AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ganesh Chaturthi 2022: ಲೋಕ ಸುತ್ತು ಎಂದರೆ ಹೆತ್ತವರೇ ನನ್ನ ಜಗತ್ತು ಎಂದ ಗಣಪ

Ganesh Chaturthi 2022: ಗಣಪತಿಯ ಕಲ್ಪನೆಯಲ್ಲಿ ಹಲವು ಸ್ವಾರಸ್ಯ ಕಥೆಗಳು ಸೇರಿಕೊಂಡಿವೆ. ಗಣಪತಿಗೆ  ಸಿದ್ಧಿ ಬುದ್ಧಿ ಎಂಬ  ಇಬ್ಪಬರು ಮಡದಿಯರು,  ನಮ್ಮ ಎಲ್ಲಾ ಜ್ಞಾನಕ್ಕೂ ಅವನೇ  ಯಜಮಾನ .ಅವನದ್ದು ಆನೆಯ ಮುಖ. ಇದು ಓಂಕಾರವನ್ನು ಸೂಚಿಸುತ್ತದೆ ಅವನು ಪ್ರಾಣವಸ್ವರೂಪಿ .

Ganesh Chaturthi 2022: ಲೋಕ ಸುತ್ತು ಎಂದರೆ ಹೆತ್ತವರೇ ನನ್ನ ಜಗತ್ತು ಎಂದ ಗಣಪ
Ganesh Chaturthi 2022
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 31, 2022 | 7:41 AM

Share

ಹಿಂದೂ ಧರ್ಮದಲ್ಲಿ ಎಲ್ಲಾ ದೇವತೆಗಳಲ್ಲಿ ಗಣಪ ಮೊದಲ ಪ್ರಾಶಸ್ತ್ಯ ಅಥವಾ ಅಗ್ರಗಣ್ಯ ಎಂದು ಪರಿಗಣಿಸಲ್ಪಡುತ್ತದೆ. ಏಕೆಂದರೆ ಗಣಪ ವಿಘ್ನವಿನಾಶಕ ಯಾವುದೇ ಕಾರ್ಯ ಪ್ರಾರಂಭಿಸುವಾಗ ವಿಘ್ನ ಬರದಂತೆ ಗಣಪನ ಪೂಜಿಸುವ ವಾಡಿಕೆ.‌ ನಾವೆಲ್ಲ ಚಿಕ್ಕದಿಂದಲೇ ವಿದ್ಯೆ ಪ್ರಾರಂಭಿಸುವಾಗ ಸರಸ್ವತಿಯನ್ನು ಪೂಜಿಸುವುದರ ಜೊತೆಗೆ ಗಣಪತಿಯನ್ನು ಪೂಜಿಸುವುದು ಕೂಡಾ ಒಂದು ಪದ್ಧತಿಯಾಗಿತ್ತು. ಅದಕ್ಕೆ ಅಷ್ಟೇ ಮಹತ್ವವು ಇತ್ತು .ಗಣಪತಿ ಅಂದರೆ ಹಲವು ಗಣಗಳ ಅಧಿಪತಿ.

ನಮ್ಮ ಜೀವನದಲ್ಲಿ ಕೆಲವೊಮ್ಮೆ ಹೆಜ್ಜೆ ಹೆಜ್ಜೆಗೂ ವಿಘ್ನ ಆತಂಕಗಳು ಎದುರಾಗುತ್ತಲೇ ಇರುತ್ತವೆ. ಈ ತೊಂದರೆಗಳನ್ನು ನಿರ್ವಹಿಸಬಲ್ಲ ದೇವರಾಗಿ ನಿಂತವನು  ಗಣಪತಿ. ಅವನಿಗೆ ಹಲವಾರು  ಹೆಸರುಗಳಿವೆ ಗಣೇಶ, ಸುಮುಖ, ವಿನಾಯಕ, ವಿಘ್ನನಾಯಕ, ಗೌರಿ ಪುತ್ರ, ಗಜಾನನ, ಲಂಬೋದರ, ಏಕದಂತ, ಶಿವಸುತ, ಹೀಗೆ ಹಲವಾರು ಹೆಸರುಗಳಿವೆ.

ಗಣಪತಿಯ ಕಲ್ಪನೆಯಲ್ಲಿ ಹಲವು ಸ್ವಾರಸ್ಯ ಕಥೆಗಳು ಸೇರಿಕೊಂಡಿವೆ. ಗಣಪತಿಗೆ  ಸಿದ್ಧಿ ಬುದ್ಧಿ ಎಂಬ  ಇಬ್ಪಬರು ಮಡದಿಯರು,  ನಮ್ಮ ಎಲ್ಲಾ ಜ್ಞಾನಕ್ಕೂ ಅವನೇ  ಯಜಮಾನ .ಅವನದ್ದು ಆನೆಯ ಮುಖ. ಇದು ಓಂಕಾರವನ್ನು ಸೂಚಿಸುತ್ತದೆ ಅವನು ಪ್ರಾಣವಸ್ವರೂಪಿ .ಅವನ ಕಿವಿಗಳು ವಿಶಾಲವಾಗಿದೆ.ಅವನ ದೊಡ್ಡದಾದ ಹೊಟ್ಟೆಯು ಇಡೀ ಬ್ರಹ್ಮಾಂಡವನ್ನೇ ಸೂಚಿಸುತ್ತದೆ.ಒಟ್ಟಿನಲ್ಲಿ ಗಣಪತಿಯ ಒಂದೊಂದು ವಿವರವೂ ಒಂದೊಂದು ಮಹತ್ವವನ್ನು ಸೂಚಿಸುತ್ತದೆ.

ಗಣಪತಿಗೆ ಆನೆಯ ಮುಖವಿದೆ. ಅವನ ಒಂದು ದಂತ ಮುರಿದಿದೆ .ಹಾಗೆ ಮುರಿದದ್ದು ಏಕೆ ಎಂದು ಕಥೆಯಿದೆ. ಮಹಾಭಾರತದ ಮಹಾ ಕಾವ್ಯವನ್ನು ಬರೆಯುವಾಗ ಅವನ ಲೇಖನಿ ಬರೆಯುಲು ತುಂಬಾ ಕಷ್ಟವಾಗಿತ್ತು,  ಹಾಗೆ ಮಹಾಭಾರತ ಬರೆಯುವುದನ್ನು ಮುಂದುವರೆಸುವುದಕ್ಕಾಗಿ ತನ್ನ ದಂತರವನ್ನೇ ಮುರಿದು ಲೇಖನಿಯಾನ್ನಾಗಿ ಮಾಡಿಕೊಂಡನು. ಹೀಗೆ ಒಳ್ಳೆಯದಕ್ಕಾಗಿ ಗಣಪ‌ ದಂತ ತ್ಯಾಗ ಮಾಡಿ ಮುಂದೆ ಒಳ್ಳೇ ಸಂದೇಶ ರವಾನೆ ಮಾಡಿದ ಅಂತ ಕಥೆ ಹೇಳುತ್ತದೆ.

ಗಣಪತಿಯ ತಾಯಿ ಪಾರ್ವತಿ ಮೈಯಿಂದ ಹುಟ್ಟಿದವನು ಸ್ವರ್ಣ ಗೌರಿಯ ಮಾನಸ ಪುತ್ರ ಈತ. ಗೌರಿ ಸ್ನಾನ ಕ್ಕೆ ಹೋಗುವಾಗ ಗಣಪತಿ ಜೊತೆ ಮನೆಯಬಾಗಿಲು ಕಾಯಲು ಹೇಳುತ್ತಾಳೆ . ತಾಯಿಯ ಮಾತಿನಂತೆ ಗಣಪತಿ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪತಿ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ . ಇದರಿಂದ ಕೋಪ ಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುತ್ತಾನೆ. ಸ್ನಾನ ಮುಗಿಸಿ ಬಂದ ಗೌರಿ ಮಗನನ್ನು ಕಂಡು ರೋದಿಸುತ್ತಾಳೆ . ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದಾರೆ ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆದೇಶಿಸುತ್ತಾನೆ. ಗಣಗಳು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಆನೆಯ ತಲೆಯನ್ನು ಕತ್ತರಿಸಿ ತರುತ್ತಾರೆ, ನಂತರ ಅದನ್ನು ಗಣಪನ ಶರೀರಕ್ಕೆ ಜೋಡಿಸುತ್ತಾರೆ  ಹೀಗಾಗಿ ಗಣಪ ಗಜಮುಖನಾಗಿ ಗಣಗಳು ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ.

ಗಣಪ ತನ್ನ ಹಿರಿಯರಿಗೆ ಗೌರವ ಕೊಡುವ ಒಂದು ದಂತ ಕಥೆಯಿದೆ ಶಿವ ಪಾರ್ವತಿ ಒಮ್ಮೆ ತನ್ನ ಮಕ್ಕಳಾದ ಸುಬ್ರಮಣ್ಯ ಹಾಗೂ ಗಣಪತಿ ಇವರಿಬ್ಬರಿಗೆ ಒಂದು ಸ್ಪರ್ಧೆ ಏರ್ಪಡಿಸಿದ್ದರು. ಗೆದ್ದವರಿಗೆ ಒಂದು ವಿಶೇಷವಾದ ಹಣ್ಣನ್ನು ಕೊಡುವುದೆಂದು ಮಾತು ಹೇಳಿದರು. ಸ್ಪರ್ಧೆ ಇಡೀ ಭೂಮಿಗೆ ಮೂರು ಸುತ್ತು ಬೇಗನೆ ಯಾರು ಬರುತ್ತಾರೆ ಅವರಿಗೆ ಎಂದು .ಸುಬ್ರಹ್ಮಣ್ಯ ತನ್ನ ವಾಹನ ನವಿಲು ಏರಿ ಹೋರಾಟ. ಆದರೆ ಗಣಪತಿ ವಾಹನ ಇಲಿ ಆಗ ಗಣಪ ತನ್ನ ತಂದೆ- ತಾಯಿಗೆ ಮೂರು ಸುತ್ತು ಹಾಕಿ ತನ್ನ ಇವರೇ ತನ್ನ ಲೋಕ ಎಂದು  ಗೌರವ ಕೊಟ್ಟು ಸ್ಪರ್ಧೆಯಲ್ಲಿ ವಿಜಯಶಾಲಿಯಾದ.

ಹೀಗೆ ಗಣಪತಿ ಅನೇಕ ದಂತ ಕಥೆ ಗಳನ್ನು ನಮ್ಮ ಪುರಾಣದಲ್ಲಿ ನಮ್ಮ ಹಿರಿಯರು ನಮ್ಮ ಜೀವನದಲ್ಲಿ ನಂಬಿಕೆಯಾಗಿ ಮತ್ತು ಅವುಗಳನ್ನು ನಮ್ಮ ಬದುಕಿನಲ್ಲಿ ಪಾಲಿಸುವಂತೆ ಸಾಕ್ಷಿಯಾಗಿರಿಸಿದ್ದಾರೆ.   ಗಣಪತಿಯ ಒಂದೊಂದು ಕಥೆಯು ಬಹಳ ಅರ್ಥಪೂರ್ಣವಾಗಿದೆ. ಹಾಗಾಗಿ ಇಂದಿಗೂ ಗಣೇಶ ಚತುರ್ಥಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ .

ಜಯಶ್ರೀ.ಸಂಪ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್