AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Elephant Tomb: ಆ ಗ್ರಾಮದಲ್ಲಿ ಆನೆ ಸಮಾಧಿಗೆ 120 ವರ್ಷಗಳಿಂದ ಪೂಜೆ ಮಾಡುತ್ತಿದ್ದಾರೆ!

ಅಹೋಬಿಲಂ ಮಠಾಧೀಶರು ತಮ್ಮ ಪ್ರಯಾಣದಲ್ಲಿ ಆನೆ, ಕುದುರೆ, ಛತ್ರ, ಚಾಮರಗಳೊಂದಿಗೆ ಪ್ರಯಾಣಿಸುತ್ತಿದ್ದರು. 1902ರಲ್ಲಿ ಕುಂಭಕೋಣಂನಿಂದ ಬರುತ್ತಿದ್ದಾಗ ಮಠಾಧೀಶರ ಆನೆಗೆ ಕಾಯಿಲೆ ಬಂತು. ಸುಮಾರು 500 ಕಿ ಮೀ ಪ್ರಯಾಣಿಸಿ ಗುಡಿಪಾಡು ತಲುಪಿದ ನಂತರ ಆನೆ ನಿಂತುಬಿಟ್ಟಿತು. ಮುಂದೆ ಸಾಗಲು ಅದಕ್ಕೆ ಸಾಧ್ಯವಾಗಲಿಲ್ಲ. ಅಲ್ಲಿಂದ ಕದಲದೆ ಪ್ರಾಣ ಬಿಟ್ಟಿತು.

Elephant Tomb: ಆ ಗ್ರಾಮದಲ್ಲಿ ಆನೆ ಸಮಾಧಿಗೆ 120 ವರ್ಷಗಳಿಂದ ಪೂಜೆ ಮಾಡುತ್ತಿದ್ದಾರೆ!
ಆನೆ ಸಮಾಧಿಗೆ 120 ವರ್ಷಗಳಿಂದ ಪೂಜೆ
ಸಾಧು ಶ್ರೀನಾಥ್​
|

Updated on:Sep 06, 2023 | 6:17 PM

Share

ಕಡಪ, ಸೆಪ್ಟೆಂಬರ್ 6: ಪ್ರಸಿದ್ಧ ಮೈಸೂರು ದಸರಾ (Mysore Dasara 2023) ಮಹೋತ್ಸವದ ಜಂಬೂ ಸವಾರಿಯಲ್ಲಿ (Jamboo Savari) ಪಾಲ್ಗೊಳ್ಳಲು 14 ಆನೆಗಳಿಗೆ ತಾಲೀಮು ನಡೆಯುತ್ತಿದೆ. ಪ್ರತಿವರ್ಷ ಮಹಾರಾಜರ ಕಾಲದಿಂದಲೂ ಇದಕ್ಕೆ ಮಹತ್ವವಿದೆ. ಹೀಗಿರುವ ಆಗ ನೆರೆಯ ಆಂಧ್ರದಲ್ಲೂ ಆನೆಗೆ ಸಂಬಂಧಿಸಿದಂತೆ ನೂರಾರು ವರ್ಷದ ಒಂದು ಇತಿಹಾಸದ ಕುರಿತು ತಿಳಿಯೋಣ. ಕಡಪ ಜಿಲ್ಲೆಯ ದುವ್ವೂರು ಮಂಡಲದ ಗುಡಿಪಾಡು (Gudipadu village, Duvvur mandal, Kadapa) ಎಂಬಲ್ಲಿ ಆನೆ ಸಮಾಧಿಯಿದ್ದು, ಸಮಾಧಿಗೆ ವಿಶಿಷ್ಟವಾದ ಆಧ್ಯಾತ್ಮಿಕ (Spiritual) ಇತಿಹಾಸವಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಗುಡಿಪಾಡು ಬಳಿ ಹಳೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಈ ಆನೆ ಸಮಾಧಿ (Elephant Tomb) ಇದೆ. ಈ ಆನೆ ಸಮಾಧಿಗೆ 120 ವರ್ಷಗಳ ಆಸಕ್ತಿದಾಯಕ ಇತಿಹಾಸವಿದೆ.

ಅಹೋಬಿಲಂ ಮಠವು ದೇಶದ ಹಲವು ಭಾಗಗಳಲ್ಲಿ ದೇವಾಲಯಗಳನ್ನು ಹೊಂದಿದೆ. ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಪಟ್ಟಣದಲ್ಲಿ ಅಹೋಬಿಲ ಮಠ ಮತ್ತು ದೇವಸ್ಥಾನವೂ ಇದೆ. ಕುಂಭಕೋಣಂನಿಂದ ಮಠಾಧೀಶರು ಅಹೋಬಿಲಕ್ಕೆ ಭೇಟಿ ನೀಡುತ್ತಿದ್ದರು. ಕುಂಭಕೋಣಂ ಮತ್ತು ಅಹೋಬಿಲಂ ಕ್ಷೇತ್ರಗಳ ನಡುವಿನ ಅಂತರ 546 ಕಿಲೋ ಮೀಟರ್. ಕಾಶಿ ಮತ್ತು ರಾಮೇಶ್ವರಂ ರಸ್ತೆ ಎಂದು ಕರೆಯಲಾಗುವ ಈಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದೆ ಯಾತ್ರಾರ್ಥಿಗಳು ಆನೆ, ಕುದುರೆ ಹಾಗೂ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದರು.

ಮಠಾಧೀಶರು ತಮ್ಮ ಪ್ರಯಾಣದಲ್ಲಿ ಆನೆ, ಕುದುರೆ, ಛತ್ರ ಮತ್ತು ಚಾಮರಗಳೊಂದಿಗೆ ಪ್ರಯಾಣಿಸುತ್ತಿದ್ದರು. ಇದೇ ರೀತಿಯಲ್ಲಿ 1902ರಲ್ಲಿ ಅಹೋಬಲಂ ಕುಂಭಕೋಣಂನಿಂದ ಬರುತ್ತಿದ್ದಾಗ ಮಠಾಧೀಶರ ಆನೆಗೆ ಕಾಯಿಲೆ ಬಂತು. ಕುಂಭಕೋಣಂನಿಂದ ಸುಮಾರು 500 ಕಿಲೋ ಮೀಟರ್ ಪ್ರಯಾಣಿಸಿ ಗುಡಿಪಾಡು ತಲುಪಿದ ನಂತರ ಆನೆಯು ಗುಡಿಪಾಡಿನಲ್ಲಿ ನಿಂತುಬಿಟ್ಟಿತು. ಮುಂದೆ ಸಾಗಲು ಅದಕ್ಕೆ ಸಾಧ್ಯವಾಗಲಿಲ್ಲ. ಅಲ್ಲಿಂದ ಕದಲಲಾರದೆ ಪ್ರಾಣ ಬಿಟ್ಟಿತು.

ಇದನ್ನೂ ಓದಿ: ಬಿಕಾನೇರ್‌ನ ರಾಜ ಕುಟುಂಬದ ಕುಲದೇವರಾದ ಇಲಿಗಳಿಗೆ ಈ ದೇಗುಲದಲ್ಲಿ ಮೊದಲ ನೈವೇದ್ಯ… ಅವು ತಿಂದ ನಂತರ, ಉಳಿದಿದ್ದು ಭಕ್ತರಿಗೆ ಪ್ರಸಾದ!

ಅಹೋಬಿಲಂ ಮಠದ ಆಡಳಿತಾಧಿಕಾರಿಗಳು ಗ್ರಾಮಸ್ಥರ ಸಹಾಯದಿಂದ ಆನೆಯನ್ನು ಅಲ್ಲೇ ರಸ್ತೆಬದಿಯಲ್ಲಿ ಹೂಳಿದ್ದಾರೆ. ಮುಂದೆ ಅಲ್ಲಿ ಸಮಾಧಿಯನ್ನು ನಿರ್ಮಿಸಲಾಯಿತು. ಸಮಾಧಿ ಮುಂದೆ ಆನೆಯ ಕಲ್ಲಿನ ಮೂರ್ತಿಯನ್ನೂ ಸ್ಥಾಪಿಸಲಾಗಿದೆ. ಪ್ರತಿ ವರ್ಷ ಅಹೋಬಿಲಕ್ಕೆ ಹೋದಾಗ ಈ ಆನೆಯ ಸಮಾಧಿ/ಗುಡಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ. ಅಹೋಬಿಲಂ ಮಠ ಕಾಲಕ್ರಮೇಣ ಇಲ್ಲಿಗೆ ಬರುವುದನ್ನು ನಿಲ್ಲಿಸಿತು. ಆದರೂ ಇದಕ್ಕೆ 120 ವರ್ಷಗಳ ಇತಿಹಾಸವಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಇಲ್ಲಿ ಏನಾದರೂ ಸಂಕಲ್ಪ ಮಾಡಿಕೊಂಡು ಕೋರಿಕೊಂಡರೆ ಯಶಸ್ಸು ಸಿಗುತ್ತದೆ ಎಂಬುದು ಗ್ರಾಮಸ್ಥರ ಬಲವಾದ ನಂಬಿಕೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Wed, 6 September 23

Follow Us
ಸಚಿವರ ಬರ್ತ್​​ಡೇ ಗಿಫ್ಟ್​: ಸೀರೆಗಾಗಿ ಮುಗಿಬಿದ್ದ ಮಹಿಳೆಯರು!
ಸಚಿವರ ಬರ್ತ್​​ಡೇ ಗಿಫ್ಟ್​: ಸೀರೆಗಾಗಿ ಮುಗಿಬಿದ್ದ ಮಹಿಳೆಯರು!
30 ಅಡಿ ಆಳದ ಬಾವಿಗೆ ಬಿದ್ದ ಆನೆ: ಅರಣ್ಯಾಧಿಕಾರಿಗಳ 6 ಗಂಟೆಗಳ ಕಾರ್ಯಚರಣೆ
30 ಅಡಿ ಆಳದ ಬಾವಿಗೆ ಬಿದ್ದ ಆನೆ: ಅರಣ್ಯಾಧಿಕಾರಿಗಳ 6 ಗಂಟೆಗಳ ಕಾರ್ಯಚರಣೆ
ಸುದೀಪ್ ಸುಮ್ಮನಿದ್ದಾರೆ ರಜತ್, ವಿನಯ್ ಪ್ರಚೋದಿಸುತ್ತಿದ್ದಾರೆ: ಡಾಗ್ ಸತೀಶ್
ಸುದೀಪ್ ಸುಮ್ಮನಿದ್ದಾರೆ ರಜತ್, ವಿನಯ್ ಪ್ರಚೋದಿಸುತ್ತಿದ್ದಾರೆ: ಡಾಗ್ ಸತೀಶ್
ಕಾರ್ಯಕ್ರಮಕ್ಕೆ ಬಾರದ ಬ್ಯಾನರ್ಜಿ ಬಗ್ಗೆ ದ್ರೌಪದಿ ಮುರ್ಮು ಬೇಸರದ ಮಾತು
ಕಾರ್ಯಕ್ರಮಕ್ಕೆ ಬಾರದ ಬ್ಯಾನರ್ಜಿ ಬಗ್ಗೆ ದ್ರೌಪದಿ ಮುರ್ಮು ಬೇಸರದ ಮಾತು
ಬಾಲ್ಯದ ದಿನಗಳಲ್ಲಿ ಮಿಠಾಯಿ, ತಂಬಿಟ್ಟು ತಿಂತಿರೋ ಕಥೆ ಬಿಚ್ಚಿಟ್ಟ ಸಿಎಂ!
ಬಾಲ್ಯದ ದಿನಗಳಲ್ಲಿ ಮಿಠಾಯಿ, ತಂಬಿಟ್ಟು ತಿಂತಿರೋ ಕಥೆ ಬಿಚ್ಚಿಟ್ಟ ಸಿಎಂ!
ಯುಗಾದಿ ವರ್ಷ ಭವಿಷ್ಯ; ಮಿಥುನ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ಮಿಥುನ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ
ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ
ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ
ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ
ಟ್ರೋಫಿಗಾಗಿ ಕೆಲವರ ಹೃದಯ ಛಿದ್ರಗೊಳಿಸುವುದರಲ್ಲಿ ತಪ್ಪಿಲ್ಲ; ಸ್ಯಾಂಟ್ನರ್
ಟ್ರೋಫಿಗಾಗಿ ಕೆಲವರ ಹೃದಯ ಛಿದ್ರಗೊಳಿಸುವುದರಲ್ಲಿ ತಪ್ಪಿಲ್ಲ; ಸ್ಯಾಂಟ್ನರ್
ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?