Manglik Dosh: ಜಾತಕದಲ್ಲಿ ಮಂಗಳ ದೋಷವಿದ್ದರೆ ವಿವಾಹದಲ್ಲಿ ಅಡೆತಡೆ ತಪ್ಪಿದ್ದಲ್ಲ! ಇದಕ್ಕೆ ಪರಿಹಾರವೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: May 17, 2024 | 6:10 PM

ಒಬ್ಬ ವ್ಯಕ್ತಿಯ ಜಾತಕದಲ್ಲಿ ಗ್ರಹಗತಿ ಕೆಟ್ಟದಾಗಿದ್ದರೆ ಆತ ಅನೇಕ ರೀತಿಯ ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಾನೆ. ಅಂತಹ ದೋಷಗಳಲ್ಲಿ ಮಂಗಳ ದೋಷವು ಒಂದು.ಆ ಸಮಯದಲ್ಲಿ ಮದುವೆಯಾಗುವ ವ್ಯಕ್ತಿಯು ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

Manglik Dosh: ಜಾತಕದಲ್ಲಿ ಮಂಗಳ ದೋಷವಿದ್ದರೆ ವಿವಾಹದಲ್ಲಿ ಅಡೆತಡೆ ತಪ್ಪಿದ್ದಲ್ಲ! ಇದಕ್ಕೆ ಪರಿಹಾರವೇನು?
Follow us on

ಯಾವುದೇ ವ್ಯಕ್ತಿಯ ಜೀವನದಲ್ಲಿ ಏರಿಳಿತಗಳನ್ನು ಕಾಣಲು ಅವನ ಜಾತಕದಲ್ಲಿರುವ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನಗಳು ಕಾರಣವಾಗಿರುತ್ತದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಗ್ರಹಗತಿ ಕೆಟ್ಟದಾಗಿದ್ದರೆ ಆತ ಅನೇಕ ರೀತಿಯ ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಾನೆ. ಅಂತಹ ದೋಷಗಳಲ್ಲಿ ಮಂಗಳ ದೋಷವು ಒಂದು.ಆ ಸಮಯದಲ್ಲಿ ಮದುವೆಯಾಗುವ ವ್ಯಕ್ತಿಯು ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಮಂಗಳ ಗ್ರಹದ ಅಶುಭ ಪರಿಣಾಮದಿಂದಾಗಿ ಈ ದೋಷ ಕಂಡುಬರುತ್ತದೆ. ಇದು ಮುಖ್ಯವಾಗಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರಲ್ಲಿ ಎಷ್ಟು ವಿಧಗಳಿವೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಂಗಳ ದೋಷದಲ್ಲಿ ಎಷ್ಟು ವಿಧ?

ಮಂಗಳನು ಜಾತಕದ ಮೊದಲ, ಎರಡನೇ, ನಾಲ್ಕನೇ, ಏಳನೇ, ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿದ್ದಾಗ ಈ ದೋಷ ಕಂಡುಬರುತ್ತದೆ. ಇದರಲ್ಲಿ ಭಾಗಶಃ ಮಂಗಳಿಕ ದೋಷವು ಸೌಮ್ಯ ರೂಪವಾಗಿದೆ. ಇದರಿಂದ ಯಾವುದೇ ರೀತಿಯ ಗಂಭೀರ ಪರಿಣಾಮಗಳು ಉಂಟಾಗುವುದಿಲ್ಲ. ಸಾತ್ವಿಕ ಮಂಗಳಿಕ ದೋಷವಿದ್ದಲ್ಲಿ ವೈವಾಹಿಕ ಜೀವನದಲ್ಲಿ ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಚಂದ್ರ ಮಂಗಳಿಕ ದೋಷವು ಸಂಗಾತಿಗಳ ನಡುವಿನ ಭಾವನಾತ್ಮಕ ಮತ್ತು ಮಾನಸಿಕ ಹೊಂದಾಣಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ, ಇದು ಸಂಘರ್ಷಗಳು ಅಥವಾ ತಪ್ಪು ತಿಳುವಳಿಕೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಮುಂಜಾನೆ ಅಚಾನಕ್ಕಾಗಿ ಈ ವಸ್ತುಗಳು ಕಾಣುವುದು ಶುಭ ಸೂಚಕ

ಮಂಗಳ ದೋಷದ ಪರಿಣಾಮಗಳೇನು?

ಮಂಗಳ ದೋಷದಿಂದಾಗಿ, ಮದುವೆಯಲ್ಲಿ ವಿಳಂಬವಾಗುವುದರ ಜೊತೆಗೆ ಅನೇಕ ರೀತಿಯ ಅಡೆತಡೆಗಳಿಗೆ ಕಾರಣವಾಗಬಹುದು. ಮದುವೆ ನಡೆದರೂ, ಸಂಗಾತಿಯೊಂದಿಗೆ ಸಾಮರಸ್ಯವಿರುವುದಿಲ್ಲ. ಏಕೆಂದರೆ ಜಾತಕದ ಏಳನೇ ಮನೆಯನ್ನು ಮದುವೆ ಅಥವಾ ವೈವಾಹಿಕ ಜೀವನಕ್ಕೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ ಮತ್ತು ಈ ಮನೆಯಲ್ಲಿಯೇ ಮಂಗಳನ ಉಪಸ್ಥಿತಿ ಇದ್ದರೆ ಅದು ಅಶುಭ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹಾಗಾಗಿ ಮದುವೆಯಾಗುವ ಮಂಗಳ ದೋಷದ ಬಗ್ಗೆ ಸರಿಯಾಗಿ ಅರಿತುಕೊಂಡು ಆ ಬಳಿಕ ಮುಂದಿನ ತಯಾರಿಯನ್ನು ನಡೆಸಿ. ಮಂಗಳದೋಷವನ್ನು ಪರಿಹಾರ ಮಾಡಲು ಸಾಧ್ಯವಿಲ್ಲವಾದರೂ ಕೆಲವೊಂದು ಪರಿಹಾರಗಳನ್ನು ಮಾಡುವ ಮೂಲಕ ದೋಷದ ತೀವ್ರತೆಯನ್ನು ಕಡಿಮೆ ಮಾಡಬಹುದಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ