Sign In

By signing in or creating an account, you agree with Associated Broadcasting Company's Terms & Conditions and Privacy Policy.

Falgun Month 2024: ಫಾಲ್ಗುಣ ಮಾಸದಲ್ಲಿ ಬರುವ ಪ್ರಮುಖ ವ್ರತ, ಹಬ್ಬಗಳ ಬಗ್ಗೆ ತಿಳಿದುಕೊಳ್ಳಿ

ಫಾಲ್ಗುಣ ತಿಂಗಳು ಧಾರ್ಮಿಕವಾಗಿ ಬಹಳ ವಿಶೇಷವಾಗಿದೆ. ಹೋಳಿ, ಮಹಾ ಶಿವರಾತ್ರಿ ಮುಂತಾದ ಕೆಲವು ಪ್ರಮುಖ ಹಬ್ಬ ಮತ್ತು ಉಪವಾಸಗಳು ಈ ತಿಂಗಳಲ್ಲಿ ಬರುತ್ತವೆ. 2024 ರಲ್ಲಿ ಫಾಲ್ಗುಣ ತಿಂಗಳು ಯಾವಾಗ ಪ್ರಾರಂಭವಾಗುತ್ತದೆ ಮತ್ತು ಅದರಲ್ಲಿ ಯಾವ ಉಪವಾಸ ಮತ್ತು ಹಬ್ಬಗಳು ಬರಲಿವೆ ಸಂಪೂರ್ಣವಾಗಿ ತಿಳಿಯಿರಿ.

Falgun Month 2024: ಫಾಲ್ಗುಣ ಮಾಸದಲ್ಲಿ ಬರುವ ಪ್ರಮುಖ ವ್ರತ, ಹಬ್ಬಗಳ ಬಗ್ಗೆ ತಿಳಿದುಕೊಳ್ಳಿ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 20, 2024 | 6:37 PM

ಹಿಂದೂ ಕ್ಯಾಲೆಂಡರ್ ಪ್ರಕಾರ, ಫಾಲ್ಗುಣ ಮಾಸವು 12ನೇ ಅಂದರೆ ವರ್ಷದ ಕೊನೆಯ ತಿಂಗಳು. ಈ ತಿಂಗಳನ್ನು ಸಂತೋಷ ಮತ್ತು ಸಂಭ್ರಮದಿಂದ ಕಳೆಯಲಾಗುತ್ತದೆ. ಅದರಲ್ಲಿಯೂ ಮದುವೆ, ಗೃಹ ಪ್ರವೇಶ ಮುಂತಾದ ಕಾರ್ಯಗಳಿಗೆ ಈ ತಿಂಗಳು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಫಾಲ್ಗುಣ ಮಾಸವು ಮಾಘ ಮಾಸದ ಹುಣ್ಣಿಮೆಯ ದಿನದ ಅಂತ್ಯದೊಂದಿಗೆ ಪ್ರಾರಂಭವಾಗುತ್ತದೆ. ಫಾಲ್ಗುಣ ಮತ್ತು ವಸಂತ ಕಾಲದ ಋತುಗಳು ಒಟ್ಟಿಗೆ ಬಂದಾಗ, ಭೂಮಿಯನ್ನು ಅಲಂಕರಿಸಿಕೊಂಡ ವಧುವಿಗೆ ಹೋಲಿಸಲಾಗುತ್ತದೆ. ಹಾಗಾಗಿ ಫಾಲ್ಗುಣ ಮತ್ತು ಚೈತ್ರ ಮಾಸವು ಧಾರ್ಮಿಕವಾಗಿ, ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ವಿಶೇಷ ಮಹತ್ವವನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಬರುವ ಹಬ್ಬಗಳು, ಹೋಳಿ, ಮಹಾ ಶಿವರಾತ್ರಿ ಇತ್ಯಾದಿಗಳನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. 2024 ರಲ್ಲಿ ಫಾಲ್ಗುಣ ತಿಂಗಳು ಯಾವಾಗ ಪ್ರಾರಂಭವಾಗುತ್ತದೆ, ಈ ತಿಂಗಳ ವಿಶೇಷತೆ ಏನು ಮತ್ತು ಈ ತಿಂಗಳಲ್ಲಿ ಯಾವ ಉಪವಾಸ ಮತ್ತು ಹಬ್ಬಗಳು ಬರಲಿವೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

2024ರ ಫಾಲ್ಗುಣ ಮಾಸ ಅಥವಾ ತಿಂಗಳು ಯಾವಾಗ ಪ್ರಾರಂಭವಾಗುತ್ತದೆ?

ಫಾಲ್ಗುಣ ಮಾಸವು ಫೆ. 25 ರ ಭಾನುವಾರದಿಂದ ಪ್ರಾರಂಭವಾಗುತ್ತದೆ, ಇದು 2024 ರ ಮಾ. 25 ರಂದು ಕೊನೆಗೊಳ್ಳುತ್ತದೆ. ಈ ತಿಂಗಳ ಹುಣ್ಣಿಮೆಯ ದಿನದಂದು, ಚಂದ್ರನು ಫಲ್ಗುಣಿ ನಕ್ಷತ್ರ ಪುಂಜದಲ್ಲಿರುತ್ತಾನೆ, ಈ ಕಾರಣದಿಂದಾಗಿ ಈ ತಿಂಗಳ ಹೆಸರನ್ನು ಫಾಲ್ಗುಣ ಎಂದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ದಾನ ಮಾಡುವುದರಿಂದ ಎಂದಿಗೂ ಕರಗದ ಸದ್ಗುಣಗಳು ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.

ಫಾಲ್ಗುಣ ತಿಂಗಳು ಏಕೆ ವಿಶೇಷ?

ಚಂದ್ರನು ಫಾಲ್ಗುಣ ತಿಂಗಳಲ್ಲಿ ಜನಿಸಿದನೆಂದು ಧಾರ್ಮಿಕ ನಂಬಿಕೆಯಿದೆ, ಆದ್ದರಿಂದ ಈ ತಿಂಗಳಲ್ಲಿ ಚಂದ್ರನಿಗೆ ವಿಶೇಷ ಪೂಜೆ ಮಾಡುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ ಮತ್ತು ಇಂದ್ರಿಯಗಳನ್ನು ನಿಯಂತ್ರಿಸುವ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ ಈ ಮಾಸದಲ್ಲಿ ಚಂದ್ರನನ್ನು ಪೂಜಿಸುವ ಮೂಲಕ ಜಾತಕದಲ್ಲಿನ ಚಂದ್ರನ ದೋಷಕ್ಕೆ ಪರಿಹಾರ ಕಂಡುಕೊಳ್ಳಬಹುದು. ಇನ್ನು ಕೆಲವರು ಫಾಲ್ಗುಣ ಮಾಸದಲ್ಲಿ ಕೃಷ್ಣನ ಮೂರು ರೂಪಗಳನ್ನು ಪೂಜಿಸುತ್ತಾರೆ. ಆ ಮೂರು ರೂಪಗಳು, ಬಾಲ ಕೃಷ್ಣ, ಪ್ರೌಡಾವಸ್ಥೆಯಲ್ಲಿರುವ ಕೃಷ್ಣ ಮತ್ತು ಗುರು ಕೃಷ್ಣ. ಈ ಮೂರು ರೂಪಗಳನ್ನು ಪೂಜಿಸುವ ಮೂಲಕ, ಒಬ್ಬ ವ್ಯಕ್ತಿಯು ಮಕ್ಕಳ ಭಾಗ್ಯ, ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಮೋಕ್ಷವನ್ನು ಪಡೆಯುತ್ತಾನೆ.

ಪ್ರೀತಿ ಮತ್ತು ಸಂತೋಷ ಹಂಚುವ ಹಬ್ಬವಾದ ಹೋಳಿಯನ್ನು ಫಾಲ್ಗುಣದಲ್ಲಿ ಮಾಸದಲ್ಲಿ ಆಚರಿಸಲಾಗುತ್ತದೆ. ಅಲ್ಲದೆ ಈ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿಯಂದು ತಾಯಿ ಲಕ್ಷ್ಮೀ ಮತ್ತು ಸೀತಾ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಅದೇ ಸಮಯದಲ್ಲಿ, ಶಿವನ ಆರಾಧನೆ ಮಾಡುವ ಹಬ್ಬವಾದ ಮಹಾ ಶಿವರಾತ್ರಿಯನ್ನು ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಚಂದ್ರನು ಫಾಲ್ಗುಣ ತಿಂಗಳಲ್ಲಿ ಜನಿಸಿದನೆಂದು ಧಾರ್ಮಿಕ ನಂಬಿಕೆಯಿದೆ, ಆದ್ದರಿಂದ ಈ ತಿಂಗಳಲ್ಲಿ ಚಂದ್ರನನ್ನು ಪೂಜಿಸುವುದು ವಿಶೇಷ ಮಹತ್ವವನ್ನು ಹೊಂದಿದೆ.

ಫಾಲ್ಗುಣ ಮಾಸದಲ್ಲಿ ಆಚರಣೆ ಮಾಡುವ ಉಪವಾಸ ಮತ್ತು ಹಬ್ಬಗಳು;

ಫೆಬ್ರವರಿ 25 (ಭಾನುವಾರ) -ಫಾಲ್ಗುಣ ತಿಂಗಳು ಪ್ರಾರಂಭವಾಗುತ್ತದೆ

ಫೆಬ್ರವರಿ 28 (ಬುಧವಾರ) -ದ್ವಿಜಪ್ರಿಯ ಸಂಕಷ್ಟ ಚತುರ್ಥಿ

ಮಾರ್ಚ್ 3 (ಭಾನುವಾರ) -ಶಬರಿ ಜಯಂತಿ, ಭಾನು ಸಪ್ತಮಿ

ಮಾರ್ಚ್ 6 (ಬುಧವಾರ) -ವಿಜಯ ಏಕಾದಶಿ

ಮಾರ್ಚ್ 8 (ಶುಕ್ರವಾರ) -ಮಹಾ ಶಿವರಾತ್ರಿ, ಪ್ರದೋಷ ವ್ರತ, ಮಾಸಿಕ ಶಿವರಾತ್ರಿ

ಮಾರ್ಚ್ 10 (ಭಾನುವಾರ) -ಫಾಲ್ಗುಣ ಅಮಾವಾಸ್ಯೆ

ಮಾರ್ಚ್ 12 (ಮಂಗಳವಾರ) -ರಾಮಕೃಷ್ಣ ಜಯಂತಿ

ಮಾರ್ಚ್ 13 (ಬುಧವಾರ) -ವಿನಾಯಕ ಚತುರ್ಥಿ

ಮಾರ್ಚ್ 20 (ಬುಧವಾರ) -ಅಮಲಕಿ ಏಕಾದಶಿ

ಮಾರ್ಚ್ 22 (ಶುಕ್ರವಾರ) -ಪ್ರದೋಷ ವ್ರತ

ಮಾರ್ಚ್ 24 (ಭಾನುವಾರ) -ಫಾಲ್ಗುಣ ಪೂರ್ಣಿಮಾ ಉಪವಾಸ

ಮಾರ್ಚ್ 25 (ಸೋಮವಾರ) – ಹೋಳಿ ಹಬ್ಬ

ಇದನ್ನೂ ಓದಿ: ಕೊನೆಯ ಮಾಘ ಪ್ರದೋಷ ವ್ರತದ ಶುಭ ಸಮಯ, ಆಚರಣೆ ವಿಧಾನಗಳ ಮಾಹಿತಿ ಇಲ್ಲಿದೆ

ಫಾಲ್ಗುಣ ತಿಂಗಳಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಫಾಲ್ಗುಣ ಮಾಸದಲ್ಲಿ ಧಾನ್ಯಗಳ ಬಳಕೆಯನ್ನು ಕಡಿಮೆ ಮಾಡಿ ಮತ್ತು ಸಾಧ್ಯವಾದಷ್ಟು ಹಣ್ಣುಗಳನ್ನು ಸೇವಿಸಿ. ಭಗವಾನ್ ಶ್ರೀ ಕೃಷ್ಣನನ್ನು ನಿಯಮಿತವಾಗಿ ಪೂಜಿಸಬೇಕು. ಅಲ್ಲದೆ, ಪೂಜೆಯಲ್ಲಿ ಹೂವುಗಳ ವಿಶೇಷ ಬಳಕೆಯನ್ನು ಮಾಡಬೇಕು. ಈ ತಿಂಗಳಲ್ಲಿ ಮಾಂಸ ಮತ್ತು ಮದ್ಯ ಇತ್ಯಾದಿಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಅಲ್ಲದೆ ಈ ಮಾಸದಲ್ಲಿ, ಜನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಬೇಕು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ