AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Elephant Tomb: ಆ ಗ್ರಾಮದಲ್ಲಿ ಆನೆ ಸಮಾಧಿಗೆ 120 ವರ್ಷಗಳಿಂದ ಪೂಜೆ ಮಾಡುತ್ತಿದ್ದಾರೆ!

ಅಹೋಬಿಲಂ ಮಠಾಧೀಶರು ತಮ್ಮ ಪ್ರಯಾಣದಲ್ಲಿ ಆನೆ, ಕುದುರೆ, ಛತ್ರ, ಚಾಮರಗಳೊಂದಿಗೆ ಪ್ರಯಾಣಿಸುತ್ತಿದ್ದರು. 1902ರಲ್ಲಿ ಕುಂಭಕೋಣಂನಿಂದ ಬರುತ್ತಿದ್ದಾಗ ಮಠಾಧೀಶರ ಆನೆಗೆ ಕಾಯಿಲೆ ಬಂತು. ಸುಮಾರು 500 ಕಿ ಮೀ ಪ್ರಯಾಣಿಸಿ ಗುಡಿಪಾಡು ತಲುಪಿದ ನಂತರ ಆನೆ ನಿಂತುಬಿಟ್ಟಿತು. ಮುಂದೆ ಸಾಗಲು ಅದಕ್ಕೆ ಸಾಧ್ಯವಾಗಲಿಲ್ಲ. ಅಲ್ಲಿಂದ ಕದಲದೆ ಪ್ರಾಣ ಬಿಟ್ಟಿತು.

Elephant Tomb: ಆ ಗ್ರಾಮದಲ್ಲಿ ಆನೆ ಸಮಾಧಿಗೆ 120 ವರ್ಷಗಳಿಂದ ಪೂಜೆ ಮಾಡುತ್ತಿದ್ದಾರೆ!
ಆನೆ ಸಮಾಧಿಗೆ 120 ವರ್ಷಗಳಿಂದ ಪೂಜೆ
ಸಾಧು ಶ್ರೀನಾಥ್​
|

Updated on:Sep 06, 2023 | 6:17 PM

Share

ಕಡಪ, ಸೆಪ್ಟೆಂಬರ್ 6: ಪ್ರಸಿದ್ಧ ಮೈಸೂರು ದಸರಾ (Mysore Dasara 2023) ಮಹೋತ್ಸವದ ಜಂಬೂ ಸವಾರಿಯಲ್ಲಿ (Jamboo Savari) ಪಾಲ್ಗೊಳ್ಳಲು 14 ಆನೆಗಳಿಗೆ ತಾಲೀಮು ನಡೆಯುತ್ತಿದೆ. ಪ್ರತಿವರ್ಷ ಮಹಾರಾಜರ ಕಾಲದಿಂದಲೂ ಇದಕ್ಕೆ ಮಹತ್ವವಿದೆ. ಹೀಗಿರುವ ಆಗ ನೆರೆಯ ಆಂಧ್ರದಲ್ಲೂ ಆನೆಗೆ ಸಂಬಂಧಿಸಿದಂತೆ ನೂರಾರು ವರ್ಷದ ಒಂದು ಇತಿಹಾಸದ ಕುರಿತು ತಿಳಿಯೋಣ. ಕಡಪ ಜಿಲ್ಲೆಯ ದುವ್ವೂರು ಮಂಡಲದ ಗುಡಿಪಾಡು (Gudipadu village, Duvvur mandal, Kadapa) ಎಂಬಲ್ಲಿ ಆನೆ ಸಮಾಧಿಯಿದ್ದು, ಸಮಾಧಿಗೆ ವಿಶಿಷ್ಟವಾದ ಆಧ್ಯಾತ್ಮಿಕ (Spiritual) ಇತಿಹಾಸವಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಗುಡಿಪಾಡು ಬಳಿ ಹಳೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಈ ಆನೆ ಸಮಾಧಿ (Elephant Tomb) ಇದೆ. ಈ ಆನೆ ಸಮಾಧಿಗೆ 120 ವರ್ಷಗಳ ಆಸಕ್ತಿದಾಯಕ ಇತಿಹಾಸವಿದೆ.

ಅಹೋಬಿಲಂ ಮಠವು ದೇಶದ ಹಲವು ಭಾಗಗಳಲ್ಲಿ ದೇವಾಲಯಗಳನ್ನು ಹೊಂದಿದೆ. ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಪಟ್ಟಣದಲ್ಲಿ ಅಹೋಬಿಲ ಮಠ ಮತ್ತು ದೇವಸ್ಥಾನವೂ ಇದೆ. ಕುಂಭಕೋಣಂನಿಂದ ಮಠಾಧೀಶರು ಅಹೋಬಿಲಕ್ಕೆ ಭೇಟಿ ನೀಡುತ್ತಿದ್ದರು. ಕುಂಭಕೋಣಂ ಮತ್ತು ಅಹೋಬಿಲಂ ಕ್ಷೇತ್ರಗಳ ನಡುವಿನ ಅಂತರ 546 ಕಿಲೋ ಮೀಟರ್. ಕಾಶಿ ಮತ್ತು ರಾಮೇಶ್ವರಂ ರಸ್ತೆ ಎಂದು ಕರೆಯಲಾಗುವ ಈಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದೆ ಯಾತ್ರಾರ್ಥಿಗಳು ಆನೆ, ಕುದುರೆ ಹಾಗೂ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದರು.

ಮಠಾಧೀಶರು ತಮ್ಮ ಪ್ರಯಾಣದಲ್ಲಿ ಆನೆ, ಕುದುರೆ, ಛತ್ರ ಮತ್ತು ಚಾಮರಗಳೊಂದಿಗೆ ಪ್ರಯಾಣಿಸುತ್ತಿದ್ದರು. ಇದೇ ರೀತಿಯಲ್ಲಿ 1902ರಲ್ಲಿ ಅಹೋಬಲಂ ಕುಂಭಕೋಣಂನಿಂದ ಬರುತ್ತಿದ್ದಾಗ ಮಠಾಧೀಶರ ಆನೆಗೆ ಕಾಯಿಲೆ ಬಂತು. ಕುಂಭಕೋಣಂನಿಂದ ಸುಮಾರು 500 ಕಿಲೋ ಮೀಟರ್ ಪ್ರಯಾಣಿಸಿ ಗುಡಿಪಾಡು ತಲುಪಿದ ನಂತರ ಆನೆಯು ಗುಡಿಪಾಡಿನಲ್ಲಿ ನಿಂತುಬಿಟ್ಟಿತು. ಮುಂದೆ ಸಾಗಲು ಅದಕ್ಕೆ ಸಾಧ್ಯವಾಗಲಿಲ್ಲ. ಅಲ್ಲಿಂದ ಕದಲಲಾರದೆ ಪ್ರಾಣ ಬಿಟ್ಟಿತು.

ಇದನ್ನೂ ಓದಿ: ಬಿಕಾನೇರ್‌ನ ರಾಜ ಕುಟುಂಬದ ಕುಲದೇವರಾದ ಇಲಿಗಳಿಗೆ ಈ ದೇಗುಲದಲ್ಲಿ ಮೊದಲ ನೈವೇದ್ಯ… ಅವು ತಿಂದ ನಂತರ, ಉಳಿದಿದ್ದು ಭಕ್ತರಿಗೆ ಪ್ರಸಾದ!

ಅಹೋಬಿಲಂ ಮಠದ ಆಡಳಿತಾಧಿಕಾರಿಗಳು ಗ್ರಾಮಸ್ಥರ ಸಹಾಯದಿಂದ ಆನೆಯನ್ನು ಅಲ್ಲೇ ರಸ್ತೆಬದಿಯಲ್ಲಿ ಹೂಳಿದ್ದಾರೆ. ಮುಂದೆ ಅಲ್ಲಿ ಸಮಾಧಿಯನ್ನು ನಿರ್ಮಿಸಲಾಯಿತು. ಸಮಾಧಿ ಮುಂದೆ ಆನೆಯ ಕಲ್ಲಿನ ಮೂರ್ತಿಯನ್ನೂ ಸ್ಥಾಪಿಸಲಾಗಿದೆ. ಪ್ರತಿ ವರ್ಷ ಅಹೋಬಿಲಕ್ಕೆ ಹೋದಾಗ ಈ ಆನೆಯ ಸಮಾಧಿ/ಗುಡಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ. ಅಹೋಬಿಲಂ ಮಠ ಕಾಲಕ್ರಮೇಣ ಇಲ್ಲಿಗೆ ಬರುವುದನ್ನು ನಿಲ್ಲಿಸಿತು. ಆದರೂ ಇದಕ್ಕೆ 120 ವರ್ಷಗಳ ಇತಿಹಾಸವಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಇಲ್ಲಿ ಏನಾದರೂ ಸಂಕಲ್ಪ ಮಾಡಿಕೊಂಡು ಕೋರಿಕೊಂಡರೆ ಯಶಸ್ಸು ಸಿಗುತ್ತದೆ ಎಂಬುದು ಗ್ರಾಮಸ್ಥರ ಬಲವಾದ ನಂಬಿಕೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Wed, 6 September 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ