AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips: ವಾಸ್ತು ಪ್ರಕಾರ ಈ ವಸ್ತುಗಳನ್ನು ಸಾಲ ಕೊಟ್ಟರೂ, ಸಾಲ ಪಡೆದರೂ ಅದರೊಟ್ಟಿಗೆ ಕಷ್ಟಗಳು ಬರುತ್ತವೆ! ಜಾಗ್ರತೆಯಿರಲಿ

ಶಾಸ್ತ್ರದ ಪ್ರಕಾರ ಲೇಖನಿಯು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಮೇಲೆ ನಿಗಾ ಇಡುತ್ತದೆ. ಈ ಮೂಲಕ ಅವರ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಫಲ ನಿಮಗೆ ಸಿಗುತ್ತದೆ.

Vastu Tips: ವಾಸ್ತು ಪ್ರಕಾರ ಈ ವಸ್ತುಗಳನ್ನು ಸಾಲ ಕೊಟ್ಟರೂ, ಸಾಲ ಪಡೆದರೂ ಅದರೊಟ್ಟಿಗೆ ಕಷ್ಟಗಳು ಬರುತ್ತವೆ! ಜಾಗ್ರತೆಯಿರಲಿ
ಶಾಸ್ತ್ರದ ಪ್ರಕಾರ ಲೇಖನಿಯು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಮೇಲೆ ನಿಗಾ ಇಡುತ್ತದೆ. ಈ ಮೂಲಕ ಅವರ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಫಲ ನಿಮಗೆ ಸಿಗುತ್ತದೆ.
ಸಾಧು ಶ್ರೀನಾಥ್​
|

Updated on:Jun 27, 2023 | 5:29 PM

Share

ನಾವು ನಮ್ಮ ಸ್ನೇಹಿತರು ಅಥವಾ ಸಂಬಂಧಿಕ ಮಧ್ಯೆ ಒಂದಷ್ಟು ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಹೆಚ್ಚಿನವರಿಗೆ ಏನು ತೆಗೆದುಕೊಳ್ಳಬೇಕು. ಯಾವುದನ್ನು ತೆಗೆದುಕೊಳ್ಳಬಾರದು ಎಂಬುದು ತಿಳಿದಿರುವುದಿಲ್ಲ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಕೆಲವು ವಸ್ತುಗಳನ್ನು ಎರವಲು ಪಡೆದರೆ (Borrow) ಅದರಿಂದ ನಮಗೆ ದೊಡ್ಡ ನಷ್ಟವಾಗಬಹುದು ಎಂದು ಹೇಳಲಾಗುತ್ತದೆ. ಇದು ನಮ್ಮ ದೈನಂದಿನ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ (Vastu Tips) ಯಾವ ವಸ್ತುಗಳನ್ನು ಎರವಲು ಪಡೆಯಬಾರದು (Lend) ಎಂಬುದನ್ನು ಮುಖ್ಯವಾಗಿ ಇಲ್ಲಿ ತಿಳಿಯೋಣ (spiritual).

ಬಟ್ಟೆ ಮತ್ತು ಕೈಗಡಿಯಾರಗಳು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಳಸಿದ ಬಟ್ಟೆಗಳನ್ನು ಎಂದಿಗೂ ಎರವಲಾಗಿ ಪಡೆದು, ಧರಿಸಬಾರದು. ಹೀಗೆ ಮಾಡುವುದರಿಂದ ದೈಹಿಕ ಸಮಸ್ಯೆಗಳು ಉಂಟಾಗಬಹುದು. ಸ್ನೇಹಿತರೊಂದಿಗಿನ ಸಂಬಂಧಗಳು ಹದಗೆಡಬಹುದು. ಬೇರೊಬ್ಬರ ಗಡಿಯಾರವನ್ನು ಎಂದಿಗೂ ಧರಿಸಬೇಡಿ. ಹೀಗೆ ಮಾಡುವುದರಿಂದ ತೊಂದರೆಗೆ ಆಹ್ವಾನ ನೀಡಿದಂತಾಗುತ್ತದೆ. ಅವರ ಕೆಟ್ಟ ಸಮಯವು ನಿಮಗೆ ಅನ್ವಯಿಸುತ್ತದೆ.

ಕರವಸ್ತ್ರ, ಪೆನ್: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ಸ್ನೇಹಿತ ಅಥವಾ ಸಂಬಂಧಿಕರಿಂದ ಕರವಸ್ತ್ರವನ್ನು ಎರವಲು ಪಡೆಯಬಾರದು. ಹಾಗೆ ಮಾಡುವುದರಿಂದ ಸ್ನೇಹಿತ ಅಥವಾ ಸಂಬಂಧಿಕರೊಂದಿಗಿನ ಸಂಬಂಧ ಹಾಳಾಗಬಹುದು. ಅಲ್ಲದೆ, ಇತರರಿಂದ ಪೆನ್ನು ಎರವಲು ಪಡೆಯಬೇಡಿ. ಶಾಸ್ತ್ರದ ಪ್ರಕಾರ ಲೇಖನಿಯು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಮೇಲೆ ನಿಗಾ ಇಡುತ್ತದೆ. ಈ ಮೂಲಕ ಅವರ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಫಲ ನಿಮಗೆ ಸಿಗುತ್ತದೆ.

ಉಂಗುರ, ಚಪ್ಪಲಿ, ಶೂ: ಬೇರೊಬ್ಬರ ಉಂಗುರವನ್ನು ಧರಿಸಬೇಡಿ. ಕೆಲವು ಉಂಗುರಗಳು ರತ್ನದ ಗ್ರಹದೊಂದಿಗೆ ಸಂಬಂಧ ಹೊಂದಿರುವುದರಿಂದ, ಅದು ನಿಮಗೆ ಸೂಕ್ತವಾಗಿದೆಯೇ ಎಂದು ನೀವು ಪರಿಶೀಲಿಸಬೇಕು. ಬೇರೆಯವರು ಬಳಸಿದ ಶೂ ಅಥವಾ ಚಪ್ಪಲಿಗಳನ್ನು ಧರಿಸಬೇಡಿ. ವಾಸ್ತು ಶಾಸ್ತ್ರದಲ್ಲಿ ಇದನ್ನು ಅಶುಭ ಎಂದು ಪರಿಗಣಿಸಲಾಗಿದೆ.

ಹಾಸಿಗೆ, ಪೊರಕೆ: ಬೇರೆಯವರ ಹಾಸಿಗೆ ಬಳಸುವುದರಿಂದ ಕಲಹ ಉಂಟಾಗುತ್ತದೆ. ಇದರಿಂದ ಪತಿ ಪತ್ನಿಯರ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಪೊರಕೆಯನ್ನು ಮನೆಯ ಲಕ್ಷ್ಮಿ ಎಂದೂ ಕರೆಯುತ್ತಾರೆ. ಬೇರೆಯವರ ಮನೆಯಿಂದ ಪೊರಕೆ ತಂದರೆ ನಿಮ್ಮ ಮನೆಯ ಲಕ್ಷ್ಮಿಯನ್ನು ಕೆಣಕಿದಂಗಾಉತ್ತದೆ. ಆದ್ದರಿಂದ ಯಾವತ್ತೂ ಪೊರಕೆಯನ್ನು ಎರವಲು ಪಡೆಯಬೇಡಿ.

ಸಾಮಾನ್ಯವಾಗಿ ನಮ್ಮ ಅಡುಗೆ ಮನೆಯಲ್ಲಿ ಅಡುಗೆ ಸಾಮಾಗ್ರಿ/ ಪದಾರ್ಥ ಖಾಲಿಯಾದಾಗ, ನಾವು ಅವುಗಳನ್ನು ನೆರೆಹೊರೆಯವರಲ್ಲಿ ಕೇಳುತ್ತೇವೆ. ಆದರೆ ಉಪ್ಪನ್ನು ಎರವಲು ಪಡೆದರೆ ಸಾಲದ ಬಾಧೆಯಾಗುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. ಶಾಸ್ತ್ರದ ಪ್ರಕಾರ ಉಪ್ಪನ್ನು ಯಾರಿಗೂ ಸಾಲ ನೀಡಬಾರದು. ಸಾಲವಾಗಿಯೂ ಪಡೆಯಬಾರದು. ಇದು ನಿಮ್ಮ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಯಾರಿಗೂ ಉಪ್ಪು ಕೊಡಬೇಡಿ. ಯಾರಿಂದಲೂ ಉಪ್ಪು ತೆಗೆದುಕೊಳ್ಳಬೇಡಿ.

ವಾಸ್ತು ಶಾಸ್ತ್ರದ ಪ್ರಕಾರ.. ಮೇಲಿನ ವಸ್ತುಗಳನ್ನು ಇತರರಿಗೆ ಸಾಲವಾಗಿ ನೀಡಬಾರದು ಮತ್ತು ತೆಗೆದುಕೊಳ್ಳಲೂ ಬಾರದು. ಇದು ನಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಆಧ್ಯಾತ್ಮ ಕುರಿತಾದ ಹೆಚ್ಚಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Tue, 27 June 23

Follow Us
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ