AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ವಿಚಾರಗಳನ್ನು ಗಂಡ ತನ್ನ ಹೆಂಡತಿಯ ಬಳಿ ಹೇಳಿಕೊಳ್ಳಬಾರದು; ಚಾಣಕ್ಯ ನೀತಿ ಇಲ್ಲಿದೆ

ಗಂಡ ಹೆಂಡತಿ ಸಂಬಂಧ ಬಹಳ ಪವಿತ್ರವಾದದ್ದು. ಜೀವನದ ದೀರ್ಘಕಾಲವನ್ನು ಅವರಿಬ್ಬರು ಜೊತೆಯಾಗಿ ಕಳೆಯಬೇಕಾಗುತ್ತದೆ. ಈ ಸಂಬಂಧದ ಒಂದಷ್ಟು ಗುಟ್ಟನ್ನು ಚಾಣಕ್ಯ ಹೇಳಿದ್ದಾನೆ.

Chanakya Niti: ಈ ವಿಚಾರಗಳನ್ನು ಗಂಡ ತನ್ನ ಹೆಂಡತಿಯ ಬಳಿ ಹೇಳಿಕೊಳ್ಳಬಾರದು; ಚಾಣಕ್ಯ ನೀತಿ ಇಲ್ಲಿದೆ
ಚಾಣಕ್ಯ
TV9 Web
| Edited By: |

Updated on: Jun 19, 2021 | 8:11 AM

Share

ಬದುಕನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿ ಯೋಚಿಸಬಹುದು. ಹಲವರು ಅವರದೇ ಆದ ಉತ್ತರ ಕಂಡುಕೊಳ್ಳಬಹುದು. ಕೆಲವರಿಗೆ ಏನೂ ಅರ್ಥವಾಗದು. ಒಂದೊಂದು ಸನ್ನಿವೇಶಕ್ಕೂ ಬದುಕಿನ ಅರ್ಥ ವಿಭಿನ್ನ ಅನಿಸಬಹುದು. ಜೀವನದ ಕೆಲವು ಸತ್ಯಗಳನ್ನು ಆಚಾರ್ಯ ಚಾಣಕ್ಯ ನಮ್ಮ ಮುಂದೆ ತೆರೆದಿಟ್ಟಿದ್ದಾನೆ. ಆ ಮೂಲಕ, ನಾವು ನಮ್ಮ ಬದುಕಿನ ಒಂದಷ್ಟು ಅನುಭವಗಳ ಬಗ್ಗೆ, ಪರಿಸ್ಥಿತಿಗಳ ಬಗ್ಗೆ ಜಾಗರೂಕರಾಗಿ, ಅರ್ಥಮಾಡಿಕೊಂಡು ಇರಬಹುದು.

ಗಂಡ ಹೆಂಡತಿ ಸಂಬಂಧ ಬಹಳ ಪವಿತ್ರವಾದಸದ್ದು. ಜೀವನದ ದೀರ್ಘಕಾಲವನ್ನು ಅವರಿಬ್ಬರು ಜೊತೆಯಾಗಿ ಕಳೆಯಬೇಕಾಗುತ್ತದೆ. ಈ ಸಂಬಂಧದ ಒಂದಷ್ಟು ಗುಟ್ಟನ್ನು ಚಾಣಕ್ಯ ಹೇಳಿದ್ದಾನೆ. ಅಂತಹ ಒಂದಷ್ಟು ವಿವರ ಇಲ್ಲಿ ನೀಡಲಾಗಿದೆ. ಚಾಣಕ್ಯ ಹೇಳುವಂತೆ ಈ ನಾಲ್ಕು ಅಂಶಗಳನ್ನು ಗಂಡ ತನ್ನ ಹೆಂಡತಿಯ ಬಳಿ ಹೇಳಿಕೊಳ್ಳಬಾರದಂತೆ. ಅವು ಯಾವುವು? ಇಲ್ಲಿದೆ ವಿವರ.

ಆದಾಯ: ಚಾಣಕ್ಯ ಹೇಳುವಂತೆ, ಗಂಡ ತನ್ನ ಹೆಂಡತಿಯ ಬಳಿಯಲ್ಲಿ ತನ್ನ ಆದಾಯದ ಬಗ್ಗೆ ತುಂಬಾ ವಿಚಾರ ಮಾತನಾಡಬಾರದಂತೆ. ಅಥವಾ ಎಲ್ಲವನ್ನೂ ಹಂಚಿಕೊಳ್ಳಬಾರದು. ಹೆಂಡತಿಗೆ ತನ್ನ ಗಂಡನ ಆದಾಯದ ಬಗ್ಗೆ ಸಂಪೂರ್ಣ ತಿಳಿದರೆ, ಅದರಿಂದ ಮನೆಯ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅಂದರೆ, ಗಂಡನ ಆದಾಯ ತಿಳಿದ ಹೆಂಡತಿ ಹೆಚ್ಚಿನ ಹಣ ಖರ್ಚು ಮಾಡುವ ಸಾಧ್ಯತೆ ಇದೆ.

ದೌರ್ಬಲ್ಯ: ಹೆಂಡತಿ ಆದವಳಿಗೆ ಗಂಡನ ವೀಕ್​ನೆಸ್ ಅಂದರೆ ದೌರ್ಬಲ್ಯ ಗೊತ್ತಾಗಬಾರದು. ಅಂದರೆ, ಗಂಡ ತನಗೆ ಇರುವ ಎಲ್ಲಾ ದೌರ್ಬಲ್ಯವನ್ನು ಹೆಂಡತಿಯ ಮುಂದೆ ಹೇಳಿಕೊಳ್ಳಬಾರದಂತೆ. ಹೀಗೆ ಗೊತ್ತಾದರೆ, ಹೆಂಡತಿ ಗಂಡನ ಬಳಿ, ಆತನ ದೌರ್ಬಲ್ಯದ ಬಗ್ಗೆಯೇ ಹೆಚ್ಚು ಮಾತನಾಡುವ ಸಾಧ್ಯತೆ ಇದೆ. ಅಥವಾ ಆಗಾಗ್ಗ ಅದನ್ನೇ ಹೇಳಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಗಂಡನಿಗೆ ಅದರಿಂದ ಹೊರಗೆ ಬರಬೇಕು ಎನಿಸಿದರೂ ಹೊರಬರುವುದು ಕಷ್ಟವಾಗಬಹುದು. ಅಥವಾ ಗಂಡ ಅಂತರ್ಮುಖಿ ಆಗಬಹುದು. ಹೀಗಾಗದಂತೆ ನೋಡಿಕೊಳ್ಳಬೇಕು ಎಂಬುದು ಇಲ್ಲಿ ಮುಖ್ಯ ಅರ್ಥ.

ಅವಮಾನಕರ ಘಟನೆ: ಗಂಡನಿಗೆ ಎಂದಾದರೂ ಆದ ಅವಮಾನಕರ ಘಟನೆಯನ್ನು ಆತ ತನ್ನ ಹೆಂಡತಿಯ ಬಳಿ ಹೇಳಿಕೊಳ್ಳಬಾರದು. ಇದರಿಂದ ಗಂಡ- ಹೆಂಡತಿ ನಡುವೆ ಎಂದಾದರೂ ಸಣ್ಣಪುಟ್ಟ ಜಗಳ ಉಂಟಾದಾಗ, ಹೆಂಡತಿ ಆ ಘಟನೆಯನ್ನು ನೆನಪಿಸಿಕೊಳ್ಳಬಹುದು. ಅದರಿಂದ ಬಗೆಹರಿಸಿಕೊಳ್ಳಲಾಗದಷ್ಟು ದೊಡ್ಡ ಮನಸ್ಥಾಪವೂ ಆಗಬಹುದು. ಹಾಗಾಗಿ, ನೋವನ್ನು ಹೇಳಿಕೊಳ್ಳುವುದು ಮತ್ತು ತನ್ನ ಜೀವನದ ಅವಮಾನವನ್ನು ಹೇಳಿಕೊಳ್ಳುವಾಗ ಜಾಗರೂಕರಾಗಿ ಇರಬೇಕು.

ಸಹಾಯ ಮಾಡುವುದು: ಯಾವುದೇ ಸಂದರ್ಭದಲ್ಲಿ ಸಹಾಯ ಮಾಡುವ ಪ್ರಸಂಗ ಉಂಟಾದರೆ ಅದನ್ನು ಹೆಂಡತಿಯ ಹೇಳಿಕೊಳ್ಳಬಾರದು. ಸಹಾಯ ಮಾಡಲು ಬಯಸಿದ್ದನ್ನು ಅಥವಾ ಸಹಾಯ ಮಾಡಿದ್ದನ್ನು ಹೆಂಡತಿಗೆ ಹೇಳಿದರೆ ಸಣ್ಣಪುಟ್ಟ ಸಮಸ್ಯೆ ಎದುರಾಗಬಹುದು. ಸಹಾಯ ಮಾಡಲು ಬೇಡ ಎಂಬ ಮಾತು ಬರಬಹುದು. ಅಥವಾ ಸಹಾಯ ಮಾಡಿದ್ದರಿಂದ ಮನೆಗೆ ಏನೂ ಇಲ್ಲ ಎಂಬ ಮಾತುಗಳು ಕೇಳಿಬರಬಹುದು. ಹಾಗೂ ಆಗದಂತೆ ಸರಿದೂಗಿಸಿಕೊಂಡು ಹೋಗಬೇಕು.

ಇದನ್ನೂ ಓದಿ: Chanakya Niti: ಈ ಗುಣಗಳನ್ನು ಹೊಂದಿರುವ ವ್ಯಕ್ತಿ ಎಲ್ಲರ ಇಷ್ಟದ ನಾಯಕನಾಗುತ್ತಾನೆ; ಚಾಣಕ್ಯನ ವಿವರಣೆ ಇಲ್ಲಿದೆ

Chanakya Niti: ಜೀವನದಲ್ಲಿ ನೀವು ಅಳವಡಿಸಿಕೊಳ್ಳಬೇಕಾದ 7 ಪ್ರಮುಖ ಅಂಶಗಳಿವು; ಚಾಣಕ್ಯ ನೀತಿ ಹೀಗೆ ಹೇಳುತ್ತದೆ

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್