Black Thread: ಕಪ್ಪು ದಾರವನ್ನು ಯಾರು ಕಟ್ಟಲೇ ಬಾರದು? ಜ್ಯೋತಿಷ್ಯಶಾಸ್ತ್ರಜ್ಞರು ನೀಡಿರುವ ಮಾಹಿತಿ ಇಲ್ಲಿದೆ

ಭಾರತೀಯ ಸಂಸ್ಕೃತಿಯಲ್ಲಿ ಕಪ್ಪು ದಾರ ಕಟ್ಟುವುದು ಪ್ರಾಚೀನ ಪದ್ಧತಿ. ಇದು ಕೆಟ್ಟ ದೃಷ್ಟಿಯಿಂದ ರಕ್ಷಿಸುತ್ತದೆ ಎಂಬ ನಂಬಿಕೆ ಇದೆ. ಆದರೆ, ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ ಇದು ಅಶುಭ ಎನ್ನಲಾಗಿದೆ. ಕುಂಭ ರಾಶಿಯವರಿಗೆ ಒಳ್ಳೆಯದು. ಶಿವ ದೇವಾಲಯದಲ್ಲಿ ಪೂಜಿಸಿದ ನಂತರ ಕಟ್ಟುವುದು ಶುಭ. ದಾರದ ಬಣ್ಣ ಮತ್ತು ರಾಶಿಚಕ್ರದ ಪ್ರಭಾವವನ್ನು ಲೇಖನ ವಿವರಿಸುತ್ತದೆ.

Black Thread: ಕಪ್ಪು ದಾರವನ್ನು ಯಾರು ಕಟ್ಟಲೇ ಬಾರದು? ಜ್ಯೋತಿಷ್ಯಶಾಸ್ತ್ರಜ್ಞರು ನೀಡಿರುವ ಮಾಹಿತಿ ಇಲ್ಲಿದೆ
Black Thread Ritual
Image Credit source: Pinterest

Updated on: Apr 05, 2025 | 9:00 AM

ಕೈ ಅಥವಾ ಕಾಲಿಗೆ ಕಪ್ಪು ದಾರ ಕಟ್ಟುವ ಆಚರಣೆ ಭಾರತೀಯ ಸಂಸ್ಕೃತಿಯಲ್ಲಿ ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕಪ್ಪು ದಾರ ಕಟ್ಟುವುದರಿಂದ ಕೆಟ್ಟ ದೃಷ್ಟಿ ನಮ್ಮ ಮೇಲೆ ಬೀಳುವುದಿಲ್ಲ ಎಂದು ನಂಬಲಾಗಿದೆ. ಆದರೆ ಕೆಲವು ನಕ್ಷತ್ರಗಳಲ್ಲಿ ಜನಿಸಿದರವರು ಕಪ್ಪು ದಾರ ಕಟ್ಟುವುದು ಶುಭವಲ್ಲ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ಎಚ್ಚರಿಸುತ್ತಾರೆ.

ಮೇಷ ರಾಶಿ ಕಪ್ಪು ದಾರವನ್ನು ಧರಿಸಬಾರದು:

ಅಶ್ವತಿ, ಭರಣಿ ಮತ್ತು ಕಾರ್ತಿಕ ಮುಂತಾದ ನಕ್ಷತ್ರದಡಿ ಅಂದರೆ ಮೇಷ ರಾಶಿಯಡಿಯಲ್ಲಿ ಜನಿಸಿದ ಜನರು ಕಪ್ಪು ದಾರವನ್ನು ಧರಿಸಬಾರದು. ಅದು ಅವರಿಗೆ ಶುಭ ಫಲಕ್ಕಿಂತ ಹೆಚ್ಚು ಅಶುಭ ಫಲವನ್ನು ನೀಡುತ್ತದೆ ಎಂದು ಜ್ಯೋತಿಷಿಗಳು ಎಚ್ಚರಿಸುತ್ತಾರೆ. ಮೇಷ ರಾಶಿಯ ಅಧಿಪತಿ ಮಂಗಳನ ಬಣ್ಣ ಕೆಂಪು. ಕಪ್ಪು ಬಣ್ಣವು ಕೆಂಪು ಬಣ್ಣಕ್ಕೆ ವಿರುದ್ಧವಾಗಿದೆ. ಆದ್ದರಿಂದ, ಕಪ್ಪು ದಾರವು ಈ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬದಲಾಗಿ, ಅವರು ಕೆಂಪು ದಾರವನ್ನು ಧರಿಸಬಹುದು.

ಇದನ್ನೂ ಓದಿ: ಕನಸಿನಲ್ಲಿ ನವಿಲು ಕಂಡರೆ ಏನರ್ಥ? ಶುಭವೋ, ಅಶುಭವೋ?

ಇದನ್ನೂ ಓದಿ
ಸೀತಾ ದೇವಿಯು ಭೂಮಿಯನ್ನು ಸೇರಿದ ಪವಿತ್ರ ಸ್ಥಳ ಎಲ್ಲಿದೆ ಗೊತ್ತಾ?
ಈ ವರ್ಷ ರಾಮ ನವಮಿ ಯಾವಾಗ ಆಚರಿಸಲಾಗುತ್ತದೆ?ಪುರಾಣ ಕಥೆ ಹಾಗೂ ಮಹತ್ವ ಇಲ್ಲಿದೆ
ರಾಮ ನವಮಿಯಂದು ಈ ವಸ್ತುಗಳನ್ನು ಮನೆಗೆ ತರುವುದು ತುಂಬಾ ಒಳ್ಳೆಯದು!
ಕನಸಿನಲ್ಲಿ ನವಿಲು ಕಂಡರೆ ಏನರ್ಥ? ಶುಭವೋ, ಅಶುಭವೋ?

ವೃಶ್ಚಿಕ ರಾಶಿ ಕಪ್ಪು ದಾರವನ್ನು ಧರಿಸಬಾರದು:

ಮೇಷ ರಾಶಿಯವರಂತೆ, ಕಪ್ಪು ದಾರದಿಂದ ಅಶುಭ ಫಲ ಪಡೆಯುವ ಮತ್ತೊಂದು ರಾಶಿಯೆಂದರೆ ಅದು ವೃಶ್ಚಿಕ ರಾಶಿ. ವೃಶ್ಚಿಕ ರಾಶಿಯವರು ಕಪ್ಪು ದಾರವನ್ನು ಧರಿಸಬಾರದು ಎಂದು ಜ್ಯೋತಿಷಿಗಳು ಎಚ್ಚರಿಕೆ ನೀಡುತ್ತಾರೆ.

ಕಪ್ಪು ದಾರ ಯಾರಿಗೆ ಒಳ್ಳೆಯದು?

ಕುಂಭ ರಾಶಿಯಲ್ಲಿ ಜನಿಸಿದವರಿಗೆ, ಮೊದಲಾರ್ಧದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಜನಿಸಿದವರಿಗೆ ಕಪ್ಪು ದಾರ ಒಳ್ಳೆಯದು. ಆದರೆ ನಿಮಗೆ ಇಷ್ಟ ಬಂದಂತೆ ದಾರವನ್ನು ಕಟ್ಟುವಂತಿಲ್ಲ. ಬದಲಾಗಿ ಶಿವ ದೇವಾಲಯದಲ್ಲಿ ಪೂಜೆ ಮಾಡಿ ನಂತರ ದಾರ ಧರಿಸುವುದು ಶುಭ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us