AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭ ಸಂಸ್ಕಾರ: ಸಂಗೀತವನ್ನು ಅಬಾಲ ವೃದ್ಧರಾಗಿ ಎಲ್ಲರೂ ಇಷ್ಟಪಡುತ್ತಾರೆ, ಗರ್ಭಾವಸ್ಥೆಯಲ್ಲಿ ಸಂಗೀತದ ಮಹತ್ವ ತಿಳಿಯಿರಿ!

Garbha Sanskar: ಗರ್ಭಾವಸ್ಥೆಯಲ್ಲಿ ತಾಯಿ ಸಂಗೀತ ಕೇಳಿದರೆ, ಮಗುವಿನ ಮೆದುಳು ಅದನ್ನು ಗ್ರಹಿಸಿ ನೆನಪಿನಲ್ಲಿ ಉಳಿಸಿಕೊಂಡಿರುತ್ತದೆ. ಹುಟ್ಟಿದ ನಂತರ ಅದೇ ಹಾಡನ್ನು ನೀವು ಮಗುವಿನ ಕೋಣೆಯಲ್ಲಿ ಕೇಳಿದರೆ ಮಗು ಸುಲಭವಾಗಿ ನಿದ್ರೆಗೆ ಜಾರುತ್ತದೆ. ಅಂದರೆ, ತಾಯಿ ಗರ್ಭಾವಸ್ಥೆಯಲ್ಲಿ ಮಾಡುವ ಕೆಲಸಗಳು, ಅವಳ ಮನಸ್ಥಿತಿ ಮಗುವಿನ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ.

ಗರ್ಭ ಸಂಸ್ಕಾರ: ಸಂಗೀತವನ್ನು ಅಬಾಲ ವೃದ್ಧರಾಗಿ ಎಲ್ಲರೂ ಇಷ್ಟಪಡುತ್ತಾರೆ, ಗರ್ಭಾವಸ್ಥೆಯಲ್ಲಿ ಸಂಗೀತದ ಮಹತ್ವ ತಿಳಿಯಿರಿ!
ಗರ್ಭ ಸಂಸ್ಕಾರ: ಸಂಗೀತವನ್ನು ಅಬಾಲ ವೃದ್ಧರಾಗಿ ಎಲ್ಲರೂ ಇಷ್ಟಪಡುತ್ತಾರೆ, ಗರ್ಭಾವಸ್ಥೆಯಲ್ಲಿ ಸಂಗೀತದ ಮಹತ್ವ ತಿಳಿಯಿರಿ!
TV9 Web
| Updated By: ಸಾಧು ಶ್ರೀನಾಥ್​|

Updated on: Jan 04, 2022 | 6:06 AM

Share

ಗರ್ಭ ಸಂಸ್ಕಾರ: ಹಿಂದೂ ಧರ್ಮದಲ್ಲಿ 16 ಸಂಸ್ಕಾರಗಳು ಆಚರಣೆಯಲ್ಲಿವೆ. ಅದರಲ್ಲಿ ಗರ್ಭ ಸಂಸ್ಕಾರವೂ ಒಂದು. ಪುರಾಣದಲ್ಲಿ… ಪ್ರಹ್ಲಾದ ಗರ್ಭದಲ್ಲಿದ್ದಾಗ ನಾರದ ಕಲಿಸಿದ ವಿಷ್ಣು ನಾಮ ಜಪ ಅವನ ವ್ಯಕ್ತಿತ್ವವನ್ನು ರೂಪಿಸಿತ್ತು. ತಾಯಿ ಸುಭದ್ರೆ ಗರ್ಭದಲ್ಲಿದ್ದಾಗಲೇ ಚಕ್ರವ್ಯೂಹ ಭೇದಿಸುವ ವಿದ್ಯೆಯನ್ನು ಕಲಿತ ಅಭಿಮನ್ಯುವಿನ ಕಥೆ ಎಲ್ಲರಿಗೂ ಗೊತ್ತಿದೆ. ಗರ್ಭಸಂಸ್ಕಾರ (Garbha Samskara) ಅಂದರೆ ಹೊಟ್ಟೆಯೊಳಗೆ ಬೆಳೆಯುತ್ತಿರುವ ಮಗುವಿನಿಂದಲೇ, ಅದಕ್ಕೆ ಶಿಕ್ಷಣ ನೀಡುವುದು ಎಂದರ್ಥ. ಮಕ್ಕಳು ತಾಯಿಯ ಹೊಟ್ಟೆಯೊಳಗಿರುವಾಗಲೇ ಎಲ್ಲವನ್ನು ಗ್ರಹಿಸಿ, ನೆನಪಿನಲ್ಲಿ ಇರಿಸಿಕೊಳ್ಳುತ್ತಾರೆ ಎಂದು ಜ್ಞಾನಿಗಳು ಮತ್ತು ವಿಜ್ಞಾನಿಗಳು ಕೂಡ ತಿಳಿಸುತ್ತಾರೆ. ಹಾಗಾದರೆ, ಗರ್ಭಾವಸ್ಥೆಯಲ್ಲಿ ಗರ್ಭಿಣಿ ಸಂಗೀತ/ಭಜನೆ ಕೇಳುವುದರಿಂದಾಗುವ (Garbha sanskar music) ಪ್ರಯೋಜನಗಳೇನೆಂದು ತಿಳಿಯೋಣ. ಹಾಡುಗಳು ಮನಸ್ಸನ್ನು ಉಲ್ಲಾಸದಿಂದಿಡುತ್ತದೆ. ಸಂಗೀತವನ್ನು ಇಷ್ಟಪಡದವರಿಲ್ಲ. ಪುಟ್ಟ ಮಕ್ಕಳಿನಿಂದ ಹಿಡಿದು ವಯಸ್ಸಾದವರು ಸಹ ಸಂಗೀತವನ್ನು ಇಷ್ಟ ಪಡುತ್ತಾರೆ. ಗರ್ಭಾವಸ್ಥೆಯಲ್ಲಿ ಸಂಗೀತ ಕೇಳುವುದರಿಂದ ಒಳಗಿರುವ ನಿಮ್ಮ ಪುಟ್ಟ ಕೂಸು (foetus in womb) ಎಷ್ಟು ಖುಷಿ ಪಡುತ್ತದೆ ಎಂದು ನಿಮಗೆ ಗೊತ್ತೇ?

1. ಮಗುವಿನ ಶಬ್ಧಗ್ರಹಿಕೆಯನ್ನು ವೃದ್ಧಿಸುತ್ತದೆ: ಬಳಸಿ ಸಂಗೀತವನ್ನು ಆಲಿಸುವುದರಿಂದ ಮಗುವಿಣ ಶಬ್ದ ಗ್ರಹಿಕೆಯ ಶಕ್ತಿ ಹಾಗು ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಲಿದೆ. ಏನೂ ಅರ್ಥ ಆಗದೇ ಇದ್ದರೂ ಹಾಡುಗಳಿಂದ ಹೊರಬರುವ ಶಬ್ದಗಳಿಗೆ ಕಿವಿಗೊಟ್ಟು ಕೇಳುತ್ತವೆ. ಇದರಿಂದ ಮಗುವಿನ ಗ್ರಹಣ ಶಕ್ತಿ ಮತ್ತಷ್ಟು ವೃದ್ಧಿಸುತ್ತದೆ.

2. ಮಗುವಿನ ಚಲನವಲನ ವೃದ್ಧಿಸುತ್ತದೆ: ನೀವು ಹಾಡುಗಳನ್ನು ಆಲಿಸುವಾಗ, ಶಬ್ದ ಹಾಗು ತಾಳಗಳಿಗೆ ಅನುಗುಣವಾಗಿ ಮಗು ಹೊಟ್ಟೆಯೊಳಗೆ ಚಲನೆ ಮಾಡುವುದು, ಕಾಲಿನಿಂದ ಹೊಟ್ಟೆಗೆ ಓದಿಯುವುದನ್ನು ಮಾಡುತ್ತದೆ. ಇದು ಶಬ್ಧಗಳಿಗೆ ಮಗು ಹೇಗೆ ಪ್ರತಿಕ್ರೊಯಿಸುತ್ತದೆ ಎಂದು ತಿಳಿಸುತ್ತದೆ.

3. ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ: ಕೇವಲ ಮಾನಸಿಕವಲ್ಲ, ಶಾರೀರಿಕ ಬೆಳವಣಿಗೆಗೂ ಸಂಗೀತ ಸಹಕಾರಿಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕರ್ಕಶ ಹಾಡುಗಳು ಮಗುವನ್ನು ಕೊಪೋದ್ರಿಕ್ತರನ್ನಾಗಿ ಮಾಡುತ್ತದೆ. ಆದರೆ ಮೃದು ಸಂಗೀತ ಮಗುವಿನ ಮನಸ್ಸನ್ನು ತಿಳಿಗೊಳಿಸಿ, ಹುಟ್ಟಿದ ನಂತರ ಜೋಗುಳದಂತೆ ಅನ್ನಿಸಿ ನಿದ್ರೆಗೆ ಜಾರುತ್ತದೆ.

4. ಮಗುವಿನ ಮನಸ್ಸಿನ ಒತ್ತಡ ಕಡಿಮೆಗೊಳಿಸುತ್ತದೆ: ಒತ್ತಡ ಕೇವಲ ದೊಡ್ದವರಿಗಲ್ಲ, ಹೊಟ್ಟೆಯಲ್ಲಿರುವ ನಿಮ್ಮ ಕಂದಮ್ಮಗಳು ಕೂಡ ಒತ್ತಡಕ್ಕೆ ಒಳಗಾಗುತ್ತವೆ. ಸಂಗೀತ ಕೇಳುವುದರಿಂದ ಮಗುವಿನ ಮನಸ್ಸು ಪ್ರಶಾಂತವಾಗಿ, ಚೆನ್ನಾಗಿ ನಿದ್ರೆ ಮಾಡುತ್ತದೆ.

5. ಹುಟ್ಟಿದ ನಂತರ, ಜೋಗುಳದಂತೆ.. ಗರ್ಭಾವಸ್ಥೆಯಲ್ಲಿ ತಾಯಿ ಸಂಗೀತ ಕೇಳಿದರೆ, ಮಗುವಿನ ಮೆದುಳು ಅದನ್ನು ಗ್ರಹಿಸಿ ನೆನಪಿನಲ್ಲಿ ಉಳಿಸಿಕೊಂಡಿರುತ್ತದೆ. ಹುಟ್ಟಿದ ನಂತರ ಅದೇ ಹಾಡನ್ನು ನೀವು ಮಗುವಿನ ಕೋಣೆಯಲ್ಲಿ ಕೇಳಿದರೆ ಮಗು ಸುಲಭವಾಗಿ ನಿದ್ರೆಗೆ ಜಾರುತ್ತದೆ. ಇವೆಲ್ಲವುದರಿಂದ ನಮಗೆ ತಿಳಿದುಬರುವುದು, ತಾಯಿ ಗರ್ಭಾವಸ್ಥೆಯಲ್ಲಿ ಮಾಡುವ ಕೆಲಸಗಳು, ಅವಳ ಮನಸ್ಥಿತಿ ಮಗುವಿನ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಗರ್ಭಾವಸ್ಥೆಯನ್ನು ಸಂತೋಷದಿಂದ ಅನುಭವಿಸಿ. (ಸತ್ಸಂಗ ಸಂಗ್ರಹ)

Also Read: Nitya Puja rituals: ಮನೆಯಲ್ಲಿ ಪೂಜೆ ಪುನಸ್ಕಾರ ಮಾಡುವಾಗ ಈ ಇಪ್ಪತ್ತು ಸರಳ ಆಚಾರ-ವಿಚಾರಗಳನ್ನು ಪಾಲಿಸಿ

Also Read: Pancha Bhootas: ಪಂಚಭೂತಗಳು ನಮ್ಮ ದೇಹದೊಂದಿಗೆ ಹೇಗೆ ಬೆರೆತುಕೊಂಡಿವೆ ಮತ್ತು ಅವುಗಳ ಗುಣವಿಶೇಷಗಳು ಏನು?

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ