AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navaratri 2021 Day 1: ನವರಾತ್ರಿ ವಿಶೇಷ ಪೂಜೆಯ ವಿಧಿ- ವಿಧಾನ ಜತೆಗೆ ನೀವು ಯಾವ ಮುಹೂರ್ತದಲ್ಲಿ ಪೂಜೆ ಕೈಗೊಳ್ಳಬೇಕು ಗೊತ್ತಾ?

ನವರಾತ್ರಿ ಹಬ್ಬ 2021: ಯಾವ ಮುಹೂರ್ತದಲ್ಲಿ ಭಕ್ತರು ಕಲಶ ಸ್ಥಾಪನೆ ಮಾಡುತ್ತಾರೆ? ಪೂಜೆ ಕೈಗೊಳ್ಳುವಾಗ ಪಾಲಿಸಬೇಕಾದ ನಿಯಮಗಳೇನು? ಎಂಬೆಲ್ಲಾ ಮಾಹಿತಿ ತಿಳಿಯಿರಿ. ನವರಾತ್ರಿಯನ್ನು ವಿಶೇಷವಾಗಿ ಭಕ್ತಿಪೂರ್ಣವಾಗಿ ಆಚರಿಸಿ.

Navaratri 2021 Day 1: ನವರಾತ್ರಿ ವಿಶೇಷ ಪೂಜೆಯ ವಿಧಿ- ವಿಧಾನ ಜತೆಗೆ ನೀವು ಯಾವ ಮುಹೂರ್ತದಲ್ಲಿ ಪೂಜೆ ಕೈಗೊಳ್ಳಬೇಕು ಗೊತ್ತಾ?
ನವರಾತ್ರಿ ಆಚರಣೆ
TV9 Web
| Edited By: |

Updated on:Oct 07, 2021 | 10:49 AM

Share

ಇಂದಿನಿಂದ (ಅಕ್ಟೋಬರ್ 7, ಗುರುವಾರ) ಒಂಭತ್ತು ದಿನಗಳ ಕಾಲ ನವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಇಂದು ಮೊದಲನೇಯ ದಿನ ಶಾರ್ದೀಯ ನವರಾತ್ರಿಯು ಅತ್ಯಂತ ಮಹತ್ವದ ದಿನ. ಇಂದು ಮುಂಜಾನೆ ಬೇಗ ಎದ್ದು ಮಡಿ ವಸ್ತ್ರದಲ್ಲಿ ಕಲಶ ಸ್ಥಾಪನೆ ಮಾಡಲಾಗುತ್ತದೆ. ಯಾವ ಮುಹೂರ್ತದಲ್ಲಿ ಭಕ್ತರು ಕಲಶ ಸ್ಥಾಪನೆ ಮಾಡುತ್ತಾರೆ? ಪೂಜೆ ಕೈಗೊಳ್ಳುವಾಗ ಪಾಲಿಸಬೇಕಾದ ನಿಯಮಗಳೇನು? ಎಂಬೆಲ್ಲಾ ಮಾಹಿತಿ ತಿಳಿದುಕೊಳ್ಳಬೇಕಾಗಿದ್ದರೆ ಈ ಸುದ್ದಿಯನ್ನು ಪೂರ್ತಿಯಾಗಿ ಓದಿ. ನವರಾತ್ರಿಯನ್ನು ವಿಶೇಷವಾಗಿ ಭಕ್ತಿಪೂರ್ಣವಾಗಿ ಆಚರಿಸಿ.

ಮುಹೂರ್ತ ಇಂದು ನವರಾತ್ರಿಯ ಮೊದಲನೇಯ ದಿನ ಭಕ್ತರು ಬೆಳಿಗ್ಗೆ ಮುಂಜಾನೆ 6:17ರಿಂದ ಬೆಳಿಗ್ಗೆ 7:07 ರೊಳಗೆ ಕಲಶ ಸ್ಥಾಪನೆ ಮಾಡುತ್ತಾರೆ. ಅಭಿಜಿತ್ ಮುಹೂರ್ತ ಬೆಳಿಗ್ಗೆ 11:45 ರಿಂದ 12:32 ರ ವರೆಗೆ ಇದೆ. ಆ ಮುಹೂರ್ತದಲ್ಲಿ ಭಕ್ತರು ಭಕ್ತಿಯಿಂದ ವಿಶೇಷ ಪೂಜೆ ಕೈಗೊಳ್ಳುವ ಮೂಲಕ ದೇವಿಯ ಮೊರೆ ಹೋಗುತ್ತಾರೆ.

ಕಲಶ ಸ್ಥಾಪನೆ ಮಣ್ಣಿನ ಮಡಕೆ, ಮಣ್ಣು, ಏಳು ವಿಭಿನ್ನ ಧಾನ್ಯಗಳು, ಹಿತ್ತಾಳೆಯ ಒಂದು ಪುಟ್ಟ ಕಲಶ, ತೆಂಗಿನ ಕಾಯಿ, ನೀರು, ನಾಣ್ಯಗಳು ಮಾವಿನ ಚಂಡೆ, ವೀಳ್ಯದೆಲೆ, ಅಡಿಕೆ, ಅಕ್ಷತೆ, ಹೂವು, ಹೂವಿನ ಮಾಲೆ ಈ ರೀತಿಯ ಸಾಮಗ್ರಿಗಳೊಂದಿಗೆ ಕಲಶ ಸ್ಥಾಪನೆ ಮಾಡಲಾಗುತ್ತದೆ. ಬಳಿಕ ಮಣ್ಣಿನ ಮಡಕೆಯಲ್ಲಿ ಮಣ್ಣನ್ನು ಹಾಕಿ ಏಳು ವಿವಿಧ ಧಾನ್ಯಗಳನ್ನು ಬಿತ್ತಬೇಕು, ನಂತರದಲ್ಲಿ ಹಿತ್ತಾಳೆಯ ಕಲಶ ಇಟ್ಟು ಅದಕ್ಕೆ ಪವಿತ್ರ ದಾರವನ್ನು ಸುತ್ತಿ ನೀರು ತುಂಬಿಸಿ. ಆ ಪವಿತ್ರ ನೀರಿಗೆ ವೀಳ್ಯದೆಲೆ, ಅಕ್ಷತೆ, ಅಡಿಕೆ, ಹೂವು ಹಾಕಿ ಅದರ ಮೇಲಿನಿಂದ ತೆಂಗಿನ ಕಾಯಿಯನ್ನು ಇರಿಸಿ. ಮಾವಿನ ಎಲೆಗಳನ್ನು ಕಲಶದೊಳಕ್ಕೆ ಸಿಕ್ಕಿಸಿ. ಕಲಶ ಸ್ಥಾಪನೆಯ ಬಳಿಕ ಹೂವುಗಳಿಂದ ಅಲಂಕರಿಸುವ ಮೂಲಕ ಆರತಿ ಬೆಳಗಿ ಪೂಜೆ ಸಲ್ಲಿಸಬಹುದು.

ಕಲಶದ ಮುಂದೆ ಧೂಪ ದೀಪವನ್ನು ಬೆಳಗಿ ಪಕ್ಕದಲ್ಲಿ ದೇವಿಯ ಮೂರ್ತಿಯನ್ನು ಕೂರಿಸಿ ಅಲಂಕಾರ ಮಾಡಲಾಗುತ್ತದೆ. 9 ದಿನಗಳವರೆಗೆ ದೇವಿ ನೆಲೆಸುವಂತೆ ಭಕ್ತಿಯಿಂದ ಕೈ ಮುಗಿದು ಬೇಡಿಕೊಳ್ಳಲಾಗುತ್ತದೆ. ದುರ್ಗಾದೇವಿಯ ಮಂತ್ರವನ್ನು ಪಠಿಸಿ, ಹಾಡು, ಭಜನೆಯನ್ನು ಹೇಳುವ ಮೂಲಕ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ದೇವಿಗೆ ಹಣ್ಣುಗಳು, ಸಿಹಿ ತಿಂಡಿಗಳನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ದುರ್ಗಾದೇವಿಯ ಮಂತ್ರವನ್ನು ಪಠಿಸುತ್ತಾ ಕಲಶಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸಲಾಗುತ್ತದೆ.

ಇದನ್ನೂ ಓದಿ:

Navaratri 2021: ನವರಾತ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಭಾರತದ ಪ್ರಮುಖ ದೇವಿಯರ ದೇವಸ್ಥಾನಗಳು ಇಲ್ಲಿವೆ

Navaratri 2021: ಕೊಲ್ಲೂರಿನಲ್ಲಿ ಸರಳ ನವರಾತ್ರಿ; ಸಂಪ್ರದಾಯಕ್ಕೆ ಸೀಮಿತವಾಗಿ ವಿದ್ಯಾರಂಭ, ಅನ್ನಪ್ರಾಶನ ಕಾರ್ಯಕ್ರಮ

Published On - 10:31 am, Thu, 7 October 21

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ