AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vasthu Tips: ದುಷ್ಟ ಶಕ್ತಿಯಿಂದ ಮುಕ್ತಿ ಪಡೆಯಲು ನೀರಿಗೆ ಹಿಡಿ ಉಪ್ಪು ಹಾಕಿ ನೆಲ ಒರೆಸಿ; ವಾರಗಳಲ್ಲಿ ಫಲಿತಾಂಶ ಪಡೆಯುವಿರಿ

ಡಾ. ಬಸವರಾಜ್ ಗುರೂಜಿ ಪ್ರಕಾರ, ಉಪ್ಪಿನ ನೀರಿನಿಂದ ಮನೆಯನ್ನು ಶುದ್ಧೀಕರಿಸುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಇದು ಮನೆಯಲ್ಲಿ ಶಾಂತಿ, ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ಹಣಕಾಸಿನ ವೃದ್ಧಿಗೆ ಕಾರಣವಾಗುತ್ತದೆ. ಮಕ್ಕಳು ಹೇಳಿದ ಮಾತು ಕೇಳುತ್ತಾರೆ, ವಿದ್ಯಾಭ್ಯಾಸ ಸುಧಾರಿಸುತ್ತದೆ. ಭಾನುವಾರ ಹೊರತುಪಡಿಸಿ ಇತರೆ ದಿನಗಳಲ್ಲಿ ಈ ತಂತ್ರವನ್ನು ಬಳಸಬಹುದು.

Vasthu Tips: ದುಷ್ಟ ಶಕ್ತಿಯಿಂದ ಮುಕ್ತಿ ಪಡೆಯಲು ನೀರಿಗೆ ಹಿಡಿ ಉಪ್ಪು ಹಾಕಿ ನೆಲ ಒರೆಸಿ; ವಾರಗಳಲ್ಲಿ ಫಲಿತಾಂಶ ಪಡೆಯುವಿರಿ
ವಾಸ್ತು ಶಾಸ್ತ್ರ
ಅಕ್ಷತಾ ವರ್ಕಾಡಿ
|

Updated on:Oct 30, 2025 | 11:13 AM

Share

ನಮ್ಮ ಜೀವನಶೈಲಿಯಲ್ಲಿ ಶುಚಿತ್ವ ಮತ್ತು ಆಧ್ಯಾತ್ಮಿಕ ಸಮೃದ್ಧಿಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ಉಪ್ಪನ್ನು ಬಳಸುವ ಮೂಲಕ ನಕಾರಾತ್ಮಕ ಶಕ್ತಿಗಳನ್ನು ದೂರವಿಟ್ಟು ಧನಾತ್ಮಕ ಶಕ್ತಿಗಳನ್ನು ಆಕರ್ಷಿಸಬಹುದು ಎಂದು ಅವರು ಹೇಳಿದ್ದಾರೆ.

ಮನೆಯು ನಮ್ಮ ವಾಸಸ್ಥಾನ, ಆಹಾರ ತಯಾರಿಕೆ ಮತ್ತು ವಿಶ್ರಾಂತಿಯ ತಾಣವಾಗಿದೆ. ದಿನವಿಡೀ ಹೊರಗಡೆ ಕೆಲಸ ಮಾಡಿ ಮನೆಗೆ ಮರಳಿದಾಗ ಅಲ್ಲಿ ಶಾಂತಿ, ನೆಮ್ಮದಿ ಇರಬೇಕು. ಆದರೆ, ಕೆಲವು ಮನೆಗಳಲ್ಲಿ ನಿರಂತರ ಜಗಳಗಳು, ಬಡತನ, ಹಣಕಾಸಿನ ನಷ್ಟ, ಮಕ್ಕಳ ಅಶಿಸ್ತು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅನಗತ್ಯ ಕೋಪತಾಪಗಳು ಮತ್ತು ಮಾನಸಿಕ ಒತ್ತಡ ಇರುತ್ತದೆ. ಎಷ್ಟೇ ಹಣ ಬಂದರೂ ಖರ್ಚಾಗಿ ಬಿಡುತ್ತದೆ, ಮನೆಗೆ ಹೋದರೆ ಯಾವುದೋ ಒಂದು ಚಿಂತೆ ಕಾಡುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಉಪ್ಪು ಒಂದು ಪರಿಹಾರವನ್ನು ಒದಗಿಸುತ್ತದೆ.

ವಿಡಿಯೋ ಇಲ್ಲಿದೆ ನೋಡಿ:

ಬೆಳಗಿನ ಜಾವ ಮನೆ ಶುಚಿಗೊಳಿಸುವಾಗ ನೀರಿಗೆ ಒಂದು ಹಿಡಿ ಉಪ್ಪು ಹಾಕಿ ಮನೆಯನ್ನು ಒರೆಸಿದರೆ, ಮನೆಯಿಂದ ಋಣಾತ್ಮಕ ಶಕ್ತಿಗಳು ದೂರವಾಗಿ ಧನಾತ್ಮಕ ಶಕ್ತಿಗಳು ಪ್ರವೇಶಿಸುತ್ತವೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಆದರೆ, ಈ ವಿಧಾನವನ್ನು ಭಾನುವಾರ ಮಾತ್ರ ಮಾಡಬಾರದು ಎಂದು ಗುರೂಜಿ ಎಚ್ಚರಿಸುತ್ತಾರೆ. ಉಪ್ಪಿಗೆ ಸಂಬಂಧಿಸಿದಂತೆ “ಉಪ್ಪಿನ ಋಣ” ಎಂಬ ಮಾತು ಚಾಲ್ತಿಯಲ್ಲಿದೆ. ಅಕ್ಷಯ ತೃತೀಯದಂದು ಒಂದು ಸಣ್ಣ ಉಪ್ಪಿನ ಪ್ಯಾಕೆಟ್ ತಂದರೆ ಜೀವನಪೂರ್ತಿ ಆಹಾರಕ್ಕೆ ಕೊರತೆ ಇರುವುದಿಲ್ಲ ಎಂಬ ನಂಬಿಕೆಯಿದೆ.

ಮನೆಯಲ್ಲಿ ಧನಾತ್ಮಕ ಶಕ್ತಿಗಳನ್ನು ಹೆಚ್ಚಿಸಲು ಇನ್ನೊಂದು ವಿಧಾನವೆಂದರೆ, ಒಂದು ಗಾಜಿನ ಗ್ಲಾಸ್‌ನಲ್ಲಿ ಉಪ್ಪು ಹಾಕಿ ಅದನ್ನು ಮನೆಯ ಮೂಲೆಗಳಲ್ಲಿ ಇಡುವುದು. ಪ್ರತಿ ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು ಈ ಉಪ್ಪನ್ನು ಹೊರಗೆ ಹಾಕಿ ಮತ್ತೆ ತಾಜಾ ಉಪ್ಪು ತುಂಬಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ದಾರಿದ್ರ್ಯ ಬರುವುದಿಲ್ಲ, ಹಣಕಾಸಿನ ಹರಿವು ಸುಗಮವಾಗಿ ನಡೆಯುತ್ತದೆ. ಅಲ್ಲದೆ, ಕುಟುಂಬದಲ್ಲಿ ಜಗಳಗಳು ಕಡಿಮೆಯಾಗಿ, ರೋಗರುಜಿನಗಳು ಮತ್ತು ಬ್ಯಾಕ್ಟೀರಿಯಾಗಳ ಕಾಟವೂ ಇರುವುದಿಲ್ಲ. ದುಷ್ಟ ಶಕ್ತಿಗಳಿಂದಲೂ ಮನೆಗೆ ರಕ್ಷಣೆ ದೊರೆಯುತ್ತದೆ.

ಭಗವಂತನ ದೃಷ್ಟಿ ಬಿದ್ದಾಗ ನಾವು ಪ್ರಗತಿ ಸಾಧಿಸುತ್ತೇವೆ, ಆದರೆ ಕೆಟ್ಟ ದೃಷ್ಟಿ ಬಿದ್ದಾಗ ಜೀವನದಲ್ಲಿ ದಿಕ್ಕು ತೋಚದಂತಾಗಿ ಆತ್ಮಹತ್ಯೆಯ ಆಲೋಚನೆಗಳು ಕೂಡ ಬರಬಹುದು. ಈ ತಂತ್ರವು ಅಂತಹ ಋಣಾತ್ಮಕ ಪ್ರಭಾವಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉಪ್ಪಿನ ನೀರಿನಿಂದ ಮನೆ ಒರೆಸುವಾಗ, ಒಂದು ಕೆಜಿ ಗಟ್ಟಲೆ ಉಪ್ಪು ಹಾಕುವ ಅಗತ್ಯವಿಲ್ಲ. ಒಂದು ಹಿಡಿ ಉಪ್ಪನ್ನು ಒಂದು ಬಕೆಟ್ ನೀರಿಗೆ ಹಾಕಿ ಚೆನ್ನಾಗಿ ಬೆರೆಸಬೇಕು. ಮನೆಯನ್ನು ನೈರುತ್ಯ ಮೂಲೆಯಿಂದ ಪ್ರಾರಂಭಿಸಿ, ವಾಯುವ್ಯ, ಅಗ್ನಿ ದಿಕ್ಕುಗಳನ್ನು ಮುಗಿಸಿ ಈಶಾನ್ಯ ಭಾಗಕ್ಕೆ ಬರುವಂತೆ ಒರೆಸಬೇಕು.

ಇದನ್ನೂ ಓದಿ: ಹಳೆಯ ಬಟ್ಟೆಗಳನ್ನು ನೆಲ ಒರೆಸಲು ಬಳಸುತ್ತಿದ್ದೀರಾ? ಈ ಸಮಸ್ಯೆ ತಪ್ಪಿದ್ದಲ್ಲ!

ಹೀಗೆ ಕ್ರಮಬದ್ಧವಾಗಿ ಒರೆಸುವುದರಿಂದ ಮಕ್ಕಳು ಹೇಳಿದ ಮಾತು ಕೇಳುತ್ತಾರೆ, ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗುತ್ತದೆ, ಹಣಕಾಸು ವೃದ್ಧಿಯಾಗುತ್ತದೆ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ. ಇದು ಶಾಸ್ತ್ರಗಳಲ್ಲಿ ಉಲ್ಲೇಖಿತವಾದ ಒಂದು ಸರಳ ಆದರೆ ಪರಿಣಾಮಕಾರಿ ತಂತ್ರವಾಗಿದೆ. ಈ ಕ್ರಿಯೆಗೆ ಕೇವಲ ಉಪ್ಪು ಮಾತ್ರ ಸಾಕು, ಅರಿಶಿನ, ಬಿಳಿ ಸಾಸಿವೆ ಅಥವಾ ಇತರೆ ಯಾವುದೇ ವಸ್ತುಗಳನ್ನು ಸೇರಿಸುವ ಅಗತ್ಯವಿಲ್ಲ. ಇದರಿಂದ ಮನೆಯಲ್ಲಿ ತೃಪ್ತಿಕರವಾದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:12 am, Thu, 30 October 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ