AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahashivratri 2022: ಶಿವರಾತ್ರಿಯಂದು ಜಾಗರಣೆ ಮಾಡುವ ಭಕ್ತರಿಗೆ ಇಲ್ಲಿವೆ ಕನ್ನಡ ಭಕ್ತಿಗೀತೆಗಳು

ಇಡೀ ದಿನ ಉಪವಾಸವಿದ್ದು ಶಿವನ ಭಜನೆ ಮಾಡುತ್ತಾ ಜಾಗರಣೆ ಮಾಡುವುದೇ ಈ ಹಬ್ಬದ ವಿಶೇಷ. ದೇವಾಯಲಗಳಲ್ಲಿ, ಮನೆಗಳಲ್ಲಿ, ಮಂದಿರಗಳಲ್ಲಿ ಶಿವನನ್ನು ಸ್ಮರಿಸುತ್ತಾ ಜಾಗರಣೆ ಮಾಡಲಾಗುತ್ತದೆ.

Mahashivratri 2022: ಶಿವರಾತ್ರಿಯಂದು ಜಾಗರಣೆ ಮಾಡುವ ಭಕ್ತರಿಗೆ ಇಲ್ಲಿವೆ ಕನ್ನಡ ಭಕ್ತಿಗೀತೆಗಳು
ಶಿವ
TV9 Web
| Edited By: |

Updated on:Feb 28, 2022 | 1:30 PM

Share

ಭಾರತದಲ್ಲಿ ಹಿಂದೂ ಧರ್ಮದ ಪ್ರತೀ ಹಬ್ಬಗಳನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಒಂದೊಂದು ಹಬ್ಬಕ್ಕೂ ಅದರದ್ದೇ ಆದ ಹಿನ್ನೆಲೆ ಕಥೆಯಿದೆ. ಅದೇ ರೀತಿ ಶಿವರಾತ್ರಿ (Shivratri) ಕೂಡಾ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇಡೀ ದಿನ ಉಪವಾಸವಿದ್ದು ಶಿವನ ಭಜನೆ ಮಾಡುತ್ತಾ ಜಾಗರಣೆ ಮಾಡುವುದೇ ಈ ಹಬ್ಬದ ವಿಶೇಷ. ದೇವಾಯಲಗಳಲ್ಲಿ, ಮನೆಗಳಲ್ಲಿ, ಮಂದಿರಗಳಲ್ಲಿ ಶಿವನನ್ನು ಸ್ಮರಿಸುತ್ತಾ ಜಾಗರಣೆ ಮಾಡಲಾಗುತ್ತದೆ. ಜಾಗರಣೆ ಮಾಡುವಾಗ ಕನ್ನಡದ ಈ ಹಾಡುಗಳನ್ನು ಹಾಡುವ ಮೂಲಕ ಶಿವನನ್ನು ಪೂಜಿಸಬಹುದು.

* ಮಹಾಪ್ರಾಣ ದೀಪಂ: ಈ ಹಾಡನ್ನು ಕೇಳಿದವರಿಗೆ ಈ ಹಾಡಿನ ಶಕ್ತಿ ತಿಳಿದಿರುತ್ತದೆ. ಮಹಾಪ್ರಾಣ ದೀಪಂ ಎಂಬ ಸಾಹಿತ್ಯದಿಂದ ಆರಂಭವಾಗುವ ಈ ಹಾಡು ಕಿವಿಗೆ ಬೀಳುತ್ತಿದ್ದಂತೆ ಬೇರೆ ಯಾವ ಯೋಚನೆಗಳು ಬರಲ್ಲ. ಶಿವನ ಬಳಿಯೇ ಹೋಗಿ ಬದ್ದಂತೆ ಅನುಭವ ಆಗುತ್ತದೆ. ಗಟ್ಟಿ ಧ್ವನಿಯಲ್ಲಿ ಮೊಳಗುವ ಈ ಹಾಡನ್ನು ಆಲಿಸಿದಾಗ ರೋಮಗಳು ನೆಟ್ಟಗಾಗುತ್ತವೆ. ಕನ್ನಡ ಹಾಡಿನ ಪೈಕಿ ಈ ಹಾಡು ಹೆಚ್ಚು ಪ್ರಸಿದ್ಧಿ ಪಡೆದಿದೆ.

* ಶಿವ ಶಿವ ಎಂದರೆ ಭಯವಿಲ್ಲ: ಎಸ್ ಪಿ ಬಾಲಸುಬ್ರಮಣ್ಯಂ ಅವರ ಕಂಠವೇ ಕರ್ನಾಟಕ ಪಾಲಿಗೆ ಉಡುಗೊರೆ. ಅವರ ಧ್ವನಿಯಲ್ಲಿ ಮೂಡಿಬರುವ ಹಾಡುಗಳೆಲ್ಲವೂ ಜನಪ್ರಿಯತೆ ಪಡೆದಿವೆ. ಅದರಲ್ಲಿ ಕೆಲವೊಂದು ಸೂಪರ್ ಹಿಟ್ ಆಗಿವೆ. ಈ ಸಾಲಿಗೆ ಶಿವ ಶಿವ ಎಂದರೆ ಭಯವಿಲ್ಲ ಎಂಬ ಹಾಡು ಸೇರುತ್ತದೆ. ಶಿವನ ಸ್ಮರಿಸುವ ಭಕ್ತರಿಗೆ ಈ ಹಾಡು ಸೂಕ್ತವಾಗಿದೆ. ಸದ್ಯ ಶಿವರಾತ್ರಿ ಸಮೀಪಿಸುತ್ತಿರುವ ಕಾರಣ ಜಾಗರಣೆ ವೇಳೆ ಈ ಹಾಡನ್ನು ಹೇಳಬಹುದು.

* ಪಾಹಿ ಮಹೇಶ: ಬ್ರಹ್ಮಾಂಡ ಒಡೆಯನಾದ ಶಿವನಿಗೆ ಸಮರ್ಪಿತವಾದ ಮತ್ತೊಂದು ಹಾಡೆಂದರೆ ಪಾಹಿ ಮಹೇಶ. ಈ ಹಾಡನ್ನು ಶಿವರಾತ್ರಿ ದಿನದಂದು ಶಿವನನ್ನು ಸ್ಮರಿಸುತ್ತಾ ಹೇಳಬಹುದು.

* ಕೈಲಾಸ ಗಿರಿವಾಸ: ಜಾಗರಣೆಯಲ್ಲಿ ಶಿವನ ಸ್ಮರಿಸುತ್ತಾ ಎಲ್ಲರೂ ಕೂಡಿ ಭಜನೆ ಮಾಡುತ್ತಾರೆ. ಭಜನೆ ವೇಳೆ ಶಿವನ ಯಾವ ಹಾಡುಗಳು ಹೇಳಬೇಕು ಎಂಬ ಗೊಂದಲವೂ ಇರುತ್ತೆ. ಶಿವನಿಗೆ ಸಮರ್ಪಿತವಾದ ಇನ್ನೊಂದು ಹಾಡೆಂದರೆ ಕೈಲಾಸ ಗಿರಿವಾಸ. ಈ ಹಾಡು ಹೇಳುವ ಮೂಲಕ ದೇವರಿಗೆ ಭಕ್ತಿ ಸಮರ್ಪಿಸಬಹುದು.

* ಜಯ ಜಯ ಸಾಂಬಾಸಧಶಿವ ಎಸ್ ಜಾನಕಿ ಹಾಡಿರುವ ಜಯ ಜಯ ಸಾಂಬಾಸಧಶಿವ ಹಾಡು ಭಕ್ತಿ ಪ್ರಧಾನದಿಂದ ಕೂಡಿದೆ. ಭಜನೆಗೆ ಈ ಹಾಡು ಸೂಕ್ತವಾಗಿದೆ.

ಇದನ್ನೂ ಓದಿ

Maha Shivaratri 2022: ಶಿವರಾತ್ರಿ ಉಪವಾಸಕ್ಕೆ ಕೊಪ್ಪಳದಲ್ಲಿ ಹಣ್ಣಿನ ಮೇಳ! ರೈತರಿಗೂ ಸಂಭ್ರಮ, ಶಿವ ಭಕ್ತರಿಗೂ ಆನಂದ!

Shivratri 2022; ಶಿವರಾತ್ರಿಯಂದು ಭೇಟಿ ನೀಡಲು ಸೂಕ್ತವಾದ ಬೆಂಗಳೂರಿನ ಶಿವನ ದೇವಸ್ಥಾನಗಳು

Published On - 12:15 pm, Mon, 28 February 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ