AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Drusti Dosha: ದೃಷ್ಟಿ ದೋಷ ನಿವಾರಣೆ ಮಾಡಲು ಕಲ್ಲು ಉಪ್ಪನ್ನು ಈ ರೀತಿ ಬಳಸಿ

ನೀಚ ನೋಟ, ಅಸೂಯೆಯ ಭಾವನೆಯಿಂದ ದೃಷ್ಟಿದೋಷ ಉಂಟಾಗುತ್ತದೆ. ಇದರಿಂದ ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಅವು ಯಶಸ್ಸು ಕಾಣುವುದಿಲ್ಲ. ಅಂಥ ಸಮಯದಲ್ಲಿ ಬಲ್ಲವರಿಂದ ದೃಷ್ಟಿದೋಷವನ್ನು ನಿವಾರಿಸಿಕೊಳ್ಳುವುದೇ ಸೂಕ್ತ. ಹಾಗಾದರೆ ದೃಷ್ಟಿದೋಷ ನಿವಾರಣೆ ಮಾಡಿಕೊಳ್ಳುವುದು ಹೇಗೆ? ಇದಕ್ಕೆ ಕಲ್ಲು ಉಪ್ಪು ಹೇಗೆ ಸಹಕಾರಿ? ಇಲ್ಲಿದೆ ಮಾಹಿತಿ.

Drusti Dosha: ದೃಷ್ಟಿ ದೋಷ ನಿವಾರಣೆ ಮಾಡಲು ಕಲ್ಲು ಉಪ್ಪನ್ನು ಈ ರೀತಿ ಬಳಸಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: May 18, 2024 | 12:06 PM

Share

ನರದೃಷ್ಟಿಗೆ ಕಲ್ಲು ಕೂಡಾ ಸಿಡಿದು ಚೂರಾಗುತ್ತದೆ ಎಂಬ ಮಾತನ್ನು ನೀವು ಕೇಳಿರಬಹುದು. ನೀಚ ನೋಟ, ಅಸೂಯೆಯ ಭಾವನೆಯಿಂದ ದೃಷ್ಟಿದೋಷ ಉಂಟಾಗುತ್ತದೆ. ಇದರಿಂದ ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಅವು ಯಶಸ್ಸು ಕಾಣುವುದಿಲ್ಲ. ಅಂಥ ಸಮಯದಲ್ಲಿ ಬಲ್ಲವರಿಂದ ದೃಷ್ಠಿದೋಷವನ್ನು ನಿವಾರಿಸಿಕೊಳ್ಳುವುದೇ ಸೂಕ್ತ ಪರಿಹಾರ. ಇದನ್ನು ಆಡು ಭಾಷೆಯಲ್ಲಿ ದೃಷ್ಟಿ ತೆಗೆಯುವುದು ಎನ್ನುತ್ತೇವೆ. ಕೆಲವು ಊರುಗಳಲ್ಲಿ ಮಹಿಳೆಯರು ಈ ಕೆಲಸವನ್ನು ವಿವಿಧ ರೀತಿಯಲ್ಲಿ ಮಾಡುತ್ತಾರೆ. ಇದು ಕೆಲವರಿಗೆ ಮೂಢನಂಬಿಕೆ ಎನಿಸಬಹುದು ಆದರೆ ಈ ದೋಷವನ್ನು ಕಡೆಗಣಿಸುವಂತಿಲ್ಲ.

ದೃಷ್ಟಿದೋಷದ ಲಕ್ಷಣಗಳೇನು?

ಯಾವುದೇ ವ್ಯಕ್ತಿಗೆ ದೃಷ್ಟಿದೋಷ ತಗಲಿದ್ದರೆ ಆತನ ಆರೋಗ್ಯ ಹಾಳಾಗುತ್ತದೆ. ಕಣ್ಣು ಮತ್ತು ತಲೆ ಭಾರವಾಗುತ್ತದೆ. ಕಣ್ಣಿನಲ್ಲಿ ನೀರು ಸುರಿಯುತ್ತದೆ. ಜೊತೆಗೆ ಊಟ ಅಥವಾ ತಿಂಡಿ ತಿನ್ನಲು ಮನಸ್ಸಿರುವುದಿಲ್ಲ. ನಿದ್ದೆಯೂ ಸರಿಯಾಗಿ ಬರುವುದಿಲ್ಲ. ಅಂಗಡಿ ಅಥವಾ ವ್ಯಾಪಾರ ಸಂಸ್ಥೆಗೆ ದೃಷ್ಟಿ ತಗುಲಿದರೆ ವ್ಯಾಪಾರ ಕಡಿಮೆಯಾಗುತ್ತದೆ. ಮನೆಗೆ ದೃಷ್ಟಿ ತಗುಲಿದಾಗ ಗೋಡೆಗಳಿಗೆ ಬಿರುಕು ಕಾಣಿಸಿಕೊಳ್ಳುತ್ತವೆ. ಗಿಡ ಮರಗಳಿಗೆ ದೃಷ್ಟಿದೋಷ ತಗುಲಿದಾಗ ಅವು ಒಣಗಲು ಪ್ರಾರಂಭಿಸುತ್ತವೆ. ಕೆಲವೊಮ್ಮೆ ಫಸಲು ನಿಂತು ಹೋಗಬಹುದು. ಚಿಕ್ಕ ಮಕ್ಕಳಿಗೆ ದೃಷ್ಟಿದೋಷ ಆದರೆ ದಿನಪೂರ್ತಿ ಅಳುವುದು, ವಾಂತಿ ಇನ್ನಿತರ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: ಜಾತಕದಲ್ಲಿ ಮಂಗಳ ದೋಷವಿದ್ದರೆ ವಿವಾಹದಲ್ಲಿ ಅಡೆತಡೆ ತಪ್ಪಿದ್ದಲ್ಲ! ಇದಕ್ಕೆ ಪರಿಹಾರವೇನು?

ಇದಕ್ಕೆ ಪರಿಹಾರವೇನು?

ಮನೆಯಲ್ಲಿಯೇ ಕಲ್ಲು ಉಪ್ಪನ್ನು ಬಳಸಿಕೊಂಡು ದೃಷ್ಟಿದೋಷದಿಂದ ಮುಕ್ತಿ ಪಡೆದುಕೊಳ್ಳಬಹುದು. ಹೊರಗೆ ಹೋಗಿ ಬಂದ ಸಂದರ್ಭದಲ್ಲಿ ಒಂದು ಗಾಜಿನ ಲೋಟಕ್ಕೆ ನೀರನ್ನು ಹಾಕಿ ಅದಕ್ಕೆ ಎರಡು ಚಮಚ ಕಲ್ಲು ಉಪ್ಪನ್ನು ಸೇರಿಸಿ ಅದಾದ ನಂತರ ನಿಮ್ಮ ಅಜ್ಜಿ ಅಥವಾ ಅಮ್ಮನ ಹತ್ತಿರ ಕೊಟ್ಟು ಅದನ್ನು ಎಡಗೈಯಲ್ಲಿ ಇಟ್ಟುಕೊಂಡು ಏಳು ಬಾರಿ ತಲೆಯಿಂದ ಕಾಲಿನವರೆಗೆ ನಿವಾಳಿಸಿ ಬಳಿಕ ಅದನ್ನು ಮೂರು ದಾರಿ ಕೂಡುವಲ್ಲಿ, ಇಲ್ಲವಾದಲ್ಲಿ ನಿಮ್ಮ ಮನೆಯ ಸಿಂಕ್ ಗಳಲ್ಲಿ ಚೆಲ್ಲಿರಿ. ಇದರಿಂದ ದೃಷ್ಠಿ ದೋಷ, ಶತ್ರು ಬಾಧೆ ಇದ್ದಲ್ಲಿ ನಿವಾರಣೆಯಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ