AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Diwali 2021: ದೇವ ದೀಪಾವಳಿ ಯಾವಾಗ? ದೀಪಾವಳಿ ವೇಳೆ ಲಕ್ಷ್ಮಿಗೆ ಮಾತ್ರ ಪೂಜೆ ಮಾಡುತ್ತಾರೆ! ವಿಷ್ಣುವಿಗೆ ಪೂಜೆ ಏಕಿಲ್ಲ?

ಸುಖ ಸೌಭಾಗ್ಯವ ಬೇಡುತ್ತಾ ಎಲ್ಲರೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಾಯಿ ಲಕ್ಷ್ಮಿಗೆ ಪೂಜೆ ಮಾಡುತ್ತಾರೆ. ದೀಪಾವಳಿ ಹಬ್ಬದಲ್ಲಿ ಗಣೇಶ ಮತ್ತು ಕುಬೇರನನ್ನೂ ಆರಾಧಿಸುತ್ತಾರೆ. ಆದರೆ ವಿಷ್ಣು ಪರಮಾತ್ಮನಿಗೆ ಮಾತ್ರ ಪೂಜೆ ಸಲ್ಲಿಸುವುದಿಲ್ಲ, ಏಕೆ? ಈ ಕುತೂಹಲ ಕಥನ ಕೇಳಲು ಈ ಲೇಖನ ಓದಿ. ಜೀವನದಲ್ಲಿ ಎಲ್ಲ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಧನರಾಶಿ ಬೇಕಾಗುತ್ತದೆ. ದವಸ, ಧನ, ಧಾನ್ಯ ಸಮೃದ್ಧಿಯಾಗಿ ದೊರಕುವಂತಾಗಲು ತಾಯಿ ಲಕ್ಷ್ಮಿಯನ್ನು ಪೂಜಿಸುತ್ತಾರೆ. ಲಕ್ಷ್ಮಿ ಮಾತೆಯನ್ನು ಆರಾಧಿಸುವ ದಿನವೇ ದೀಪಾವಳಿ. ಅಂಧಕಾರವನ್ನು ಹೋಗಲಾಡಿಸಿ, ವಿಜಯ ಪರ್ವ ಆಚರಿಸುವ […]

Diwali 2021: ದೇವ ದೀಪಾವಳಿ ಯಾವಾಗ? ದೀಪಾವಳಿ ವೇಳೆ ಲಕ್ಷ್ಮಿಗೆ ಮಾತ್ರ ಪೂಜೆ ಮಾಡುತ್ತಾರೆ! ವಿಷ್ಣುವಿಗೆ ಪೂಜೆ ಏಕಿಲ್ಲ?
ದೇವ ದೀಪಾವಳಿ ಯಾವಾಗ? ದೀಪಾವಳಿ ವೇಳೆ ಲಕ್ಷ್ಮಿಗೆ ಮಾತ್ರ ಪೂಜೆ ಮಾಡುತ್ತಾರೆ! ವಿಷ್ಣುವಿಗೆ ಪೂಜೆ ಏಕಿಲ್ಲ?
TV9 Web
| Updated By: ಸಾಧು ಶ್ರೀನಾಥ್​

Updated on: Oct 26, 2021 | 8:40 AM

Share

ಸುಖ ಸೌಭಾಗ್ಯವ ಬೇಡುತ್ತಾ ಎಲ್ಲರೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಾಯಿ ಲಕ್ಷ್ಮಿಗೆ ಪೂಜೆ ಮಾಡುತ್ತಾರೆ. ದೀಪಾವಳಿ ಹಬ್ಬದಲ್ಲಿ ಗಣೇಶ ಮತ್ತು ಕುಬೇರನನ್ನೂ ಆರಾಧಿಸುತ್ತಾರೆ. ಆದರೆ ವಿಷ್ಣು ಪರಮಾತ್ಮನಿಗೆ ಮಾತ್ರ ಪೂಜೆ ಸಲ್ಲಿಸುವುದಿಲ್ಲ, ಏಕೆ? ಈ ಕುತೂಹಲ ಕಥನ ಕೇಳಲು ಈ ಲೇಖನ ಓದಿ. ಜೀವನದಲ್ಲಿ ಎಲ್ಲ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಧನರಾಶಿ ಬೇಕಾಗುತ್ತದೆ. ದವಸ, ಧನ, ಧಾನ್ಯ ಸಮೃದ್ಧಿಯಾಗಿ ದೊರಕುವಂತಾಗಲು ತಾಯಿ ಲಕ್ಷ್ಮಿಯನ್ನು ಪೂಜಿಸುತ್ತಾರೆ. ಲಕ್ಷ್ಮಿ ಮಾತೆಯನ್ನು ಆರಾಧಿಸುವ ದಿನವೇ ದೀಪಾವಳಿ. ಅಂಧಕಾರವನ್ನು ಹೋಗಲಾಡಿಸಿ, ವಿಜಯ ಪರ್ವ ಆಚರಿಸುವ ದಿನ ಇದಾಗಿದೆ. ದೀಪಾವಳಿಯ ದಿನ ಲಕ್ಷ್ಮಿ ಮಾತೆಯನ್ನು ಆರಾಧಿಸುವುದರಿಂದ ಮುಂದೆ ವರ್ಷದುದ್ದಕ್ಕೂ ಆರ್ಥಿಕವಾಗಿ ಬಲಾಢ್ಯರಾಗಬಹುದು ಎಂಬ ಮಾತಿದೆ.

ಕಾರ್ತಿಕ ಮಾಸ ಎಂಬುದು ಅತ್ಯಂತ ಮಹತ್ವದ ತಿಂಗಳು. ಪೂಜೆ ಪುನಸ್ಕಾರಗಳಿಗೆ ಈ ತಿಂಗಳಲ್ಲಿ ಜಾಸ್ತಿಯಾಗಿರುತ್ತದೆ. ಹಿಂದೂ ಪಂಚಾಂಗದಲ್ಲಿ 8ನೆಯ ತಿಂಗಳು ಕಾರ್ತಿಕ ಮಾಸವಾಗಿದೆ. ಈ ಮಾಸದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ ಹೆಚ್ಚಿನ ಮಹತ್ವವಿದೆ. ಕಾರ್ತಿಕ ಮಾಸದಲ್ಲಿ ವಿಷ್ಣು ಭಗವಾನ್ ತನ್ನ ನಾಲ್ಕು ತಿಂಗಳ ನಿದ್ರಾವಸ್ಥೆಯನ್ನು ಪೂರೈಸಿ, ಭೂಮಂಡಲದಲ್ಲಿ ಸಂಚಾರಕ್ಕೆ ಬರುತ್ತಾರೆ ಎಂಬ ಪ್ರತೀತಿ ಇದೆ. ಜೊತೆಗೆ ಲಕ್ಷ್ಮಿ ದೇವಿ ಸಹ ಶ್ರೀಮನ್ನಾರಾಯಣನ ಜೊತೆ ಭೂಲೋಕ ಸಂಚಾರವಾಸಿಗಳಾಗುತ್ತಾರೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ದೇವ-ದೇವತೆಗಳ ವಿಶೇಷ ಪೂಜೆ ನಡೆಯುತ್ತದೆ: ದೀಪಾವಳಿಯ ಪವಿತ್ರ ದಿನಗಳಲ್ಲಿ ಲಕ್ಷ್ಮಿ ದೇವಿಯ ಮತ್ತು ಗಣೇಶನ ಪೂಜೆಯ ಜೊತೆಗೆ ಧನ ದೇವ ಅಂದರೆ ಸಂಪತ್ತಿನ ಅಧಿದೇವ ಕುಬೇರನಿಗೆ ವಿಶೇಷ ಪೂಜೆ ನಡೆಯುತ್ತದೆ. ಜೊತೆಗೆ ಕಾಳಿ ಮಾತೆ ಮತ್ತು ಸರಸ್ವತಿಯ ಪೂಜೆಯೂ ನೆರವೇರುತ್ತದೆ. ಆದರೆ ಇಲ್ಲಿ ಒಂದು ಕುತೂಹಲಕಾರಿ ಪ್ರಶ್ನೆ ಉದ್ಭವವಾಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ವಿಷ್ಣು ಆರಾಧನೆ ನಡೆಯುವುದಿಲ್ಲ, ಏಕೆ ಎಂಬುದೇ ಸರಳ ಆದರೆ ಅರ್ಥಗರ್ಭಿತ ಪ್ರಶ್ನೆಯಾಗಿದೆ.

ದೀಪಾವಳಿಯ ಕೊನೆಯ ರಾತ್ರಿ ಲಕ್ಷ್ಮಿ ದೇವಿಯ ಪೂಜೆ ಮಾತ್ರವೇ ನಡೆಯುತ್ತದೆ; ವಿಷ್ಣುವಿಗೆ ಪೂಜೆ ಸಲ್ಲುವುದಿಲ್ಲ ಏಕೆಂದರೆ ಈ ಪವಿತ್ರ ಹಬ್ಬವು ಚಾತುರ್ಮಾಸದ ಮಧ್ಯೆ ಬರುತ್ತದೆ. ಈ ಚಾತುರ್ಮಾಸದಲ್ಲಿ ಭಗವಂತ ವಿಷ್ಣು ನಾಲ್ಕೂ ತಿಂಗಳೂ ಯೋಗ ನಿದ್ರೆಯಲ್ಲಿ ತಲ್ಲೀನವಾಗಿರುತ್ತಾನೆ. ಹಾಗಾಗಿ ಈ ನಾಲ್ಕು ತಿಂಗಳ ಚಾತುರ್ಮಾಸದಲ್ಲಿ ಯಾವುದೇ ಧಾರ್ಮಿಕ ಕಾರ್ಯ ಬಂದರೂ ಸ್ವಾಭಾವಿಕವಾಗಿ ಅಲ್ಲಿ ಭಗವಂತ ವಿಷ್ಣುವಿನ ಅನುಪಸ್ಥಿತಿಯಲ್ಲಿ ಪೂಜೆ ಪುನಸ್ಕಾರಗಳು ನೆರವೇರುತ್ತವೆ.

ಕಾರ್ತಿಕ ಮಾಸದ ಹುಣ್ಣಿಮೆಯ ದಿನ ದೇವ ದೀಪಾವಳಿ: ಇದೇ ಕಾರಣವಾಗಿ ದೀಪಾವಳಿಯ ಸಂದರ್ಭವೂ ಚಾತುರ್ಮಾಸದಲ್ಲಿ ಬರುವುದರಿಂದ ವಿಷ್ಣುವಿನ ಯೋಗ ನಿದ್ರೆಗೆ ಭಂಗ ಬಾರದಿರಲಿ ಎಂದು ಭಕ್ತರು ವಿಷ್ಣುವಿನ ಪೂಜೆ, ಆರಾಧನೆ ಮಾಡುವುದಿಲ್ಲ. ಹಾಗಾಗಿಯೇ ದೀಪಾವಳಿಯ ಸಂದರ್ಭದಲ್ಲಿ ತಾಯಿ ಲಕ್ಷ್ಮಿ ತನ್ನ ಪತಿ ವಿಷ್ಣುವಿನ ಜೊತೆಗೆ ಬಾರದೆ, ತನ್ನ ಭಕ್ತರ ಮನೆಗೆ ಬರುತ್ತಾಳೆ. ಆದರೆ ಪ್ರಥಮ ಪೂಜಕ ಗಣೇಶ ಇತರೆ ದೇವಾನುದೇವತೆಗಳ ಪ್ರತಿನಿಧಿಯಾಗಿ ಲಕ್ಷ್ಮಿಯ ಜೊತೆಜೊತೆಗೆ ಪೂಜಿಸಲ್ಪಡುತ್ತಾನೆ. ದೀಪಾವಳಿಯ ಬಳಿಕ ಕಾರ್ತಿಕ ಹುಣ್ಣಿಮೆಯ ದಿನ ಭಗವಂತ ವಿಷ್ಣು ತನ್ನ ಯೋಗ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಅಂದು ವಿಶೇಷವಾಗಿ ಮತ್ತೊಮ್ಮೆ ಭಗವಂತ ವಿಷ್ಣು ಜೊತೆಗೂಡಿ ಲಕ್ಷ್ಮಿ ಮತ್ತು ಇತರೆ ದೇವ-ದೇವತೆಗಳಿಗೆ ಒಟ್ಟಿಗೆ ಪೂಜಿಸುತ್ತಾರೆ. ಕಾರ್ತಿಕ ಮಾಸದ ಹುಣ್ಣಿಮೆಯ ದಿನವನ್ನು ದೇವ ದೀಪಾವಳಿ (Deva Deepawali) ಎಂದೂ ಕರೆಯುತ್ತಾರೆ.

(Diwali 2021 Why Vishnu Is Not Worshiped On Deepawali what is deva Deepawali)

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು