AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Main Gate Vastu: ಮನೆಯ ಬಾಗಿಲಿನ ಮೇಲೆ ದೇವರ ಫೋಟೋ ಇಟ್ಟಿದ್ದೀರಾ? ಈ ನಿಯಮ ಕಡ್ಡಾಯ ಪಾಲಿಸಿ

ನೀವು ಕೂಡ ಮನೆ ಬಾಗಿಲಿನಲ್ಲಿ ದೇವರ ಫೋಟೋ ಇಟ್ಟಿದ್ದರೆ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು. ದೇವರ ಫೋಟೋವನ್ನು ಮನೆಯ ಬಾಗಿಲಿನ ಮೇಲೆ ಇಡಬೇಕೇ ಅಥವಾ ಬೇಡವೇ ಮತ್ತು ಅದನ್ನು ಇರಿಸಿದರೆ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Main Gate Vastu: ಮನೆಯ ಬಾಗಿಲಿನ ಮೇಲೆ ದೇವರ ಫೋಟೋ ಇಟ್ಟಿದ್ದೀರಾ? ಈ ನಿಯಮ ಕಡ್ಡಾಯ ಪಾಲಿಸಿ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: May 03, 2024 | 5:06 PM

Share

ಮನೆಯ ಬಾಗಿಲುಗಳನ್ನು ಸಿಂಗರಿಸಲು ಅನೇಕ ರೀತಿಯ ಅಲಂಕಾರಗಳನ್ನು ಮಾಡುತ್ತಾರೆ. ಕೆಲವರು ತಮ್ಮ ಮನೆಯ ದ್ವಾರದ ಮೇಲೆ ದೇವರ ಫೋಟೋವನ್ನು ನೇತು ಹಾಕುತ್ತಾರೆ. ನೀವು ಕೂಡ ಮನೆ ಬಾಗಿಲಿನಲ್ಲಿ ದೇವರ ಫೋಟೋ ಇಟ್ಟಿದ್ದರೆ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು. ದೇವರ ಫೋಟೋವನ್ನು ಮನೆಯ ಬಾಗಿಲಿನ ಮೇಲೆ ಇಡಬೇಕೇ ಅಥವಾ ಬೇಡವೇ ಮತ್ತು ಅದನ್ನು ಇರಿಸಿದರೆ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ವಾಸ್ತು ಶಾಸ್ತ್ರದ ಪ್ರಕಾರ ದೇವರ ಚಿತ್ರವನ್ನು ಮನೆಯ ಬಾಗಿಲುಗಳ ಮೇಲೆ, ವಿಶೇಷವಾಗಿ ಮುಖ್ಯ ದ್ವಾರದ ಮೇಲೆ ಇಡಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ ದೇವರು ನಿಮ್ಮ ದ್ವಾರಪಾಲಕನಲ್ಲ. ನೀವು ಮನೆಯ ಮುಖ್ಯ ದ್ವಾರದಲ್ಲಿ ಅಥವಾ ಬೇರೆ ಯಾವುದೇ ಬಾಗಿಲಿನ ಮೇಲೆ ದೇವರ ಚಿತ್ರವನ್ನು ನೇತುಹಾಕಲು ಅಥವಾ ಇಡಲು ಬಯಸಿದಲ್ಲಿ, ಕೆಲವು ವಿಶೇಷ ನಿಯಮಗಳನ್ನು ಅನುಸರಿಸುವ ಮೂಲಕ ಗಣೇಶ, ಹನುಮಂತ ಮತ್ತು ಮಾತೆ ಲಕ್ಷ್ಮೀಯ ಫೋಟೋಗಳನ್ನು ಇಡಬಹುದು ಎಂದು ಕೆಲವು ವಾಸ್ತು ತಜ್ಞರು ಹೇಳುತ್ತಾರೆ. ಆದರೆ ದೇವರ ಫೋಟೋದ ಗಾತ್ರವು ದೊಡ್ಡದಾಗಿರಬೇಕು ಮತ್ತು ಈ ಫೋಟೋವನ್ನು ಗಾಜಿನ ಚೌಕಟ್ಟಿನಲ್ಲಿನಲ್ಲಿಯೇ ಇಡಬೇಕು ಎಂಬುದನ್ನು ನೆನಪಿನಲ್ಲಿಡಿ.

ಜೊತೆಗೆ ದೇವರ ಚಿತ್ರವಿರುವ ದ್ವಾರದ ಮೇಲೆ ಯಾವಾಗಲೂ ಬೆಳಕು ಬರುವಂತಿರಬೇಕು. ನೀವು ಮನೆಯಲ್ಲಿ ಇಲ್ಲದಿದ್ದರೂ ಸಹ ಆ ಸ್ಥಳಕ್ಕೆ ಬೆಳಕು ಬರಬೇಕು. ಪ್ರತಿದಿನ ದೇವರ ಚಿತ್ರವನ್ನು ಸ್ವಚ್ಛಗೊಳಿಸಬೇಕು. ಸಾಧ್ಯವಾದರೆ, ಪ್ರತಿದಿನ ಚಿತ್ರದ ಮುಂದೆ ದೀಪವನ್ನು ಹಚ್ಚಿಡಿ. ಬಾಗಿಲಿನ ಮೇಲೆ ದೇವರ ಚಿತ್ರವಿದ್ದರೆ, ಅಲ್ಲಿಯೇ ಕೆಳಗೆ ಶೂ ಮತ್ತು ಚಪ್ಪಲಿಗಳನ್ನು ಇಡಬೇಡಿ. ಬಾಗಿಲಿನ ಮೇಲೆ ದೇವರ ಚಿತ್ರವನ್ನು ಹಾಕುವುದು ಒಳ್ಳೆಯದೇ ಅಥವಾ ಇಲ್ಲವೇ ಎಂಬ ಬಗ್ಗೆ ನೀವು ವಾಸ್ತು ತಜ್ಞರಿಂದ ಸಲಹೆ ಪಡೆದುಕೊಳ್ಳಬಹುದು. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಮನೆಯ ಬಾಗಿಲಿನ ಮೇಲೆ ದೇವರ ಚಿತ್ರವನ್ನು ಇಟ್ಟಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

ಇದನ್ನೂ ಓದಿ: ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿಡಬೇಕು?

ಈ ನಿಯಮಗಳನ್ನು ಅನುಸರಿಸಿ, ದೇವರ ಫೋಟೋವನ್ನು ಮುಖ್ಯ ದ್ವಾರದ ಮೇಲೆ ಇಟ್ಟರೆ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ ನಿಮ್ಮ ವೃತ್ತಿ ಜೀವನ ಕೂಡ ಚೆನ್ನಾಗಿರುತ್ತದೆ. ಮನೆಯಲ್ಲಿರುವವರ ಆರೋಗ್ಯವು ಉತ್ತಮವಾಗಿರುತ್ತದೆ. ಜೊತೆಗೆ ದೇವರ ಆಶೀರ್ವಾದದಿಂದ, ನಿಮ್ಮ ಮನೆಯಲ್ಲಿ ಯಾವುದೇ ರೀತಿಯಲ್ಲಿ ಜಗಳ ಮನಸ್ತಾಪಗಳು ಬರುವುದಿಲ್ಲ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?