AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navaratri 2021 Day 1: ನವರಾತ್ರಿ ವಿಶೇಷ ಪೂಜೆಯ ವಿಧಿ- ವಿಧಾನ ಜತೆಗೆ ನೀವು ಯಾವ ಮುಹೂರ್ತದಲ್ಲಿ ಪೂಜೆ ಕೈಗೊಳ್ಳಬೇಕು ಗೊತ್ತಾ?

ನವರಾತ್ರಿ ಹಬ್ಬ 2021: ಯಾವ ಮುಹೂರ್ತದಲ್ಲಿ ಭಕ್ತರು ಕಲಶ ಸ್ಥಾಪನೆ ಮಾಡುತ್ತಾರೆ? ಪೂಜೆ ಕೈಗೊಳ್ಳುವಾಗ ಪಾಲಿಸಬೇಕಾದ ನಿಯಮಗಳೇನು? ಎಂಬೆಲ್ಲಾ ಮಾಹಿತಿ ತಿಳಿಯಿರಿ. ನವರಾತ್ರಿಯನ್ನು ವಿಶೇಷವಾಗಿ ಭಕ್ತಿಪೂರ್ಣವಾಗಿ ಆಚರಿಸಿ.

Navaratri 2021 Day 1: ನವರಾತ್ರಿ ವಿಶೇಷ ಪೂಜೆಯ ವಿಧಿ- ವಿಧಾನ ಜತೆಗೆ ನೀವು ಯಾವ ಮುಹೂರ್ತದಲ್ಲಿ ಪೂಜೆ ಕೈಗೊಳ್ಳಬೇಕು ಗೊತ್ತಾ?
ನವರಾತ್ರಿ ಆಚರಣೆ
TV9 Web
| Edited By: |

Updated on:Oct 07, 2021 | 10:49 AM

Share

ಇಂದಿನಿಂದ (ಅಕ್ಟೋಬರ್ 7, ಗುರುವಾರ) ಒಂಭತ್ತು ದಿನಗಳ ಕಾಲ ನವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಇಂದು ಮೊದಲನೇಯ ದಿನ ಶಾರ್ದೀಯ ನವರಾತ್ರಿಯು ಅತ್ಯಂತ ಮಹತ್ವದ ದಿನ. ಇಂದು ಮುಂಜಾನೆ ಬೇಗ ಎದ್ದು ಮಡಿ ವಸ್ತ್ರದಲ್ಲಿ ಕಲಶ ಸ್ಥಾಪನೆ ಮಾಡಲಾಗುತ್ತದೆ. ಯಾವ ಮುಹೂರ್ತದಲ್ಲಿ ಭಕ್ತರು ಕಲಶ ಸ್ಥಾಪನೆ ಮಾಡುತ್ತಾರೆ? ಪೂಜೆ ಕೈಗೊಳ್ಳುವಾಗ ಪಾಲಿಸಬೇಕಾದ ನಿಯಮಗಳೇನು? ಎಂಬೆಲ್ಲಾ ಮಾಹಿತಿ ತಿಳಿದುಕೊಳ್ಳಬೇಕಾಗಿದ್ದರೆ ಈ ಸುದ್ದಿಯನ್ನು ಪೂರ್ತಿಯಾಗಿ ಓದಿ. ನವರಾತ್ರಿಯನ್ನು ವಿಶೇಷವಾಗಿ ಭಕ್ತಿಪೂರ್ಣವಾಗಿ ಆಚರಿಸಿ.

ಮುಹೂರ್ತ ಇಂದು ನವರಾತ್ರಿಯ ಮೊದಲನೇಯ ದಿನ ಭಕ್ತರು ಬೆಳಿಗ್ಗೆ ಮುಂಜಾನೆ 6:17ರಿಂದ ಬೆಳಿಗ್ಗೆ 7:07 ರೊಳಗೆ ಕಲಶ ಸ್ಥಾಪನೆ ಮಾಡುತ್ತಾರೆ. ಅಭಿಜಿತ್ ಮುಹೂರ್ತ ಬೆಳಿಗ್ಗೆ 11:45 ರಿಂದ 12:32 ರ ವರೆಗೆ ಇದೆ. ಆ ಮುಹೂರ್ತದಲ್ಲಿ ಭಕ್ತರು ಭಕ್ತಿಯಿಂದ ವಿಶೇಷ ಪೂಜೆ ಕೈಗೊಳ್ಳುವ ಮೂಲಕ ದೇವಿಯ ಮೊರೆ ಹೋಗುತ್ತಾರೆ.

ಕಲಶ ಸ್ಥಾಪನೆ ಮಣ್ಣಿನ ಮಡಕೆ, ಮಣ್ಣು, ಏಳು ವಿಭಿನ್ನ ಧಾನ್ಯಗಳು, ಹಿತ್ತಾಳೆಯ ಒಂದು ಪುಟ್ಟ ಕಲಶ, ತೆಂಗಿನ ಕಾಯಿ, ನೀರು, ನಾಣ್ಯಗಳು ಮಾವಿನ ಚಂಡೆ, ವೀಳ್ಯದೆಲೆ, ಅಡಿಕೆ, ಅಕ್ಷತೆ, ಹೂವು, ಹೂವಿನ ಮಾಲೆ ಈ ರೀತಿಯ ಸಾಮಗ್ರಿಗಳೊಂದಿಗೆ ಕಲಶ ಸ್ಥಾಪನೆ ಮಾಡಲಾಗುತ್ತದೆ. ಬಳಿಕ ಮಣ್ಣಿನ ಮಡಕೆಯಲ್ಲಿ ಮಣ್ಣನ್ನು ಹಾಕಿ ಏಳು ವಿವಿಧ ಧಾನ್ಯಗಳನ್ನು ಬಿತ್ತಬೇಕು, ನಂತರದಲ್ಲಿ ಹಿತ್ತಾಳೆಯ ಕಲಶ ಇಟ್ಟು ಅದಕ್ಕೆ ಪವಿತ್ರ ದಾರವನ್ನು ಸುತ್ತಿ ನೀರು ತುಂಬಿಸಿ. ಆ ಪವಿತ್ರ ನೀರಿಗೆ ವೀಳ್ಯದೆಲೆ, ಅಕ್ಷತೆ, ಅಡಿಕೆ, ಹೂವು ಹಾಕಿ ಅದರ ಮೇಲಿನಿಂದ ತೆಂಗಿನ ಕಾಯಿಯನ್ನು ಇರಿಸಿ. ಮಾವಿನ ಎಲೆಗಳನ್ನು ಕಲಶದೊಳಕ್ಕೆ ಸಿಕ್ಕಿಸಿ. ಕಲಶ ಸ್ಥಾಪನೆಯ ಬಳಿಕ ಹೂವುಗಳಿಂದ ಅಲಂಕರಿಸುವ ಮೂಲಕ ಆರತಿ ಬೆಳಗಿ ಪೂಜೆ ಸಲ್ಲಿಸಬಹುದು.

ಕಲಶದ ಮುಂದೆ ಧೂಪ ದೀಪವನ್ನು ಬೆಳಗಿ ಪಕ್ಕದಲ್ಲಿ ದೇವಿಯ ಮೂರ್ತಿಯನ್ನು ಕೂರಿಸಿ ಅಲಂಕಾರ ಮಾಡಲಾಗುತ್ತದೆ. 9 ದಿನಗಳವರೆಗೆ ದೇವಿ ನೆಲೆಸುವಂತೆ ಭಕ್ತಿಯಿಂದ ಕೈ ಮುಗಿದು ಬೇಡಿಕೊಳ್ಳಲಾಗುತ್ತದೆ. ದುರ್ಗಾದೇವಿಯ ಮಂತ್ರವನ್ನು ಪಠಿಸಿ, ಹಾಡು, ಭಜನೆಯನ್ನು ಹೇಳುವ ಮೂಲಕ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ದೇವಿಗೆ ಹಣ್ಣುಗಳು, ಸಿಹಿ ತಿಂಡಿಗಳನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ದುರ್ಗಾದೇವಿಯ ಮಂತ್ರವನ್ನು ಪಠಿಸುತ್ತಾ ಕಲಶಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸಲಾಗುತ್ತದೆ.

ಇದನ್ನೂ ಓದಿ:

Navaratri 2021: ನವರಾತ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಭಾರತದ ಪ್ರಮುಖ ದೇವಿಯರ ದೇವಸ್ಥಾನಗಳು ಇಲ್ಲಿವೆ

Navaratri 2021: ಕೊಲ್ಲೂರಿನಲ್ಲಿ ಸರಳ ನವರಾತ್ರಿ; ಸಂಪ್ರದಾಯಕ್ಕೆ ಸೀಮಿತವಾಗಿ ವಿದ್ಯಾರಂಭ, ಅನ್ನಪ್ರಾಶನ ಕಾರ್ಯಕ್ರಮ

Published On - 10:31 am, Thu, 7 October 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ