AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜುಲೈ 6 ದಲಾಯಿ ಲಾಮಾ ಹುಟ್ಟುಹಬ್ಬ: ಟಿಬೆಟನ್ ಬೌದ್ಧ ಧರ್ಮಗುರುವಿನ ಬಗ್ಗೆ ನಿಮಗೆ ಗೊತ್ತಿರದ ಕೆಲ ಸಂಗತಿಗಳು

ದಲಾಯಿ ಲಾಮಾ ಅವರಿಗೆ ಬಾಲ್ಯದಿಂದಲೂ ವಿಜ್ಞಾನದಲ್ಲಿ ಬಹಳ ಅಭಿರುಚಿ. ತಾನು ಬೌದ್ಧಗುರು ಆಗಿರದೆ ಹೋಗಿದ್ದರೆ ಒಬ್ಬ ಎಂಜಿನೀಯರ್​ ಆಗಿರುತ್ತಿದ್ದೆ ಎಂದು ಅವರು ಅನೇಕ ಸಾರಿ ಹೇಳಿದ್ದಾರೆ.

ಜುಲೈ 6 ದಲಾಯಿ ಲಾಮಾ ಹುಟ್ಟುಹಬ್ಬ: ಟಿಬೆಟನ್ ಬೌದ್ಧ ಧರ್ಮಗುರುವಿನ ಬಗ್ಗೆ ನಿಮಗೆ ಗೊತ್ತಿರದ ಕೆಲ ಸಂಗತಿಗಳು
14 ನೇ ದಲಾಯಿ ಲಾಮಾ
ಅರುಣ್​ ಕುಮಾರ್​ ಬೆಳ್ಳಿ
|

Updated on: Jul 06, 2021 | 10:43 PM

Share

ತೆನ್ಜಿನ್ ಗ್ಯಾಟ್ಸೋ ಅಂದರೆ ಅಂದರೆ ಯಾರು ಅಂತ ಕೆಲವರಿಗಷ್ಟೇ ಗೊತ್ತಿರಬಹುದು, ಅಸಲಿಗೆ ಅದು 14 ನೇ ದಲಾಯಿ ಲಾಮಾ ಅವರ ಮೂಲ ಹೆಸರು. ಆಧ್ಯಾತ್ಮಿಕತೆ ವಿಷಯ ಚರ್ಚೆಗೆ ಬಂದರೆ ಅದು ದಲಾಯಿ ಲಾಮಾ ಹೆಸರು ಉಲ್ಲೇಖವಾಗದೆ ಪೂರ್ಣಗೊಳ್ಳದು. ತಮ್ಮ ಹಿಂದಿನ ಲಾಮಾಗಳಂತೆ ಅವರು ತಮ್ಮನ್ನು ಒಂದು ಚೌಕಟ್ಟಿಗೆ ಸೀಮಿತಗೊಳಿಸಿಕೊಳ್ಳದೆ ಮಾಹಿತಿ ತಂತ್ರಜ್ಞಾನದ ಸಂಪೂರ್ಣ ಪ್ರಯೋಜನ ಪಡೆದು ಶಾಂತಿ ಸಂದೇಶವನನ್ನು ವಿಶ್ವದೆಲ್ಲೆಡೆ ಸಾರಿದ್ದಾರೆ. ಹಲವಾರು ಪುಸ್ತಕಗಳನ್ನು ಬರೆದಿರುವ ಅವರು, ಜಗತ್ತಿನಾದ್ಯಂತ ಸಂಚರಿಸಿ ಪ್ರವಚನಗಳನ್ನು ನೀಡಿದ್ದಾರೆ. ಅಹಿಂಸೆ ಬಗ್ಗೆ ಅವರು ನೀಡುವ ಸಂದೇಶಗಳನ್ನು ಜನರು ಬಹಳ ಉತ್ಸುಕತೆಯಿಂದ ಕೇಳಿಸಿಕೊಳ್ಳುತ್ತಾರೆ. ವಿಶ್ವದ ಎಲ್ಲಾ ಜನರಿಗೆ, ಟಿಬೆಟಿಯನ್ ಬೌದ್ಧ ಧರ್ಮದ ಮುಖ್ಯಸ್ಥರಾಗಿರುವ ಅವರು ಶಾಂತಿದೂತನಾಗಿ ಗೋಚರವಾಗುತ್ತಾರೆ.

ಮಂಗಳವಾರ 14 ನೇ ದಲಾಯಿ ಲಾಮಾ ಅವರ ಹುಟ್ಟುಹಬ್ಬದ ದಿನವಾದ್ದರಿಂದ ಅವರ ಬಗ್ಗೆ ಗೊತ್ತಿರದ ಕೆಲ ಸಂಗತಿಗಳ ಬಗ್ಗೆ ಚರ್ಚಿಸುವುದು ಪ್ರಸ್ತುತವೆನಿಸುತ್ತದೆ.

ಹಿಂದಿನ ಎಲ್ಲ ದಲಾಯಿ ಲಾಮಾಗಳಿಗಿಂತ 14 ನೇ ದಲಾಯಿ ಲಾಮಾ ಅವರು ದೀರ್ಘಾವಧಿವರೆಗೆ ಧರ್ಮದ ಮುಖ್ಯಸ್ಥರಾಗಿದ್ದಾರೆ ಮತ್ತು ಅವರೆಲ್ಲಗಿಂತ ಹೆಚ್ಚಿನ ಆಯಷ್ಯವಂತರಾಗಿದ್ದಾರೆ. ಯಾವುದಾದರೂ ಮಹತ್ತರ ಬದಲಾವಣೆ ನಡೆಯದೆ ಹೋದರೆ ತಾವೇ ಕೊನೆಯ ದಲಾಯಿ ಲಾಮಾ ಆಗಬಹುದು ಎಂದು ಅವರು ಅನೇಕ ಬಾರಿ ಹೇಳಿದ್ದಾರೆ. 2011 ರಲ್ಲಿ ಅವರು ತಮ್ಮ 90 ನೇ ವಯಸ್ಸಿಗೆ ನಿವೃತ್ತರಾಗುವ ಬಗ್ಗೆ ಹೇಳಿದ್ದರು.

14 ನೇ ದಲಾಯಿ ಲಾಮಾ ಅವರ ಕುಟುಂಬಕ್ಕೆ ಟಿಬೆಟಿಯನ್ ಭಾಷೆ ಗೊತ್ತಿರಲಿಲ್ಲ. ಅವರು ಚೀನಾ ಪಶ್ಚಿಮ ಪ್ರಾಂತ್ಯಗಳ ಭಾಷೆಯೊಂದರ ಸುಧಾರಿತ ರೂಪವನ್ನುಮಾತಾಡುತ್ತಿದ್ದರು.

1989 ರಲ್ಲಿ ದಲಾಯಿ ಲಾಮಾ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರದಿಂದ ಸನ್ಮಾನಿಸಲಾಗಿತ್ತು. 2007 ರಲ್ಲಿ ಅವರಿಗೆ ಅಮೇರಿಕ ತನ್ನ ದೇಶದ ಅತ್ಯುನ್ನದ ನಾಗರಿಕ ಪುರಸ್ಕಾರ, ಕಾಂಗ್ರೆಶನಲ್ ಗೋಲ್ಡ್​ ಮೆಡಲ್ ನೀಡಿ ಗೌರವಿಸಿತ್ತು. ದಲಾಯಿ ಲಾಮಾ ಅವರು ನ್ಯೂಕ್ಲಿಯರ್ ಆಯುಧಗಳನ್ನು ವಿರೋಧಿಸುತ್ತಾರೆ ಮತ್ತು ನ್ಯೂಕ್ಲಿಯರ್ ಏಜ್ ಶಾಂತಿ ಪ್ರತಿಷ್ಠಾಪನೆಯ ಸಲಹೆಗಾರರಾಗಿ ಸೇವೆ ಒದಗಿಸುತ್ತಿದ್ದಾರೆ.

ದಲಾಯಿ ಲಾಮಾ ಅವರಿಗೆ ಬಾಲ್ಯದಿಂದಲೂ ವಿಜ್ಞಾನದಲ್ಲಿ ಬಹಳ ಅಭಿರುಚಿ. ತಾನು ಬೌದ್ಧಗುರು ಆಗಿರದೆ ಹೋಗಿದ್ದರೆ ಒಬ್ಬ ಎಂಜಿನೀಯರ್​ ಆಗಿರುತ್ತಿದ್ದೆ ಎಂದು ಅವರು ಅನೇಕ ಸಾರಿ ಹೇಳಿದ್ದಾರೆ. ಯೌನವದ ದಿನಗಳಲ್ಲಿ ಗಡಿಯಾರಗಳನ್ನು ರಿಪೇರಿ ಮಾಡುವುದರಲ್ಲಿ ಮತ್ತು ಕಾರುಗಳನ್ನು ರಿಪೇರಿ ಮಾಡುತ್ತಾ ತಮ್ಮ ಬಿಡುವಿನ ಸಮಯ ಕಳೆಯುತ್ತಿದ್ದರು.

2009 ರಲ್ಲಿ ಟೆನ್ನಿಸ್ಸೀಯಲ್ಲಿ ಮಾತಾಡುವಾಗ ತಮ್ಮನ್ನು ಮಹಿಳಾವಾದಿ ಎಂದು ಹೇಳಿಕೊಂಡ ಲಾಮಾ ಅವರು ಮಹಿಳೆಯರ ಹಕ್ಕುಗಳಿಗಾಗಿ ತಾವು ಹೋರಾಡುತ್ತಿರುವುದಾಗಿ ಹೇಳಿದ್ದರು. ಬೌದ್ಧ ಧರ್ಮದ ನಂಬಿಕೆಯ ಪ್ರಕಾರ ಹುಟ್ಟಲಿರುವ ಶಿಶುವಿಗೆ ಇಲ್ಲವೇ ಗರ್ಭಧರಿಸಿರುವ ಮಹಿಳೆಗೆ ಅಪಾಯವಿದೆ ಎಂಬ ಸಂದರ್ಭಗಳಲ್ಲಿ ಮಾತ್ರ ಗರ್ಭಪಾತ ಸರಿ ಅದಿಲ್ಲದೆ ಹೋದರೆ ಅದಕ್ಕೆ ಪ್ರಯತ್ನಿಸುವುದು ಪಾಪವೆನಿಸಿಕೊಳ್ಳುತ್ತದೆ. ಅದೇ ಭಾಷಣದಲ್ಲಿ ಅವರು, ಪ್ರತಿ ಪ್ರಕರಣದ ಆಧಾರದ ಮೇಲೆ ನೈತಿಕ ಪರಿಗಣನೆಗಳ ಕುರಿತು ಯೋಚಿಸಬೇಕು ಅಂತ ಹೇಳಿದ್ದರು.

ಇದನ್ನೂ ಓದಿ: Explainer | ಟಿಬೆಟ್​ನ ದೇಶಭ್ರಷ್ಟ ಸಂಸತ್​ಗೆ ಚುನಾವಣೆ: ಹೇಗಿರುತ್ತೆ ಪ್ರತಿನಿಧಿಗಳ ಆಯ್ಕೆ? ಮತದಾನ ಪ್ರಕ್ರಿಯೆ?

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ