TV9 Kannada Spiritual chanakya niti in kannada these issues make husband wife relation or married life poisonous
Husband – Wife: ಈ ವಿಷಯಗಳು ಪತಿ-ಪತ್ನಿಯರ ನಡುವೆ ವಿಷದಂತೆ ಕಾರ್ಯನಿರ್ವಹಿಸುತ್ತವೆ, ಜಾಗ್ರತೆ!
ಆಚಾರ್ಯ ಚಾಣಕ್ಯ.. ತನ್ನ ಚಾಣಕ್ಯ ನೀತಿ ಶಾಸ್ತ್ರದಲ್ಲಿ ಎಲ್ಲಾ ಕ್ಷೇತ್ರಗಳ ಬಗ್ಗೆ ನಿರ್ದಿಷ್ಟವಾಗಿ ಉಲ್ಲೇಖಿಸುತ್ತಾನೆ. ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.. ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುವುದು ಹೇಗೆ..? ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಯಹೇಳಿದ್ದಾನೆ.
ಈ ವಿಷಯಗಳು ಪತಿ-ಪತ್ನಿಯರ ನಡುವೆ ವಿಷದಂತೆ ಕಾರ್ಯತನಿರ್ವಹಿಸುತ್ತವೆ, ಜಾಗ್ರತೆ!
ಆಚಾರ್ಯ ಚಾಣಕ್ಯ.. ತನ್ನ ಚಾಣಕ್ಯ ನೀತಿ ಶಾಸ್ತ್ರದಲ್ಲಿ (Chanakya Niti) ಎಲ್ಲಾ ಕ್ಷೇತ್ರಗಳ ಬಗ್ಗೆ ನಿರ್ದಿಷ್ಟವಾಗಿ ಉಲ್ಲೇಖಿಸುತ್ತಾನೆ. ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.. ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುವುದು ಹೇಗೆ..? ಸಮಾಜದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಯಹೇಳಿದ್ದಾನೆ.
ಅದಕ್ಕಾಗಿಯೇ ಇಂದಿಗೂ ಅನೇಕ ಜನರು ಆಚಾರ್ಯ ಚಾಣಕ್ಯರ ಬೋಧನೆಗಳನ್ನು ಅನುಸರಿಸುತ್ತಾರೆ. ಚಾಣಕ್ಯನ ಬೋಧನೆಗಳನ್ನು ಅನುಸರಿಸುವ ಮೂಲಕ ತನ್ನ ಜೀವನವನ್ನು ಯಶಸ್ವಿಗೊಳಿಸಬಹುದು. ಈ ವಿಧಾನಗಳು ಭೂತಕಾಲ ಮತ್ತು ಭವಿಷ್ಯವನ್ನು ಉಲ್ಲೇಖಿಸುತ್ತವೆ. ಆಚಾರ್ಯ ಚಾಣಕ್ಯನು ನೀತಿ ಶಾಸ್ತ್ರದಲ್ಲಿ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಸಹ ಉಲ್ಲೇಖಿಸಿದ್ದಾನೆ. ಆಚಾರ್ಯ ಚಾಣಕ್ಯ ಪ್ರಕಾರ.. ಕೆಲವು ವಿಷಯಗಳು ಪತಿ-ಪತ್ನಿಯರ (Husband – Wife) ಸಂಬಂಧದಲ್ಲಿ ಎಂದಿಗೂ ಬರಬಾರದು. ಪತಿ-ಪತ್ನಿಯ ನಡುವೆ ಇಂತಹ ವಿಷಯಗಳು ಬಂದರೆ ದಾಂಪತ್ಯ ಜೀವನವೇ ಛಿದ್ರವಾಗುತ್ತದೆ ಎಂದು ಚಾಣಕ್ಯ ಹೇಳಿದ್ದಾನೆ. ಅದನ್ನು ತಿಳಿದುಕೊಳ್ಳೋಣ..
ಅನುಮಾನ: ಆಚಾರ್ಯ ಚಾಣಕ್ಯರ ಪ್ರಕಾರ.. ಪತಿ-ಪತ್ನಿಯರ ಸಂಬಂಧದಲ್ಲಿ ಯಾವತ್ತೂ ಅನುಮಾನ ಮೂಡಬಾರದು. ಅನುಮಾನದಿಂದ ದಾಂಪತ್ಯ ಸಂಬಂಧ ದುರ್ಬಲವಾಗುತ್ತದೆ. ಅನುಮಾನವು ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ. ಇಬ್ಬರ ಸಂಬಂಧದಲ್ಲಿ ಅನುಮಾನ ವಿಷದಂತೆ ಕೆಲಸ ಮಾಡುತ್ತದೆ. ಪತಿ-ಪತ್ನಿ ಪರಸ್ಪರ ನಂಬಿಕೆ ಇಟ್ಟುಕೊಳ್ಳಬೇಕೇ ಹೊರತು ಅನುಮಾನ ಪಡಬಾರದು ಎಂದು ತಿಳಿಸಿದರು.
ಅಹಂಕಾರ: ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಎಂದಿಗೂ ಅಹಂಕಾರ ಇರಬಾರದು. ಇದು ಸಂಬಂಧಕ್ಕೆ ತುಂಬಾ ಕೆಟ್ಟದು. ಅದರಿಂದ ದೂರವಿರುವುದು ಉತ್ತಮ. ಪತಿ-ಪತ್ನಿಯರ ನಡುವೆ ಎಂದಿಗೂ ಅಹಂಕಾರಕ್ಕೆ ಅವಕಾಶ ಇರಬಾರದು.
ಸುಳ್ಳು: ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಸುಳ್ಳು ಇದ್ದರೆ.. ಅದು ಸಂಬಂಧವನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಸಂಬಂಧಗಳನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದಲೇ ಪತಿ-ಪತ್ನಿಯರ ಸಂಬಂಧದಲ್ಲಿ ಸುಳ್ಳಿಗೆ ಆಸ್ಪದ ಇರಬಾರದು. ಸುಳ್ಳು ಹೇಳುವುದು ಮತ್ತು ಸ್ಮಾರ್ಟ್ ಎಂದು ನಟಿಸುವುದು… ಇದು ಮೂರ್ಖತನವಾದೀತು ಎಂದರು.
ಅಗೌರವ: ಪತಿ ಮತ್ತು ಪತ್ನಿ ಪರಸ್ಪರ ಗೌರವಿಸಬೇಕು. ಎಂದಿಗೂ ಪರಸ್ಪರ ಅಗೌರವ ತೋರಬೇಡಿ. ಇದು ಸಂಬಂಧವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದಲೇ ಆಚಾರ್ಯರು ಯಾರಾದರೂ ಇತಿಮಿತಿಯಲ್ಲಿ ಇರುವುದು ಒಳಿತು ಎಂದರು.