AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri 2021: ನವರಾತ್ರಿಯ ಒಂಭತ್ತು ದಿನಗಳ ಬಣ್ಣಗಳು ಯಾವುದು? ಅವುಗಳ ವಿಶೇಷತೆ ಏನು? ಇಲ್ಲಿ ಓದಿ

Navaratri 2021: ಒಂಭತ್ತು ದಿನಗಳಿಗೆ, ದೇವತಾ ಆರಾಧನೆ ಅನುಸಾರ ಒಂಭತ್ತು ಬಣ್ಣಗಳನ್ನು ಕೂಡ ಗುರುತಿಸಲಾಗಿದೆ. ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಒಂಭತ್ತು ದಿನಗಳ ಬಣ್ಣಗಳನ್ನು ಹಾಗೂ ಅದರ ವಿಶೇಷತೆಗಳನ್ನು ನಾವು ಇಲ್ಲಿ ನೀಡಿದ್ದೇವೆ.

Navratri 2021: ನವರಾತ್ರಿಯ ಒಂಭತ್ತು ದಿನಗಳ ಬಣ್ಣಗಳು ಯಾವುದು? ಅವುಗಳ ವಿಶೇಷತೆ ಏನು? ಇಲ್ಲಿ ಓದಿ
ನವರಾತ್ರಿ
TV9 Web
| Edited By: |

Updated on: Oct 03, 2021 | 8:00 AM

Share

ಹಿಂದೂ ಸಮುದಾಯಕ್ಕೆ ನವರಾತ್ರಿ ಎಂಬುದು ಒಂದು ಮುಖ್ಯ ಹಬ್ಬ. ದೇಶದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ನವರಾತ್ರಿಯನ್ನು ಆಚರಣೆ ಮಾಡಲಾಗುತ್ತದೆ. ನವರಾತ್ರಿಯನ್ನು ಒಂಭತ್ತು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಹತ್ತನೇ ದಿನವನ್ನು ವಿಜಯ ದಶಮಿ ಎಂದು ಕರೆಯಲಾಗುತ್ತದೆ. ಈ ಒಂಭತ್ತು ದಿನಗಳ ಕಾಲದಲ್ಲಿ ಭಕ್ತ ಜನರು ದೇವಿಯ 9 ಅವತಾರಗಳನ್ನು ಪೂಜಿಸುತ್ತಾರೆ. ಶುಕ್ಲ ಪಕ್ಷದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ.

ಈ ವರ್ಷ ನವರಾತ್ರಿ ಹಬ್ಬವನ್ನು ಅಕ್ಟೋಬರ್ 7 ರಿಂದ ಅಕ್ಟೋಬರ್ 15 ರ ವರೆಗೆ ಆಚರಣೆ ಮಾಡಲಾಗುತ್ತದೆ. ಒಂಬತ್ತು ದಿನಗಳಲ್ಲಿ ಒಂಭತ್ತು ದೇವತೆಗಳನ್ನು ಪೂಜೆ ಮಾಡಲಾಗುತ್ತದೆ. ಈ ಒಂಭತ್ತು ದಿನಗಳಿಗೆ, ದೇವತಾ ಆರಾಧನೆ ಅನುಸಾರ ಒಂಭತ್ತು ಬಣ್ಣಗಳನ್ನು ಕೂಡ ಗುರುತಿಸಲಾಗಿದೆ. ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಒಂಭತ್ತು ದಿನಗಳ ಬಣ್ಣಗಳನ್ನು ಹಾಗೂ ಅದರ ವಿಶೇಷತೆಗಳನ್ನು ನಾವು ಇಲ್ಲಿ ನೀಡಿದ್ದೇವೆ.

Navratri 2021 Day 1: ಹಳದಿ ನವರಾತ್ರಿಯ ಮೊದಲ ದಿನ ಪ್ರತಿಪಾದವನ್ನು ಈ ಬಾರಿ ಗುರುವಾರ ಆಚರಿಸಲಾಗುತ್ತದೆ. ಆ ದಿನದ ಬಣ್ಣ ಹಳದಿ. ಈ ದಿನದಂದು ಭಕ್ತರು ಶೈಲಪುತ್ರಿ ದೇವಿಯನ್ನು ಪೂಜೆ ಮಾಡುತ್ತಾರೆ,

Navratri 2021 Day 2: ಹಸಿರು ಎರಡನೇ ದಿನವನ್ನು ದ್ವಿತೀಯ ಎಂದು ಹೇಳಲಾಗುತ್ತದೆ. ಈ ದಿನದಂದು ಭಕ್ತರು ಬ್ರಹ್ಮಚಾರಿಣಿಯನ್ನು ಪೂಜಿಸುತ್ತಾರೆ. ಈ ದಿನದ ಆಚರಣೆಗೆ ಹಸಿರು ಬಣ್ಣ ಸೂಕ್ತ. ಹಸಿರು ಪ್ರಕೃತಿ ಹಾಗೂ ಸಮೃದ್ಧಿಯ ಸಂಕೇತವೂ ಹೌದು.

Navratri 2021 Day 3: ಬೂದು ನವರಾತ್ರಿಯ ಮೂರನೇ ದಿನ, ಅಂದರೆ ತ್ರಿತೀಯದಂದು ಬೂದು ಬಣ್ಣ ಆಯ್ಕೆ ಉತ್ತಮ. ಈ ದಿನ ಭಕ್ತರು ಚಂದ್ರಘಂಟಾ ದೇವಿಯನ್ನು ಭಜಿಸುತ್ತಾರೆ.

Navratri 2021 Day 4: ಕೇಸರಿ ನಾಲ್ಕನೇ ದಿನದ ಬಣ್ಣ ಕೇಸರಿ ಆಗಿದೆ. ನಾಲ್ಕನೇ ದಿನ ಅಂದರೆ ಚತುರ್ಥಿಯಂದು ಕೇಸರಿ ಬಣ್ಣದ ಉಡುಪು ಧರಿಸುವುದು ಸೂಕ್ತ. ಈ ದಿನ ಜನರು ಕೂಷ್ಮಾಂಡಾ ದೇವಿಯನ್ನು ಪೂಜೆ ಮಾಡುತ್ತಾರೆ.

Navratri 2021 Day 5: ಬಿಳಿ ಐದನೇ ದಿನ ಅಂದರೆ, ಪಂಚಮಿಯಂದು ದೇವಿಯ ಅನುಗ್ರಹ, ಹಬ್ಬದ ಸಂಭ್ರಮಕ್ಕೆ ಬಿಳಿ ಬಣ್ಣದ ಉಡುಪು ಧರಿಸಬಹುದು. ಬಿಳಿ ಬಣ್ಣವು ಶುದ್ಧತೆ, ಪ್ರಾಮಾಣಿಕತೆಯನ್ನು ಸೂಚಿಸುತ್ತದೆ. ಈ ದಿನದಂದು ಸ್ಕಂದಮಾತಾ ದೇವರನ್ನು ಪೂಜೆ ಮಾಡಲಾಗುತ್ತದೆ.

Navratri 2021 Day 6: ಕೆಂಪು ನವರಾತ್ರಿಯ ಆರನೇ ದಿನ, ಷಷ್ಠಿಯಂದು ಕೆಂಪು ಬಣ್ಣದ ವಸ್ತ್ರ ಉಡುವುದು ಸೂಕ್ತ. ಕೆಂಪು ಆರೋಗ್ಯ, ಜೀವನ, ಧೈರ್ಯವನ್ನು ಸೂಚಿಸುತ್ತದೆ. ಈ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ.

Navratri 2021 Day 7: ನೀಲಿ ನವರಾತ್ರಿಯ ಏಳನೇ ದಿನ ಅಂದರೆ ಸಪ್ತಮಿಯಂದು ನೀಲಿ ಬಣ್ಣದ ಉಡುಪು ಧರಿಸುವುದು ಸೂಕ್ತ. ನೀಲಿ ಬಣ್ಣವು ಸಮೃದ್ಧು ಹಾಗೂ ಆರೋಗ್ಯವನ್ನು ಕೂಡ ಸೂಚಿಸುತ್ತದೆ. ಈ ದಿನ ಕಾಳರಾತ್ರಿ ಮಾತೆಯನ್ನು ಪೂಜಿಸಲಾಗುತ್ತದೆ.

Navratri 2021 Day 8: ಪಿಂಕ್ ನವರಾತ್ರಿಯ ಎಂಟನೇ ಅಥವಾ ಅಷ್ಟಮಿಯ ದಿನದಂದು ಪಿಂಕ್ ಆಥವಾ ತಿಳಿ ಕೆಂಪು ಬಣ್ಣದ ವಸ್ತ್ರವನ್ನು ಧರಿಸಬಹುದು. ಈ ಬಣ್ಣವು ವಿಶ್ವ ಪ್ರೇಮ, ವಾತ್ಸಲ್ಯದ ಸಂಕೇತ ಆಗಿದೆ. ಇದು ಸಹಬಾಳ್ವೆಯ ಗುರುತು ಕೂಡ ಹೌದು. ಎಂಟನೇ ದಿನದಂದು ಮಹಾಗೌರಿ ದೇವಿಯ ಪೂಜೆ ಮಾಡಲಾಗುತ್ತದೆ.

Navratri 2021 Day 9: ನೇರಳೆ ನವರಾತ್ರಿಯ ಕೊನೆಯ ಹಾಗೂ ಒಂಭತ್ತನೇ (ನವಮಿ) ದಿನದಂದು ನೇರಳೆ ಬಣ್ಣದ ವಸ್ತ್ರ ಧರಿಸುವುದು ಸೂಕ್ತ. ಈ ಬಣ್ಣವು ಶಕ್ತಿಯನ್ನು ಬಿಂಬಿಸುತ್ತದೆ. ನವಮಿಯ ದಿನದಂದು ಸಿದ್ದಿಧಾತ್ರಿ ದೇವಿಯ ಆರಾಧನೆ ಮಾಡಲಾಗುತ್ತದೆ.

(ಇಲ್ಲಿ ನೀಡಲಾಗಿರುವ ಮಾಹಿತಿಯು ಧಾರ್ಮಿಕ, ಸಾಂಪ್ರದಾಯಿಕ ಅಥವಾ ಆಚರಣೆಯ ನಂಬಿಕೆಗೆ ಅನುಸಾರ ಆಗಿರುವಂಥದ್ದು ಮಾತ್ರ)

ಇದನ್ನೂ ಓದಿ: Navratri 2021: ನವರಾತ್ರಿಯ ಮಹತ್ವವೇನು? ದುರ್ಗಾದೇವಿಗೆ ಅರ್ಪಿತವಾದ ಈ ಹಬ್ಬವನ್ನು ಏಕೆ ಆಚರಿಸಲಾಗುತ್ತೆ?

ಇದನ್ನೂ ಓದಿ: Navaratri 2021: ನವರಾತ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಭಾರತದ ಪ್ರಮುಖ ದೇವಿಯರ ದೇವಸ್ಥಾನಗಳು ಇಲ್ಲಿವೆ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ