ಕೈ ಅಥವಾ ಕಾಲಿಗೆ ಕಪ್ಪು ದಾರ ಕಟ್ಟುವ ಆಚರಣೆ ಭಾರತೀಯ ಸಂಸ್ಕೃತಿಯಲ್ಲಿ ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕಪ್ಪು ದಾರ ಕಟ್ಟುವುದರಿಂದ ಕೆಟ್ಟ ದೃಷ್ಟಿ ನಮ್ಮ ಮೇಲೆ ಬೀಳುವುದಿಲ್ಲ ಎಂದು ನಂಬಲಾಗಿದೆ. ಆದರೆ ಕೆಲವು ನಕ್ಷತ್ರಗಳಲ್ಲಿ ಜನಿಸಿದರವರು ಕಪ್ಪು ದಾರ ಕಟ್ಟುವುದು ಶುಭವಲ್ಲ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ಎಚ್ಚರಿಸುತ್ತಾರೆ.
ಅಶ್ವತಿ, ಭರಣಿ ಮತ್ತು ಕಾರ್ತಿಕ ಮುಂತಾದ ನಕ್ಷತ್ರದಡಿ ಅಂದರೆ ಮೇಷ ರಾಶಿಯಡಿಯಲ್ಲಿ ಜನಿಸಿದ ಜನರು ಕಪ್ಪು ದಾರವನ್ನು ಧರಿಸಬಾರದು. ಅದು ಅವರಿಗೆ ಶುಭ ಫಲಕ್ಕಿಂತ ಹೆಚ್ಚು ಅಶುಭ ಫಲವನ್ನು ನೀಡುತ್ತದೆ ಎಂದು ಜ್ಯೋತಿಷಿಗಳು ಎಚ್ಚರಿಸುತ್ತಾರೆ. ಮೇಷ ರಾಶಿಯ ಅಧಿಪತಿ ಮಂಗಳನ ಬಣ್ಣ ಕೆಂಪು. ಕಪ್ಪು ಬಣ್ಣವು ಕೆಂಪು ಬಣ್ಣಕ್ಕೆ ವಿರುದ್ಧವಾಗಿದೆ. ಆದ್ದರಿಂದ, ಕಪ್ಪು ದಾರವು ಈ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬದಲಾಗಿ, ಅವರು ಕೆಂಪು ದಾರವನ್ನು ಧರಿಸಬಹುದು.
ಇದನ್ನೂ ಓದಿ: ಕನಸಿನಲ್ಲಿ ನವಿಲು ಕಂಡರೆ ಏನರ್ಥ? ಶುಭವೋ, ಅಶುಭವೋ?
ಮೇಷ ರಾಶಿಯವರಂತೆ, ಕಪ್ಪು ದಾರದಿಂದ ಅಶುಭ ಫಲ ಪಡೆಯುವ ಮತ್ತೊಂದು ರಾಶಿಯೆಂದರೆ ಅದು ವೃಶ್ಚಿಕ ರಾಶಿ. ವೃಶ್ಚಿಕ ರಾಶಿಯವರು ಕಪ್ಪು ದಾರವನ್ನು ಧರಿಸಬಾರದು ಎಂದು ಜ್ಯೋತಿಷಿಗಳು ಎಚ್ಚರಿಕೆ ನೀಡುತ್ತಾರೆ.
ಕುಂಭ ರಾಶಿಯಲ್ಲಿ ಜನಿಸಿದವರಿಗೆ, ಮೊದಲಾರ್ಧದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಜನಿಸಿದವರಿಗೆ ಕಪ್ಪು ದಾರ ಒಳ್ಳೆಯದು. ಆದರೆ ನಿಮಗೆ ಇಷ್ಟ ಬಂದಂತೆ ದಾರವನ್ನು ಕಟ್ಟುವಂತಿಲ್ಲ. ಬದಲಾಗಿ ಶಿವ ದೇವಾಲಯದಲ್ಲಿ ಪೂಜೆ ಮಾಡಿ ನಂತರ ದಾರ ಧರಿಸುವುದು ಶುಭ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ