
ಸನಾತನ ಧರ್ಮದಲ್ಲಿ 18 ಮಹಾಪುರಾಣಗಳಿಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಅವುಗಳಲ್ಲಿ ಭಗವಾನ್ ವಿಷ್ಣು ಮತ್ತು ಆತನ ವಾಹನವಾದ ಗರುಡನ ನಡುವಿನ ಸಂವಾದವೇ ‘ಗರುಡ ಪುರಾಣ‘. ಆದರೆ, ಇಂದಿಗೂ ಅನೇಕ ಮನೆಗಳಲ್ಲಿ ಗರುಡ ಪುರಾಣವನ್ನು ಇಡಲು ಅಥವಾ ಓದಲು ಜನರು ಹಿಂಜರಿಯುತ್ತಾರೆ. ಮನೆಯಲ್ಲಿ ಗರುಡ ಪುರಾಣವನ್ನು ಇಟ್ಟರೆ ಅಪಶಕುನವಾಗುತ್ತದೆ, ಸಾವು ಸಂಭವಿಸುತ್ತದೆ ಅಥವಾ ನಕಾರಾತ್ಮಕ ಶಕ್ತಿಗಳು ಆವರಿಸುತ್ತವೆ ಎಂಬ ಭೀತಿ ಅನೇಕರಲ್ಲಿದೆ.
ಆದರೆ ಧರ್ಮಶಾಸ್ತ್ರಗಳ ಪ್ರಕಾರ ಇದು ಸಂಪೂರ್ಣವಾಗಿ ಸುಳ್ಳು ಮತ್ತು ತಪ್ಪು ಕಲ್ಪನೆಯಾಗಿದೆ! ಹೌದು, ಗರುಡ ಪುರಾಣವನ್ನು ಮನೆಯಲ್ಲಿ ಖಂಡಿತವಾಗಿಯೂ ಇಡಬಹುದು. ಹಾಗಾದರೆ ಈ ತಪ್ಪು ಕಲ್ಪನೆ ಜನರಲ್ಲಿ ಮೂಡಿದ್ದು ಹೇಗೆ? ಇದನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಗರುಡ ಪುರಾಣದಲ್ಲಿ ಸಾವಿನ ನಂತರ ಆತ್ಮದ ಪ್ರಯಾಣ, ಪುನರ್ಜನ್ಮ, ಸ್ವರ್ಗ-ನರಕಗಳ ಕಲ್ಪನೆ ಮತ್ತು ಪಾಪ-ಪುಣ್ಯಗಳ ಬಗ್ಗೆ ಅತ್ಯಂತ ವಿವರವಾಗಿ ವಿವರಿಸಲಾಗಿದೆ.
ಯಾರಾದರೂ ತೀರಿಕೊಂಡಾಗ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಉದ್ದೇಶದಿಂದ 11 ರಿಂದ 13 ದಿನಗಳ ಶೋಕಾಚರಣೆಯ ಅವಧಿಯಲ್ಲಿ ಗರುಡ ಪುರಾಣದ ಒಂದು ನಿರ್ದಿಷ್ಟ ಭಾಗವನ್ನು (ಪ್ರೇತ ಕಲ್ಪ) ಪಠಿಸುವ ಸಂಪ್ರದಾಯವಿದೆ. ಇದೇ ಕಾರಣಕ್ಕಾಗಿ, ಜನರು ಈ ಪವಿತ್ರ ಗ್ರಂಥವನ್ನು ಕೇವಲ ಸಾವು, ದುಃಖ ಮತ್ತು ಸ್ಮಶಾನ ವೈರಾಗ್ಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರು. ಇದರ ಪುಸ್ತಕವನ್ನು ಮನೆಯಲ್ಲಿ ಇಟ್ಟರೆ ಸಾವು ಹತ್ತಿರವಾಗುತ್ತದೆ ಎಂದು ತಪ್ಪಾಗಿ ಭಾವಿಸಿದರು.
ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?
ಹಿಂದೂ ಧರ್ಮದಲ್ಲಿ ಯಾವುದೇ ಪವಿತ್ರ ಗ್ರಂಥವನ್ನು (ವೇದ, ಉಪನಿಷತ್ ಅಥವಾ ಪುರಾಣ) ಅಶುಭ ಅಥವಾ ಅಮಂಗಳ ಎಂದು ಪರಿಗಣಿಸಲಾಗಿಲ್ಲ. ಗರುಡ ಪುರಾಣವು ಕೇವಲ ಸಾವಿನ ಬಗ್ಗೆ ಮಾತ್ರ ಮಾತನಾಡುವುದಿಲ್ಲ, ಬದಲಿಗೆ ಅದು ನಾವು ಬದುಕಿರುವಾಗ ಹೇಗೆ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂಬುದನ್ನು ಕಲಿಸುವ ‘ಕರ್ಮ ಸಿದ್ಧಾಂತ’ದ ದಿಕ್ಸೂಚಿಯಾಗಿದೆ. ಈ ಗ್ರಂಥದಲ್ಲಿ ಸದಾಚಾರ, ನೀತಿ, ದಾನ ಧರ್ಮದ ಮಹತ್ವ, ಆರೋಗ್ಯ ಸೂತ್ರಗಳು ಮತ್ತು ಭಗವಾನ್ ವಿಷ್ಣುವಿನ ಭಕ್ತಿಯ ಬಗ್ಗೆ ಸುಂದರವಾಗಿ ವಿವರಿಸಲಾಗಿದೆ.
ಭಗವದ್ಗೀತೆ ಅಥವಾ ರಾಮಾಯಣವನ್ನು ನಾವು ಎಷ್ಟು ಭಕ್ತಿ-ಗೌರವಗಳಿಂದ ಮನೆಯಲ್ಲಿ ಇಡುತ್ತೇವೆಯೋ, ಗರುಡ ಪುರಾಣವನ್ನೂ ಅಷ್ಟೇ ಪವಿತ್ರವಾಗಿ ಇಡಬೇಕು:
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ