AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿ 2021 ಐದನೇ ದಿನ: ಯಾರು ಈ ಸ್ಕಂದಮಾತಾ? ಇಲ್ಲಿದೆ ಮಂತ್ರ

Navratri 2021: ಪಾತಾಳಲೋಕದಲ್ಲಿರುವ ತಾರಕಾಸುರ ಎಂಬ ರಾಕ್ಷಸನನ್ನು ವಧೆ ಮಾಡಲು, ದೇವಿ ಸ್ಕಂದನಿಗೆ ಜನ್ಮ ಕೊಡ್ತಾಳೆ. ಆದ್ದರಿಂದ ಈಕೆಯನ್ನು ಸ್ಕಂದಮಾತಾ ಅಂತಾ ಕರೆಯಲಾಗುತ್ತೆ. ಸ್ಕಂದಮಾತೆಯ ರೂಪ ಅತ್ಯಂತ ವಿಶಿಷ್ಟ. ಈ ದೇವಿ ಸಿಂಹದ ಮೇಲೆ ಕುಳಿತಿರುತ್ತಾಳೆ. ಶ್ವೇತವರ್ಣಳಾಗಿ ಸುಂದರವಾಗಿ ಕಾಣುತ್ತಾಳೆ.

ನವರಾತ್ರಿ 2021 ಐದನೇ ದಿನ: ಯಾರು ಈ ಸ್ಕಂದಮಾತಾ? ಇಲ್ಲಿದೆ ಮಂತ್ರ
ಸ್ಕಂದಮಾತಾ
TV9 Web
| Updated By: ಸುಷ್ಮಾ ಚಕ್ರೆ|

Updated on: Oct 11, 2021 | 6:39 AM

Share

ನವರಾತ್ರಿಯ ಒಂಬತ್ತು ದಿನವೂ ದುರ್ಗೆಯ ಆರಾಧನೆಗೆ ಪ್ರಶಸ್ತ. ಈ ವೇಳೆ ನವದುರ್ಗೆಯರನ್ನು ಆರಾಧಿಸೋದು ವಿಶೇಷ. ನವರಾತ್ರಿಯ ಐದನೇ ದಿನ ಕರುಣೆ ತುಂಬಿದ ಸ್ಕಂದಮಾತಾ ದೇವಿಯ ಆರಾಧನೆಗೆ ಮೀಸಲು. ಧರ್ಮಗ್ರಂಥಗಳ ಪ್ರಕಾರ ಮೂರ್ಖನಅದರೂ ಈಕೆಯ ಕೃಪೆಯಿಂದ ಬುದ್ಧವಂತನಾಗುತ್ತಾನೆ. ನವದುರ್ಗೆಯರಲ್ಲಿ ಸ್ಕಂದಮಾತೆಯದ್ದು ಐದನೇ ರೂಪ. ಪುರಾಣದ ಪ್ರಕಾರ, ದುರ್ಗೆಗೆ ಸ್ಕಂದಮಾತಾ ಎಂದು ಹೆಸರು ಬರಲು ಒಂದು ಕಾರಣವಿದೆ.

ಅದೇನಂದ್ರೆ, ಪಾತಾಳಲೋಕದಲ್ಲಿರುವ ತಾರಕಾಸುರ ಎಂಬ ರಾಕ್ಷಸನನ್ನು ವಧೆ ಮಾಡಲು, ದೇವಿ ಸ್ಕಂದನಿಗೆ ಜನ್ಮ ಕೊಡ್ತಾಳೆ. ಆದ್ದರಿಂದ ಈಕೆಯನ್ನು ಸ್ಕಂದಮಾತಾ ಅಂತಾ ಕರೆಯಲಾಗುತ್ತೆ. ಸ್ಕಂದಮಾತೆಯ ರೂಪ ಅತ್ಯಂತ ವಿಶಿಷ್ಟ. ಈ ದೇವಿ ಸಿಂಹದ ಮೇಲೆ ಕುಳಿತಿರುತ್ತಾಳೆ. ಶ್ವೇತವರ್ಣಳಾಗಿ ಸುಂದರವಾಗಿ ಕಾಣುತ್ತಾಳೆ. ನಾಲ್ಕು ಭುಜಗಳನ್ನು ಹೊಂದಿದ್ದು, ಎರಡು ಕೈಗಳಲ್ಲಿ ಕಮಲಗಳನ್ನು ಹಿಡಿದಿರುತ್ತಾಳೆ. ಇನ್ನು ತಾಯಿಯ ಬಲ ತೊಡೆಯ ಮೇಲೆ ತಾನು ಜನ್ಮ ನೀಡಿದ ಸ್ಕಂದನನ್ನು ಕೂರಿಸಿಕೊಂಡಿರ್ತಾಳೆ. ಸ್ಕಂದಮಾತೆಯದ್ದು ಕರುಣೆ ತುಂಬಿದ ತಾಯಿಯ ರೂಪವಾಗಿದೆ. ಮಾತೃ ಹೃದಯಿ ಆಗಿರುವ ಸ್ಕಂದಮಾತೆಯನ್ನು ಆರಾಧಿಸಲು ವಿಶೇಷ ಮಂತ್ರವಿದೆ. ಈ ಮಂತ್ರವನ್ನು ಜಪಿಸಿದ್ರೆ ಶೀಘ್ರ ಫಲಗಳನ್ನು ಪಡೆಯಬಹುದು ಅನ್ನೋ ನಂಬಿಕೆ ಇದೆ.

ಸ್ಕಂದಮಾತಾ ಮಂತ್ರ ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ

ಸ್ಕಂದಮಾತಾ ಪೂಜಾ ವಿಧಾನ ಬೆಳಗ್ಗೆ ಸ್ನಾನ ಮಾಡಿದ ನಂತರ ಶುದ್ಧವಾದ ಬಟ್ಟೆಗಳನ್ನು ಧರಿಸಿ ಸ್ಕಂದಮಾತೆಯ ವಿಗ್ರಹವನ್ನು ಪೂಜೆಗೆ ಸ್ಥಾಪಿಸಿ ಪೂಜಿಸಬೇಕು. ಗಂಗಾಜಲದಿಂದ ತಾಯಿಯ ವಿಗ್ರಹವನ್ನು ಶುದ್ಧೀಕರಿಸಿ. ಬಳಿಕ ಹೂವುಗಳನ್ನು ಅರ್ಪಿಸಿ ಸಿಹಿತಿಂಡಿಗಳು ಮತ್ತು 5 ವಿಧದ ಹಣ್ಣುಗಳನ್ನು ಅರ್ಪಿಸಬೇಕು. ಕಲಶವನ್ನು ನೀರಿನಿಂದ ತುಂಬಿಸಿ ಮತ್ತು ಅದರಲ್ಲಿ ಕೆಲವು ನಾಣ್ಯಗಳನ್ನು ಹಾಕಿ ಇದರ ನಂತರ ಪೂಜೆಯಲ್ಲಿ ಪ್ರತಿಜ್ಞೆಯನ್ನು ತೆಗೆದುಕೊಂಡು ಅರಿಶಿನ ಕುಂಕುಮವನ್ನು ಸ್ಕಂದಮಾತೆಗೆ ಅನ್ವಯಿಸಿ ತಾಯಿಗೆ ಆರತಿ ಮಾಡಿ ಮಂತ್ರವನ್ನು ಪಠಿಸಬೇಕು. ನವರಾತ್ರಿಯ ಐದನೇ ದಿನ ಪುರಾಣದ ಪ್ರಕಾರ ಅತ್ಯಂತ ಮಹತ್ವದ್ದು ಎಂದು ಉಲ್ಲೇಖವಿದೆ. ಈ ದಿನ ವಿಶೇಷವಾಗಿ ಸ್ಕಂದಮಾತೆಯನ್ನು ಪೂಜಿಸಿದ್ರೆ ಆದಿಶಕ್ತಿಯ ಸಂಪೂರ್ಣ ಆಶೀರ್ವಾದ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಸ್ಕಂದಮಾತೆಯ ಆರಾಧನೆಯಿಂದ ಏನೆಲ್ಲ ಫಲಗಳು ಪ್ರಾಪ್ತಿಯಾಗುತ್ವೆ.

ಸ್ಕಂದಮಾತಾ ಪೂಜಾ ಫಲಗಳು -ಈಕೆ ತಪ್ಪಿತಸ್ಥರ ಪಾಲಿನ ಕ್ಷಮಯಾಧರಿತ್ರಿ. -ಸುಖ, ಪರಮಶಾಂತಿಯನ್ನು ನೀಡ್ತಾಳೆ. -ಸ್ಕಂದಮಾತಾ ಪೂಜೆಯಿಂದ ಮೋಕ್ಷ ಪ್ರಾಪ್ತಿ. -ಸ್ಕಂದಮಾತಾ ಆರಾಧನೆಯಿಂದ ಸಾತ್ವಿಕ ಕಳೆ ಬರುತ್ತೆ. -ಸ್ಕಂದಮಾತಾ ಸ್ಮರಣೆಯಿಂದ ಸ್ಕಂದನನ್ನು ಪೂಜಿಸಿದ ಪುಣ್ಯಪ್ರಾಪ್ತಿ.

ಇದನ್ನೂ ಓದಿ: ನವರಾತ್ರಿ 2021 ನಾಲ್ಕನೇ ದಿನ: ಕೂಷ್ಮಾಂಡ ದೇವಿಯ ಆರಾಧನೆ ಹೇಗೆ?

Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು