AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Silver Bangles : ಬೆಳ್ಳಿ ಬಳೆ ಧರಿಸಿದರೆ ಈ ಜಾತಕ ದೋಷಗಳು ದೂರವಾಗುತ್ತವೆ, ಅಷ್ಟೇ ಅಲ್ಲ ಜೀವನವೇ ಬಂಗಾರಮಯವಾಗುತ್ತದೆ!

Cold Metals: ನೀವು ಬೆಳ್ಳಿಯ ಬಳೆ ಧರಿಸಲು ಬಯಸಿದರೆ ಅದನ್ನು ಧರಿಸುವ ಮೊದಲು ಅದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಬೆಳ್ಳಿ ಬಳೆ ಧರಿಸುವುದರಿಂದ ಎಲ್ಲರಿಗೂ ಪ್ರಯೋಜನವಾಗುವುದಿಲ್ಲ. ಕೆಲವರು ಬೆಳ್ಳಿ ಬಳೆಯನ್ನು ಧರಿಸಿದರೆ ತೊಂದರೆಗಳು ಹೆಚ್ಚಾಗುತ್ತವೆ. 

Silver Bangles : ಬೆಳ್ಳಿ ಬಳೆ ಧರಿಸಿದರೆ ಈ ಜಾತಕ ದೋಷಗಳು ದೂರವಾಗುತ್ತವೆ, ಅಷ್ಟೇ ಅಲ್ಲ ಜೀವನವೇ ಬಂಗಾರಮಯವಾಗುತ್ತದೆ!
ಬೆಳ್ಳಿ ಬಳೆ ಧರಿಸಿದರೆ ಈ ಜಾತಕ ದೋಷಗಳು ದೂರವಾಗುತ್ತವೆ
ಸಾಧು ಶ್ರೀನಾಥ್​
|

Updated on: Mar 18, 2023 | 6:06 AM

Share

ಬೆಳ್ಳಿ ಬಳೆ ಧರಿಸಿದರೆ ಈ ಜಾತಕ ದೋಷಗಳು ದೂರವಾಗುತ್ತವೆ, ಅಷ್ಟೇ ಅಲ್ಲ ಜೀವನವೇ ಬಂಗಾರಮಯವಾಗುತ್ತದೆ! ಆದ್ದರಿಂದ ಕೈಗೆ ಬೆಳ್ಳಿಯ ಕಡಗ, ಸರ ಅಥವಾ ಬಳೆ (Silver Bangles) ಧರಿಸುವುದರಿಂದ ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡಿ ಧನಾತ್ಮಕತೆಯನ್ನು ತರಬಹುದು. ಅನೇಕ ಜನರು ವಿವಿಧ ಲೋಹಗಳ ಬಳೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಕೆಲವರು ಬೆಳ್ಳಿ (Silver) ಬಳೆಗಳನ್ನು ಫ್ಯಾಶನ್ ಸ್ಟೇಟ್‌ಮೆಂಟ್‌ಗಾಗಿ ಮಾತ್ರ ಧರಿಸುತ್ತಾರೆ. ಇನ್ನು ಕೆಲವರು ಜ್ಯೋತಿಷಿಯ (Astrology) ಸಲಹೆಯ ಮೇರೆಗೆ ಅವುಗಳನ್ನು ಧರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೈಗಳಿಗೆ ಬೆಳ್ಳಿಯನ್ನು ಧರಿಸುವುದನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ. ಸಂಪತ್ತು ಮತ್ತು ಖ್ಯಾತಿಯನ್ನು ತಂದುಕೊಡುತ್ತದೆ. ಬೆಳ್ಳಿ ಬಳೆಗಳನ್ನು ಧರಿಸುವುದರಿಂದ ಅನೇಕ ಜನರು ಪ್ರಯೋಜನ ಪಡೆಯುತ್ತಾರೆ. ಜ್ಯೋತಿಷ ಶಾಸ್ತ್ರದ ಪ್ರಕಾರ, ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದಲ್ಲಿ ಬೆಳ್ಳಿ ಲೋಹವು ಚಂದ್ರ ಮತ್ತು ಶುಕ್ರ ಗ್ರಹಗಳೊಂದಿಗೆ ಸಂಬಂಧ ಹೊಂದಿದೆ. ಹಾಗಾಗಿ ಬೆಳ್ಳಿಯನ್ನು ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅವುಗಳೆಲ್ಲಾ ಯಾವುವು? ಯಾರು ಯಾವ ಬಳೆಗಳನ್ನು ಧರಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ… (Spiritrual) 

ಬೆಳ್ಳಿ ಬಳೆಯನ್ನು ಯಾರು ಧರಿಸಬೇಕು?

ನಿಮ್ಮ ಕೈಯಲ್ಲಿ ಬೆಳ್ಳಿಯ ಕಂಕಣವನ್ನು ಧರಿಸಲು ನೀವು ಬಯಸಿದರೆ ಅದನ್ನು ಧರಿಸುವ ಮೊದಲು ಅದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಬೆಳ್ಳಿ ಬಳೆ ಧರಿಸುವುದರಿಂದ ಎಲ್ಲರಿಗೂ ಪ್ರಯೋಜನವಾಗುವುದಿಲ್ಲ. ಪ್ರತಿಯೊಬ್ಬರ ಗ್ರಹಗಳು ವಿಭಿನ್ನವಾಗಿವೆ. ಆದ್ದರಿಂದ ಕೆಲವರು ಬೆಳ್ಳಿ ಬಳೆಯನ್ನು ಧರಿಸಿದರೆ ತೊಂದರೆಗಳು ಹೆಚ್ಚಾಗುತ್ತವೆ.

ಕೈಯಲ್ಲಿ ಬೆಳ್ಳಿಯ ಬಳೆಯನ್ನು ಧರಿಸುವುದರಿಂದ ಶುಕ್ರ ಮತ್ತು ಚಂದ್ರನಿಗೆ ಸಂಬಂಧಿಸಿದ ಗ್ರಹದೋಷಗಳು ದೂರವಾಗುತ್ತವೆ. ನಿಮ್ಮ ರಾಶಿಯಲ್ಲಿ ಈ ದೋಷವಿದ್ದರೆ ನೀವು ಈಗಲೇ ಈ ಬೆಳ್ಳಿ ಬಳೆಯನ್ನು ಧರಿಸಲು ಆರಂಭಿಸಬೇಕು. ಬೆಳ್ಳಿಯ ಬಳೆಯನ್ನು ಧರಿಸುವುದರಿಂದ ನಿಮಗೆ ಅನೇಕ ಪ್ರಯೋಜನಗಳು ದೊರೆಯುತ್ತವೆ. ಬೆಳ್ಳಿ ಬಳೆಯನ್ನು ಧರಿಸುವುದರಿಂದ ಮಹಾಲಕ್ಷ್ಮಿಯ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ. ಮಹಾಲಕ್ಷ್ಮಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಅವರದು. ಹಾಗಾಗಿ ಬೆಳ್ಳಿಯ ಬಳೆ ಧರಿಸಿದರೆ ಪ್ರಯೋಜನಕಾರಿ ಎನ್ನುತ್ತಾರೆ.

ಧನಾತ್ಮಕ ಶಕ್ತಿ ವರ್ಗಾವಣೆ

ಬೆಳ್ಳಿಯು ತಂಪಾಗಿಸುವ ಮಾಧ್ಯಮವಾಗಿರುವುದರಿಂದ ಇದನ್ನು ಕೋಲ್ಡ್ ಮೆಟಲ್ ಎಂದೂ ಕರೆಯುತ್ತಾರೆ. ಇದನ್ನು ಧರಿಸುವುದರಿಂದ ಮನಸ್ಸು ಶಾಂತವಾಗಿ ಮತ್ತು ಏಕಾಗ್ರತೆಯಿಂದ ಕೂಡಿರುತ್ತದೆ. ನಿಮಗೆ ತುಂಬಾ ಕೋಪ ಇದ್ದರೆ, ನೀವು ಬೆಳ್ಳಿಯನ್ನು ಧರಿಸಬಹುದು. ಜ್ಯೋತಿಷ್ಯದಲ್ಲಿ, ಬೆಳ್ಳಿಯನ್ನು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಲೋಹವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಕೈಗೆ ಬೆಳ್ಳಿಯ ಸರ ಅಥವಾ ಬಳೆ ಧರಿಸುವುದರಿಂದ ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡಿ ಧನಾತ್ಮಕತೆಯನ್ನು ತರಬಹುದು.

ಬೆಳ್ಳಿಯ ಕಂಕಣವನ್ನು ಯಾವಾಗ ಧರಿಸಬೇಕು?

ಬೆಳ್ಳಿ ಬಳೆಯನ್ನು ಧರಿಸುವುದರಲ್ಲಿಯೂ ಕೆಲವು ಮಂಗಳಕರ ಸಮಯಗಳಿವೆ. ಈ ಶುಕ್ರವಾರ ಬೆಳ್ಳಿಯ ಉಂಗುರವನ್ನು ಧರಿಸಲು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಆದ್ದರಿಂದ ನೀವು ಬೆಳ್ಳಿಯ ಕಂಕಣವನ್ನು ಧರಿಸಲು ಬಯಸಿದರೆ ಶುಕ್ರವಾರ ಮಾತ್ರ ಧರಿಸಿ. ನೀವು ಅದರಿಂದ ಪ್ರಯೋಜನ ಪಡೆಯುತ್ತೀರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ವಿಜಯನಗರ: ಮನೆಗಳಿಗೆ ಕನ್ನ ಹಾಕ್ತಿದ್ದ ಇಬ್ಬರು ಖದೀಮರು ಅರೆಸ್ಟ್
ವಿಜಯನಗರ: ಮನೆಗಳಿಗೆ ಕನ್ನ ಹಾಕ್ತಿದ್ದ ಇಬ್ಬರು ಖದೀಮರು ಅರೆಸ್ಟ್
‘ಅಗ್ನಿಸಾಕ್ಷಿ’ ಧಾರಾವಾಹಿಯ ಹೊಸ ಪ್ರೋಮೋ ರಿಲೀಸ್
‘ಅಗ್ನಿಸಾಕ್ಷಿ’ ಧಾರಾವಾಹಿಯ ಹೊಸ ಪ್ರೋಮೋ ರಿಲೀಸ್