AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವರ್ಷದಲ್ಲಿ ತಪ್ಪಾಗಿಯೂ ಈ ಕೆಲಸ ಮಾಡಬೇಡಿ; ವರ್ಷವಿಡೀ ಪಶ್ಚಾತ್ತಾಪ ಪಡಬೇಕಾಗುತ್ತದೆ

ಹೊಸ ವರ್ಷ ಪ್ರಾರಂಭವಾಗಿದೆ. ಹಿಂದಿನ ವರ್ಷದಲ್ಲಿ ಆದ ನೋವುಗಳು, ಎದುರಾದ ಸಂಕಷ್ಟಗಳನ್ನು ಮರೆತು ಹೊಸ ವರ್ಷವನ್ನು ಹೊಸದಾಗಿ ಪ್ರಾರಂಭಿಸಿ. ಈ ವರ್ಷವಿಡೀ ನೀವು ಸಂತೋಷ ಮತ್ತು ಸಮೃದ್ಧಿಯನ್ನು ಬಯಸಿದರೆ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. ವರ್ಷಪೂರ್ತಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಂತೋಷವಾಗಿರಲು ಬಯಸಿದರೆ ನೀವು ಯಾವ ತಪ್ಪು ಮಾಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಹೊಸ ವರ್ಷದಲ್ಲಿ ತಪ್ಪಾಗಿಯೂ ಈ ಕೆಲಸ ಮಾಡಬೇಡಿ; ವರ್ಷವಿಡೀ ಪಶ್ಚಾತ್ತಾಪ ಪಡಬೇಕಾಗುತ್ತದೆ
New Year 2025
ಅಕ್ಷತಾ ವರ್ಕಾಡಿ
|

Updated on: Jan 01, 2025 | 8:52 AM

Share

ಹೊಸ ವರ್ಷ 2025 ಪ್ರಾರಂಭವಾಗಿದೆ. ಈ ವರ್ಷವಿಡೀ ನೀವು ಸಂತೋಷ ಮತ್ತು ಸಮೃದ್ಧಿಯನ್ನು ಬಯಸಿದರೆ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. ಹೊಸ ವರ್ಷದಲ್ಲಿ ನೀವು ಮಾಡುವ ಒಂದು ತಪ್ಪು ಇಡೀ ವರ್ಷ ನಿಮ್ಮನ್ನು ತೊಂದರೆಗೊಳಿಸಬಹುದು. ಆದ್ದರಿಂದ ನೀವು ವರ್ಷಪೂರ್ತಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಂತೋಷವಾಗಿರಲು ಬಯಸಿದರೆ ಈ ಕೆಲಸಗಳನ್ನು ಮಾಡಬೇಡಿ

ಜಗಳ, ಅಸೂಯೆ ಬೇಡ:

ಹೊಸ ವರ್ಷದ ಆರಂಭದಲ್ಲಿ, ಯಾವುದೇ ಜಗಳ, ವಿವಾದ, ಅಸೂಯೆ ಮತ್ತು ದುರುದ್ದೇಶದಿಂದ ನಿಮ್ಮನ್ನು ದೂರವಿಡಿ. ಅತಿಯಾಗಿ ಕೋಪದಿಂದ ದೂರವಿರಿ, ಇಲ್ಲದಿದ್ದರೆ ನೀವು ವರ್ಷವಿಡೀ ಪಶ್ಚಾತ್ತಾಪ ಪಡಬೇಕಾಗಬಹುದು. ಜಗಳವು ಕುಟುಂಬದಲ್ಲಿ ಅಪಶ್ರುತಿಯ ವಾತಾವರಣವನ್ನು ಸೃಷ್ಟಿಸುತ್ತದೆ, ಇದರಿಂದಾಗಿ ನಕಾರಾತ್ಮಕತೆ ಉಂಟಾಗುತ್ತದೆ.

ಸಾಲ ಮಾಡಬೇಡಿ ಮತ್ತು ಕೊಡಬೇಡಿ:

ಹೊಸ ವರ್ಷದಲ್ಲಿ ಯಾವುದೇ ರೀತಿಯ ಸಾಲದಿಂದ ನಿಮ್ಮನ್ನು ದೂರವಿಡಿ. ಸಾಲ ತೆಗೆದುಕೊಳ್ಳುವುದು ಯಾರಿಗೂ ಒಳ್ಳೆಯದಲ್ಲ, ಸಾಲವು ನಿಮಗೆ ವರ್ಷವಿಡೀ ತೊಂದರೆಯನ್ನುಂಟುಮಾಡುತ್ತದೆ, ಇದರಿಂದಾಗಿ ನೀವು ಮಾನಸಿಕ ಒತ್ತಡದಲ್ಲಿ ಉಳಿಯಬಹುದು. ಹೊಸ ವರ್ಷದಲ್ಲಿ ಯಾರಿಂದಲೂ ಸಾಲ ತೆಗೆದುಕೊಳ್ಳಬೇಡಿ, ಯಾರಿಗೂ ಸಾಲ ಕೊಡಬೇಡಿ.

ಅಳುವ ಅಭ್ಯಾಸವನ್ನು ಬಿಟ್ಟುಬಿಡಿ:

ಹೊಸ ವರ್ಷದಲ್ಲಿ ನೀವು ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ಅನುಭವಿಸಲು ಬಯಸಿದರೆ, ನಂತರ ನಿಮ್ಮ ಅಭ್ಯಾಸಗಳನ್ನು ಬದಲಾಯಿಸಿ. ಕಿರಿಕಿರಿ ಮತ್ತು ಅಳುವ ಅಭ್ಯಾಸವನ್ನು ಬಿಟ್ಟುಬಿಡಿ. ಈ ಅಭ್ಯಾಸವಿರುವವರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಇರುವುದಿಲ್ಲ.

ಇದನ್ನೂ ಓದಿ: ವರ್ಷದ ಮೊದಲ ದಿನ ಈ ರೀತಿ ಪ್ರಾರಂಭಿಸಿ; ನೀಮ್ ಕರೋಲಿ ಬಾಬಾ ಅವರ ಸಲಹೆ ಇಲ್ಲಿದೆ

ಹಿರಿಯರನ್ನು ಅವಮಾನಿಸಬೇಡಿ:

ಹೊಸ ವರ್ಷದಲ್ಲಿ ಯಾವುದೇ ಹಿರಿಯರನ್ನು ಅವಮಾನಿಸಬೇಡಿ. ಮನೆಯ ಹಿರಿಯರನ್ನು ಮತ್ತು ಮಹಿಳೆಯರನ್ನು ಗೌರವಿಸಿ. ದೊಡ್ಡ ಧ್ವನಿಯಲ್ಲಿ ಮಾತನಾಡಬೇಡಿ. ಯಾವಾತ್ತಿಗೂ ಅವರ ಮೇಲೆ ಕೈ ಎತ್ತಬೇಡಿ. ಜೊತೆಗೆ ಮಹಿಳೆಯರು ತಮ್ಮ ಸಂಗಾತಿಯ ಯಾವುದೇ ಹೊಸ ಕೆಲಸಕ್ಕೆ ಬೆಂಬಲವಾಗಿ ನಿಲ್ಲಿ.

ಮದ್ಯ, ಮಾಂಸದಿಂದ ದೂರವಿರಿ:

ಹೊಸ ವರ್ಷದಲ್ಲಿ ಮಾಂಸ ಮತ್ತು ಮದ್ಯದಿಂದ ಅಂತರ ಕಾಯ್ದುಕೊಳ್ಳಿ. ಈ ವಸ್ತುಗಳು ನಿಮಗೆ ಒಳ್ಳೆಯದಲ್ಲ, ಅವು ನಿಮ್ಮ ದೇಹವನ್ನು ನಾಶಮಾಡುತ್ತವೆ ಮತ್ತು ನಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ. ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!