಗಳಲ್ಲಿ ಒಳಗೊಂಡಿರುವ ಸಾಂಪ್ರದಾಯಿಕ ಭಾರತೀಯ ಜ್ಞಾನ ಸಂಪತ್ತಿನ ಮಹಾಸಾಗರವನ್ನು ಪ್ರಚಾರ ಮಾಡಲು ತಾಂತ್ರಿಕ ಪ್ರಗತಿಯ ಬಳಕೆಯಲ್ಲಿ ಹೆಗ್ಗುರುತು ಬೆಳವಣಿಗೆಯಾಗಿದೆ. ಅದರ ಭಾಷಾ ಬೆಂಬಲ ವೈಶಿಷ್ಟ್ಯಕ್ಕೆ ನೀವು ಧನ್ಯವಾದ ಹೇಳಲೇಬೇಕು. ವೇದಗಳು, ಪುರಾಣಗಳು, ಉಪನಿಷತ್ತುಗಳು, ಶ್ರೀಮದ್ ಭಗವತ್ಗೀತೆ, ಗೀತೆಯ ಪರ್ಯಾಯ ಆವೃತ್ತಿಗಳು, ಶ್ರೀರಾಮ ಚಾರಿತ್ ಮಾನಸ್, ವಾಲ್ಮೀಕಿ ರಾಮಾಯಣ, ಬ್ರಹ್ಮ ಸೂತ್ರ, ಯೋಗಸೂತ್ರಗಳು ಮೂಲತಃ ಸಂಸ್ಕೃತದಲ್ಲಿದೆ.

ಹಾಗಾಗಿ ಅದನ್ನೆಲ್ಲಾ ದೇಶದ ಇತರೆ ಭಾಷೆಗಳಲ್ಲಿಯೂ ಕನ್ನಡ ಸೇರಿದಂತೆ ಅಸ್ಸಾಮಿ, ಬೆಂಗಾಲಿ, ದೇವನಾಗರಿ, ಗುಜರಾತಿ, ಮಲಯಾಳಂ, ಒರಿಯಾ, ಪಂಜಾಬಿ, ರೋಮನ್, ತಮಿಳು ಮತ್ತು ತೆಲುಗು ಹೀಗೆ ಒಟ್ಟು 11 ಭಾಷೆಗಳಲ್ಲಿ ಪಠ್ಯಗಳಾಗಿ ಆಲಿಸಬಹುದು. ಆಡಿಯೊ ಜೊತೆಗೆ ಮೂಲ ಸಂಸ್ಕೃತ ಶ್ಲೋಕವನ್ನು ಸಹ ಒದಗಿಸುತ್ತದೆ. ವೆಬ್‌ಸೈಟ್ ವಿಭಿನ್ನ ಅನುವಾದಗಳು, ಲಿಪ್ಯಂತರಗಳು ಮತ್ತು ವ್ಯಾಖ್ಯಾನಗಳ ಆಡಿಯೊವನ್ನು ಸಹ ಹೊಂದಿದೆ. ಇದು ಭಗವದ್ಗೀತೆ ಮತ್ತು ಇತರ ಗ್ರಂಥಗಳ ಬಗ್ಗೆ ತಮ್ಮ ತಿಳಿವಳಿಕೆಯ ಆಳ ಅಗಲ ವಿಸ್ತರಿಸ ಬಯಸುವವರಿಗೆ ಅಮೂಲ್ಯವಾದ ಸಂಪನ್ಮೂಲವಾಗಿದೆ.

ಐಐಟಿ ಕಾನ್ಪುರದಲ್ಲಿ ಪಿಎಚ್‌ಡಿ ವ್ಯಾಸಂಗದ ವೇಳೆ ಸಂಸ್ಥೆಯ ಹಳೆಯ ವಿದ್ಯಾರ್ಥಿಯೊಬ್ಬರು, ತಮ್ಮ ಪಿಎಚ್‌ಡಿ ಅಂಗವಾಗಿ ಈ ಸೈಟ್ ಬಳಸಿದ್ದನ್ನು ನೆನಪಿಸಿಕೊಂಡಿದ್ದಾರೆ. ವೆಬ್‌ಸೈಟ್‌ನ ಅದ್ಭುತ ವೈಶಿಷ್ಟ್ಯಗಳನ್ನು ಪಟ್ಟಿ ಮಾಡಿದ್ದಾರೆ: ಮೊದಲನೆಯದಾಗಿ, ಇದು ಬಹುಭಾಷಾ ಸೈಟ್​; ಎರಡನೆಯದಾಗಿ, ಇದು ವ್ಯಾಖ್ಯಾನಗಳೊಂದಿಗೆ ಅಕ್ಷರಶಃ ಅರ್ಥಗಳನ್ನು ಒದಗಿಸುತ್ತದೆ; ಮೂರನೆಯದಾಗಿ, ಅವುಗಳ ಮೂಲಗಳೊಂದಿಗೆ ಬಹು ವ್ಯಾಖ್ಯಾನಗಳನ್ನು ಒದಗಿಸುತ್ತದೆ, ಮತ್ತು ನಾಲ್ಕು, ಇದು ಪರಿಣಾಮಕಾರಿಯಾಗಿ ಬಳಕೆದಾರ ಸ್ನೇಹಿಯಾಗಿದೆ.

ಇದನ್ನೂ ಓದಿ: ಬೇರೆಯರಿಗೆ ಕೆಟ್ಟದ್ದನ್ನು ಬಯಸುವ ವ್ಯಕ್ತಿಗಳಿಗೆ ವೈಯಕ್ತಿಕವಾಗಿ ಶಾಂತಿ ನೆಮ್ಮದಿ ಇರುವುದಿಲ್ಲ

ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ತಂಡವು ಐಐಟಿ ಕಾನ್ಪುರದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತದೆ. ಯೋಜನೆಯು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಧನಸಹಾಯ ಪಡೆದಿದೆ.

ತತ್ವಶಾಸ್ತ್ರ, ಆಧ್ಯಾತ್ಮಿಕತೆ, ಮಾಹಿತಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಮುಂದಿನ ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸುವ ಇಂತಹ ಅದ್ಭುತ ವೆಬ್‌ಸೈಟ್, “ಮೇಕ್ ಇನ್ ಇಂಡಿಯಾ” ಮತ್ತು “ಆತ್ಮನಿರ್ಭರ್ ಭಾರತ್” ಯುಗದಲ್ಲಿ ಬಹಳ ಸಮಯದಿಂದ ಮರೆಯಾಗಿದೆ. ಇದು ಬೌದ್ಧಿಕ ಬಂಡವಾಳ ಮತ್ತು ಸಾಮರ್ಥ್ಯಗಳಲ್ಲಿ ರಾಷ್ಟ್ರದ ಸಾಮೂಹಿಕ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಬಹಳ ದೂರ ಹೋಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:37 pm, Wed, 21 February 24

ತಾಜಾ ಸುದ್ದಿ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ವಾಪಸ್ಸಾಗಲು ಬಿಜೆಪಿಯಿಂದ ಕರೆ ಬಂದಿದೆ, ಅಭಿಪ್ರಾಯ ತಿಳಿಸಿಲ್ಲ: ಈಶ್ವರಪ್ಪ
ವಾಪಸ್ಸಾಗಲು ಬಿಜೆಪಿಯಿಂದ ಕರೆ ಬಂದಿದೆ, ಅಭಿಪ್ರಾಯ ತಿಳಿಸಿಲ್ಲ: ಈಶ್ವರಪ್ಪ
ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ
ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ
ಚಾರ್ಮಾಡಿ ಘಾಟ್ ಇಳುಕಲು ಪ್ರದೇಶದ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ
ಚಾರ್ಮಾಡಿ ಘಾಟ್ ಇಳುಕಲು ಪ್ರದೇಶದ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ
ವಿಧಾನಸಭೆಯಲ್ಲಿ ಮೆಜಾರಿಟಿಯ ಕಾರಣ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ
ವಿಧಾನಸಭೆಯಲ್ಲಿ ಮೆಜಾರಿಟಿಯ ಕಾರಣ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ
ದೇವರಮನೆ, ಚಾರ್ಮಾಡಿಯಲ್ಲಿ ರಸ್ತೆ ಮಧ್ಯೆ ವಾಹನ ನಿಲ್ಸಿ ಪ್ರವಾಸಿಗರ ಹುಚ್ಚಾಟ
ದೇವರಮನೆ, ಚಾರ್ಮಾಡಿಯಲ್ಲಿ ರಸ್ತೆ ಮಧ್ಯೆ ವಾಹನ ನಿಲ್ಸಿ ಪ್ರವಾಸಿಗರ ಹುಚ್ಚಾಟ
ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಕ್ಷಿತ್ ಶೆಟ್ಟಿ
ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಕ್ಷಿತ್ ಶೆಟ್ಟಿ
ಕಾರಲ್ಲಿ ಬಂದು ಪಾಟ್ ಕದಿಯುವ ಕಪಲ್ಸ್; ಸಿಸಿ ಟಿವಿಯಲ್ಲಿ ಸೆರೆ
ಕಾರಲ್ಲಿ ಬಂದು ಪಾಟ್ ಕದಿಯುವ ಕಪಲ್ಸ್; ಸಿಸಿ ಟಿವಿಯಲ್ಲಿ ಸೆರೆ
Daily Horoscope: ವಾಹನದಿಂದ ಅಪಘಾತ, ಸಣ್ಣ ಅಂತರದಿಂದ ಬಚಾವ್
Daily Horoscope: ವಾಹನದಿಂದ ಅಪಘಾತ, ಸಣ್ಣ ಅಂತರದಿಂದ ಬಚಾವ್
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು