Good Luck Sign: ಮುಂಜಾನೆ ಅಚಾನಕ್ಕಾಗಿ ಈ ವಸ್ತುಗಳು ಕಾಣುವುದು ಶುಭ ಸೂಚಕ

ಸೂರ್ಯೋದಯ ಸಮಯದಲ್ಲಿ ಮನಸ್ಸು ಬಹಳ ಸೂಕ್ಷ್ಮ ಸ್ಥಿತಿಯಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ಯಾವಾಗಲೂ ಸಕಾರಾತ್ಮಕ ವಿಷಯಗಳನ್ನು ಸ್ವೀಕರಿಸಬೇಕು ಇದರಿಂದ ನಮ್ಮ ಇಡೀ ದಿನ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಬೆಳಿಗ್ಗೆ ಕೆಲವು ವಸ್ತುಗಳು ಕಂಡು ಬಂದರೆ ಶುಭ ಫಲಗಳು ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ.

Good Luck Sign: ಮುಂಜಾನೆ ಅಚಾನಕ್ಕಾಗಿ ಈ ವಸ್ತುಗಳು ಕಾಣುವುದು ಶುಭ ಸೂಚಕ
Edited By:

Updated on: May 17, 2024 | 5:35 PM

ಸೂರ್ಯೋದಯವು ಹೊಸದಿನದ ಆರಂಭವಾಗಿದೆ. ಈ ಸಮಯದಲ್ಲಿ ಮನಸ್ಸು ಬಹಳ ಸೂಕ್ಷ್ಮ ಸ್ಥಿತಿಯಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ಯಾವಾಗಲೂ ಸಕಾರಾತ್ಮಕ ವಿಷಯಗಳನ್ನು ಸ್ವೀಕರಿಸಬೇಕು ಇದರಿಂದ ನಮ್ಮ ಇಡೀ ದಿನ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಬೆಳಿಗ್ಗೆ ಕೆಲವು ವಸ್ತುಗಳು ಕಂಡು ಬಂದರೆ ಶುಭ ಫಲಗಳು ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ.

ಈ ವಸ್ತು ಕಂಡುಬಂದರೆ ಒಳ್ಳೆಯದಾಗುತ್ತೆ!

  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಬೆಳಿಗ್ಗೆ ಎದ್ದಾಗ ಮಾಡಬೇಕಾದ ಮೊದಲ ಕೆಲಸವೆಂದರೆ ಅಂಗೈಗಳನ್ನು ನೋಡಿಕೊಳ್ಳುವುದು. ಏಕೆಂದರೆ ತಾಯಿ ಸರಸ್ವತಿ, ಬ್ರಹ್ಮ ಮತ್ತು ದೇವಿ ಲಕ್ಷ್ಮೀ ನಮ್ಮ ಅಂಗೈನಲ್ಲಿ ವಾಸಿಸುತ್ತಾರೆ ಎಂಬ ನಂಬಿಕೆ ಇದೆ. ಜೊತೆಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟ ಸದಾಕಾಲ ಇರುತ್ತದೆ. ಅಂತೆಯೇ, ಜ್ಯೋತಿಷ್ಯ ಶಾಸ್ತ್ರದಲ್ಲಿ ಇನ್ನು ಕೆಲವು ಚಿಹ್ನೆಗಳನ್ನು ಉಲ್ಲೇಖಿಸಲಾಗಿದೆ.
  • ನೀವು ಬೆಳಿಗ್ಗೆ ಮನೆಯಿಂದ ಹೊರ ಬಂದ ತಕ್ಷಣ ಹಸು ತನ್ನ ಕರುವಿಗೆ ಹಾಲು ನೀಡುವುದನ್ನು ಅಥವಾ ಬಿಳಿ ಹಸು ನಿಮ್ಮ ಮನೆಯ ಬಾಗಿಲಿಗೆ ಬಂದು ಜೋರಾಗಿ ಕೂಗಿದರೆ, ನಿಮ್ಮ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ, ಇದನ್ನು ಅದೃಷ್ಟದ ಅನುಗ್ರಹ ಎನ್ನಲಾಗುತ್ತದೆ.
  • ನೀವು ಬೆಳಿಗ್ಗೆ ಕಣ್ಣು ತೆರೆದ ತಕ್ಷಣ ಶಂಖನಾದ, ದೇವಾಲಯದ ಗಂಟೆಗಳ ಶಬ್ದ ಅಥವಾ ಮಂತ್ರಗಳ ಪಠಣವನ್ನು ಕೇಳಿದರೆ, ಅದು ಮಂಗಳಕರವಾಗಿದೆ. ಈ ರೀತಿ ಘಟನೆ ಬೆಳಗ್ಗಿನ ಸಮಯದಲ್ಲಿ ನಡೆದರೆ ನಿಮಗೆ ಆ ದಿನ ಒಳ್ಳೆಯ ಸುದ್ದಿ ಸಿಗುತ್ತದೆ. ಅರ್ಧಕ್ಕೆ ನಿಂತ ಕೆಲಸವು ಪೂರ್ಣಗೊಳ್ಳುತ್ತದೆ ಎಂದು ನಂಬಲಾಗಿದೆ.
  • ನೀವು ಬೆಳಿಗ್ಗೆ ಎದ್ದಾಗ ಹಾಲು ಅಥವಾ ಮೊಸರನ್ನು ನೋಡಿದರೆ ಅದು ಭವಿಷ್ಯದಲ್ಲಿ ಅದೃಷ್ಟ ಬರುವುದರ ಸೂಚಕವಾಗಿದೆ. ಅಥವಾ ಮುಂಜಾನೆ ಸಮಯದಲ್ಲಿ ನಿಮ್ಮ ಮನೆಯಲ್ಲಿ ಪಕ್ಷಿಗಳ ಚಿಲಿಪಿಲಿ ಕೇಳಿದರೆ ಇದು ಶುಭ ಸೂಚಕವಾಗಿದೆ.
  • ವಿವಾಹಿತ ಮಹಿಳೆ ಸಿಂಗಾರಗೊಂಡು ಪೂಜೆ ಮಾಡುವುದನ್ನು ಅಥವಾ ಪೂಜಾ ತಟ್ಟೆಯನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ಕಂಡರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ.
  • ಪೊರಕೆಯಿಂದ ಮನೆಯನ್ನು ಸ್ವಚ್ಛಗೊಳಿಸುವುದು ಕಂಡುಬಂದರೆ, ಅದು ಸಂಪತ್ತು ಮರಳಿ ಬರುವ ಅಥವಾ ಹೆಚ್ಚಾಗುವ ಸಂಕೇತವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us